ಸೋಮವಾರ, ಡಿಸೆಂಬರ್ 31, 2012

ವಿಧಾನಸಭಾ ಚುನಾವಣೆ ನಿಮಿತ್ಯ ರಾಜಕೀಯ ಮುಖಂಡರುಗಳ ಕಸರತ್ತುಃ ಪ್ರಾದೇಶಿಕ ಪಕ್ಷ ಕೆಜೆಪಿಯ ವಚ೯ಸ್ಸು-ರಾಜಕೀಯ ಲೆಕ್ಕಾಚಾರ ಸಿಗದೇ ಗೆಲ್ಲುವರ್ಯಾರು...?

ಕಾಂಗ್ರೆಸ್ ಯುವ ಮುಖಂಡ ಆನಂದ ದೇವಪ್ಪ

 ವೀರಣ್ಣ ಮಂಠಾಳಕರ್

--------------------

ಬಸವಕಲ್ಯಾಣ, ಡಿ.31, 2012

ಶಾಸಕರುಗಳ ರಾಜಿನಾಮೆ ಪವ೯ ರಾಜ್ಯದೆಲ್ಲೆಡೆ ಶುರುವಾಗುತ್ತಿದ್ದಂತೆ ಪ್ರತಿಸ್ಪಧಿಗಳು ಹುಟ್ಟಿಕೊಳ್ಳುತ್ತಿರುವುದರ ಜೊತೆಗೆ ವಿವಿಧ ಪಕ್ಷಗಳ ಮುಖಂಡರು ಕೆಜೆಪಿಯತ್ತ ಒಲವು ತೋರಿಸುತ್ತಿರಲು ಮಾಜಿ ಸಿಎಂ ಬಿಎಸ್್ವೈ ಅವರು ಹುಟ್ಟು ಹಾಕಿರುವ ಪ್ರಾದೇಶಿಕ ಪಕ್ಷ ಕೆಜೆಪಿಯತ್ತ ಜನ ಮುಖ ಮಾಡುವಂತಾಗಿದೆ.

ರಾಜ್ಯದ ಪ್ರಬಲ ರಾಜಕೀಯ ಧುರೀಣರು ಕೆಜೆಪಿಗೆ ಸಾಥ್್ ನೀಡುತ್ತಿವುದರಿಂದ ಬಿಎಸ್್ವೈ ಅವರೇ ಹುಟ್ಟು ಹಾಕಿದ್ದ ಬಿಜೆಪಿ ನಿನಾ೯ಮಕ್ಕೆ ಸಜ್ಜಾಗಿದ್ದಾರೆ. ಕಾಂಗ್ರೆಸ್್ಗೆ ನೇರ ಪೈಪೋಟಿಯಿಂದ ಜನಸ್ನೇಹಿ ಯಾತ್ರೆಯ ಮೂಲಕ ಯಡಿಯೂರಪ್ಪನವರ ಗುಡುಗು ರಾಜ್ಯದ ಪ್ರತಿ ಜೆಲ್ಲೆಗಳ ಪ್ರತಿಪಕ್ಷದ ನಾಯಕರುಗಳಿಗೆ ಇದರಿಂದ ಬಿಸಿ ತಟ್ಟಿದಂತೆ ರಾಜಕೀಯದಲ್ಲಿ ಹೊಸ ಪಲ್ಲಟ ಆರಂಭವಾಗಲಿದೆ.

ಅಭಿವೖದ್ಧಿ ಮಂತ್ರವನ್ನೇ ಊದುವ ರಾಜಕೀಯ ನಾಯಕರು ಒಂದೆಡೆ ಇದ್ದರೆ ಅಭಿವೖದ್ಧಿಯ ಕನಸಿನೊಂದಿಗೆ ಮುಂಬರುವ ವಿಧಾನಸಭಾ ಚುನಾವಣಾ ಅಖಾಡಕ್ಕಿಳಿಯಲು ಯುವ ಪಡೆ ಸೇರಿದಂತೆ ರಾಜಕೀಯ ಮುತ್ಸದ್ದಿಗಳ ನಡುವೆ ನೇರ ಪೈಪೋಟಿ, ಪ್ರತಿಸ್ಪಧೆ೯ ಏಪ೯ಟ್ಟಿದೆ. ಬಿಕ್ಕಟ್ಟಿನ ಚುನಾವಣೆ ಎದುರಿಸುವಂಥ ಪರಿಸ್ಥಿತಿ ನಿಮಾ೯ಣಗೊಂಡಿದೆ.

ಬರುವ ವಿಧಾನಸಭಾ ಚುನಾವಣೆ ಪ್ರಚಾರಕ್ಕಾಗಿ ಹಲವು ಪಕ್ಷದ ರಾಜಕೀಯ ಧುರೀಣರು ಕನಾ೯ಟಕದಲ್ಲೆಡೆ ಪ್ರವಾಸ ಕೈಗೊಂಡಿದ್ದಾರೆ. ಕೆಜೆಪಿಯ ಜನಸ್ನೇಹಿ ಕಾಯ೯ಕ್ರಗಳಂಥ ಸಮಾರಂಭಗಳು ಏಪ೯ಡಿಸುವ ಮೂಲಕ ಜನರ ಬಳಿ ಮಾಜಿ, ಹಾಜಿಗಳ ಪೈಪೋಟಿಯ ರಣರಂಗದ ವೇದಿಕೆ ಸಿದ್ಧವಾಗುತ್ತಿದೆ.

30 ವಷ೯ಗಳ ರಾಜಕೀಯ ಅನುಭವ ಹೊಂದಿರುವ ಬಸವಕಲ್ಯಾಣ ಶಾಸಕ ಬಸವರಾಜ ಪಾಟೀಲ ಅಟ್ಟೂರ್್ ಅವರು, ಶಿಕ್ಷಣ ಇಲಾಖೆಯ ಮಂತ್ರಿಗಳಾಗಿ ಪ್ರಭಾವಿ ರಾಜಕಾರಣಿಯೂ ಆಗಿದ್ದಾರೆ. ಇತ್ತೀಚಿಗಷ್ಟೇ ಅಟ್ಟೂರ್್ ಅವರು ಬಿಎಸ್್ವೈ ಸಮ್ಮುಖದಲ್ಲೇ ಬಿಜೆಪಿಗೆ ರಾಜಿನಾಮೆ ಸಲ್ಲಿಸಿ, ಕೆಜೆಪಿ ಸೇರಿರುವುದನ್ನು ಬಹಿರಂಗ ಸಮಾವೇಶದಲ್ಲಿ ಸ್ಪಷ್ಟಪಡಿಸಿದ್ದಾರೆ.

ಬಸವರಾಜ ಪಾಟೀಲ ಅಟ್ಟೂರ್್ ಅವರು, ಮಾಜಿ ಮುಖ್ಯಮಂತ್ರಿ ಕೆಜೆಪಿ ರಾಜ್ಯಾಧ್ಯಕ್ಷ ಬಿ.ಎಸ್್.ಯಡಿಯೂರಪ್ಪನವರ ಬೆಂಬಲಕ್ಕೆ ಕಟಿಬದ್ಧರಾಗಿ ನಿಂತಿದ್ದು, ಬಿಜೆಪಿ ಬೆಂಬಲಿಗರಿಗೆ ಜಿಲ್ಲೆಯಲ್ಲಿ ಬಿಸಿತಟ್ಟಿಸಿದ್ದಾರೆ. ಬೀದರ ಜಿಲ್ಲೆಯಲ್ಲಿ ಬಿಎಸ್್ವೈ  5 ಕೆಜೆಪಿ ಅಭ್ಯಥಿ೯ಗಳ ಘೋಷಣೆ ಮಾಡಿ ಔರಾದ ಕ್ಷೇತ್ರವೊಂದು ಬಾಕಿ ಉಳಿಸಿದ್ದಾರೆ.

ಅಟ್ಟೂರ್್ ಅವರು ರಾಜಕೀಯ ಅನುಭವಸ್ಥರಾಗಿ, 5 ಸಲ ಶಾಸಕರಾಗಿ, ಶಿಕ್ಷಣ ಮಂತ್ರಿಯಾಗಿ ಸೇವೆ ಸಲ್ಲಿಸಿದ ಜನಪ್ರಿಯ ನಾಯಕರೆಂದು ಗುರುತಿಸಿಕೊಂಡವರಾಗಿದ್ದಾರೆ. ಇತ್ತೀಚಿಗೆ ಅವರ ವಚ೯ಸ್ಸು ಕಡಿಮೆಯಾಗಿದೆ ಎಂಬ ಚಚೆ೯ ಕೇಳಿ ಬರುವಂತಾದರೂ ಅದನ್ನೆಲ್ಲಾ ಎದುರಿಸಲು ಸಿದ್ಧರಾಗಿ ಅನಾರೋಗ್ಯದಿಂದ ಚೇತರಿಸಿಕೊಂಡು ಜನರ ಬಳಿ ಹೋಗಿ ಅಭಿವೖದ್ಧಿಯ ಚಿಂತನೆ ಮೂಡಿಸಲಿದ್ದಾರೆ.

ಬಿಎಸ್್ಆರ್್ ಕಾಂಗ್ರೆಸ್್ ಪಕ್ಷದಿಂದ ಸ್ಪಧಿ೯ಸುವ ಎಂ.ಜಿ.ಮುಳೆ ದುಬ೯ಲವೆಂದು ಭಾವಿಸದೇ ಪ್ರಬಲ ಶಕ್ತಿ, ಜನ ಬೆಂಬಲ ಪಡೆಯುವ ಅಸಾಮಾನ್ಯ ನಾಯಕರಾಗಿ ಮತದಾರರನ್ನು ತನ್ನತ್ತ ಸೆಳೆದುಕೊಳ್ಳುವಲ್ಲಿ ಸಫಲರಾಗುವ ಎಲ್ಲಾ ಲಕ್ಷಣಗಳು ಮುಳೆ ಅವರಲ್ಲಿ ಕಂಡು ಬರುತ್ತವೆ ಎಂಬ  ಮಾತುಗಳು ಕೇಳಿ ಬರುತ್ತಿವೆ.

ಮಾಜಿ ಶಾಸಕರಾಗಿದ್ದ ಹಿರಿಯ ರಾಜಕೀಯ ಧುರೀಣ ಎಂ.ಜಿ.ಮೂಳೆ ಮೊಟ್ಟ ಮೊದಲು ಜೆಡಿಎಸ್್ ಪಕ್ಷದಿಂದ ವಿಧಾನಸಭೆಗೆ ಆಯ್ಕೆಯಾಗಿದ್ದರು. ನಂತರದ ದಿನಗಳಲ್ಲಿ ಸೇಪ೯ಡೆಗೊಂಡಿದ್ದು ಕಾಂಗ್ರೆಸ್್ ಪಕ್ಷಕ್ಕೆ, ಹಲವು ಬಾರಿ ಸೋಲನನುಭವಿಸಿ ರಾಜಕೀಯ ಬಲ್ಲವರಾಗಿದ್ದಾರೆ.

ಹಿರಿಯ ರಾಜಕಾರಣಿ ಗುರುಪಾದಪ್ಪ ನಾಗಮಾರಪಳ್ಳಿ ಅವರೊಂದಿಗೆ ಬಿಜೆಪಿಗೆ ಸೇಪ೯ಡೆಯಾಗಿದ್ದ ಮುಳೆ ಅವರು ಬಿಜೆಪಿ ಪಕ್ಷಕ್ಕೆ ರಾಜಿನಾಮೆ ನೀಡಿ, ನಾಗಮಾರಪಳ್ಳಿ ಅವರಿಂದಲೂ ಮುಳೆ ಬೇಪ೯ಟ್ಟಿದ್ದಾರೆ. ನಾಗಮಾರಪಳ್ಳಿ ಅವರು ಬೀದರ ಕ್ಷೇತ್ರದಿಂದ ಕೆಜೆಪಿ ಅಭ್ಯಥಿ೯ಯಾಗಿ ಚುನಾವಣಾ ಅಖಾಡಕ್ಕಿಳಿಯುತ್ತಿರುವುದು ಪ್ರಕಟವಾಗಿದೆ.

ಬಿಎಸ್್ವೈ ಅವರ ಕಟ್ಟಾ ಬೆಂಬಲಿಗರಾಗಿ ಅವರ ಜೊತೆಯಾಗಿಯೇ ಇದ್ದು, ಪ್ರಾಮಾಣಿಕ ಕಾಯ೯ಕತ೯ನೆಂಬ ಹೆಸರಿಗೆ ಸುಭಾಷ ಕಲ್ಲೂರ್್ ಅವರು ಕೆಜೆಪಿ ಪಕ್ಷದ ಗೆಲುವಿಗಾಗಿ ಜಿಲ್ಲೆಯಲ್ಲೆಡೆ ಶಕ್ತಿ ಪ್ರದಶ೯ನ ಮಾಡಲಿದ್ದಾರೆ. ಪ್ರಾಮಾಣಿಕ ಸೇವೆಯಿಂದ ಕಲ್ಲೂರ್್ ಅವರಿಗೆ ಮಹತ್ವದ ಸ್ಥಾನ ಸಿಗುವ ಸಂಭವ ಭರವಸೆಯೂ ಕೂಡ ವ್ಯಕ್ತವಾಗಿದೆ.

ಬಸವಕಲ್ಯಾಣ ಕ್ಷೇತ್ರ ಪ್ರಮುಖರಾದ ಬಾಬು ಹೊನ್ನಾನಾಯಕ ಸಹ ಜೆಡಿಎಸ್್ ತೊರೆದು ಬಿಎಸ್್ಆರ್್ ಕಾಂಗ್ರೆಸ್್ಗೆ ಹೋಗಿದ್ದಾರೆ. ಸ್ವಾಭಿಮಾನಿ ಶ್ರೀರಾಮುಲು ಪಕ್ಷ ಬಿಎಸ್್ಆರ್್ ಕಾಂಗ್ರೆಸ್್ಗೆ ಸೇರಿರುವ ಇವರು ಯಾವ ಸ್ಥಾನ ಪಡೆಯಲಿದ್ದಾರೆಂಬುದು ಕಾದು ನೋಡಬೇಕಷ್ಟೇ. ಇಲ್ಲಿಂದಲೇ ಚುನಾವಣಾ ತಯ್ಯಾರಿ ನಡೆಸುತ್ತಿರುವುದು ಕೇಳಿ ಬರುತ್ತಿದೆ.

ಪ್ರಥಮ ಬಾರಿಗೆ ಚುನಾವಣಾ ಅಖಾಡಕ್ಕಿಳಿದು ತಂದೆಯ ರಾಜಕೀಯ ಬಳುವಳಿ ಪಡೆದ ಬಸವಕಲ್ಯಾಣ ಕ್ಷೇತ್ರದ ಅತಿ ಕಿರಿಯ ಶಾಸಕನೆಂಬ ಖ್ಯಾತಿಗೆ ಒಳಗಾದ ದಿ.ಸಿದ್ರಾಮಪ್ಪ ಖೂಬಾ ಅವರ ಮಗ ಮಲ್ಲಿಕಾಜು೯ನ ಖೂಬಾ ಅವರು ಜನಬೆಂಬಲ, ಆಶಿವಾ೯ದದಿಂದ ಮೂರು ವಷ೯ಗಳ ಕಾಲ ಅಧಿಕಾರ ನಡೆಸಿದ್ದರು.

ಎರಡನೇ ಸಲದ ವಿಧಾನಸಭಾ ಚುನಾವಣೆಯಲ್ಲಿ ಸೋಲನನುಭವಿಸಿದ್ದ ಖೂಬಾರನ್ನು ಮತದಾರರೇ ಸೋಲಿಸಿದ್ದರು ಎಂಬ ಮಾತು ಅವರಿಂದಲೇ ಕೇಳಿ ಬರುತ್ತದೆ. ಅಧಿಕಾರವಧಿಯಲ್ಲಿ ಮಾಡಿದ ತಪ್ಪು ಮೆಲುಕು ಹಾಕಿ, ಮುಂದೆ ಹಾಗಾಗದಂತೆ ಎಚ್ಚರ ವಹಿಸಿ ಅಭಿವೖದ್ಧಿಯ ಕನಸು ಕಂಡಿದ್ದೇನೆ ಎಂಬುದು ಅವರ ಆಪ್ತ ವಲಯಗಳಿಂದ ಕೇಳಿ ಬರುವ ಮಾತಾಗಿದೆ.

ಸೋಲಿನಿಂದಾಗಿ ಇದೀಗ ಸಾಕಷ್ಟು ತಪ್ಪುಗಳನ್ನು ತಿದ್ದಿಕೊಂಡಿದ್ದೇನೆ ಎನ್ನುವ ಖೂಬಾ ಅವರು, ಮುಂದಿನ ದಿನಗಳಲ್ಲಿ ಶಾಸಕರ ಭವಿಷ್ಯ ಜನರೇ ನಿಣ೯ಯಿಸಲಿದ್ದಾರೆ. ರಾಜಕೀಯವೆಂದರೆ ಗೊತ್ತಿಲ್ಲದ ನನಗೆ ಸೋಲಿನಿಂದ ರಾಜಕೀಯ ಕಲಿತಂತಾಗಿದೆ. ಆದ್ದರಿಂದ ಮುಂದಿನ ವಿಧಾನ ಸಭಾ ಚುನಾವಣೆಗೆ ಖೂಬಾ ಸಹ ಸ್ಪಧಿ೯ಸುತ್ತಿರುವುದು ಖಚಿತ ಎಂಬುದು ಅಪ್ತರಿಂದ ಕೇಳಿ ಬುರುತ್ತಿದೆ.

ಬಿಜೆಪಿ ಮತ್ತು ಕೆಜೆಪಿಗೆ ಸೋಲಿಸುವ ಛಲ ನೇರ ಕಾಂಗ್ರೆಸ್್ಗೆ ಪೈಪೋಟಿಯಾಗಿ ಚುನಾವಣಾ ಅಖಾಡಕ್ಕಿಳಿಯುತ್ತಿರುವ ಮಲ್ಲಿಕಾಜು೯ನ ಖೂಬಾ ಅವರು, ಬಿಎಸ್್ಆರ್್ ನಿಂದ ಯಾವುದೇ ಹಾನಿಯಿಲ್ಲವೆಂಬ ಮನೋಭಾವ ಹೊಂದಿದಂತಿದೆ.

ಇನ್ನೂ ಕಾಂಗ್ರೆಸ್್ ಪಕ್ಷದಲ್ಲಿ ಅಭ್ಯಥಿ೯ಯ ಘೋಷಣೆ ಸ್ಪಷ್ಟವಿಲ್ಲ. ಕಾಂಗ್ರೆಸ್್ನೊಂದಿಗೆ ಬನ್ನಿ, ಬದಲಾವಣೆ ತನ್ನಿ ಕಾಯ೯ಕ್ರಮವೊಂದರಲ್ಲಿ ಅಧೀಕೖತ ಅಭ್ಯಥಿ೯ಯ ಹೆಸರು ಘೋಷಣೆ ಆದಂತಿದ್ದರೂ, ಅಡ್ಡಗೋಡೆ ಮೇಲೆ ದೀಪವಿಟ್ಟಂತಾಗಿದೆ. ಮಾಜಿ ಸಿಎಂ ಹಾಗೂ ಸಂಸದ ಧಮ೯ಸಿಂಗ್್ ಅವರ ಮಾತಿನಿಂದ ಬೆಕ್ಕಿಗೆ ಗಂಟೆ ಕಟ್ಟಿದಂತಾಗಿದ್ದು ನಿಜ.

ಇಷ್ಟಾದರೂ ತೆರೆಮರೆಯಲ್ಲಿ ಅನೇಕರು ಕಾಂಗ್ರೆಸ್್ ಪಕ್ಷದಿಂದ ಟಿಕೇಟ್್ ಪಡೆಯುವ ಅಕಾಂಕ್ಷಿಗಳಾಗಿದ್ದಾರೆ. ಕಾಂಗ್ರೆಸ್್ನ ವೀಕ್ಷಕರ ಸಭೆಯೊಂದರಲ್ಲಿ 16 ಜನ ಅಕಾಂಕ್ಷಿಗಳಾಗಿ ಅಜಿ೯ ಸಲ್ಲಿಸಿದರುವುದು ಅಪರೂಪವಾಗಿದೆ. ಮುಂದಿನ ದಿನಗಳಲ್ಲಿ ಅಭ್ಯಥಿ೯ಯ ಘೋಷಣೆಯಾದರೆ ಕಾಂಗ್ರೆಸ್್ನಲ್ಲೂ ಪ್ರತಿಸ್ಪಧಿ೯ಗಳು ಹೆಚ್ಚಾಗುವ ಸಂಭವ ಹೌದು. ಸ್ವತಂತ್ರ ಅಭ್ಯಥಿ೯ಗಳಾಗಿ ಚುನಾವಣೆ ಎದುರಿಸುವವರು ಇಲ್ಲಿದ್ದಾರೆ. ಹೈಕಮಾಂಡ ಮಾತ್ರ ಯಾರನ್ನು ಕಾಂಗ್ರೆಸ್್ ಟಿಕೇಟ್್ ನೀಡಿ ಆಶಿವ೯ದಿಸುತ್ತದೋ ಗೊತ್ತಿಲ್ಲದ ಗೊಂದಲ್ಲಿದೆ. ಏನೇ ಆದರೂ ಈ ಬಾರಿಯ ಚುನಾವಣೆಗೆ ರಂಗೇರಲಿದೆ.

ಬಿಜೆಯಿಂದ ಪ್ರಮುಖರೆಲ್ಲ ಶಾಸಕ ಬಸವರಾಜ ಪಾಟೀಲ ಅಟ್ಟೂರ್್ ಅವರ ಕೈ ಬಲಪಡಿಸಿದ್ದಾರೆ. ಬಿಜೆಪಿಗೆ ಗುಡ್್ಬೈ ಹೇಳಿ, ಕೆಜೆಪಿಗೆ ಕೈ ಜೋಡಿಸಿದ್ದಾರೆ. ಕೆಲ ಕಾಯ೯ಕತ೯ರು ಬಿಜೆಪಿಯಲ್ಲೇ ಉಳಿದುಕೊಂಡು ಅವರವರಲ್ಲಿಯೇ ಅನೇಕರು ಅಕಾಂಕ್ಷಿಗಳಾಗಿ ಉಳಿದಿರುವಂತೆ ಒಳಗೊಳಗೆ ಇರಿಸುಮುರುಸು ಕಂಡು ಬರುವಂತ್ತಿದೆ.

ಮತದಾರರ ಬಗ್ಗೆಯಾಗಲಿ, ಪಕ್ಷದ ಕಾಯ೯ಕತ೯ರುಗಳ ಬಗ್ಗೆ, ಅಭಿವೖದ್ಧಿ ಚಿಂತನೆಗಳು, ಜನಸಾಮಾನ್ಯರ ಕುಂದು ಕೊರತೆಗಳಿಗೆ ಸ್ಪಂಧಿಸುವಂಥ ಜನ ನಾಯಕರುಗಳಿಗೆ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಜನರು ಬಯಸಿದಂತಿದೆ. ಮತದಾರರು ಉತ್ತಮರನ್ನು ಬೆಂಬಲಿಸಲು ಮುಂದಾಗಿರುವುದು ಮಾತ್ರ ಸುಳ್ಳಲ್ಲ.

ಕೇವಲ ಕಾಲಹರಣದ ರಾಜಕಾರಣ ಮಾಡುತ್ತಿರುವವರಿಗೆ, ರೈತರ ಸಮಸ್ಯೆಗಳಿಗೆ ಸ್ಪಂಧಿಸದೇ, ಸಮಾಜದ ಅಭಿವೖದ್ಧಿಯಿಲ್ಲದವರ ಸೋಲು ಗ್ಯಾರಂಟಿ.  ವಿದ್ಯುತ್್ ಕೊರತೆ, ರಸ್ತೆಗಳ ದುರಸ್ಥಿ, ಶಾಲಾ ಕಾಲೇಜುಗಳಲ್ಲಿನ ಅನೇಕ ಮೂಲಭೂತ ಸಮಸ್ಯೆಗಳು, ಕುಗ್ರಾಮಗಳ ಜನರ ಪಾಡು, ನಗರ ಪ್ರದೇಶಗಳ ಜನರ ಸ್ಥಿತಿ ಸೌಲಭ್ಯ ವಂಚಿತರ ಸ್ಥಿತಿ ಚಿಂತಾಜನಕವಾಗಿದೆ.

ಶಾಸಕ ಅಟ್ಟೂರ್ ಅವರ ಬೆಂಬಲಿಗರಾಗಿ ಬಿಜೆಪಿಯಲ್ಲಿ ಪ್ರಾಮಾಣಿಕ ಕಾಯ೯ಕತ೯ರಾಗಿ ಕಾಯ೯ನಿವ೯ಹಿಸಿದ್ದ ಭಾಜಪ ತಾಲೂಕಾಧ್ಯಕ್ಷ ಸುಧೀರ ಕಾಡಾದಿ ಹಾಗೂ ನಗರ ಘಟಕದ ಅಧ್ಯಕ್ಷ ಸೂಯ೯ಕಾಂತ ಚಿಲ್ಲಾಬಟ್ಟೆ ಇಬ್ಬರೂ ಬಿಜೆಪಿ ಟಿಕೇಟ್ ಅಕಾಂಕ್ಷಿಗಳಾಗಿದ್ದಾರೆ. ಹೈಕಮಾಂಡ ಯಾರನ್ನು ಟಿಕೇಟ್್ ನೀಡಿ ಪ್ರೊತ್ಸಾಹಿಸುತ್ತದೇ ಎಂಬುದನ್ನು ಕಾದು ನೋಡಬೇಕಾಗಿದೆ. ಮತ್ತೆ ಬಿಜೆಪಿ ಪಕ್ಷದಲ್ಲಿಯೇ ಕೆಲವರು ಪ್ರತಿಸ್ಪಧಿ೯ಗಳಾದರೆ ಸಂಶಯವಿಲ್ಲ ಎಂಬಂತಾಗಿದೆ.

ಎಸ್ಸಿ, ಎಸ್ಟಿ ಪ್ರಮಾಣ ಪತ್ರಗಳಿಂದ ಹಿಡಿದು ಯಾವುದೇ ಸಕಾ೯ರಿ ಕಚೇರಿಗಳಲ್ಲಿ ಜನಗಳ ಮೂಲಸೌಲಭ್ಯಕ್ಕೆ ಮುಂದಾಗುವ ನಾಯಕರುಗಳು ಇಲ್ಲಿ ಬೇಕಾಗಿದ್ದಾರೆ. ಎಲ್ಲರ ಸಮಸ್ಯೆಗಳಿಗೆ ಪ್ರಾಮಾಣಿಕ ಪ್ರಯತ್ನದ ಚಿಂತನೆ ಮಾಡುವವರ ಪಾಲಿಗೆ ಜನ ಬೆಂಬಲ ಇದ್ದೇ ಇರುತ್ತದೆ ಎನ್ನುವ ಅನೇಕರು ತಾಲೂಕಾಡಳಿತ ಸುಲಭಾಗಿ ಅಭಿವೖದ್ಧಿ ಹೊಂದುವಂತಾಗಬೇಕು ಎಂಬ ಅಳಲನ್ನು ತೋಡಿಕೊಳ್ಳುತ್ತಾರೆ.

ಶಾಸಕ ಬಸವರಾಜ ಪಾಟೀಲ, ಇತ್ತೀಚಿಗೆ ಬಿಜೆಪಿಗೆ ರಾಜಿನಾಮೆ ನೀಡಿ ಕೆಜೆಪಿಗೆ ಹೋಗಿದ್ದಾರೆ.

 

ಶಾಸಕ ಅಟ್ಟೂರ್ ಅವರ ಬೆಂಬಲಿಗರಾಗಿ ಬಿಜೆಪಿಯಲ್ಲಿ ಕಾಯ೯ನಿವ೯ಹಿಸಿದ್ದ ಭಾಜಪ ತಾಲೂಕಾಧ್ಯಕ್ಷ ಸುಧೀರ ಕಾಡಾದಿ ಹಾಗೂ ನಗರ ಘಟಕದ ಅಧ್ಯಕ್ಷ ಸೂಯ೯ಕಾಂತ ಚಿಲ್ಲಾಬಟ್ಟೆ

 

ಹಿರಿಯ ರಾಜಕಾರಣಿ, ಮಾಜಿ ಶಾಸಕ ಎಂ.ಜಿ.ಮುಳೆ

 

ಮಾಜಿ ಶಾಸಕ ಹಾಗೂ ಜೆಡಿಎಸ್ ರಾಜ್ಯ ಯುವ ಕಾಯಾ೯ಧ್ಯಕ್ಷ ಮಲ್ಲಿಕಾಜು೯ನ ಖೂಬಾ

 

ಕಾಂಗ್ರೆಸ್್ ಮುಖಂಡ ಶಿವಶರಣ ಬಿರಾದಾರ್


ಭಾನುವಾರ, ಡಿಸೆಂಬರ್ 16, 2012

ಪಕ್ಷದಿಂದ ಪಕ್ಷಕ್ಕೆ ಜಿಗಿಯುವುದೇ ಮಹಾನ್ ಸಾಧನೆಃ ಖೂಬಾ ಆರೋಪ


ರಾಜ್ಯ ಯುವ ಜೆಡಿಎಸ್್ ಕಾಯಾ೯ಧ್ಯಕ್ಷ ಹಾಗೂ ಮಾಜಿ ಶಾಸಕ ಮಲ್ಲಿಕಾಜು೯ನ ಖೂಬಾ
ಮಾಜಿ ಶಾಸಕ ಎಂ.ಜಿ.ಮುಳೆ
ಶಾಸಕ ಬಸವರಾಜ ಪಾಟೀಲ ಅಟ್ಟೂರ್

ವಿಧಾನಸಭಾ ಚುನಾವಣೆಯಲ್ಲಿ ನಾನು ಜನಗಳ ಬೆಂಬಲ, ಆಶಿವಾ೯ದದಿಂದ ಗೆಲ್ಲುವುದು ಶತಸಿದ್ಧಃ ಖೂಬಾ ಅಭಿಮತ
ವೀರಣ್ಣ ಮಂಠಾಳಕರ್
---------------------
ಬಸವಕಲ್ಯಾಣ, ಡಿ.16ವಿಶ್ವಗುರು ಬಸವಣ್ಣನವರ ಬಗ್ಗೆ ಕಾಳಜಿ ಇಲ್ಲದ ಹಾಲಿ ಶಾಸಕ ಅಟ್ಟೂರ್್ ಮತ್ತು ಮಾಜಿ ಶಾಸಕ ಮುಳೆ ಅವರು, ಪಕ್ಷದಿಂದ ಪಕ್ಷಕ್ಕೆ ಜಿಗಿಯುವುದೇ ಮಹಾನ್್ ಸಾಧನೆ ಎಂಬುದನ್ನರಿತಿದ್ದಾರೆ. ತಾಲೂಕಾಭಿವೖದ್ಧಿಯ ಚಿಂತನೆ ಮಾಡದೇ ಸ್ವಾಥ೯ಕ್ಕಾಗಿ ತಮ್ಮದೇ ಕಲ್ಯಾಣವನ್ನು ಮಾಡಿಕೊಳ್ಳುತಿದ್ದಾರೆ ಎಂದು ರಾಜ್ಯ ಯುವ ಜೆಡಿಎಸ್್ ಕಾಯಾ೯ಧ್ಯಕ್ಷ ಹಾಗೂ ಮಾಜಿ ಶಾಸಕ ಮಲ್ಲಿಕಾಜು೯ನ ಖೂಬಾ ವಾಗ್ದಾಳಿ ನಡೆಸಿದರು.

ಭಾನುವಾರ ಖೂಬಾ ನಿವಾಸದ ಕಚೇರಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಪತ್ರಕತ೯ರೊಂದಿಗೆ ಮಾತನಾಡಿದ ಅವರು, ಎಲ್ಲಾ ಜಾತಿ ಧಮ೯ದವರೊಂದಿಗೆ ಕೂಡಿಕೊಂಡು ಅಭಿವೖದ್ಧಿಯ ಕನಸು ಕಂಡಿರುವ ನನಗೆ ರಾಜಕೀಯದಲ್ಲಿ ಹಿರಿಯರಾದ ಮುಳೆ, ಅಟ್ಟೂರ್್ ಅವರಿಂದ ಏನು ಕಲಿಯಬೇಕು ಎಂಬುದೇ ಯಕ್ಷಪ್ರಶ್ನೆಯಾಗಿ ಕಾಡುತ್ತಿದೆ ಎಂದು ವ್ಯಂಗ್ಯವಾಡಿದರು.

ಇವರಿಗೆ ಮತದಾರರ ಬಗ್ಗೆಯಾಗಲಿ, ಪಕ್ಷದ ಕಾಯ೯ಕತ೯ರುಗಳ ಬಗ್ಗೆ, ಅಭಿವೖದ್ಧಿ ಚಿಂತನೆಗಳಿಲ್ಲ. ಕೇವಲ ಕಾಲಹರಣದ ರಾಜಕಾರಣ ಮಾಡುತಿದ್ದಾರೆ. ರೈತರ ಸಮಸ್ಯೆಗಳಿಗೆ ಸ್ಪಂಧಿಸದೇ, ಹಾಲಿ ಶಾಸಕರು ವಿಫಲ ಆಡಳಿತ ನಡೆಸುತ್ತಿದ್ದಾರೆ. ವಿದ್ಯುತ್್ ಕೊರತೆ, ಅಪೂಣ೯ ಕೆರೆಗಳು ನೆನೆಗುದಿಗೆ ಬಿದ್ದಿವೆ. ಎಸ್ಸಿ, ಎಸ್ಟಿ ಪ್ರಮಾಣ ಪತ್ರ ಸಿಗುತ್ತಿಲ್ಲ. ಪಿಯು ಕಾಲೇಜು ಸೇರಿದಂತೆ ಮುಂತಾದ ಕಾಮಗಾರಿಗಳು ಬೇಜವಾಬ್ದಾರಿಯಿಂದ ವಾಪಸ್್ ಹೋಗಿವೆ ಎಂದು ಕಿಡಿ ಕಾರಿದರು.

ಬಸವಕಲ್ಯಾಣ ಕ್ಷೇತ್ರದ ಆಡಳಿತ ಸೋಲಾರ್್ ಶಕ್ತಿ ಬೆಳಕಿನ ಹಾಗೆ ನಡೆಯುತಿದ್ದು, ವೖದ್ಧರ, ವಿಧವೆಯರ, ಅಂಗವಿಕಲರ ಮಾಸಿಕ ವೇತನಗಳು ಇವರ ಅಧಿಕಾರವಧಿಯಲ್ಲಿ ಕಡಿತಗೊಳಿಸಲಾಗಿದೆ. ಹತ್ತಾರು ಸಮಸ್ಯೆಗಳ ಆಗರವಾಗಿರುವ ಇಲ್ಲಿನ ಆಡಳಿತ ಸಂಪೂಣ೯ ಕುಸಿದಿದೆ ಎಂದು ಆರೋಪಿಸಿದರು.

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪಧಿ೯ಸಬೇಕೆಂಬ ಆಸೆಯಿಂದ ಅಭಿವೖದ್ದಿಯತ್ತ ಗಮನ ಹರಿಸುತ್ತಿಲ್ಲ. ಇದರಿಂದ ಜನ ಸಾಮಾನ್ಯರ ಕೆಲಸ ಕಾಯ೯ಗಳು ಆಗದೇ ಇರುವುದರಿಂದ ಕಚೇರಿಗಳಲ್ಲಿನ ಭ್ರಷ್ಟಾಚಾರದಿಂದ ಜನ ಪರದಾಡುವಂತಾಗಿದೆ. ಕ್ಷೇತ್ರದ ಮತದಾರರು ಇನ್ನಾದರೂ ಜಾಗೖತರಾಗಬೇಕು ಎಂದು ಕರೆ ನೀಡಿದರು.

ಬಸವಕಲ್ಯಾಣ ಅಭಿವೖದ್ಧಿ ಮಂಡಳಿಗೆ ಪ್ರಸ್ತುತ ಸಕಾ೯ರ ಕೇವಲ 16 ಕೋಟಿ ಮಂಜೂರು ಮಾಡಿದೆ. ನಮ್ಮ ಜೆಡಿಎಸ್್ ಸಕಾ೯ರದ ಅವಧಿಯಲ್ಲಿ ಒಂದೇ ಸಲಕ್ಕೆ 23 ಕೋಟಿ ರುಪಾಯಿ ಬಿಡುಗಡೆ ಮಾಡಿತ್ತು. ತ್ರಿಪುರಾಂತ ಕೆರೆ ಕಾಮಗಾರಿ ಅಧ೯ಕ್ಕೆ ನಿಂತಿದೆ. ಇಲ್ಲಿ ಮಂಜೂರಾದ ಆಟೋ ಪಾಕ೯ ಇವತ್ತಿಗೂ ಪ್ರಾರಂಭಗೊಂಡಿಲ್ಲ. ಸಕಾ೯ರಿ ಕಚೇರಿಗಳಲ್ಲಿ 254 ಹುದ್ದೆ ಭತಿ೯ ಮಾಡಿಕೊಳ್ಳದಿರುವುದು ದುರಾದೖಷ್ಟವಾಗಿದೆ ಎಂದು ವಿಷಾದಿಸಿದರು.

ನಾನು ಕಳೆದ ಚುನಾವಣೆಯಲ್ಲಿ ಸೋತಿರುವುದರಿಂದ ಮಾಡಿರುವ ತಪ್ಪುಗಳನ್ನು ತಿದ್ದಿಕೊಂಡು ಸುಧಾರಿಸಿದ್ದೇನೆ. ಸೋಲೆಂಬುದು ಮನುಷ್ಯನಿಗೆ ಬದುಕುವ ಪಾಠ ಕಲಿಸಿಕೊಟ್ಟು, ಜನರೊಂದಿಗೆ ಹೇಗೆ ಬೆರೆಯಬೇಕೆಂಬುದನ್ನು ಹೇಳಿ ಕೊಡುತ್ತದೆ. ಆದರೆ ಮುಳೆ ಅವರು 5 ಬಾರಿ ಸೋತರೂ ಇನ್ನೂ ಅವರಲ್ಲಿ ಸುಧಾರಣೆ ಕಂಡು ಬರುತ್ತಿಲ್ಲ. ಅಟ್ಟೂರ್್ ಅವರಿಗೆ ಅಭಿವೖದ್ಧಿಯ ಚಿಂತನೆಯೇ ಇಲ್ಲ ಎಂದು ನೇರ ಆರೋಪಿಸಿದರು.

ಮೊಟ್ಟ ಮೊದಲು ಜೆಡಿಎಸ್್ ಪಕ್ಷದಿಂದ ವಿಧಾನಸಭೆಗೆ ಆಯ್ಕೆಯಾದ ಮುಳೆ ನಂತರ ಸೇಪ೯ಡೆಗೊಂಡಿದ್ದು ಕಾಂಗ್ರೆಸ್್ ಪಕ್ಷಕ್ಕೆ, ಇದಾದ ನಂತರ ಕಾಂಗ್ರೆಸ್್ನಿಂದಲೇ ಚುನಾವಣೆಯಲ್ಲಿ ಸ್ಪಧಿ೯ಸಿ 32 ಸಾವಿರ ಮತಗಳನ್ನು ಪಡೆದು ವಯಕ್ತಿಕ ಸ್ವಾಥ೯ದಿಂದ ಕಾಂಗ್ರೆಸ್್ ಪಕ್ಷ ಬಿಟ್ಟು ಮಾಜಿ ಮುಖ್ಯಮಂತ್ರಿ ಮತ್ತು ಕೇಂದ್ರ ಸಚಿವರಾಗಿದ್ದ ದಿ.ವಿಲಾಸರಾವ ದೇಶಮುಖ, ವಿರೋಧ ಪಕ್ಷದ ನಾಯಕ ಸಿದ್ರಾಮಯ್ಯ, ಪಿ.ಜಿ.ಆರ್್ ಶಿಂಧ್ಯೆ, ಖಗೆ೯, ಧರ್ಮಸಿಂಗ್್ ಮುಂತಾದ ಹಿರಿಯ ನಾಯಕರುಗಳಿಗೆ ಕೈಕೊಟ್ಟು, ಇದೀಗ ಬಿಎಸ್್ಆರ್್ ಪಕ್ಷಕ್ಕೆ ಸೇಪ೯ಡೆಗೊಂಡಿದ್ದು ಸ್ವಹಿತಾಸಕ್ತಿಯ ಲಾಭಕ್ಕಾಗಿ ಹೊರತು ಅಭಿವೖದ್ಧಿಯ ದೖಷ್ಠಿಕೋನದಿಂದಲ್ಲ ಎಂದು ದೂರಿದರು.

ಆಡಳಿತದಲ್ಲಿದ್ದ ಬಿಜೆಪಿಗೆ ಸೇಪ೯ಡೆಗೊಂಡು 54 ತಿಂಗಳಲ್ಲಿ ಮೂರು ಪಕ್ಷ ಬದಲಾಯಿಸಿದ ಮಾಜಿ ಶಾಸಕ ಮುಳೆ ಅವರು, ಎಲ್ಲಾ ಪಕ್ಷದ ರಾಜಕೀಯ ಮುತ್ಸದ್ದಿಗಳನ್ನು ಮತ್ತು ಕುಮಾರಸ್ವಾಮಿ ಅವರನ್ನು ಕೂಡ ಮೋಸ ಮಾಡಿದವರಾಗಿದ್ದಾರೆ. ಇವರೇನು ಎಂಬುದು ಜನರೇ ವಿಧಾನಸಭಾ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಖಾರವಾಗಿ ನುಡಿದರು.

ಮಾಜಿ ಮುಖ್ಯಮಂತ್ರಿ ಬಿ.ಎಸ್್.ಯಡಿಯೂರಪ್ಪನವರು ಸ್ವಾಭಿಮಾನಕ್ಕಾಗಿ ಬಿಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೆ ರಾಜಿನಾಮೆ ನೀಡಿ, ಕೆಜೆಪಿ ಪ್ರಾದೇಶಿಕ ಪಕ್ಷ ಹುಟ್ಟು ಹಾಕಿದರೆ, ಹಾಲಿ ಶಾಸಕ ಬಸವರಾಜ ಪಾಟೀಲ ಅಟ್ಟೂರ್್ ಅವರು ಹಿರಿಯ ರಾಜಕಾರಣಿಯಾಗಿ 7 ಸಲ ವಿಧಾನಸಭಾ ಚುನಾವಣೆ ಸ್ಪಧಿ೯ಸಿ, 5 ಸಲ ಗೆದ್ದು 2 ಸಲ ಸೋತ ಅನುಭವಿಗಳಾಗಿದ್ದರೂ ಬಿಜೆಪಿ ಸದಸ್ಯತ್ವಕ್ಕೆ ರಾಜಿನಾಮೆ ನೀಡದೇ ಕೆಜೆಪಿ ಸೇರಿರುವ ಬಗ್ಗೆ ಘೋಷಣೆ ಮಾಡಿರುವುದು ಸರಿಯೇ ಎಂದು ಪ್ರಶ್ನಿಸಿದರು.

ಬಸವಕಲ್ಯಾಣ ಕ್ಷೇತ್ರದಲ್ಲಿ ಸಕ್ಕರೆ ಕಾಖಾ೯ನೆ ಸ್ಥಾಪಿಸುವುದಾಗಿ ಇಲ್ಲಿನ ರೈತರುಗಳಿಗೆ ದ್ರೊಹ ಬಗೆದ ಮುಳೆ ಅವರು, ಅನುಭವ ಬ್ಯಾಂಕ್್ನಿಂದ ಬಡವರ ಹಣ ದೋಚಿಕೊಂಡಿದ್ದಾರೆ. ಅದೇ ರೀತಿ ಬಿಎಸ್್ಎಸ್್ಕೆ ಸಕ್ಕರೆ ಕಾಖಾ೯ನೆಯಿಂದ ಏನೆಲ್ಲಾ ಲಾಭ ಪಡೆದಿದ್ದಾರೆ ಎನ್ನುವ ಮಾಹಿತಿಯ ಪಟ್ಟಿ ಮುಂದಿನ ದಿನಗಳಲ್ಲಿ ಕೊಡುತ್ತೇನೆ ಎಂದರು.

ಹಾಲಿ ಮತ್ತು ಮಾಜಿ ಶಾಸಕರುಗಳು ನನಗಿಂತ ಹಿರಿಯರಾಗಿದ್ದು, ನಾನು ಇವರಿಂದ ಮಾಗ೯ದಶ೯ನ ಪಡೆದು ಕ್ಷೇತ್ರದ ಜನರ ಸೇವೆ ಮಾಡುವುದನ್ನು ಕಲಿಯಬೇಕಾಗಿತ್ತು. ಆದರೆ ಇಬ್ಬರೂ ವಯಕ್ತಿಕ ಲಾಭಕ್ಕಾಗಿ ಪಕ್ಷದಿಂದ ಪಕ್ಷಕ್ಕೆ ಹೋಗುವುದರಲ್ಲೇ ತಲ್ಲೀನರಾಗಿರುವುದು ನೋಡಿ ಇವರಿಂದ ಕಲಿಯಬೇಕಾದ್ದು ಏನಿದೆ ಎಂಬುದನ್ನು ತಿಳಿಯದಾಗಿದೆ ಎಂದು ಚಕಿತರಾದರು.

ಮುಂಬರುವ ಸಿಎಂಸಿ ಚುನಾವಣೆಗೆ ಸ್ಪಧಿ೯ಸಬೇಕೆಂಬ ಇಚ್ಚೆಯುಳ್ಳವರು ಸಂಬಂಧಪಟ್ಟ ವಾಡ೯ ಬಗ್ಗೆ ಸಂಪೂಣ೯ ಮಾಹಿತಿ, ಉತ್ತಮ ಸೇವಾ ಮನೋಭಾವನೆ, ನಗರಸಭೆಯ ಕುರಿತು ತಿಳುವಳಿಕೆ ಉಳ್ಳವರು ಬಂದರೆ ಜೆಡಿಎಸ್್ನಿಂದ ಸ್ಪಧಿ೯ಸುವ ಅಭ್ಯಥಿ೯ಯ ಅಧಿಕೖತ ಘೋಷಣೆ ಬರುವ ಜನವರಿ 26ಕ್ಕೆ ಮಾಡಲಾಗುವುದು ಎಂದು ಹೇಳಿದರು.

ರಾಜ್ಯದಲ್ಲಿ ಬಿಜೆಪಿಗೆ ಸೋಲಿಸಲು ಕೆಜೆಪಿ ಬಂದಿದೆ. ಕೆಜೆಪಿಗೆ ಸೋಲಿಸುವ ನಿಧಾ೯ರ ಜೆಡಿಎಸ್್ಗೆ ಇದ್ದಂತೆ ಈ ಕ್ಷೇತ್ರದಿಂದ ಅಟ್ಟೂರ್್, ಮುಳೆ ಅವರನ್ನು ಸೋಲಿಸುವ ಗುರಿ ನನ್ನದಾಗಿದೆ. ಕಾಂಗ್ರೆಸ್್ಗೆ ನೇರ ಸ್ಪಧಿ೯ಯಾಗಿ ವಿಧಾನಸಭಾ ಚುನಾವಣೆಯಲ್ಲಿ ನಾನು ಜನಗಳ ಬೆಂಬಲ, ಅವರ ಒಲವಿನಿಂದ ಗೆಲ್ಲುವುದು ಶತಸಿದ್ಧ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬುಧವಾರ, ಅಕ್ಟೋಬರ್ 3, 2012

ವಿಧಾನಸಭಾ ಚುನಾವಣೆಯಲ್ಲಿ ರಾಜಕೀಯ ಪಕ್ಷದವರ ಪೈಪೋಟಿಃ

Khuba mallikarjun
ವೀರಣ್ಣ ಮಂಠಾಳಕರ್
---------------------


ಬಸವಕಲ್ಯಾಣಃ ವಿಧಾನಸಭಾ ಚುನಾವಣೆಯಲ್ಲಿ ರಾಜಕೀಯ ಪಕ್ಷದವರ ಪೈಪೋಟಿಃ ಓಟು ನೋಟಿಗಾಗಿ ಎಲ್ಲವೂ

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ನಿಲ್ಲಲು ಆಯಾ ಪಕ್ಷದ ಅಭ್ಯಥಿ೯ಗಳ ಅಧಿಕೖತ ಪಟ್ಟಿಯೇ ಇನ್ನೂ ಬಿಡುಗಡೆಯಾಗಿಲ್ಲ. ಆದರೂ ಬಸವಕಲ್ಯಾಣ ತಾಲೂಕಿನೆಲ್ಲೆಡೆ ರಾಜಕೀಯ ನಾಯಕರು, ಮಾಜಿ, ಹಾಜಿ ಹಾಗೂ ಪಕ್ಷಗಳ ಪ್ರಮುಖರು ಪ್ರಚಾರಕ್ಕಾಗಿ ಎಲ್ಲಿಲ್ಲದ ಕಸರತ್ತು ನಡೆಸುತ್ತಿರುವುದು ಕಂಡು ಬರುವಂತಾಗಿದೆ.

ಯಾವುದೋ ಹಬ್ಬ ಹರಿದಿನಗಳ ನೆಪದಲ್ಲಿ ಪಾಲ್ಗೊಳ್ಳುವುದು, ಧಾಮಿ೯ಕ ಕಾಯ೯ಕ್ರಮಗಳಲ್ಲಿ ವಿಶೇಷ ಪೂಜೆ ನೆರವೇರಿಸುವುದು ಸೇರಿದಂತೆ ವಿವಿಧ ಗ್ರಾಮಗಳಿಗೆ ತೆರಳಿ ಸಾವ೯ಜನಿಕರ ಕುಂದು ಕೊರತೆಗಳಿಗೆ ಸ್ಪಂಧಿಸುವ ಬೆಳವಣಿಗೆ ರಾಜಕೀಯ ಜನರಲ್ಲಿ ಚುನಾವಣೆಯ ಕಾವು ಮತ್ತಷ್ಟು ಏರತೊಡಗಿದೆ.

2013ರಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯ ಜಪವನ್ನೇ ಮಾಡುತ್ತಿರುವ ಅನೇಕರು ವಿಶೇಷ ದಿನಗಳ ಸಂದಭ೯ಕ್ಕೆ ವಿವಿಧ ಧಾಮಿ೯ಕ ಸಮಾರಂಭಗಳಲ್ಲಿ ಜನರನ್ನು ಶುಭಾಷಯ ಕೋರಿ ಕಟೌಟ್್, ಬ್ಯಾನರ್್ಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಅಧೀಕ ಸಂಖ್ಯೆಯ ಯುವನಾಯಕರಿಗೆ ಪ್ರಚಾರವೇ ಮೂಲ ಮಂತ್ರವಾಗಿದೆ.

ಇಲ್ಲಿಯವರೆಗೆ ಎಲ್ಲೋ ಇದ್ದವರು ಇದ್ದಕ್ಕಿದಂತೆ ಪ್ರತ್ಯಕ್ಷವಾಗಿ ಭಾರಿ ಪ್ರಚಾರದಲ್ಲಿ ಇರುವುದನ್ನು ನೋಡಿದರೆ ಕಾಂಗ್ರೇಸ್್ ಪಕ್ಷದಲ್ಲಿ ಅನೇಕರು ಆಕಾಂಕ್ಷಿಗಳಾಗಿದ್ದಾರೆ. ಇದರಿಂದ ಟಿಕೇಟ್್ ಮಾತ್ರ ಯಾರಿಗೆ ಸಿಗುತ್ತದೋ ನಿಖರವಾಗಿ ಹೇಳಲಾಗದಂತಾಗಿದೆ. ಹಲವರ ನಿರೀಕ್ಷೆ, ಕೆಲವರ ಲೆಕ್ಕಾಚಾರ ಕೂಡ ಏನಿದೆಯೋ ಎಂಬ ಅಪವಾದಗಳೂ ಬರುತ್ತಿವೆ.

ಜೆಡಿಎಸ್್ನಿಂದ ಮಾಜಿ ಶಾಸಕ ಮಲ್ಲಿಕಾಜು೯ನ ಖೂಬಾ ಮುಂಬರುವ ಚುನಾವಣೆಗೆ ನಿಲ್ಲುವುದು ಶತಸಿದ್ಧ ಎಂಬ ಮಾತುಗಳು ಕೇಳಿ ಬರುತಿದ್ದು, ಟಿಕೇಟ್್ ಸಿಗೋದು ಖಚಿತವೆಂಬಂತೆ ಅಬ್ಬರದ ಪ್ರಚಾರ ಮಾಡುತಿದ್ದಾರೆ. ಕಾಂಗ್ರೇಸ್್ ಪಕ್ಷದಲ್ಲಿ ಅನೇಕರು ಪೈಪೋಟಿ ನಡೆಸುವಂತೆ ಕಾಣಿಸಿಕೊಳ್ಳುತಿದ್ದಾರೆ.

ಹಾಲಿ ಶಾಸಕ ಬಸವರಾಜ ಪಾಟೀಲ ಅಟ್ಟೂರ್್ ಅವರು ಕಳೆದ ವಷ೯ ಕಾರು ಅಪಘಾತದಲ್ಲಿ ಗಾಯಗೊಂಡು ಇದೀಗ ಚೇತರಿಸಿಕೊಂಡಿದ್ದಾರೆ. ಆದ್ದರಿಂದ ಹೆಚ್ಚಿನ ಪ್ರಚಾರದಲ್ಲಿ ತೊಡಗಿಸಿಕೊಳ್ಳದೇ  ಮೌನವೇ ಸವ೯ ಲಕ್ಷಣ ಎನ್ನುವ ಹಾಗೆ ಅಟ್ಟೂರ್್ ಮತ್ತೆ ಚುನಾವಣಾ ಕಣಕ್ಕಿಳಿಯುವುದು ಖಚಿತವೆಂಬ ಮಾತು ಅವರ ಆಪ್ತ ವಲಯಗಳಿಂದ ಕೇಳಿ ಬರುತ್ತಿವೆ.

ಯೂಥ್್ ಕಾಂಗ್ರೇಸ್್ ಜಿಲ್ಲಾ ಯುವ ಘಟಕದ ಆನಂದ ದೇವಪ್ಪ, ಹಿಂದುಳಿದ ವಗ೯ಗಳ ಮುಖಂಡ ಬಿ.ನಾರಾಯಣರಾವ, ಶಿವಶರಣು ಬಿರಾದಾರ್್, ಶಿವರಾಜ ನರಶೆಟ್ಟಿ ಮುಂತಾದ ಪ್ರಮುಖರು ಒಂದೇ ಪಕ್ಷದಲ್ಲಿದ್ದರೂ ಚುನಾವಣೆ ವೇಳೆ ಪ್ರತಿಸ್ಫಧಿ೯ಗಳಂತೆ ಸಿದ್ಧತೆ ನಡೆಸುತ್ತಿರುವ ಲಕ್ಷಣಗಳು ಗೋಚರಿಸುತ್ತಿವೆ.

ಇನ್ನೋವ೯ ಮಾಜಿ ಶಾಸಕ ಮಾರುತಿರಾವ ಮೂಳೆಯವರು ಯಾವ ಪಕ್ಷದಿಂದ ಚುನಾವಣೆ ಎದುರಿಸುವುದೆಂಬ ಗೊಂದಲ ಇದ್ದಂತಿದೆ. ಹೊಸ ಪಕ್ಷದಿಂದ ಚುನಾವಣಾ ಕಣಕ್ಕೆ ಬರಲಿದ್ದಾರೆ ಎಂಬ ಸ್ವರಗಳು ಕೇಳಿ ಬರುತ್ತಿದೆ. ಸ್ವಾಭಿಮಾನಿ ಶ್ರೀರಾಮುಲು ಅವರ ಹೊಸ ಪಕ್ಷಕ್ಕೆ ಮೂಳೆ ಸೇರಿದಂತೆ ಇತರೆ ಯುವನಾಯಕರು ಸೇರಲಿದ್ದಾರೆ ಎಂಬ ಗಾಳಿ ಸುದ್ಧಿಯೂ ಕೂಡ ಇದೆ.

ಯಾವುದೇ ಗಾಳಿ ಸುದ್ಧಿಗೆ ಒಳಗಾಗದ ಅನೇಕ ರಾಜಕೀಯ ಮುಖಂಡರು ತೆರೆಮರೆಯಲ್ಲಿ ಕಸರತ್ತು ನಡೆಸುತ್ತಾ ವಿಧಾನಸಭಾ ಚುನಾವಣೆಯ ಸಿದ್ಧತೆಯಲ್ಲಿದ್ದಂತೆ, ಸಧ್ಯಕ್ಕೆ ಸಾವ೯ಜನಿಕರ ಮಧ್ಯೆದಲ್ಲಿ ಕಾಣಿಸಿಕೊಳ್ಳದೇ ಇದ್ದರೂ ಚುನಾವಣಾ ಅಖಾಡಕ್ಕಿಳಿಯುವ ಪೂವ೯ಯೋಜಿತ ಯೋಚನೆ ಹಲವರಿಗಿದೆ.

ಭಾನುವಾರ, ಜೂನ್ 10, 2012

ಮುಖ್ಯ ಶಿಕ್ಷರಿಲ್ಲದ ಬಟಗೇರಾ ಶಾಲೆ

  ಬಸವಕಲ್ಯಾಣ.

ತಾಲೂಕಿನ ಬಟಗೇರಾ ಸರಕಾರಿ ಪ್ರೌಢ ಶಾಲೆ
    ಮುಖ್ಯ ಶಿಕ್ಷರಿಲ್ಲದ ಬಟಗೇರಾ ಶಾಲೆಯಲ್ಲಿ ಶೈಕ್ಷಣಿಕ ಕೊರತೆಯಿಂದ ಉತ್ತಮ ಬೋಧನೆಗೆ ಹಿನ್ನಡೆ


ಬಸವಕಲ್ಯಾಣ. ಜೂ. 8

ತಾಲೂಕಿನ ಬಟಗೇರಾ ಸರಕಾರಿ ಪ್ರೌಢ ಶಾಲೆ ಪ್ರಾರಂಭದಿಂದ ಶಿಕ್ಷಕರ ಕೊರತೆಯನ್ನು ತೀವೖವಾಗಿ ಅನುಭವಿಸುತಿದ್ದು, ಸಂಬಂಧಪಟ್ಟ ಇಲಾಖೆ ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ. ಬೇಡಿಕೆ ಒತ್ತಾಯಕ್ಕಾಗಿ ಕಳೆದ ವಷ೯ ಕ್ಷೇತ್ರ  ಶಿಕ್ಷಣಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರೂ ಶಿಕ್ಷಕರ ಕೊರತೆ ಇರುವ ಖಾಲಿ ಜಾಗ ಭತಿ೯ ಮಾಡಲಾಗಿಲ್ಲ ಎಂಬುದು ಗ್ರಾಮಸ್ಥರ  ಅಳಲಾಗಿದೆ.

ಮೂರೇ ಜನ ಶಿಕ್ಷಕರಿರುವ ಬಟಗೇರಾ ಸರಕಾರಿ ಪ್ರೌಢ ಶಾಲೆಗೆ ಶೌಚಾಲಯವಿಲ್ಲ. ನೀರು ಸರಬರಾಜಿಲ್ಲ, ವಿಜ್ಞಾನ, ಇಂಗ್ಲೀಷ ಶಿಕ್ಷಕರು ಸೇರಿದಂತೆ ಮುಖ್ಯೋಪಾಧ್ಯಯರಿಲ್ಲ. ಅನೇಕ ಮೂಲ ಸೌಲಭ್ಯಗಳ ಕೊರತೆಯಿಂದ ಮಕ್ಕಳ ಶೈಕ್ಷಣಿಕ ಪ್ರಗತಿಯಲ್ಲಿ ದುಸ್ಫರಿಣಾಮ ಬೀರುತಿದೆ. ಹೀಗೆ ಸಕಾ೯ರದ ಧೋರಣೆ ಮುಂದೊರೆದರೆ ಮತ್ತೆ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ಶಿಕ್ಷಕರ ಕೊರತೆ ಬಗ್ಗೆ ಹಲವು ಬಾರಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಗಮನಕ್ಕೆ ತಂದರೂ ಕೂಡ ತಲೆ ಕೆಡಿಸಿಕೊಳ್ಳದ ಅಧಿಕಾರಿಗಳು ಇದ್ದಂಥ ಶಿಕ್ಷಕರನ್ನೆ ಮತ್ತೆ ವಗಾ೯ವಣೆ ಮಾಡಿದ್ದಾರೆ. ಗುಣಮಟ್ಟದ ಬೋಧನೆ ಇಲ್ಲದೇ ಮಕ್ಕಳ ಸವ೯ತೋಮುಖ ಬೆಳವಣಿಗೆಗಾಗಿ ಪಾಲಕರು ಪರಿತಪಿಸುವಂತಾಗಿದೆ.

ಹೀಗೆ ಪರಿಸ್ಥಿತಿ ಮುಂದೊರೆದರೆ ಮಕ್ಕಳು ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆಯುವುದಾದರೂ ಹೇಗೆ ಎಂದು ಪ್ರಶ್ನಿಸಿದ ಸರಕಾರಿ ಪ್ರೌಢ  ಶಾಲೆಯ ಎಸ್್.ಡಿ.ಎಂ.ಸಿ ಅಧ್ಯಕ್ಷ ಬಸವರಾಜ ಹಿರೇಮಠ ಕನ್ನಡಪ್ರಭದೊಂದಿಗೆ ಮಾತನಾಡಿ ಪ್ರತಿಕ್ರಿಯಿಸಿದರು.

ಶಾಲೆಗೆ ಸಮಪ೯ಕವಾದ ಅಡುಗೆ ಕೋಣೆಗಳಿಲ್ಲ. ನಂಜುಂಡಪ್ಪ ವರದಿ ಅನುಷ್ಠಾನದಲ್ಲಿ ಕಟ್ಟಲ್ಪಟ್ಟ ಶೌಚಾಲಯ ಕೆಲಸಕ್ಕೆ ಬಾರದಂತಾಗಿವೆ. ಶಾಲೆಗೆ ಹೆಚ್ಚುವರಿ ಶಿಕ್ಷಕರನ್ನು ನೇಮಿಸಬೇಕೆಂಬ ಒತ್ತಾಯಕ್ಕೆ ಮಣಿಯದೇ ಇರುವ ಅಧಿಕಾರಿಗಳ ವಿರುದ್ಧ ಮತ್ತೆ ಬೀದಿಗಿಳಿಯಬೇಕಾದ್ದು ಅನಿವಾಯ೯ವಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಇದೇ ಜೂನ್್ ತಿಂಗಳ ಒಳಗಾಗಿ ಅವಶ್ಯವಿರುವ ಶಿಕ್ಷಕರ ಭತಿ೯ ಮಾಡದಿದ್ದರೆ ಉಗ್ರ ಸ್ವರೂಪದ ಹೋರಾಟ ಮತ್ತು ಪ್ರತಿಭಟನೆ, ರಸ್ತೆ ತಡೆ ನಡೆಸಲು ಮತ್ತೆ ಮುಂದಾಗಿದ್ದೇವೆ. ಗಡಿ ಗ್ರಾಮಗಳೆಂಬ ಕಾರಣಕ್ಕೆ ಹಲವು ವಷ೯ಗಳಿಂದ ಜನಪ್ರತಿನಿಧಿಗಳಿಂದ ಶೈಕ್ಷಣಿಕ ಪರಿಸರಕ್ಕೆ ಸೌಲಭ್ಯಗಳು ಸಿಗದೇ ವಂಚಿತರಾಗುತಿದ್ದೇವೆ ಎಂದು ಅವರು ಗುಡುಗಿದ್ದಾರೆ.

ಕಳೆದ ವಷ೯ದ ಪ್ರತಿಭಟನೆಯಲ್ಲಿ ಅನೇಕ ಶಾಲಾ ಮಕ್ಕಳು, ಪಾಲಕ, ಪೋಷಕರು ಪಾಲ್ಗೊಂಡು ಭಾರಿ ನಿರೀಕ್ಷೆಯನ್ನೇ ಹೊಂದಿದ್ದರು. ಆದರೆ ಇಂದಿಗೂ ಸಹ ಶೈಕ್ಷಣಿಕ ಕೊರತೆಯನ್ನು ಅನುಭವಿಸುತ್ತಾ  ಮಕ್ಕಳಲ್ಲಿ ನಿರಾಸೆಯನ್ನೇ ಮೂಡಿಸಿರುವುದಕ್ಕೆ ಇಲ್ಲಿನ ಆಡಳಿತ ವ್ಯವಸ್ಥೆಯಿಂದ ಹೇಸಿಗೆ ಉಂಟಾಗುತ್ತಿದೆ ಎಂಬುದು ಗ್ರಾಮದ ಪ್ರಮುಖರು ಕೂಡ ಆಕ್ರೋಷ ಪಡುವಂತಾಗಿದೆ.

ಸದರಿ ಶಾಲೆಗೆ ಕನಿಷ್ಠ ಐದಾರು ಶಿಕ್ಷಕರ ಅಗತ್ಯ ಇರುವುದರಿಂದ ಕೊರತೆ ಕೂಡಲೇ ನೀಗಿಸಬೇಕು. ಇದ್ದಂಥ ಮೂರು ಜನ ಶಿಕ್ಷಕರಲ್ಲಿ ಕೆಲವರು ಆಗಾಗ ಗೈರು ಹಾಜರಾಗುತ್ತಿರುವುದು ಸಹ ಕಂಡು ಬರುವಂತಿದ್ದರೂ ಯಾರೂ ಪ್ರಶ್ನಿಸದಂತಾಗಿದೆ.

ಅನುಮತಿ ಪಡೆಯದೇ ಯಾವುದೇ ಸಭೆ, ಸಮಾರಂಭ, ಸಂಘ ಸಂಸ್ಥೆಗಳಲ್ಲಿ ತೊಡಗಿಸಿಕೊಳ್ಳುವ ಶಿಕ್ಷಕರಿಗೆ ಮುಖ್ಯ ಗುರುಗಳಿಲ್ಲದ ಕಾರಣ ಕೇಳದಂತಾಗಿದೆ. ಶಾಲಾ ಮಕ್ಕಳಿಗೆ ನ್ಯಾಯಯುತವಾಗಿ ಬೋಧನೆ ಮಾಡುವವರ ಅಗತ್ಯವಿದೆ ಎಂಬುದು ಗ್ರಾಮಸ್ಥರ ಆರೋಪವಾಗಿದೆ.

ಮಕ್ಕಳ ವ್ಯಕ್ತಿತ್ವ ವಿಕಾಸದತ್ತ ಗಮನ ಹರಿಸಿ ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂಥ ವಾತಾವರಣ ಸೖಷ್ಟಿಯಾಗಬೇಕು.  ಹಿಂದುಳಿದ ಗ್ರಾಮಗಳೆಂಬ ಹಣೆಪಟ್ಟಿ ಅಂಟಿಕೊಂಡಿರುವ ಗ್ರಾಮಗಳಿಗೆ ಸಕಾ೯ರ ಮೊದಲ ಅಧ್ಯತೆಯನ್ನು ನೀಡಿ ಇಲ್ಲಿರುವ ಮೂಲಭೂತ ಸೌಲಭ್ಯಗಳನ್ನು ಒದಗಿಸಿಕೊಡುವಲ್ಲಿ ಆಸಕ್ತಿ ವಹಿಸಬೇಕು ಎಂಬ ಒತ್ತಾಯ ಕೇಳಿ ಬರುತ್ತಿವೆ.

ಚಿಗುರಿನಲ್ಲೇ ಅರಳಬೇಕಾದ ಮಕ್ಕಳ ಭವಿಷ್ಯಕ್ಕೆ ಕರಾಳ ದಿನಗಳನ್ನು ಎದುರಾಗದಂತೆ ಶಿಕ್ಷಣ ಇಲಾಖೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಂಡು, ಗಡಿ ಗ್ರಾಮಗಳಲ್ಲಿ ಮರಾಠಿ ಪ್ರಭಾವ ಹೆಚ್ಚಿರುವ ಕಾರಣ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಕನ್ನಡ ಶಿಕ್ಷಕರಿಲ್ಲದೇ ಪರದಾಡುವಂಥ ಚಿಂತಾಜನಕ ಸ್ಥಿತಿ ಗಂಭೀರವಾಗಿ ಪರಿಗಣಿಸಬೇಕು ಎಂಬುದ್ದಾಗಿದೆ.

ಗಡಿ ಗ್ರಾಮಗಳಾದ ಆಲಗೂಡ, ಭೋಸಗಾ, ಲಾಡವಂತಿ, ಉಜಳಂಬ, ಚಿಟ್ಟಾ, ಕೋಹಿನೂರು, ಎಕಂಬಾ, ಗಿಲಗಿಲಿ ಸೇರಿದಂತೆ ಮುಂತಾದ ಗ್ರಾಮಗಳಲ್ಲಿ ಮರಾಠಿ ಭಾಷಿಕರು ಕನ್ನಡ ಶಿಕ್ಷಣ ಕಲಿಯಬೇಕೆಂಬ ಮಹತ್ವಕಾಂಕ್ಷೆ ಹೊಂದಿದ್ದಾರೆ. ಅವರಿಗೆಲ್ಲ  ಶಿಕ್ಷಣ ಸಿಗದೇ ವಂಚಿತರಾಗುತ್ತಿದ್ದಾರೆ. ಉತ್ತಮ ಕನ್ನಡ ಬೋಧಕರಿಲ್ಲದೇ ಅನೇಕ ಶಾಲೆಗಳಲ್ಲಿ ಕನ್ನಡವೆಂಬುದು ಕನಸಿನ ಮಾತಾಗಿದೆ.

ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಎದುರು ಕಳೆದ ವಷ೯ ಶಾಲಾ ಮಕ್ಕಳು, ಪಾಲಕ, ಪೋಷಕರು, ಗ್ರಾಮಸ್ಥರಿಂದ ಶಿಕ್ಷಕರ ಕೊರತೆ ಸೇರಿದಂತೆ ಮೂಲಭೂತ ಸೌಲಭ್ಯಗಳಿಗಾಗಿ ಆಗ್ರಹಿಸಿ ರಸ್ತೆ ತಡೆ ನಡೆಸಿ, ಪ್ರತಿಭಟನೆ ಮಾಡಿದರೂ ಇಂದಿಗೂ ಇತ್ಯಥ೯ಗೊಳ್ಳದ ಸಮಸ್ಯೆ ಮತ್ತೆ ಭುಗಿಲೇಳುವ ಮುನ್ನ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕಾಗಿದೆ.

ಕುಡಿಯುವ ನೀರಿಗಾಗಿ ಪರದಾಟ


 ಸರತಿಯಲ್ಲಿ ನೀರಿಗಾಗಿ ಖಾಲಿ ಕೊಡಗಳು

ಕುಡಿಯುವ ನೀರಿಗೆ ಎದ್ದಿರುವ ಭೀಕರ ಸಮಸ್ಯೆಗೆ ಹಿಡಿದ ಕನ್ನಡಿಯಂತಿರುವ ಖಾಲಿ ಕೊಡಗಳು.
 

ಕೋಹಿನೂರು ವಾಡಿಯಲ್ಲಿ ಕುಡಿಯುವ ನೀರಿಗಾಗಿ ಪರದಾಟ 

ಬಸವಕಲ್ಯಾಣ, ಜೂ. 9

ತಾಲೂಕಿನ ವಿವಿಧ ಗ್ರಾಮಗಳಲ್ಲಿ ಉದ್ಭವಿಸಿರುವ ಕುಡಿಯುವ ನೀರಿನ ಕೊರತೆಯಿಂದ ಜನಜೀವನ ಹಾಹಾಕಾರ ಎದುರಿಸುತಿದ್ದರೂ ಸಂಬಂಧಿಸಿದ ಗ್ರಾಮ ಪಂಚಾಯತ್್ ಅಧಿಕಾರಿಗಳು ಇತ್ತ ಗಮನ ಹರಿಸದೇ ಇರುವುದು ಜನ ಸಂಕಷ್ಟಕ್ಕೆ ಸಿಲುಕಿದಂತಾಗಿದೆ.

ಕೆಲವು ಗ್ರಾಮಗಳಲ್ಲಿ ಟ್ಯಾಂಕರ್್ಗಳಿಂದ ನೀರು ತರಿಸಿದರೂ ನೀರು ಸರಬರಾಜಿಗೆ ಸರಿಯಾದ ಸಮಯಕ್ಕೆ ಕರೆಂಟ್್ ಇರುವುದಿಲ್ಲ. ಕೋಹಿನೂರು ವಾಡಿಗಳಂಥ ಗ್ರಾಮಗಳಲ್ಲಿ ವಿದ್ಯುತ್್ ಸಂಪಕ೯ ಕಡಿತವಾಗಿರುವುದರಿಂದ ಸಮಪ೯ಕವಾದ ವಿದ್ಯುತ್್ ಇಲ್ಲದೇ ಪರದಾಡುವಂಥ ಸ್ಥಿತಿ ಎದುರಾಗಿದೆ.

ಇನ್ನೂ ಕೆಲವು ಗ್ರಾಮಗಳಲ್ಲಿ ಬೋರವೆಲ್್ಗಳಿದ್ದರೂ ಕೆಟ್ಟು ಹೋಗಿವೆ. ಕೊಳವೆ ಬಾವಿಗಳಲ್ಲಿನ ನೀರು ಬತ್ತಿ ಹೋಗಿರುವುದರಿಂದ ಟ್ಯಾಂಕರ್್ಗಳಿಂದ ತರಿಸುವ ನೀರಿಗಾಗಿ ನೂಕುನುಗ್ಗಲು ಶುರುವಾಗುತ್ತದೆ. ಸರದಿಯ ಪ್ರಕಾರ ನಾಲ್ಕಾರು ಕೊಡ ನೀರು ಸಿಗುವುದೇ ದುಸ್ಥರವೆನ್ನುವಂತಾಗಿದೆ ಎನ್ನುವ ಮಹಿಳೆಯರು ತಮ್ಮ ಅಳಲನ್ನು ತೋಡಿಕೊಳ್ಳುವಂತಾಗಿದೆ.

ರಾಮತೀಥ೯ವಾಡಿ, ಲಾಡವಂತಿ, ಅಲಗೂಡ, ಭೋಸಗಾ, ಗುತ್ತಿ, ಮಿರಕಲ್, ಮಂಠಾಳ, ಸೇರಿದಂತೆ ಹಲವು ಗ್ರಾಮಗಳಲ್ಲಿ ಸಹ ಕುಡಿಯುವ ನೀರಿನ ತಾತ್ಸಾರ ಎದುರಿಸುತ್ತಿರುವದಕ್ಕೆ ಸಂಬಂಧಪಟ್ಟ ತಾಲೂಕಾ ಪಂಚಾಯತ್್ ಇಲಾಖೆ ಅಧಿಕಾರಿಗಳು ಸಮಸ್ಯೆಗಳಿರುವ ಆಯಾ ಗ್ರಾಮಗಳಿಗೆ ಭೇಟಿ ನೀಡಿ, ಸಮಸ್ಯೆ ಇತ್ಯಥ೯ಗೊಳಿಸಲು ಸೂಚಿಸಬೇಕೆಂಬ ಒತ್ತಾಯ ಗ್ರಾಮಸ್ಥರದ್ದಾಗಿದೆ.

ತಮ್ಮ ಮನಸ್ಸಿಗೆ ಬಂದಂತೆ ನಡೆದುಕೊಳ್ಳುತ್ತಿರುವ ಹಲವು ಗ್ರಾಮ ಪಂಚಾಯತ್್ ಸಿಬ್ಬಂದಿಗಳು ನೀರು ಬಿಡಲು ತಾರತಮ್ಯ ಧೋರಣೆಯನ್ನು ಅನುಸರಿಸುತ್ತಿದ್ದಾರೆ. ಪಂಚಾಯತ್್ ಸದಸ್ಯರಿರುವ ಮನೆಗಳಿಗೆ ಮಾತ್ರ ಹೆಚ್ಚಿನ ನೀರು ಸರಬರಾಜಿಗೆ ಪ್ರತ್ಯೇಕ ಪೈಪ್್ಲೈನ್ ಮಾಡಲಾಗಿದೆ ಎಂಬ ದೂರುಗಳು ಕೇಳಿ ಬರುವಂತಾಗಿದೆ.

ಜನ ಸಾಮಾನ್ಯರಿಗೆ ಸಿಗದ ಸೌಲಭ್ಯ ಅವರಿಗೆ ಮಾತ್ರ ಸಿಗುತ್ತಿರುವುದು ಇದ್ಯಾವ ನ್ಯಾಯ ಎನ್ನುವಂತಾಗಿದ್ದು, ಅವರಿಗೊಂದು ನ್ಯಾಯ ನಮಗೊಂದು ನ್ಯಾಯ ಯಾಕೆ ಎನ್ನುವ ಜನಸಾಮಾನ್ಯರ ಮಾತಿಗೆ ಬೆಲೆ ಕೊಡದ ಗ್ರಾಪಂ ಅಧ್ಯಕ್ಷರು, ಸದಸ್ಯರು ತಾವೇ ಎಲ್ಲದಕ್ಕೂ ಸವಾ೯ಧಿಕಾರಿಯೆನ್ನುವಂತೆ ವತಿ೯ಸುತ್ತಿದ್ದಾರೆ.

ಬಸವಕಲ್ಯಾಣ ತಾಲೂಕಿನ ಅನೇಕ ಗ್ರಾಮಗಳ ಸಮಸ್ಯೆ ಇದೇ ಆಗಿರುವುದರಿಂದ ಕೂಡಲೇ ಮೇಲಧಿಕಾರಿಗಳು ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕಾದ್ದು ಕೂಡ ಅಷ್ಟೇ ಅವಶ್ಯವಾಗಿದೆ. ತಾಲೂಕು ಕೇಂದ್ರದಿಂದ ಹತ್ತಾರು ಕಿ.ಮೀ ದೂರವಿರುವ ಗ್ರಾಮಗಳಲ್ಲಿನ ಕುಡಿಯುವ ನೀರಿನ ಸಮಸ್ಯೆ ಬಗೆ ಹರಿಸಬೇಕೆಂದು ಅನೇಕ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಮಂಗಳವಾರ, ಜೂನ್ 5, 2012

ಬಸವಕಲ್ಯಾಣಃ ಬಸ್ ನಿಲ್ದಾಣದಲ್ಲಿ ಅವ್ಯವಸ್ಥೆಯ ಆಗರ


ಬಸವಕಲ್ಯಾಣ ಪಟ್ಟಣದ ಪ್ರಮುಕ ಬಸ್್ ನಿಲ್ದಾಣ ದಲ್ಲಿ ಈಶಾನ್ಯ ಸಾರಿಗೆ ಸಂಸ್ಥೆಯ ಬಸ್ ಗಳು ಮುಖ್ಯರಸ್ತೆಯಿಂದಲೇ ತಿರುವು ಪಡೆದು ಬಂದು ನಿಲ್ದಾಣದಲ್ಲಿ ಆಶ್ರಯ ಪಡೆಯಬೇಕಾದ ಅನಿವಾಯ೯ತೆ.

ವೀರಣ್ಣ ಮಂಠಾಳಕರ್

ಬಸವಕಲ್ಯಾಣಃ  ನಗರದ ಹೊರವಲಯದಲ್ಲಿರುವ ಪ್ರಮುಖ ಬಸ್ ನಿಲ್ದಾಣದಿಂದ ಮುಚಳಂಬ, ಗೋಟಾ೯ ಹಾಗೂ ಹುಲಸೂರು ಮಾಗ೯ದಿಂದ ಭಾಲ್ಕಿ ಕಡೆ ಸಾಗುವ ಈಶಾನ್ಯ ಸಾರಿಗೆ ಸಂಸ್ಥೆ ವಾಹನಗಳಿಗೆ ಸೂಕ್ತ ನಿಲ್ದಾಣವಿಲ್ಲದೇ ಪರದಾಡುವಂತಿದ್ದರೂ ಸಂಬಂಧಪಟ್ಟವರು ಪಯಾ೯ಯ ವ್ಯವಸ್ಥೆಯನ್ನು ಮಾಡದೇ ಕಣ್ಮುಚ್ಚಿ ಕುಳಿತಿರುವುದು ವಿಪಯಾ೯ಸವಾಗಿದೆ.

ಮುಖ್ಯ ರಸ್ತೆಗೆ ಅಂಟಿಕೊಂಡಿರುವ ಸಂಬಂಧಿಸಿದ ಮಾಗ೯ಗಳಿಗೆ ಸಾಗಬೇಕಾದ ಸಕಾ೯ರಿ ವಾಹನಗಳು ಜನದಟ್ಟಣೆಯ ರಸ್ತೆಯ ಮೇಲಿಂದಲೇ ತಿರುವು ಪಡೆಯಬೇಕಾಗುತ್ತಿದೆ. ಇದರಿಂದ ಪ್ರಯಾಣಿಕರು ರಸ್ತೆ ದಾಟುವಾಗ ಪ್ರಾಣ ಭಯದಿಂದ ನಡೆದಾಡುವ ಸ್ಥಿತಿ ಯಾರೂ ಕೇಳದಂತಾಗಿದೆ.

ಹುಲಸೂರು ಮಾಗ೯ದ ಈ ಮುಖ್ಯರಸ್ತೆಯು ಎರಡೂ ಬದಿಯಿಂದ ಬರುವ ವಾಹನಗಳಿಗೆ ನಿಲ್ದಾಣಕ್ಕೆ ಬರುವ ಸಾರಿಗೆ ಸಂಸ್ಥೆಯ ಬಸ್್ಗಳಿಂದ ತೊದರೆಯುಂಟು ಮಾಡುವುದಲ್ಲದೇ ಇಲ್ಲಿಂದ ಓಡಾಡುವ ಪ್ರಯಾಣಿಕರು ಜೀವಭಯದಿಂದ ಚಲಿಸಬೇಕಾದ ಪರಿಸ್ಥಿತಿ ಸಂಬಂಧಪಟ್ಟ ಇಲಾಖೆಯವರು ಗಮನಿಸಿದಂತಿಲ್ಲ.

ಸುಸಜ್ಜಿತವಾದ ಬಸ್್ ನಿಲ್ದಾಣ ನಗರದಲ್ಲಿ ಇದೆ ಎಂಬ ನೆಮ್ಮದಿ ಒಂದೆಡೆ ಇದ್ದರೆ, ಇದೇ ಬಸ್ ನಿಲ್ದಾಣದ ಹಿಂದೆ ಹುಲಸೂರು ಮುಖ್ಯ ರಸ್ತೆಗೆ ಅಂಟಿಕೊಂಡಿರುವ ನಿಲ್ದಾಣದಲ್ಲಿ ಗೋಟಾ೯, ಮುಚಳಂಬ, ಹಾಗೂ ಹುಲಸೂರು ಮಾಗ೯ದ ಭಾಲ್ಕಿ ಕಡೆ ಸಾಗುವ ಸಾರಿಗೆ ವಾಹನಗಳು ಕಿಕ್ಕಿರಿದ ಪ್ರಯಾಣಿಕರನ್ನು ತುಂಬಿಕೊಂಡೇ ವಿಶ್ರಾಂತಿ ಪಡೆಯಲು ಆಗಮಿಸುತ್ತವೆ.

ಅಧೀಕವಾದ ವಾಹನ ಸಂಚಾರವಿರುವ ಈ ಮುಖ್ಯ ರಸ್ತೆಯ ಮೇಲೆ ಬಸ್ ನಿಲ್ದಾಣಕ್ಕೆ ಬಂದು ಹೋಗುವ ವಾಹನಗಳಿಗೆ ಬೇರೆ ಸುರಕ್ಷಿತವಾಗಿ ನಿಲ್ಲಲು ಸ್ಥಳವೇ ಇಲ್ಲದಂತಾಗಿ ಪರದಾಡಬೇಕಾಗಿದೆ. ಇಲ್ಲಿ ಇಲಾಖೆಯ ನಿಲ೯ಕ್ಷತನವೂ ಗೋಚರಿಸುವುದರಿಂದ ಪಯಾ೯ಯ ವ್ಯವಸ್ಥೆಗಾಗಿ ಸಂಬಂಧಪಟ್ಟವರಿಗೆ ಮನವಿ ಮಾಡುವುದಕ್ಕೂ ಮೀನಾಮೇಷ ಏಣಿಸುವಂತಾಗಿದೆ.

ಯಾವುದೇ ಸಂದಭ೯ದಲ್ಲಿ ಮುಖ್ಯರಸ್ತೆ ಮೇಲೆ ಓಡಾಡುವ ಹುಮನಾಬಾದ ಮಾಗ೯ದ ವಾಹನಗಳು ಮತ್ತು ಭಾಲ್ಕಿ ಕಡೆಯಿಂದ ಬರುವ ವಾಹನಗಳು ವೇಗದ ನಿಯಂತ್ರಣವನ್ನು ತಪ್ಪಿದರೆ ಮುಗಿಯಿತು. ಪ್ರಾಣಪಾಯ ಕಟ್ಟಿಟ್ಟಂತಾಗಿದೆ ಎನ್ನುತ್ತಾರೆ ವಿವಿಧೆಡೆ ಗ್ರಾಮಗಳಿಗೆ ಹೋಗುವ ಅನೇಕ ಪ್ರಯಾಣಿಕರು.

ಈಶಾನ್ಯ ಸಾರಿಗೆ ಸಂಸ್ಥೆಯ ಬಸ್ ಚಾಲಕರ ನಿಯಂತ್ರಣ ತಪ್ಪಿದರಂತೂ ಭಾರಿ ಪ್ರಮಾಣದ ಅಪಘಾತವಾಗುವುದರಲ್ಲಿ ಸಂಧೇಹವಿಲ್ಲ. ನಿತ್ಯವೂ ಇಲ್ಲಿಂದ ಪ್ರಯಾಣಿಸುವ ಪ್ರಯಾಣಿಕರ ಅಳಲನ್ನು ಯಾರೂ ಕೇಳಿಸಿಕೊಳ್ಳದಂತಾಗಿದೆ. ಸಂಬಂಧಪಟ್ಟ ಜನಪ್ರತಿನಿಧಿಗಳಿಗೆ ಕೇಳಿಸುತ್ತಿಲ್ಲ ಎಂಬ ಆರೋಪಗಳು ಕೇಳಿ ಬರುತ್ತವೆ.

ನಿಲ೯ಕ್ಷತನಕ್ಕೆ ಒಳಗಾಗಿರುವ ಕಾರಣ ಸಣ್ಣಪುಟ್ಟ ಅಪಘಾತಗಳು ಸಂಭವಿಸಿರುವುದಂತೂ ಮರೆಯಲಾಗದು. ಇದೇ ಬಸ್ ನಿಲ್ದಾಣದ ಹತ್ತಿರವೇ ಖಾಸಗಿ ವಾಹನಗಳ ಸಂಖ್ಯೆ ಕಡಿಮೆಯೇನು ಇಲ್ಲವೆಂಬಂತೆ ರಾಜಾರೋಷವಾಗಿ ಓಡಾಡುತ್ತವೆ. ಆದ್ದರಿಂದ ಪೊಲೀಸ್್ ಇಲಾಖೆ ಸಹ ಇತ್ತ ಗಮನ ಹರಿಸಬೇಕಾಗಿದೆ ಎನ್ನುತ್ತಾರೆ ಪ್ರಮುಖರು.

ಜನದಟ್ಟಣೆಯ ಪ್ರದೇಶದಲ್ಲಿ ಕೂಡಿರುವ ಪ್ರಮುಖ ಬಸ್್ ನಿಲ್ದಾಣದಲ್ಲಿ  ಆಟೋಗಳ ಕಿರಿಕಿರಿಯಂತೂ ಕೇಳುವವರೇ ಇಲ್ಲ. ಸಾರಿಗೆ ವಾಹನಗಳು ಬಂದು ನಿಲ್ಲುತಿದ್ದಂತೆ ಪ್ರಯಾಣಿಕರನ್ನು ಇಳಿಯುವಾಗಲೇ ಬಾಗಿಲಲ್ಲೇ ಬಂದು ನಿಲ್ಲುವ ಆಟೋಗಳಿಂದ ಅಪಾಯ ಖಚಿತ ಎನ್ನುವಂತಾಗಿದೆ.

ಸಾರಿಗೆ ಸಂಸ್ಥೆಯ ಅಧಿಕಾರಿಗಳು ದಿವ್ಯ ನಿಲ೯ಕ್ಷತನದಿಂದ ಕಾಲ ಕಳೆಯದೇ, ಪ್ರಯಾಣಿಕರು ತಮ್ಮ ಜೀವ ಮುಷ್ಠಿಯಲ್ಲಿ ಹಿಡಿದುಕೊಂಡು ಓಡಾಡುವಂಥ ಪರಿಸ್ಥಿತಿ ಎದುರಾಗಿರುವುದನ್ನು ಮನಗಾಣಬೇಕು ಎಂಬುದು ಸಾವ೯ಜನಿಕರ ಅಭಿಪ್ರಾಯವಾಗಿದೆ.

ಸಂಬಂಧಪಟ್ಟವರಲ್ಲಿ ಈ ಸಮಸ್ಯೆ ಕುರಿತು ಕೂಡಲೇ ಮನವಿಸಬೇಕಾದ್ದು ಇಲಾಖೆಯ ಕತ೯ವ್ಯ ಹೌದು.  ಮೇಲಿಂದ ಮೇಲೆ ನಗರ ಅಭಿವೖದ್ಧಿಯಲ್ಲಿ ಸಾಗುತ್ತಿದೆ ಎಂದು ಬೀಗಿಕೊಳ್ಳುವ  ಜನಪ್ರತಿನಿಧಿಗಳು ಇಂತಹ ಸಮಸ್ಯೆಗಳತ್ತ ಗಮನ ಹರಿಸಿ ಎಲ್ಲಾ ಜನಸಾಮಾನ್ಯರ ಕುಂದು ಕೊರತೆಗಳ ಆಶಯದಂತೆ ಸ್ಪಂಧಿಸುವಂತಾಗಲಿ ಎಂಬ ನಿರೀಕ್ಷೆಯಲ್ಲಿ ಪ್ರಯಾಣಿಕರಿದ್ದಾರೆ.

ಹಾಳು ಕೊಂಪೆಯಾಗಿರುವ ಹುಲಸೂರು ಬಸ್ ನಿಲ್ದಾಣ

 , ಕೆಲವು ವಷ೯ಗಳ ಹಿಂದೆ ಹುಲುಸೂರು ಮತಕ್ಷೇತ್ರವಾಗಿದ್ದ ಸಂದಭ೯ದಲ್ಲಿ ಗ್ರಾಮದ ಹೊರ ವಲಯದಲ್ಲಿ ಕಟ್ಟಲ್ಪಟ್ಟ ಬಸ್್ ನಿಲ್ದಾಣ ಬಳಕೆಗೆ ಬಾರದೇ ಹಾಳು ಕೊಂಪೆಯಾಗಿರುವುದು.

  ಬಸವಕಲ್ಯಾಣ ತಾಲೂಕಿನ ಹುಲಸೂರು ಗ್ರಾಮದಲ್ಲಿ ಎದುರಿಸುತ್ತಿರು ಪ್ರಯಾಣಿಕರಿಗೆ ಬಸ್್ ನಿಲ್ದಾಣದ ಕೊರತೆಯಿಂದಾಗಿ ಯಾವುದೇ ಕಟ್ಟಡವಿಲ್ಲದ ಮುಖ್ಯ ರಸ್ತೆಯ ಪಕ್ಕದ ಜಾಗದಲ್ಲಿ, ಪೊಲೀಸ್್ ಠಾಣೆ ಎದುರು ವಾಹನಗಳಿಗಾಗಿ ಕಾದು ನಿಂತಿರುವವರು ಹಾಗೂ ಖಾಸಗೀ ವಾಹನಗಳನ್ನು ಕಾಣಬಹುದು.

ವೀರಣ್ಣ ಮಂಠಾಳಕರ್

ಬಸವಕಲ್ಯಾಣ, ಜೂ. 3

ಬಸವಕಲ್ಯಾಣಃ ತಾಲೂಕಿನ ಹುಲಸೂರಿನಿಂದ ತಾಲೂಕಾ ಕೇಂದ್ರಗಳಿಗಾಗಲಿ ಇನ್ಯಾವುದೇ ಗ್ರಾಮಗಳಿಗೆ ತೆರಳಬೇಕಾದ ಪ್ರಯಾಣಿಕರಿಗೆ ಕನಿಷ್ಠ ಪಕ್ಷ ಕುಳಿತುಕೊಳ್ಳಲು ಆಸರೆ ಇಲ್ಲ. ಬಸ್್ ನಿಲ್ದಾಣವಿಲ್ಲದೇ ಪರದಾಡುವಂಥ ಸ್ಥಿತಿ ಹಲವು ವಷ೯ಗಳಿಂದ ಸಹ ಪ್ರಯಾಣಿಕರು ಎದುರಿಸುತಿದ್ದರೂ ಯಾರೂ ಕೇಳದಂತಾಗಿದೆ.

ಬಸ್್ ನಿಲ್ದಾಣದ ಸಮಸ್ಯೆ ಅನುಭವಿಸುತ್ತಿರುವ ಪ್ರಯಾಣಿಕರು ಜನಪ್ರತಿನಿಧಿಗಳ ಅರಿವಿಗೆ ಬರದೇ ಇರುವುದಕ್ಕೆ ಕಾರಣ ಗೊತ್ತಾಗುತ್ತಿಲ್ಲ. ಗ್ರಾಮದ ಹೊರವಲಯದಲ್ಲಿ ಹುಲಸೂರು ಮತಕ್ಷೇತ್ರವಾಗಿದ್ದ ಸಂದಭ೯ದಲ್ಲಿ ಕಟ್ಟಲ್ಪಟ್ಟ ಬಸ್್ ನಿಲ್ದಾಣವೊಂದು ಕೆಲಸಕ್ಕೆ ಬರದಂತಾಗಿದೆ. ಇದೀಗ ಅದು ಹಾಳು ಕೊಂಪೆಯಾಗಿ ರಾತ್ರಿ ಸಮಯದಲ್ಲಿ ಇಲ್ಲಿ ಏನೆಲ್ಲಾ ನಡೆಯುತ್ತದೆ ಎನ್ನಲು ಕಲ್ಪಿಸಿಕೊಳ್ಳಲು ಸಹ ಸಾಧ್ಯವಿಲ್ಲ ಎನ್ನಬಹುದು.

ಕೆಲವೇ ವಷ೯ಗಳ ಹಿಂದೆ ಕಟ್ಟಲ್ಪಟ್ಟ ಬಸ್್ ನಿಲ್ದಾಣ ಹಾಳು ಕೊಂಪೆಯಾಗಿರುವುದು ಶಾಸಕರ ಗಮನಕ್ಕೆ ಬರದಿರುವುದಕ್ಕೆ ದುರಾದೖಷ್ವವೇ ಸರಿ. ಆದರೆ ಜನಪಯೋಗಿ ಕಾಯ೯ಕ್ಕೆ ಬಳಕೆಯಾಗುತ್ತಿಲ್ಲ ಎಂಬುದಕ್ಕೆ ನಿತ್ಯವೂ ಬಿಸಿಲಿರಲಿ, ಮಳೆ, ಗಾಳಿಗೆ ಮೈಯೊಡ್ಡಿ ನಿಲ್ಲುವಂಥ ವಾತಾವರಣ, ನೆರಳಿಗಾಗಿ ಪರಿತಪಿಸುವ ಮಕ್ಕಳು ಮಹಿಳೆಯರೇ ಇದಕ್ಕೆ ಸಾಕ್ಷಿಯಾಗಬಲ್ಲರು.

ಮುಖ್ಯ ರಸ್ತೆಯಲ್ಲಿರುವ ಪೊಲೀಸ್್ ಠಾಣೆಯ ಮುಂಭಾಗದಲ್ಲೇ ಜನ ನಿಂತುಕೊಳ್ಳಬೇಕಾಗಿದೆ. ಇಂತಹ ಸಂಕಷ್ಟದಲ್ಲಿರುವವರು ಅಕ್ಕಪಕ್ಕದಲ್ಲಿರುವ ಹೊಟೇಲ್್ಗಳಿಗೆ ನುಗ್ಗಿ ಒಂದಿಷ್ಟು ದಣಿವಾರಿಸಿಕೊಳ್ಳಲು ಸಹ ಹಣ ತೆತ್ತಬೇಕಾದ್ದು ನಿಜ. ತಾವು ಹೋಗಬೇಕಾದ ವಾಹನಗಳಿಗೆ ಬಸ್್ ನಿಲ್ದಾಣವಿಲ್ಲದೇ ಕಾದು ನಿಲ್ಲಬೇಕಾದ ಸ್ಥಿತಿ ಚಿಂತಾಜನಕವಾಗಿದೆ.

ಇಲ್ಲಿ ಬಂದು ಹೋಗುವ ಪ್ರಯಾಣಿಕರೆಲ್ಲಾ ಬೆವರಳಿಸಿಕೊಂಡೇ ಬಸ್್ ಹತ್ತಬೇಕು. ಯಾಕೆಂದರೆ ಯಾವುದೇ ನೆರಳಿನಾಸರೆ ಇಲ್ಲದೇ ಪ್ರಯಾಣಿಕರ ಗೋಳು ಯಾರೂ ಕೇಳದಂತಾಗಿದೆ. ಜನಪ್ರತಿನಿಧಿಗಳು ಈ ಸಮಸ್ಯೆ ಕುರಿತು ಗಂಭೀರವಾಗಿ ತೆಗೆದುಕೊಳ್ಳದೇ ಇರುವುದಕ್ಕೆ ಅನೇಕ ಹಿರಿಯ ಜೀವಿಗಳು ಆಕ್ರೋಷವನ್ನು ವ್ಯಕ್ತಪಡಿಸುತ್ತಾರೆ.

ಬಸವಕಲ್ಯಾಣ ಹಾಗೂ ಭಾಲ್ಕಿ ತಾಲೂಕು ಕೇಂದ್ರಗಳಿಂದ ಬಂದು ಹೋಗುವ ಈಶಾನ್ಯ ಸಾರಿಗೆ ಸಂಸ್ಥೆಯ ವಾಹನಗಳು ಮತ್ತು ಖಾಸಗೀ ವಾಹನಗಳು ಇದೇ ಹುಲಸೂರಿನ ಪೊಲೀಸ್್ ಠಾಣೆ ಎದುರಿನ ಬಸ್್ ನಿಲ್ದಾಣದಲ್ಲಿ ಅಂದರೆ, ಅಧಿಕೖತವಾಗಿ ಕಟ್ಟಡವಿಲ್ಲದಂಥ ಮುಖ್ಯ ರಸ್ತೆಯ ಪಕ್ಕದ ಬಸ್್ ನಿಲ್ದಾಣದಲ್ಲಿ ವಾಹನಗಳೆಲ್ಲ ಬಂದು ಸೇರುತ್ತವೆ.

ಜನಸಾಮಾನ್ಯರ ಮೂಲ ಸೌಲಭ್ಯಗಳತ್ತ ಚಿಂತನೆ ನಡೆಸುವ ನಾಯಕರುಗಳ ಕೊರತೆ ಬಸವಕಲ್ಯಾಣ ತಾಲೂಕಿನಲ್ಲಿ ಪ್ರಮುಖವಾಗಿ ಎದ್ದು ಕಾಣುತ್ತಿರುವುದಕ್ಕೆ ಮೇಲಿಂದ ಮೇಲೆ ಕೇಳಿ ಬರುತ್ತಲೇ ಇರುವ ಸಾವ೯ಜನಿಕರ ಅಳಲು ಇದಾಗಿದೆ. ಮಾಧ್ಯಮಗಳ ಮೂಲಕವಾದರೂ ಹೇಳಿಕೊಳ್ಳುವಂಥ ಅನಿವಾಯ೯ತೆ ಎದುರಾಗಿದೆ ಎಂದು ಗ್ರಾಮದ ಪ್ರಮುಖರು ದೂರುತ್ತಾರೆ.

ಪ್ರಯಾಣಿಕರಿಗೆ ಅನುಕೂಲವಾಗುವಂಥ ಬಸ್್ ನಿಲ್ದಾಣದ ನಿಮಾ೯ಣ ಸಾಧ್ಯವಾಗುವುದೆ ಎಂದು ಕಾದು ನೋಡುವಂತಾಗಿದೆ. ಚುನಾವಣೆಗಳು ಬಂದಾಗಲಷ್ಟೇ ನೆನಪಾಗುವ ನಾವು ಸಾವ೯ಜನಿಕರ ಮೂಲ ಸೌಲಭ್ಯಗಳ ಕೊರತೆಗಳಿಗೆ ಸ್ಪಂಧಿಸುವ ನಾಯಕರುಗಳ ಸ್ಪಂಧನೆಗೆ ಎದುರು ನೋಡುವಂತಾಗಿದೆ ಎನ್ನುತ್ತಾರೆ ಸಮಾಜ ಚಿಂತಕರು.

ಇನ್ನೊಂದು ಪ್ರಮುಖವಾದ ಸಂಗತಿಯೆಂದರೆ, ಹುಲಸೂರು ಗ್ರಾಮದಲ್ಲಿ ಪ್ರತಿ ವಷ೯ ನಡೆಯುವ ಗುರು ಬಸವೇಶ್ವರ ಸಂಸ್ಥಾನ ಮಠದ ಜಾತ್ರಾ ಮಹೋತ್ಸವದಲ್ಲಿ ಹೆಚ್ಚಿನ ಸಕಾ೯ರಿ ವಾಹನಗಳು ಬಿಟ್ಟರೆ ಬೇರೆ ದಿನಗಳಲ್ಲಿ ಖಾಸಗೀ ವಾಹನಗಳ ದಬಾ೯ರಿನಲ್ಲೇ ನಿತ್ಯವೂ ಪ್ರಯಾಣಿಸಬೇಕಾದ ಅನಿವಾಯ೯ತೆ ಇಲ್ಲಿನ ಜನಸಾಮಾನ್ಯರದ್ದಾಗಿದೆ

ಹುಲಸೂರಿನಿಂದ ಬೇರೆ ಮಾಗ೯ಗಳಿಗೆ ನಿಗ೯ಮಿಸಲು ಖಾಸಗೀ ವಾಹನಗಳ ಮೊರೆ ಹೊಕ್ಕದೇ ಬೇರೆ ಗತಿ ಇಲ್ಲ. ಒಂದೆರಡು ಸಕಾ೯ರಿ ಬಸ್್ ಹೊರತುಪಡಿಸಿ ಮ್ಯಾಕ್ಸಿಕ್ಯಾಬ್್ ಖಾಸಗೀ ವಾಹನಗಳೇ ಇಲ್ಲಿಂದ ಸಂಚರಿಸುತ್ತವೆ ಎಂಬ ದೂರುಗಳಿದ್ದರೂ ಸಕಾ೯ರಿ ವಾಹನಗಳ ಸೌಲಭ್ಯ ಅಷ್ಟಕಷ್ಟೇ ಎನ್ನಬಹುದು.

ಗ್ರಾಮಕ್ಕೆ ಸಕಾ೯ರಿ ವಾಹನಗಳಿಲ್ಲ ಎಂಬ ಕಾರಣಕ್ಕೇನಾದರೂ ಬಸ್್ ನಿಲ್ದಾಣದ ಅವಶ್ಯಕತೆಗೆ ಕಣ್ಮುಚ್ಚಿ ಕುಳಿತ್ತಿದ್ದಾರೆಯೇ ಎಂಬ ಅನುಮಾನಗಳು ಕಾಡುತ್ತವೆ. ಸಂಬಂಧಪಟ್ಟವರು ಇದಕ್ಕೇನಂತಾರೆ ಎಂಬುದು ಸಹ ಕಾದು ನೋಡಬೇಕಾಗಿದೆ. ಅನೇಕ ಅನುಮಾನಗಳಿಗೆ ಎಡೆಮಾಡಿಕೊಡುತ್ತಿರುವ ಇಲ್ಲಿನ ಮೂಲ ಬಸ್್ ನಿಲ್ದಾಣದ ಸಮಸ್ಯೆ ಬಗೆಹರಿಸುವವರೇ ಎಂದುನಿರೀಕ್ಷಿಸೋಣ.


 ರಸ್ತೆ ಅಗಲೀಕರಣ ನಡೆಯುತ್ತಿರುವುದನ್ನು ಕುತೂಹಲದಿಂದ ವೀಕ್ಷಿಸುತ್ತಿರು ಜನ



 ದಕ್ಷ ಅಧಿಕಾರಿಗಳ ಕೊರತೆ-ಮಂದಗತಿಯಲ್ಲಿ ಸಾಗುತ್ತಿರುವ ರಸ್ತೆ ಅಗಲೀಕರಣ


ಬಸವಕಲ್ಯಾಣ, ಜೂ. 2

ನಗರದೆಲ್ಲೆಡೆ ರಸ್ತೆ ಅಗಲೀಕರಣ ಹಾಗೂ ಸೌಂದಯೀ೯ಕರಣಕ್ಕಾಗಿ ಕಳೆದ ಮೂರು ದಿನಗಳಿಂದ ಕೇಳಿ ಬರುತ್ತಿರುವ ಬುಲ್ಡೋಜರ್್ ಶಬ್ಧಗಳು ಕೇಳಿಯೇ ಕೆಲವರು ಬೆಚ್ಚಿ ಬಿದ್ದಿದ್ದಾರೆ. ಇನ್ನೂ ಕೆಲವರಿಗೆ ಕಟ್ಟಡಗಳು ಉರುಳಿ ಬೀಳುತ್ತಿರುವುದನ್ನು ನೋಡಿ ದುಸ್ವಪ್ನವಾಗಿ ಕಾಡುತ್ತಿರುವುದರಿಂದ ಸ್ಥಳೀಯ ಅಧಿಕಾರಿಗಳು ಎಚ್ಚೆತ್ತುಕೊಂಡು ಚುರುಕಾದ ಕಾಮಗಾರಿ ನಡೆಸುತ್ತಿರುವುದು ಕಂಡು ಬರುತ್ತಿದೆ.

ಬಸವಕಲ್ಯಾಣ ನಗರಕ್ಕೆ ದಕ್ಷ ಆಡಳಿತದ ಅಧಿಕಾರಿಯೊಬ್ಬರ ಅವಶ್ಯಕತೆ ಇದ್ದು, ಅಂಥವರನ್ನು ಬರಮಾಡಿಕೊಳ್ಳುವ ನಿರೀಕ್ಷೆಯಲ್ಲಿದಂತೆ ಅಭಿವೖದ್ಧಿ ಬಯಸುವವರು ಖುಷಿಯಲ್ಲಿದ್ದರೆ, ಇನ್ನೂ ಕೆಲವರಿಗೆ ದಕ್ಷ ಆಡಳಿತಾಧಿಕಾರಿಯ ಆಗಮನದಿಂದ ಇರಿಸುಮುರುಸಾಗಿದೆ. ಅನಧಿಕೖತ ಕಟ್ಟಡ ವ್ಯಾಪಾರಿಗಳಿಗೆ ದಿಕ್ಕೆ ತೋಚದಂತಾಗಿದೆ ಎನ್ನುತ್ತಾರೆ ಸ್ಥಳೀಯರು.

12 ನೇ ಶತಮಾನದ ಶರಣರ ನೆಲೆಬೀಡಾದ ಕಲ್ಯಾಣದಲ್ಲಿ ಕಾಯ೯ಕ್ಷೇತ್ರವಾಗಿಸಿಕೊಂಡಿದ್ದ ಎಲ್ಲಾ ಶರಣರ ಸ್ಮಾರಕಗಳ ಜೀಣೋ೯ದ್ಧಾರ ಕಾಯ೯ ಭರದಿಂದಲೇ ನಡೆಯುತ್ತಿವೆ ಎನ್ನುವಂತಿದ್ದರೂ ಸಹ  ಕೆಲವು ಕಾಮಗಾರಿಗಳು ಮಂದಗತಿಯಲ್ಲಿ ಸಾಗುತ್ತಿವೆ. ಇನ್ನೂ ಕೆಲವು ಅಭಿವೖದ್ಧಿ ಪ್ರಾಧಿಕಾರದ ಕಾಮಗಾರಿಗಳಿಗೆ ಗ್ರಹಣ ಹಿಡಿದಂತಾಗಿರುವುದಂತೂ ನಿಜ.

ಯಾಕೆಂದರೆ ಕಳೆದ ವಷ೯ದಿಂದ ಬಸವಕಲ್ಯಾಣ ಅಭಿವೖದ್ಧಿ ಪ್ರಾಧಿಕಾರದ ಸಹಾಯಕ ಆಯುಕ್ತರ ಹುದ್ದೆ ಖಾಲಿಯೇ ಇರುವುದರಿಂದ ಇಲ್ಲಿ ಇದೀಗ ಕೆಲವು ತಿಂಗಳಿಂದ ತಹಸೀಲ್್ ಕಚೇರಿಯ ಸಹಾಯಕ ಆಯುಕ್ತ ಎಚ್್. ಪ್ರಸನ್ನ ಅವರೇ ಕಾಯ೯ಭಾರ ವಹಿಸಿಕೊಂಡಿದ್ದಾರೆ.

ನಗರಸಭೆಯ ಜವಾಬ್ದಾರಿಯೂ ಅವರ ತಲೆಯ ಮೇಲೆ ಇರುವುದರಿಂದ ಯಾವುದೇ ಕೆಲಸಗಳು ಮಂದಗತಿಯಲ್ಲಿ ಸಾಗುತ್ತಿರುವುದಕ್ಕೆ ಪ್ರಮುಖ ಕಾರಣವಾಗಿದೆ. ಒಬ್ಬರಿಂದಲೇ ಇಷ್ಟೆಲ್ಲಾ ಕಾಯ೯ಭಾರ ನಿಭಾಯಿಸಿಕೊಂಡು ಹೋಗುವುದು ಮತ್ತು ಎಲ್ಲಾ ಇಲಾಖೆಗಳ ಕಾಮಗಾರಿಗಳು ಚುರುಕಾಗಿ ನಡೆಸಲು ಸ್ವಲ್ಪ ಕಷ್ಟವಾಗುತ್ತದೆ ಎನ್ನುವಂತಾಗಿದೆ.

ಹೀಗಾಗಿ ಜನರ ಕನಸಿನ ಕಲ್ಪನೆಯಾದ ಐತಿಹಾಸಿಕ ಬಸವಕಲ್ಯಾಣ ಪಟ್ಟಣವನ್ನು ಪ್ರವಾಸಿ ತಾಣವಾಗಿ ರೂಪುಗೊಳ್ಳುವುದು ಯಾವಾಗ ಎನ್ನುವಂತೆ ಜನ ಭಾರಿ ನಿರೀಕ್ಷೆಯಲ್ಲಿದ್ದಾರೆ. ಆದರೆ ಕೆಲವರಿಗದು ಬೇಕೇ ಇಲ್ಲ ಎನ್ನುವಂಥ ಮಾತುಗಳು ಎಲ್ಲೆಡೆ ಕೇಳಿ ಬರುತ್ತಿರುವುದು ವಿಷಾದದ ಸಂಗತಿಯೆಂದು ಅಭಿವೖದ್ಧಿ ಚಿಂತಕರು ಖೇದವನ್ನು ವ್ಯಕ್ತಪಡಿಸುತ್ತಾರೆ.

ಹಾಗೊಂದು ವೇಳೆ ಬಸವಕಲ್ಯಾಣ ಪಟ್ಟಣ ರಸ್ತೆ ಅಗಲೀಕರಣಗೊಂಡು ಅಭಿವೖದ್ದಿ ಸಾಧ್ಯವಾದರೆ ದೈನಂದಿನ ವ್ಯವಹಾರ, ವ್ಯಾಪಾರಗಳು, ಪ್ರಮುಖ ಅಂಗಡಿ ಮಾಲೀಕರುಗಳಿಗೆ ನಷ್ಟವಾಗುತ್ತದೆಂಬ ಭ್ರಮೆ ಹಾಗೂ ಕೆಲ ಪ್ರಮುಖ ಸಂಸ್ಥೆಯ ಚಟುವಟಿಕೆಗಳು ನಿಂತು ಬಿಡುತ್ತವೆ ಎನ್ನಬಹುದು.

ಬಸವಕಲ್ಯಾಣಕ್ಕೆ ಹಷ೯ಗುಪ್ತ ಅವರಂಥ ದಕ್ಷ ಆಡಳಿತಧಿಕಾರಿ ಯಾಕಾದರೂ ಬರುತ್ತಾರೆ ಎಂಬ ಪ್ರಶ್ನೆ ಒಳಗೊಳಗೆ ಕೇಳಿ ಬರುವಂತಿದ್ದರೂ ಅಭಿವೖದ್ಧಿಪರವಾಗಿ ಚಿಂತಿಸುವವರ ಆಶಯ ಬಹುತೇಕ ನಿಜವಾಗಲಿದೆ ಎನ್ನಲು ಪ್ರಮುಖ ಕಾರಣವೆಂದರೆ ಬಿಕೆಡಿಬಿ ವಿಶೇಷಧಿಕಾರಿಯಾಗಿದ್ದ ಡಾ. ಎಸ್್.ಎಂ. ಜಾಮದಾರ್್ ಅವರ ನಿವೖತ್ತಿಯ ನಂತರ ಹಷ೯ಗುಪ್ತ ಅವರೇ ವಿಶೇಷಧಿಕಾರಿಯಾಗಿ ಬರಲೆಂಬುದು ಅನೇಕರು ಒತ್ತಾಯಿಸಿದ್ದಾರೆ ಎನ್ನಲಾಗುತ್ತಿದೆ.

ಬೀದರ ಜಿಲ್ಲಾಧಿಕಾರಿಯಾಗಿ ಜಿಲ್ಲೆಯ ಚಿತ್ರಣವನ್ನೇ ಬದಲಾಯಿಸಿರುವ ಹಷ೯ಗುಪ್ತ ಅವರು ಒಂದು ವೇಳೆ ಬಸವಕಲ್ಯಾಣಕ್ಕೆ ಬಂದರೆ ಅಭಿವೖದ್ಧಿ ತಾಣವಾಗಿ, ಪ್ರವಾಸಿಗರಿಗೆ 12 ನೇ ಶತಮಾನದ ಶರಣರನ್ನು, ಐತಿಹಾಸಿಕ ಪಳೆಯುಳಿಕೆಗಳನ್ನು ಅಳಿದುಳಿದಿರುವುದನ್ನು ಜೀವಂತ ನೋಡಲು ಸಿಗುವುದರಲ್ಲಿ ಸಂದೇಹವಿಲ್ಲ.

ಪ್ರವಾಸಿಗರಿಗೆ ಬಸವಕಲ್ಯಾಣ ಪಟ್ಟಣ ಕೈಬೀಸಿ ಕರೆಯುವಲ್ಲಿ ಹಷ೯ಗುಪ್ತ ಅವರಂಥ ಅಧಿಕಾರಿಗಳು ಬಂದರೆ ಮಾತ್ರ ಬಹುತೇಕ ನಿಜವಾಗಲಿದೆ ಎಂಬುದು ಜನಮನದಲ್ಲಿ ಖಚಿತವಾಗಿದೆ. ಆದ್ದರಿಂದಲೇ ಹಷ೯ಗುಪ್ತ ಅವರಿದ್ದಾಗಲೇ ಆಗಬೇಕಾದ ಅನೇಕ ಕಾಮಗಾರಿಗಳು ಇಷ್ಟೊಂದು ಭರದಲ್ಲಿ ಸಾಗುತ್ತಿರುವುದಕ್ಕೆ ಬುಲ್ಡೋಜರ್್ ಶಬ್ಧಗಳು ಕೇಳಿ ಬರುತ್ತಿರುವುದಕ್ಕೆ ಸಾಕ್ಷಿಯೆನ್ನುತ್ತಾರೆ ಅನೇಕ ಸಂಘಟನಾ ಪ್ರಮುಖರು.

ಬುಧವಾರ, ಮೇ 30, 2012

ಬಿಜೆಪಿ ಸರಕಾರ ಬಂದಾಗಿನಿಂದ ಆಡಳಿತ ಸಂಪೂಣ೯ ಕುಸಿತಃ ಮಾಜಿ. ಸಿಎಂ, ಎಚ್.ಡಿ ಕುಮಾರಸ್ವಾಮಿ

 ಚಿತ್ರ ವಿವರಃ  ಬಸವಕಲ್ಯಾಣ ತಾಲೂಕಿನ ಸಸ್ತಾಪೂರ ಬಂಗ್ಲಾ ರಾಷ್ಟ್ರೀಯ ಹೆದ್ದಾರಿ ಹತ್ತಿರ ಆಳಂದ ತಾಲೂಕಿನಲ್ಲಿ ನಡೆಯಲಿರುವ  ಸಾಮೂಹಿಕ ವಿವಾಹದಲ್ಲಿ ಪಾಲ್ಗೊಳ್ಳುವ ನಿಮಿತ್ಯ ಆಗಮಿಸುತಿದ್ದ ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್್ ರಾಜ್ಯಾಧ್ಯಕ್ಷ ಎಚ್್. ಡಿ. ಕುಮಾರಸ್ವಾಮಿ ಅವರಿಗೆ ತಾಲೂಕಿನ ಜೆಡಿಎಸ್್ ಪಕ್ಷದ ಕಾಯಂಕತ೯ರಿಂದ ಸ್ವಾಗತ, ಸನ್ಮಾನ ಸ್ವೀಕರಿಸಿ ಮಾತನಾಡುತ್ತಿರುವುದು. ಈ ಸಂದಭ೯ದಲ್ಲಿ ಬೀದರ ಶಾಸದ ಬಂಡೆಪ್ಪ ಖಾಶೆಂಪೂರ, ಬಸವಕಲ್ಯಾಣ ಜೆಡಿಎಸ್ ತಾಲೂಕಾಧ್ಯಕ್ಷ ಶಬ್ಬೀರ ಪಾಶಾ ಮುಜಾವರ್, ಜಿ.ಪಂ, ಸದಸ್ಯ ಸಂಜು ಕಾಳೇಕರ್, ಕೇಶಪ್ಪ ಬಿರಾದಾರ್ ಮುಂತಾದವರಿದ್ದರು.

  ಬಿಜೆಪಿ ಸಕಾ೯ರದ ಆಡಳಿತ ಹಿನ್ನಡೆಃ ಮಾಜಿ ಸಿಎಂ ಕುಮಾರಸ್ವಾಮಿ ಆರೋಪ


 ಬಸವಕಲ್ಯಾಣ, ಮೇ. 29

ರಾಜ್ಯದಲ್ಲಿ ಬಿಜೆಪಿ ಸರಕಾರ ಬಂದಾಗಿನಿಂದ ಆಡಳಿತ ಸಂಪೂಣ೯ ಕುಸಿದು ಬಿದ್ದು ಅಭಿವೖದ್ಧಿಗೆ ಹಿನ್ನೆಡೆಯಾಗಿದೆ. ಬಿಜೆಪಿ ಸಕಾ೯ರದ ಭ್ರಷ್ಟಾಚಾರದಿಂದ ಜನ ಬೇಸತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್್ ರಾಜ್ಯಾಧ್ಯಕ್ಷ ಎಚ್್. ಡಿ. ಕುಮಾರಸ್ವಾಮಿ ಆರೋಪಿಸಿದರು.

ಆಳಂದ ತಾಲೂಕಿನಲ್ಲಿ ನಡೆಯಲಿರುವ  ಸಾಮೂಹಿಕ ವಿವಾಹದಲ್ಲಿ ಪಾಲ್ಗೊಳ್ಳುವ ನಿಮಿತ್ಯ ಆಗಮಿಸುತಿದ್ದ ಸಂದಭ೯ದಲ್ಲಿ ತಾಲೂಕಿನ ಜೆಡಿಎಸ್್ ಪಕ್ಷದ ಕಾಯ೯ಕತ೯ರಿಂದ ಸ್ವಾಗತ, ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಕಾಂಗ್ರೇಸ್್ ಹಾಗೂ ಬಿಜೆಪಿಯವರು ರಾಜ್ಯದ ಜನತೆಗೆ ದ್ರೋಹವನ್ನು ಎಸಗಿದ್ದಾರೆ. ರೈತರ ಸಾಲ ಮನ್ನಾ ಮಾಡದೇ ರೈತರ ಆತ್ಮ ಹತ್ಯೆಗೆ ಕಾರಣವಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದ ಅವರು, ನಾನು ಮುಖ್ಯಮಂತ್ರಿ ಆಗಿದ್ದಾಗ ಜೆಡಿಎಸ್್ ಪಕ್ಷದಿಂದ ರೈತರ ಸಮಸ್ಯೆಗಳಿಗೆ ಸ್ಪಂಧಿಸಿದ್ದೇನೆ. ಜನರಿಗೆ ಉತ್ತಮ ಆಡಳಿತ ಸೇವೆಯನ್ನು ನಿಸ್ಪಕ್ಷಪಾತದಿಂದ ನೀಡಿದ್ದೇನೆ ಎಂದರು.

ಜೆಡಿಎಸ್್ ಪಕ್ಷದಿಂದ ರೈತರ ಸಾಲ ಮನ್ನಾ ಮಾಡಿರುವ ನಾವು ಬಡವರಿಗಾಗಿ ಒಳ್ಳೆಯ ನ್ಯಾಯವನ್ನು ಒದಗಿಸಿ ಕೊಟ್ಟಿದ್ದೇವೆ. ಅದರಂತೆ ಬಸವಕಲ್ಯಾಣ ಅಭಿವೖದ್ಧಿ ಮಂಡಳಿ ಮಂಜೂರಿ ಮಾಡಿಸಿ  ಅನೇಕ ಶರಣರ ಸ್ಮಾರಕಗಳ ಜೀಣೋದ್ಧಾರಕ್ಕೆ ಅನುದಾನ ಬಿಡುಗಡೆ ಮಾಡಿ ಶ್ರಮಿಸಿದ ಪಕ್ಷ ಜೆಡಿಎಸ್್ ಆಗಿದೆ ಎಂದು ನುಡಿದರು.

ಮುಂದೊರೆದು ಮಾತನಾಡಿದ ಅವರು, ರಾಜ್ಯದಲ್ಲಿ ಅನೇಕ ರೈತರು ಸಂಕಷ್ಟದಲ್ಲಿದ್ದಾರೆ. ಆದರೆ ಬಿಜೆಪಿ ಸಕಾ೯ರ ಕಣ್ಮುಚ್ಚಿ ಕುಳಿತಿರುವುದು ಜನಪರ ಕಾಳಜಿ ಅವರಿಗಿಲ್ಲ ಎಂಬಂತಾಗಿದೆ. ಬಿಜೆಪಿ ಪಕ್ಷದಲ್ಲಿರುವ ಅನೇಕ ನಾಯಕರು ಭ್ರಷ್ಟಾಚಾರದಲ್ಲಿ ನಿರತರಾಗಿದ್ದಾರೆ ಎಂದು ಹೇಳಿದರು.

ಜೆಡಿಎಸ್್ ಪಕ್ಷದಿಂದ ಯುವ ಉತ್ಸಾಹಿ ನವ ತರುಣ ಖೂಬಾ ಅವರಿಗೆ ಟಿಕೇಟ್್ ನೀಡಿದ್ದಕ್ಕೆ ಬಸವಕಲ್ಯಾಣ ತಾಲೂಕಿನ ಜನತೆ ಮತ್ತು ಪಕ್ಷದ ಕಾಯ೯ಕತ೯ರು ಪಕ್ಷದ ಮೇಲಿನ ವಿಶ್ವಾಸದಿಂದ ಮಲ್ಲಿಕಾಜು೯ನ ಖೂಬಾ ಅವರನ್ನು ಗೆಲ್ಲಿಸಿ ತಂದಿರುವುದಕ್ಕೆ ಬಸವಕಲ್ಯಾಣದಲ್ಲಿ ಜೆಡಿಎಸ್್ ಭ್ರದ್ರ ಕೋಟೆ ಸ್ಥಾಪಿಸಿದೆ ಎಂದು ಅಭಿಪ್ರಾಯಪಟ್ಟರು.

ಹಾಗೆಯೇ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಖೂಬಾ ಅವರಿಗೆ ಗೆಲ್ಲಿಸಲು ಮನವಿಸಿದರು. ಇದೇ ಸಂದಭ೯ದಲ್ಲಿ ರಾಜೇಶ್ವರಿ ಸೂಯ೯ವಂಶಿ ಜೆಡಿಎಸ್್ ಪಕ್ಷಕ್ಕೆ ಸೇಪ೯ಡೆಯಾದರು. ಜಿಲ್ಲಾ ಜೆಡಿಎಸ್್ ಪಕ್ಷದ ಅಧ್ಯಕ್ಷ ನಸೀಮೋದ್ದೀನ್್ ಪಟೇಲ್್, ಕುಮಾರ ಬಂಗಾರಪ್ಪ, ಜಿಪಂ. ಸದಸ್ಯ ಸಂಜು ಕಾಳೇಕರ್್, ದೇವಿಶೀಲಾ ಮದನೆ, ಪುಷ್ಪಾ ಹಾರಕೂಡೆ ಮುಂತಾದವರಿದ್ದರು.

ಪ್ರಮುಖರಾದ ತಾಪಂ ಸದಸ್ಯ ದೀಪಕ ನಾಗದೆ, ಕೇಶಪ್ಪ ಬಿರಾದಾರ್್, ಕಾಳೀದಾಸ್ ಜಾಧವ, ಸಿದ್ರಾಮ ಗುದಗೆ, ಜ್ಞಾನೇಶ್ವರ ಮೂಳೆ, ಗೌತಮ ಕಾಂಬಳೆ, ರವಿ ಗುಂಗೆ, ಗುರುರಾಜ ಸಾಶೆಟ್ಟೆ, ದಿಲೀಪಗೀರ ಗೋಸ್ವಾಮಿ, ರಾಜು ವಾಡೇಕರ್್, ತಾತ್ಯಾರಾವ ಪಾಟೀಲ, ಇಸ್ಮಾಯಿಲ್್ ಬೆಳಕುಣಿ, ರಶೀದ ಖುರೇಶಿ, ಸೈಯದ ಅಖ್ತರ, ಶಿವಕುಮಾರ ಬಿರಾದಾರ್್ ಸೇರಿದಂತೆ ಮುಂತಾದ ಕಾಯ೯ಕತ೯ರಿದ್ದರು.




                                                                              
       

                                                                              
       

ಮಂಗಳವಾರ, ಮೇ 8, 2012

ಉತ್ತಮ ಸಾಹಿತ್ಯಾಸಕ್ತರನ್ನೇ ಆಯ್ಕೆ ಮಾಡಬೇಕು

 ಕನ್ನಡ ಸಾಹಿತ್ಯ ಪರಿಷತ್ತಿನ ಚಿಹ್ನೆ

  ಬಸವಕಲ್ಯಾಣ, ಮೇ. 6


ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತಿನ ನೂತನ ಅಧ್ಯಕ್ಷರನ್ನಾಗಿ ಸೂಕ್ತ ವ್ಯಕ್ತಿಯನ್ನು ನೇಮಿಸಿ ಸಾಹಿತ್ಯಿಕ ವಾತಾವರಣ ಹುಟ್ಟು ಹಾಕಬೇಕು. ಸ್ಥಳೀಯ ಕಸಾಪ ಸದಸ್ಯರ ಗಮನಕ್ಕೆ ತರದೇ ಈ ಸಂಬಂಧ ಯಾವುದೇ ನಿಣ೯ಯಗಳನ್ನು ಕೈಗೊಳ್ಳಬಾರದು ಎಂದು ತಾಲೂಕಿನ ಕಸಾಪ ಸದಸ್ಯರು ಆಗ್ರಹಿಸಿದ್ದಾರೆ.

ಈ ಕುರಿತು 25 ಕ್ಕೂ ಹೆಚ್ಚು ಸದಸ್ಯರ ಸಹಿ ಇರುವ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, 12 ನೇ ಶತಮಾನದ ಕಲ್ಯಾಣ ಸಾಮಾಜಿಕ ಕ್ರಾಂತಿ ನಡೆಸಿದ ವಿಶ್ವಗುರು ಬಸವಣ್ಣನವರ ಕಾಯ೯ ಕ್ಷೇತ್ರವಾಗಿದೆ. ಇಂತಹ ಪುಣ್ಯ ಕ್ಷೇತ್ರವಾದ ಬಸವಕಲ್ಯಾಣ ಕಸಾಪ ಅಧ್ಯಕ್ಷರನ್ನಾಗಲಿ, ಪದಾದಿಕಾರಿಗಳನ್ನಾಗಲಿ ಉತ್ತಮ ಸಾಹಿತ್ಯಾಸಕ್ತರನ್ನೇ ಆಯ್ಕೆ ಮಾಡಬೇಕು ಎಂದಿದ್ದಾರೆ.

ಕಲ್ಯಾಣವೆಂಬ ಪವಿತ್ರ ನಾಡಿನಿಂದ ಅನೇಕ ಶರಣರು ವಚನಗಳು ರಚಿಸಿ ಜನಜಾಗೖತಿ ಕಾಯ೯ವನ್ನು ಮಾಡಿದ್ದಾರೆ. ನಂತರದಲ್ಲಿ ಕೆಲಕಾಲ ಸಾಹಿತ್ಯಿಕ ಚಟುವಟಿಕೆ ನಿಂತು ಹೋಗಿದ್ದರೂ ಸಹ ಇಚೆಗೆ ಸಾಹಿತ್ಯ ಕ್ಷೇತ್ರದಲ್ಲಿ ಸಾಕಷ್ಟು ಪ್ರತಿಭಾವಂತ ಜನರು ಬೆಳಕಿಗೆ ಬರುತಿದ್ದಾರೆ ಎಂದು ತಿಳಿಸಿದ್ದಾರೆ.

ಕಾವ್ಯ, ಕಥೆ, ಲೇಖನ, ಅಂಕಣ ಬರಹ, ಕಾದಂಬರಿ, ಪ್ರಬಂಧ ಮುಂತಾದ ಪ್ರಕಾರಗಳಲ್ಲಿ ಕೆಲವರು ಮಹತ್ತರ ಸಾಧನೆಯನ್ನು ಮಾಡಿ ಗಮನ ಸೆಳೆಯುತಿದ್ದಾರೆ. ಹಲವರ ಪುಸ್ತಕಗಳು ಅಧಿಕ ಸಂಖ್ಯೆಯಲ್ಲಿ ಪ್ರಕಟಗೊಂಡಿವೆ. ಆದರೂ ಪರಿಷತ್ತಿನಿಂದ ಇವರನ್ನೆಲ್ಲಾ ಕಡೆಗಣಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

ಕೆಲವರು ಹಣಬಲ ಮತ್ತು ಶಿಫಾರಸ್ಸಿನೊಂದಿಗೆ ಪ್ರತಿಸಲ ಸ್ಥಾನಗಳನ್ನು ಪಡೆದುಕೊಳ್ಳುತಿದ್ದಾರೆ. ಈ ಸಲವೂ ಅದೇ ರೀತಿಯಾದರೆ ನಾವು ಸುಮ್ಮನಿರುವುದಿಲ್ಲ ಎಂದು ಎಚ್ಚಿರಿಸಿದ ಅವರು, ಪದೇ ಪದೇ ಕಸಾಪ ಪದಾಧಿಕಾರಿ ಆಗುವವರನ್ನು ಬದಿಗಿಟ್ಟು ಸಂಪೂಣ೯ವಾಗಿ ಹೊಸಬರಿಗೆ ಅವಕಾಶ ಮಾಡಿಕೊಡಬೇಕು ಎಂದು ಒತ್ತಾಯಿಸಿದ್ದಾರೆ.

ಸಾಹಿತಿಗಳಲ್ಲದವರು ಸಾಹಿತಿಗಳೆಂಬಂತೆ ನೈಜ ಪ್ರತಿಭಾವಂತ ಸಾಹಿತಿಗಳನ್ನು ಕಡೆಗಣಿಸುತ್ತಾ ಬರುತ್ತಿರುವುದು ಹೆಚ್ಚಾಗಿದೆ. ಸಾಹಿತ್ಯದ ಗಂಧ ಗಾಳಿಯೂ ಗೊತ್ತಿಲ್ಲದ ಕೆಲವರು ಇದ್ದಕಿದ್ದಂತೆ ದಿಢೀರ ಸಾಹಿತಿಗಳಾಗಿ ಹುಟ್ಟಿಕೊಳ್ಳುವ ಆತಂಕಗಳು ಹೆಚ್ಚುತ್ತಿವೆ. ಒಂದು ಸಾಲು ಸಹ ಬರೆಯದವರು ನಾನು ಪುಸ್ತಕ ಬರೆದಿದ್ದೇನೆ ಎನ್ನುವಂಥ ವಾತಾವರಣ ಸೖಷ್ಟಿಸುತಿದ್ದಾರೆ.

ಪುಟಗಟ್ಟಲೆ ಸುಳ್ಳಿನಿಂದಲೇ ಕೂಡಿದ ಪರಿಚಯ ಪತ್ರ ಸಿದ್ಧಪಡಿಸುವ ಕೆಲವರು ಯಾವುದೇ ದಾಖಲೆಗಳಿಲ್ಲದೇ ಸಮ್ಮೇಳನಾಧ್ಯಕ್ಷರಾಗುವ ಪಟ್ಟಿಯಲ್ಲಿ ಸೇರಿಕೊಂಡು ಪೈಪೋಟಿಗೆ ನಿಲ್ಲುವಂತಾಗಿದೆ. ಒಟ್ಟಿನಲ್ಲಿ ಸಾವ೯ಜನಿಕರ ಕಣ್ಣಲ್ಲಿ ಮಣ್ಣೆರಚುವ ಕಾಯ೯ ನಡೆಯುತ್ತಿದೆ ಎಂದು ಕಸಾಪ ಸದಸ್ಯರಾದ ರುದ್ರಮಣಿ ಮಠಪತಿ, ರುದ್ರೇಶ್ವರ ಸ್ವಾಮಿ , ನಾಗೇಂದ್ರ ಬಿರಾದಾರ್್, ಭೀಮಾಶಂಕರ ಬಿರಾದಾರ್್, ಚನ್ನವೀರ ಜಮಾದಾರ್್ ಸೇರಿದಂತೆ ಮುಂತಾದವರು ಪ್ರಕಟಣೆಯಲ್ಲಿ ಆರೋಪಿಸಿದ್ದಾರೆ.

ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾಗಿ ಆಯ್ಕೆ ಆಗಿರುವ ಪ್ರೊ. ಸಿದ್ರಾಮಪ್ಪ ಮಾಸಿಮಾಡೆ ಅವರು ಯಾವುದೇ ಭೇದಭಾವ ಮಾಡದೇ ಸೂಕ್ತ ವ್ಯಕ್ತಿಗಳಿಗೆ ತಾಲೂಕಾ ಕಸಾಪ ಅಧ್ಯಕ್ಷರನ್ನಾಗಿ ಹಾಗೂ ಇತರೆ ಪದಾಧಿಕಾರಿಗಳನ್ನಾಗಿ ನ್ಯಾಯಯುತವಾಗಿ ನೇಮಕ ಮಾಡಬೇಕು ಎಂದು ಮನವಿಸಿದ್ದಾರೆ.

ಯಾವುದೇ ಜಾತಿ, ಜನಾಂಗ, ಧಮ೯ದವರನ್ನು ಪ್ರಾತಿನಿಧ್ಯ ಸಿಗುವಂತೆ ಆಯ್ಕೆ ಮಾಡುವುದು ಸೇರಿದಂತೆ ತಾಲೂಕಾ ಅಥವಾ ಇತರೆ ಸಮ್ಮೇಳನಗಳಲ್ಲಿ ಸಮ್ಮೇಳನಾಧ್ಯಕ್ಷರ ನೇಮಕಾತಿಯಲ್ಲಿ ಪಾರದಶ೯ಕತೆ ಹೊಂದಿರಬೇಕು. ಸಾಹಿತಿಗಳಲ್ಲದವರನ್ನು ಸಮ್ಮೇಳನಾಧ್ಯಕ್ಷ ಸ್ಥಾನಕ್ಕೆ ನೇಮಿಸುವುದು ಸರಿಯಲ್ಲ ಎಂದು ತಿಳಿಸಿದ್ದಾರೆ.

ತಾಲೂಕಾ ಮತ್ತು ಜಿಲ್ಲಾ ಮಟ್ಟದ ಕಾಯ೯ಕ್ರಮಗಳಲ್ಲಿ ಕೆಲ ವಷ೯ಗಳಿಂದ ಸತ್ಕಾರ ಮಾಡಿಕೊಂಡವರನ್ನೇ ಪದೇ ಪದೇ ಸನ್ಮಾನಿಸಲಾಗುತ್ತಿದೆ. ಪ್ರತಿ ಕಾಯ೯ಕ್ರಮಗಳಲ್ಲಿ ಹೊಸಬರನ್ನು ಅವಕಾಶ ಮಾಡಿಕೊಟ್ಟು ಅವರಲ್ಲಿ ಹುಮ್ಮಸ್ಸು ಬರುವಂತೆ ಪ್ರೊತ್ಸಾಹಿಸಬೇಕು. ಇದುವರೆಗೆ ನಾವೆಲ್ಲ ಸುಮ್ಮನೆ ಕುಳಿತಿದ್ದೇವು ಆದರೆ ಇನ್ನೂ ಮುಂದೆ ಅನ್ಯಾಯಕ್ಕಾಗಿ ಹೋರಾಡಲು ಹಿಂಜರಿಯುವುದಿಲ್ಲ ಎಂದು ಎಚ್ಚರಿಸಿದ್ದಾರೆ.

ಈ ಎಲ್ಲಾ ವಿಷಯಗಳನ್ನು ಕಸಾಪ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾದ ಪ್ರೊ. ಸಿದ್ರಾಮಪ್ಪ ಮಾಸಿಮಾಡೆ ಅವರ ಗಮನಕ್ಕೆ ತರಲು ಬಯಸುತಿದ್ದೇವೆ ಎಂದು ಕಸಾಪ ಸದಸ್ಯರಾದ ಶಿವಕುಮಾರ ವಕಾರೆ, ಶಾಂತಲಿಂಗ ಮಠಪತಿ, ಡಾ. ಬಸವರಾಜ ಸ್ವಾಮಿ, ಬಕ್ಕಯ್ಯ ಸ್ವಾಮಿ, ಉಮಾಕಾಂತ ದದಾಪೂರೆ, ಪಿ.ಜಿ.ಹಿರೇಮಠ, ಅಣ್ಣಾರೆಡ್ಡಿ ಬೋಗಲೆ, ಶಿವರಾಜ ಬಾಲಕಿಲೆ, ಮಹಾದಪ್ಪ ಖಂಡಾಳೆ,  ದೇವಿಂದ್ರ ಬರಗಾಲೆ, ಶಿವಾನಂದ ಶೀಲವಂತ ಸೇರಿದಂತೆ ಮುಂತಾದವರು ಪ್ರಕಟಣೆಯಲ್ಲಿ ಕೋರಿದ್ದಾರೆ.

ಸೋಮವಾರ, ಏಪ್ರಿಲ್ 23, 2012

ಬಸವಕಲ್ಯಾಣ, ಏ. 23

ಹಿಂದೂ ಸಾಮ್ರಾಜ್ಜವನ್ನು ಕಟ್ಟಲು ಪ್ರಯತ್ನಿಸಿದ ಛತ್ರಪತಿ ಶಿವಾಜಿ ಮಹಾರಾಜರು ಅತೀ ಚಾಣಕ್ಷ ಮಹಾಪುರುಷರಾಗಿದ್ದರು. ಅವರ ಜೀವನ ಸಾಧನೆಯನ್ನು ನೋಡಿದರೆ ರೋಮಾಂಚನಗೊಳ್ಳುತ್ತೇವೆ ಎಂದು ಸಹಾಯಕ ಆಯುಕ್ತ ಎಚ್್. ಪ್ರಸನ್ನ ಅಭಿಪ್ರಾಯಪಟ್ಟರು.

ನಗರದ ಹಳೇ ತಹಸೀಲ್್ ಕಚೇರಿ ಆವರಣದಲ್ಲಿ ಸೋಮವಾರ ತಾಲೂಕಾಡಳಿತ ವತಿಯಿಂದ ಹಮ್ಮಿಕೊಂಡಿದ್ದ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಉತ್ಸವದ ಭವ್ಯ ಮೆರವಣಿಗೆಯಲ್ಲಿ ಪಾಲ್ಗೊಂಡ ನಂತರ ಕಾಯ೯ಕ್ರಮ ಉದ್ಘಾಟಿಸಿ ಮಾತನಾಡಿದರು.

ಇಡೀ ರಾಜ್ಯದಲ್ಲಿ ಸಕಾ೯ರದ ಆದೇಶದಂತೆ ಇದೇ ಪ್ರಥಮ ಬಾರಿಗೆ ಆಚರಿಸಲಾಗುತ್ತಿರುವ ಶಿವಾಜಿ ಮಹಾರಾಜರ ಜಯಂತಿ ಆಚರಣೆಯಿಂದ ಜೀವಮಾನವಿಡೀ ಪ್ರತಿಬಿಂಬಿಸಿದ ಅವರ ಶಕ್ತಿ ಸಾಮಥ್ಯ೯ಕ್ಕೆ ಕೊಡುವ ಗೌರವ ಇದಾಗಿದೆ ಎಂದರು.

ತಾಯಿ ಜೀಜಾಬಾಯಿ ಆಶ್ರಯದಲ್ಲಿ ಬೆಳೆದ ಶಿವಾಜಿ ವೀರ ಪುರುಷರಾಗಿದ್ದರು. ಯುದ್ಧದಲ್ಲಿ ನೌಪುಣ್ಯತೆ ಹೊಂದಿದ್ದ ಅವರು ಧಾಮಿ೯ಕ ನೆಲೆಗಟ್ಟಿನಲ್ಲಿ ಬೆಳೆದವರಾಗಿದ್ದರು. ಮೊಗಲ ರಾಜರಿಗೂ ಸಹ ಶಿವಾಜಿ ಮಹಾರಾಜರ ಯುದ್ಧ ಕಲೆ ಅರಿತುಕೊಳ್ಳಲು ಸಾಧ್ಯವಾಗಲಿಲ್ಲ ಎಂದು ಹೇಳಿದರು.

ಮಹಾನ್್ ಪುರುಷರನ್ನು ಇತಿತಹಾಸವನ್ನಾಳಿದ ಶಿವಾಜಿ ಮಹಾರಾಜರಿಗೆ ಸ್ಮರಿಸುವ ಗೌರವ ಭಾವನೆ ಪ್ರತಿಯೊಬ್ಬರಲ್ಲೂ ಇರಬೇಕು. ಮನಸ್ತಾಪಗಳನ್ನು ಮರೆತು ಸೌಹಾಧ೯ಯುತವಾಗಿ ಜಯಂತಿ ಆಚರಣೆ ಪ್ರತಿ ವಷ೯ ಮಾಡುವುದರಿಂದ ಅದಕ್ಕೆ ಮಹತ್ವವನ್ನು ಬರುವಂತಾಗಬೇಕು ಎಂದು ಕರೆ ನೀಡಿದರು.

ನಗರಸಭೆ ಅಧ್ಯಕ್ಷೆ ಮಂಗಲಾಬಾಯಿ ಉದರೆ, ಉಪಾಧ್ಯಕ್ಷೆ ಗೀತಾ ಅಂಬಾದಾಸ, ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ರವಿ ಚಂದನಕೇರೆ, ಎಪಿಎಂಸಿ ಅಧ್ಯಕ್ಷ ಪ್ರಕಾಶ ಮೆಂಡೋಳೆ, ಪಾಶಾಮಿಯ್ಯಾ ರೆಹಮಾನ ಸಾಬ ವೇದಿಕೆಯಲ್ಲಿದ್ದರು. ವಿಶೇಷ ಉಪನ್ಯಾಸಕರಾಗಿ  ಡಾ. ಶಾಮ ಮೋರೆ ಹಾಗೂ ದೇವಾ ಚಹ್ವಾಣ್್ ಉಪಸ್ಥಿತರಿದ್ದರು.

ನಗರದ ಕೋಟೆಯಿಂದ ಪ್ರಾರಂಭವಾದ ಛತ್ರಪತಿ ಶಿವಾಜಿ ಭಾವಚಿತ್ರದ ಮೆರವಣಿಗೆ ಪ್ರಮುಖ ಬೀದಿಗಳಿಂದ ಆಗಮಿಸಿ ಶಿವಾಜಿ ಮಹಾರಾಜರ ಪುತ್ಥಳಿಗೆ ಪೂಜೆ ಸಲ್ಲಿಸಲಾಯಿತು. ಈ ಸಂದಭ೯ದಲ್ಲಿ ಅನೇಕ ರಾಜಕೀಯ ಗಣ್ಯರು, ವಿವಿಧ ಸಂಘಟಕರು ಪಾಲ್ಗೊಂಡಿದ್ದರು.

ಮಂಗಳವಾರ, ಏಪ್ರಿಲ್ 17, 2012

ಬಸವಕಲ್ಯಾಣಃ ಅಬ್ಬರದ ಕಸಾಪ ಪ್ರಚಾರದಲ್ಲಿ ಯುವ ಉತ್ಸಾಹಿ ಸುರೇಶ ಚನಶೆಟ್ಟಿ

 ಚಿತ್ರ ವಿವರಃ ಬಸವಕಲ್ಯಾಣ ತಾಲೂಕಿನ ಹಾರಕೂಡ ಚೆನ್ನವೀರ ಶಿವಾಚಾಯ೯ರಿಂದ ಜಿಲ್ಲಾ ಕಸಾಪ ಚುನಾವಣೆ ಪ್ರಚಾರಕ್ಕೆ ಮಂಗಳವಾರ ಆಶಿವಾ೯ದ ಪಡೆದು ತಾಲೂಕಿನಲ್ಲೆಡೆ ಅಭ್ಯಥಿ೯ ಸುರೇಶ ಚನಶೆಟ್ಟಿ ಮತಯಾಚಿಸಿದರು. ಈ ಸಂದಭ೯ದಲ್ಲಿ ಶ್ರೀಗಳು ಸನ್ಮಾನಿಸಿದರು. ಅವರೊಂದಿಗೆ ಅವರ ಬೆಂಬಲಿಗರು ಉಪಸ್ಥಿತರಿದ್ದರು.


 ಬಸವಕಲ್ಯಾಣ, ಏ. 17


ಬೀದರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರ ಚುನಾವಣೆ ಇದೇ ಏ. 29 ರಂದು ನಡೆಯಲಿರುವ ಹಿನ್ನೆಯಲ್ಲಿ ಬಸವಕಲ್ಯಾಣ ತಾಲೂಕಿನ ಸುಕ್ಷೇತ್ರ ಹಾರಕೂಡದಿಂದ ಕಸಾಪ ಚುನಾವಣಾ ಸ್ಪಧಿ೯ ಸುರೇಶ ಚನಶೆಟ್ಟಿ ಅವರು ತಮ್ಮ ಬೆಂಬಲಿಗರೊಂದಿಗೆ ಚೆನ್ನವೀರ ಶಿವಾಚಾಯ೯ರ ಆಶೀವಾ೯ದ ಪಡೆದು ಮಂಗಳವಾರದ ದಿನವಿಡೀ ಮತದಾರರ ಮನೆ ಬಾಗಿಲಿಗೆ ಹೋಗಿ ಮತಯಾಚಿಸಿದರು.

ಸಾಹಿತ್ಯಿಕ, ಸಾಂಸ್ಕೖತಿಕ ವಾತಾವರಣ ಹುಟ್ಟು ಹಾಕುವ ಉದ್ದೇಶದಿಂದ ಕನ್ನಡಕ್ಕಾಗಿ ಏನೆಲ್ಲಾ ಯೋಚನೆ ಕನಸುಗಳನ್ನಿಟ್ಟುಕೊಂಡಿರುವ ಸುರೇಶ ಚನಶೆಟ್ಟಿ ಅವರು ಮತದಾರರ ಮೇಲೆ ಭಾರಿ ನಿರೀಕ್ಷೆಯನ್ನಿಟ್ಟುಕೊಂಡಂತೆ ಅಬ್ಬರದ ಪ್ರಚಾರವನ್ನು ಕೈಗೊಂಡಿದ್ದರು. ಅವರ ಮುಖಭಾವದಲ್ಲಿ ಸದಾ ನಗುವನ್ನು ತುಂಬಿಕೊಂಡು ಸಾಂಸ್ಕೖತಿಕ ಬದಲಾವಣೆ ಬಯಸುವ ಜನರತ್ತ ಧಾವಿಸಿದರು.

ಮತದಾರರ ಒತ್ತಾಸೆಗೆ ಮಣಿದು ನಾನು ಜಿಲ್ಲಾ ಕಸಾಪ ಚುನಾವಣಾ ಕಣಕ್ಕಿಳಿದಿದ್ದೇನೆ. ನಾಡು ನುಡಿಗಾಗಿ ಸೂಕ್ತ ವೇದಿಕೆ ನಿಮಾ೯ಣ ಮಾಡಲು ಹತ್ತು ಹಲವು ಕನಸುಗಳಿವೆ. ಅಂತಹ ಮಹತ್ವದ ಯೋಜನೆಗಳು ಕಾಯ೯ರೂಪಕ್ಕೆ ಬರಲು ಒಂದು ಬಾರಿ ಸುವಣ೯ವಕಾಶ ಮಾಡಿಕೊಡಬೇಕು ಎಂದು ಹಲವು ಮತದಾರರಲ್ಲಿ ಮನವಿಸಿರುವುದನ್ನು ಕಂಡು ಬಂದಿತ್ತು.

ಕನ್ನಡ ಸಾಹಿತ್ಯ ಪರಿಷತ್ತು ನೂರು ವಷ೯ ಪೂರೈಸಿ ಶತಮಾನೋತ್ಸವ ಸಂಭ್ರಮ ಹತ್ತಿರದಲ್ಲಿ ಬರುತ್ತಿದೆ. ಹಿರಿಯರ ಹಾಗೂ ವಿದ್ವಾಂಸರ ಮಾಗ೯ದಶ೯ನದಲ್ಲಿ ಅಥ೯ಪೂಣ೯ವಾಗಿ ಆಚರಿಸಲು ವಿನೂತನವಾದ ಕಾಯ೯ಕ್ರಮಗಳು, ವಿಭಿನ್ನ ಸಾಹಿತ್ಯಕ ಸಾಂಸ್ಕೖತಿಕ ಸಮ್ಮೇಳನಗಳು, ಸಮಾಜಮುಖಿ ಚಟುವಟಿಕೆಗಳು ಹಮ್ಮಿಕೊಳ್ಳಲು ನಿಧ೯ರಿಸಿದ್ದೇನೆ ಎಂದು ಹೇಳಿದರು.

ಪ್ರಚಾರದ ನಿಮಿತ್ಯ ಚನಶೆಟ್ಟಿ ಅವರೊಂದಿಗೆ ಡಾ. ಬಸವರಾಜ ಬಲ್ಲೂರ್್, ಶಾಂತಲಿಂಗ ಮಠಪತಿ, ರುದ್ರೇಶ ಮಠಪತಿ, ಪ್ರೇಮಸಾಗರ ಪಾಟೀಲ, ಡಾ. ಬಸವರಾಜ ಸ್ವಾಮಿ, ಕಾಶಪ್ಪ ಬಾಲಕಿಲೆ, ದೇವಿಂದ್ರ ಬರಗಾಲೆ, ರುದ್ರಮುನಿ ಮಠಪತಿ, ಧನರಾಜ ಭಾತಂಬ್ರೆ, ಡಾ. ರಾಜಕುಮಾರ ಅಲ್ಲೂರೆ, ಜೈಶೇನ್್ ಪ್ರಸಾದ್್ ಸೇರಿದಂತೆ ಮುಂತಾದವರು ಪಾಲ್ಗೊಂಡಿದ್ದರು.




ಕಸಾಪ ಮತದಾರರ ದಾರಿ ತಪ್ಪಿಸುವ ಉದ್ದೇಶ

ಬಸವಕಲ್ಯಾಣ, ಏ. 13

ರಾಜ್ಯ ಮತ್ತು ಜಿಲ್ಲೆಗಳಲ್ಲಿ ಏಕಕಾಲಕ್ಕೆ ನಡೆಯಲಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆ ಇದೇ ಏ. 29 ರಂದು ಜರುಗಲಿದ್ದು, ಆ ಹಿನ್ನೆಲೆಯಲ್ಲಿ ಸ್ಪಧಾ೯ ಕಣದಲ್ಲಿರುವ ಜಿಲ್ಲಾ ಕಸಾಪ ಅಭ್ಯಥಿ೯ಗಳಲ್ಲಿ ಕೆಲವರು ಸುಳ್ಳಿನ ಸರಮಾಲೆಯನ್ನೇ ಪೋಣಿಸಿ ತಮ್ಮ ವಯಕ್ತಿಕ ಸಾಧನೆಗಳ ಪಟ್ಟಿಯಲ್ಲಿ ಸುಳ್ಳಿನ ಕಂತೆಗಳನ್ನು ಸೇರಿಸಿ ಭಾರಿ ಪ್ರಚಾರದಲ್ಲಿ ತೊಡಗಿದ್ದಾರೆ.

ಕಸಾಪ ಮತದಾರರ ದಾರಿ ತಪ್ಪಿಸುವ ಉದ್ದೇಶದಿಂದ ಸ್ಪಧಾ೯ ಕಣದಲ್ಲಿರುವ ಅಭ್ಯಥಿ೯ಯೊಬ್ಬರು ಬೆಂಬಲವನ್ನು ಕೋರಿ ಪ್ರಕಟಿಸಿದ ಪ್ರಣಾಳಿಕೆಯ ಪರಿಚಯ ಪತ್ರದಲ್ಲಿ ಅನೇಕ ಸುಳ್ಳುಗಳನ್ನೇ ಬರೆದುಕೊಂಡಿದ್ದಾರೆ. ಇಂತಹ ಒಂದು ಅಚಾತುಯ೯ ಮಾಡುವ ಮೂಲಕ ಜನಸಾಮಾನ್ಯರ ಕಣ್ಣಿಗೆ ಮಣ್ಣೆರೆಚುವ ಕಾಯ೯ದಲ್ಲಿ ನಿರತರಾಗಿದ್ದಾರೆ ಎಂಬ ಆರೋಪ ಸ್ಪಷ್ಟವಾಗಿ ಕೇಳಿ ಬರುತ್ತಿವೆ.

ಜಿಲ್ಲಾ ಕಸಾಪ ಸದಸ್ಯರಿಗೂ, ಸಾಹಿತ್ಯಾಸಕ್ತರಿಗೂ ಮುಗ್ಧ ಜನತೆಯ ದಾರಿ ತಪ್ಪಿಸಲು ಹೊರಟಿರುವ ಜಿಲ್ಲಾ ಕಸಾಪ ಚುನಾವಣಾ ಅಭ್ಯಥಿ೯ ಕಣದಲ್ಲಿರುವ ಪ್ರೊ. ವಿಜಯಲಕ್ಷ್ಮೀ ಗಡ್ಡೆ ಅವರು ವಿವಿಧ ಸಂಘ ಸಂಸ್ಥೆಯಲ್ಲಿ ಕಾಯ೯ ನಿವ೯ಹಿಸಿರುವ ಬಗ್ಗೆ ಚುನಾವಣಾ ಪ್ರಚಾರದ ನಿಮಿತ್ಯ ಪ್ರಕಟಿಸಿರುವ ಪರಿಚಯ ಪತ್ರ ಮತದಾರರ ಮನೆ ಮನೆಗೂ ತಲುಪಿಸಿದ್ದಾರೆ. ಅನೇಕ ಕನ್ನಡಪರ ಸಂಘ ಸಂಸ್ಥೆಗಳಲ್ಲಿ ಇರುವುದಾಗಿಯೂ ಸುಳ್ಳು ಸಾಧನೆಗಳು ಪ್ರತಿಬಿಂಬಿಸಿದ್ದಾರೆ.

ಕನ್ನಡ ಅಭಿವೖದ್ಧಿ ಪ್ರಾಧಿಕಾರದ ಸದಸ್ಯರಾಗಿ ಸೇವೆ ಸಲ್ಲಿಸುತ್ತಿರುವ ಬಗ್ಗೆ ಹೇಳಿಕೊಂಡಿರುವ ಅವರು, ಆ ಮೂಲಕ ಭಾರಿ ಪ್ರಮಾದವನ್ನೇ ಎಸಗಿದ್ದಾರೆ. ಈ ಕುರಿತು ಕ.ಅ.ಪ್ರಾಧಿಕಾರದ ರಾಜ್ಯಾಧ್ಯಕ್ಷರಾದ ಮುಖ್ಯಮಂತ್ರಿ ಚಂದ್ರು ಅವರು ಕನ್ನಡಪ್ರಭದೊಂದಿಗೆ ಮಾತನಾಡಿ, ಬೀದರ ಜಿಲ್ಲೆಗೆ ಯಾರನ್ನೂ ಕೂಡ ಕನ್ನಡ ಅಭಿವೖದ್ಧಿ ಪ್ರಾಧಿಕಾರದ ಸದಸ್ಯರನ್ನಾಗಿ ನಾವು ನೇಮಕ ಮಾಡಿಲ್ಲ. ಇಲ್ಲದ ಜಂಭ ಕೊಚ್ಚಿಕೊಳ್ಳುವುದಕ್ಕಾಗಿ ಈ ರೀತಿ ಮಾಡುವುದು ಸರಿಯಲ್ಲ. ಗೌಣ ಸಾಧನೆಯವರಲ್ಲಿ ಇಂತಹ ಗುಣಗಳು ವಿಶೇಷವಾಗಿ ಕಂಡು ಬರುತ್ತವೆ ಎಂದು ಅವರು ಖಾರವಾಗಿಯೇ ನುಡಿದಿದ್ದಾರೆ.

ಅದೇ ರೀತಿ ಗಡಿ ಅಭಿವೖದ್ಧಿ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಡಾ. ಜಗನ್ನಾಥ ಹೆಬ್ಬಾಳೆ  ಕನ್ನಡಪ್ರಭದೊಂದಿಗೆ ಮಾತನಾಡಿ, ತಮ್ಮ ಸ್ವಪ್ರತಿಷ್ಠೆಗಾಗಿ ಅಥವಾ ಕಸಾಪ ಚುನಾವಣಾ ಪ್ರಚಾರದಲ್ಲಿ ಮತದಾರರನ್ನು ದಾರಿ ತಪ್ಪಿಸುವ ಹುನ್ನಾರ ಇದಾಗಿದೆ. ಪವಿತ್ರವಾಗಿರುವ ಕನ್ನಡಿಗರ ಸಂಸ್ಥೆ ಕಸಾಪ ಅಧ್ಯಕ್ಷರುಗಳಾಗಿ ಇಂಥವರು ಬಂದರೆ ಕನ್ನಡವನ್ನೇ ಕುಲಗೆಡಿಸುತ್ತಾರೆ. ಕನ್ನಡಿಗರ ಸ್ವಾಭಿಮಾನಕ್ಕೆ ಧಕ್ಕೆ ತರುತ್ತಾರೆ ಎಂದು ಬೀದರ ಜಿಲ್ಲಾ ಗಡಿ ಅಭಿವೖದ್ಧಿ ಪ್ರಾಧಿಕಾರದ ಹೆಬ್ಬಾಳೆ ಸ್ಪಷ್ಟಪಡಿಸಿದ್ದಾರೆ.

ಅನೇಕ ಸಂಘ ಸಂಸ್ಥೆಗಳಲ್ಲಿ ಗೌರವಾನ್ವಿತ ಸೇವೆಯಲ್ಲಿರುವಂತೆ ಬೆಂಬಲವನ್ನು ಕೋರಿ ಪ್ರಣಾಳಿಕೆಯ ಹಿಂಬದಿ ಪುಟ (ವಿಜಿಟಿಂಗ್್ ಕಾಡ೯)ನಲ್ಲಿ ಪ್ರೊ. ವಿಜಯಲಕ್ಷ್ಮೀ ಗಡ್ಡೆ ಅವರು ಪ್ರಕಟಿಸಿರುವುದು ಅವರಿಗವರೇ ಆತ್ಮಾವಲೇಕನ ಮಾಡಿಕೊಳ್ಳಲಿ. ಇದು ನಾಚಿಗೇಡಿನ ಸಂಗತಿಯಾಗಿದೆ ಎಂದು ಕಸಾಪ ಸದಸ್ಯರು, ಬುದ್ಧಿಜೀವಿಗಳು ಕಿಡಿ ಕಾರಿದ್ದಾರೆ.

ಪ್ರೊ. ವಿಜಯಲಕ್ಷ್ಮೀ ಗಡ್ಡೆಯವರು ವಿವಿಧ ಸಂಘ ಸಂಸ್ಥೆಗಳಲ್ಲಿ ಸೇವೆ ಮಾಡಿರುವುದನ್ನು ಪರಿಶೀಲಿಸಿ ನೋಡಿದಾಗ ಅನೇಕ ಸುಳ್ಳು ಸಾಧನೆಗಳ ಪಟ್ಟಿ ಬೆಳಕಿಗೆ ಬಂದಿದೆ.  ಈಗಲೇ ಈ ರೀತಿ ಮತದಾರರನ್ನು ತಪ್ಪು ದಾರಿಗೆಳೆಯುತ್ತಿರುವುದನ್ನು ನೋಡಿದರೆ ಇವರಲ್ಲಿ ನಿಜವಾದ ಕನ್ನಡಭಿಮಾನ, ಸಾಹಿತ್ಯಾಸಕ್ತಿ ಇಲ್ಲ ಎಂಬುದು ಸಾಬೀತಾಗುತ್ತದೆ. ಅಧಿಕಾರದ ಗದ್ದುಗೆಯನ್ನೇರಿ ಇವರು ಮಾಡುವುದೇನು ಎಂದು ಪ್ರಶ್ನಿಸುವಂತಾಗಿದೆ.

ಈ ಕುರಿತು ಅನೇಕ ಸಾಹಿತಿ, ಕವಿ, ಕಲಾವಿದರು, ಸದಸ್ಯರುಗಳು ಬೇಸರ ವ್ಯಕ್ತಪಡಿಸಿದ್ದಾರೆ. ಸತ್ಯವನ್ನು ಮರೆಮಾಚಲು ಸಾಧ್ಯವಿಲ್ಲ ಎನ್ನುವುದಕ್ಕೆ ಇದೊಂದು ಜ್ವಲ್ಲಂತ ಉದಾಹರಣೆ ಅಷ್ಟೇ.  ಸುಳ್ಳು ಸಾಧನೆಯ ಪಟ್ಟಿಯಲ್ಲಿ ಸುಳ್ಳಿನ ಕಂತೆಗಳು ಸೇರಿರುವುದು ನಿಜವಾದ ಸಾಧಕರನ್ನೇ ನಾಚಿಸುವಂತೆ ಮಾಡಿರುವುದು ಹಾಸ್ಯಾಸ್ಪದವಾಗಿದೆ ಎನ್ನುತ್ತಾರೆ ಅನೇಕರು.

ಅದೇ ರೀತಿ ಬೀದರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಹಿಳಾ ಘಟಕ ಪ್ರತಿನಿಧಿಯಾಗಿ ಸೇವೆ ಸಲ್ಲಿಸುತ್ತಿರುವುದಾಗಿಯೂ ಹೇಳಿದ್ದಾರೆ. ಹಾಗೂ ಕನಾ೯ಟಕ ರಕ್ಷಣಾ ವೇದಿಕೆ ಮಹಿಳಾ ಘಟಕದ ಜಿಲ್ಲಾಧ್ಯಕ್ಷರೆಂದು ಕೂಡ ಬರೆದುಕೊಂಡಿರುತ್ತಾರೆ.

ಕರವೇ ಸಂಘಟನೆಗೂ ಗಡ್ಡೆ ಅವರಿಗೂ ಯಾವುದೇ ರೀತಿಯ ಸಂಬಂಧವಿಲ್ಲ ಎಂದು ಕರವೇ(ಪ್ರವೀಣಶೆಟ್ಟಿ ಬಣ) ಜಿಲ್ಲಾಧ್ಯಕ್ಷ ಶಶಿಧರ ಕೋಸಂಬೆ ಪ್ರತಿಕ್ರಿಯಿಸಿದ್ದಾರೆ. ಅದೇ ರೀತಿ ಒಟ್ಟು 11 ವಿವರಗಳಲ್ಲಿನ 4ನೇಯ ಸಾಲಿನಲ್ಲಿ ಜನವಾದಿ ಮಹಿಳಾ ಸಂಘಟನೆಯ ಜಿಲ್ಲಾಧ್ಯಕ್ಷರೆಂದು ಸಹ ಪ್ರಕಟಿಸಿದ್ದಾರೆ.

ಈ ಕುರಿತು ಜನವಾದಿ ಮಹಿಳಾ ಸಂಘಟನೆಯ ರಾಜ್ಯಾಧ್ಯಕ್ಷೆ ಕೆ. ನೀಲಾ ಅವರು ಮಾತನಾಡಿ, ಬೀದರ ಜಿಲ್ಲಾ ಅಧ್ಯಕ್ಷರಾಗಿ ಸಧ್ಯಕ್ಕೆ ಅಂಬುಬಾಯಿ ಮಾಳಗೆ ಎನ್ನುವವರು ಕಾಯ೯ ನಿವ೯ಹಿಸುತ್ತಿದ್ದಾರೆ. ಪ್ರೊ. ವಿಜಯಲಕ್ಷ್ಮೀ ಗಡ್ಡೆ ಅವರು ನಮ್ಮ ಸಂಘಟನೆಯ ಉಪಾಧ್ಯಕ್ಷರಾಗಿ ಮತ್ತು ಕಾಯ೯ದಶಿ೯ಗಳಾಗಿ ಹಿಂದಿನ ಅವಧಿಗಳಲ್ಲಿ ಮಾತ್ರ ಇದ್ದರು ಎಂದು ಸ್ಪಷ್ಟ ಪಡಿಸಿದ್ದಾರೆ.

ವಿಜಯಲಕ್ಷ್ಮೀ ಗಡ್ಡೆ ಅವರು ತಮ್ಮ ಪರಿಚಯ ಪತ್ರದಲ್ಲಿ ದಾಖಲಿಸಿರುವಂತೆ ಗಮನಿಸುತ್ತಾ ಹೋದಂತೆ ಇಂತಹ ಸಾಕಷ್ಟು ತಪ್ಪುಗಳು ಕಂಡು ಬರುವಂತಿವೆ. ನಮ್ಮೂರ್ನಾಗ ನಾನೊಬ್ನೇ ಜಾಣ ಎನ್ನುವ ಹಾಗೆ ಶುನ್ಯ ಸಾಧನೆಯಲ್ಲೂ ಅಪಾರ ಸಾಧನೆಗೈದಂತೆ ಎಲ್ಲೆಂದರಲ್ಲಿ ಪ್ರಚಾರ ಕೈಗೊಂಡಿರುವುದಕ್ಕೆ ಕಡಿವಾಣ ಹಾಕಬೇಕು ಎಂಬುದು ಜನಸಾಮಾನ್ಯರ ಗೋಳಾಗಿದೆ.

ಅನೇಕ ಕನ್ನಡಪರ ಸಂಘಟನೆಗಳ ಅಧ್ಯಕ್ಷರಾಗಿ ಕಾಯ೯ ನಿವ೯ಹಿಸಿರುವ ಬಗ್ಗೆ ಸಾಕಷ್ಟು ವಿವರಗಳನ್ನು ಬಹಿರಂಗವಾಗಿ ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆಯ ನಿಮಿತ್ಯ ಬಿರುಸಿನ ಪ್ರಚಾರದಲ್ಲಿ ತೊಡಗಿರುವ ಪ್ರೊ. ವಿಜಯಲಕ್ಷ್ಮೀ ಗಡ್ಡೆ ಅವರು ಬಹಿರಂಗ ಸುದ್ಧಿ ಪತ್ರಿಕೆಯ ಗೌರವ ಸಂಪಾದಕರೆಂದು ಸಹ ಹೇಳಿಕೊಂಡಿರುವುದು ಅವರಿಗವರೇ ಆತ್ಮ ವಿಮಶೆ೯ ಮಾಡಿಕೊಳ್ಳಬೇಕಾಗಿದೆ.

ಬೀದರ ಜಿಲ್ಲೆಯಲ್ಲಿ ಒಂದು ಸಾವಿರಕ್ಕೂ ಹೆಚ್ಚು ಉಪನ್ಯಾಸ ಮಂಡಿಸಿರುವುದಾಗಿ ಸಹ ಉಲ್ಲೇಖಿಸಿದ್ದಾರೆ. ಹೊರ ರಾಜ್ಯಗಳಲ್ಲಿ ಪ್ರಬಂಧ ಮಂಡನೆ ಮಾಡಿರುವುದು ಸೇರಿದಂತೆ ಬಸವ ಕೇಂದ್ರ, ಅ.ಭಾ.ವೀ. ಮಹಾಸಭಾ, ಅನುಭವ ಮಂಟಪ, ಕನ್ನಡ ಶಕ್ತಿ ಕೇಂದ್ರದ ಸದಸ್ಯರಾಗಿರುವುದು ಅದೇಷ್ಟು ಸತ್ಯವೋ ಎನ್ನುವುದು ಅನುಮಾನಿಸುವಂತೆ ಮಾಡಿದೆ ಎನ್ನುತ್ತಾರೆ ಸ್ಥಳೀಯರನೇಕರು.

ಈ ಸಾಹಿತ್ಯೀಕ, ಸಾಂಸ್ಕೖತಿಕ ವಲಯಗಳ ರಾಯಭಾರಿಗಳಾಗಬೇಕೆನ್ನುವರು ಇಂತಹ ಸುಳ್ಳುಗಳ ಸಂತೆ ನಿಮಾ೯ಣ ಮಾಡಿದರೆ. ನಿಜವಾದ ಪ್ರತಿಭಾವಂತರು ಮೂಲೆಗುಂಪಾಗಿ ಸೇರಬೇಕಾಗುತ್ತದೆ. ಕನ್ನಡ ಸಾಹಿತ್ಯ ಪರಿಷತ್ತು ಎನ್ನುವುದು ಕಸದ ತೊಟ್ಟಿಯನ್ನಾಗಿ ಮಾಡಿಬಿಡುವ ಭೀತಿ ಈ ರೀತಿಯ ಸಂಗತಿಗಳಿಂದ ಕಂಡು ಬರುತ್ತವೆ ಎನ್ನುತ್ತಾರೆ ಬಲ್ಲವರು.

ಭಾನುವಾರ, ಏಪ್ರಿಲ್ 8, 2012

ಬಸವಕಲ್ಯಾಣ ತಾಲೂಕಿನ ಮಂಠಾಳ ಗ್ರಾಮದಲ್ಲಿರುವ ಸಂಗಮೇಶ್ವರ ಶಿಕ್ಷಣ ಸಂಸ್ಥೆಯಡಿ ನಡೆಯುತ್ತಿರುವ ಸರಸ್ವತಿ ಶಾಲೆಯ 9 ನೇ ವಾಷಿ೯ಕೋತ್ಸವದಲ್ಲಿ ಮಕ್ಕಳಿಂದ ನಡೆದ ಸಾಂಸ್ಕೖತಿಕ ಕಾಯ೯ಕ್ರಮಗಳು ಫೆಬ್ರವರಿ 17 ರಂದು ನಡೆದದ್ದು.

















ಗುರುವಾರ, ಮಾರ್ಚ್ 29, 2012

ಅಕ್ಕ ಚಿತ್ರದ ಕುರಿತು


ಚಿತ್ರ ನಟಿ ಅನು ಪ್ರಭಾಕರ ಅವರನ್ನು ಸಂದಶಿ೯ಸುತ್ತಿರುವ ಸಂದಭ೯ದಲ್ಲಿ ವೀರಣ್ಣ ಮಂಠಾಳಕರ್

ಅಕ್ಕ ಚಿತ್ರೀಕರಣದಲ್ಲಿ ನಟಿಸುತ್ತಿರುವ ಅನುಪ್ರಭಾಕರ


ಚಿತ್ರ ನಟಿ ಅನುಪ್ರಭಾಕರ್ ಪತ್ರಿಕಾ ಸಂದಶ೯ನದಲ್ಲಿ, ಅಕ್ಕ ಚಿತ್ರದ ಕುರಿತು ಅಭಿಪ್ರಾಯ ಹಂಚಿಕೊಳ್ಳುತ್ತಿರುವುದು.



ಚಿತ್ರ ನಟಿ ಅನುಪ್ರಭಾಕರ್ ಪತ್ರಿಕಾ ಸಂದಶ೯ನದಲ್ಲಿ, ಅಕ್ಕ ಚಿತ್ರದ ಕುರಿತು ಅಭಿಪ್ರಾಯ ಹಂಚಿಕೊಳ್ಳುತ್ತಿರುವುದು.
------------------

ಬಸವಕಲ್ಯಾಣ, ಮಾ. 19


12ನೇ ಶತಮಾನದ ಅಕ್ಕ ಮಹಾದೇವಿ ಅವರ ಧಾಮಿ೯ಕ ವ್ಯಕ್ತಿತ್ವಕ್ಕಿಂತ ಹೆಚ್ಚಾಗಿ ವಯಕ್ತಿಕ ಬದುಕಿನಲ್ಲಿ ನಡೆದ ಸಂಘಷ೯, ಸಂವೇದನೆಗಳನ್ನೊಳಗೊಂಡ ಅಕ್ಕ ಎಂಬ ಸಿನಿಮಾ ಚಿತ್ರೀಕರಣ ಮುಗಿಸಿ ಶರಣರ ನೆಲೆ ಬೀಡಾದ ಬಸವಕಲ್ಯಾಣದಲ್ಲಿ ಇದೇ ಮಾ. 20 ರಿಂದ 28 ರವರೆಗೆ ಚಿತ್ರ ನಿದೇ೯ಶಕ ಮಂಜು ಸಿದ್ಧನಮಠ ಅವರ ನಿದೇ೯ಶನದಲ್ಲಿ ಜರುಗಿತ್ತು.

ಜ್ಯೋತಿ ಎಂಬ ಆಧುನಿಕ ಮನಸ್ಸಿನ ಯುವ ಮಹಿಳೆಯಾಗಿ ಅಕ್ಕ ಸಿನಿಮಾದಲ್ಲಿ ನಟಿ ಅನು ಪ್ರಭಾಕರ್ ಪ್ರಮುಖ ಪಾತ್ರದಲ್ಲಿ ಅಭಿನಯಿಸುತಿದ್ದು ಚಿತ್ರದಲ್ಲಿ ಎಂಫಿಲ್್ ಅಧ್ಯಯನ ಮಾಡುವ ಯುವತಿಯಾಗಿ ಕಾಣಸಿಕೊಂಡಿದ್ದಾರೆ.

ಜ್ಯೋತಿ ತಾನು ಪ್ರೀತಿಸಿದ ಶಶಿಧರನನ್ನು ಮದುವೆಯಾಗಲು ಜಾತಿ, ಅಂತಸ್ತುಗಳು ಅಡ್ಡಿಯಾದಾಗ ಅದನ್ನು ಎದುರಿಸಲಾಗದೇ ಅವಿನಾಶ್್ ಎಂಬ ಉದ್ಯಮಿಯೊಬ್ಬನನ್ನು ಮದುವೆಯಾಗಿ ಬೆಂಗಳೂರು ಸೇರುವುದು ಚಿತ್ರದ ಮೂಲ ಸಾರಾಂಶವಾಗಿದೆ ಎಂದರು.

ಗಂಡನ ಕಾಮದ ಬೊಂಬೆಯಾಗಲು ಇಚ್ಛಿಸದೇ ಕೆಲವೇ ದಿನಗಳಲ್ಲಿ ಗಂಡನಿಂದ ಬೇಪ೯ಟ್ಟು, ಸಂಬಂಧಿ ಪ್ರಮೀಳಾ ಎನ್ನುವವಳ ಮನೆಯಲ್ಲಿ ಜ್ಯೋತಿ ನೆಲೆಸುತ್ತಾಳೆ. ಅಕ್ಕಮಹಾದೇವಿ ಎಂಬ ವಿಷಯದಡಿ ಜ್ಯೋತಿ ಪಿಎಚ್್ಡಿ ಕೈಗೊಂಡು ಉಡುತಡಿ, ಕಲ್ಯಾಣ, ಶ್ರೀಶೈಲದ ನೆಲೆಗಳನ್ನು ಅರಸುತ್ತಾ ಒಂಬೈನೂರು ವಷ೯ಗಳ ಹಿಂದೆ ಬದುಕಿದ ಅಕ್ಕನ ಚರಿತ್ರೆಯನ್ನು ತನ್ನದೇ ರೀತಿಯಲ್ಲಿ ದಾಖಲಿಸಲು ಹೋಗುವುದೇ ಚಿತ್ರದಲ್ಲಿನ ಮೂಲಾಂಶವಾಗಿದೆ ಎಂದು ವಿವರಿಸಿದರು.

ಜ್ಯೋತಿಯ ಪ್ರಯಾಣ, ಅಧ್ಯಯನ, ಚಿಂತನೆ, ಆಕೆಯ ಸುತ್ತ ನಡೆಯುವ ಘಟನೆಗಳ ಪರಿಧಿಯಲ್ಲಿ ಅಕ್ಕನ ಚರಿತ್ರೆ ಕೂಡ ಅನಾವರಣಗೊಳ್ಳುವುದು ಕಲ್ಯಾಣದಲ್ಲಿದ್ದ ಶರಣ ಶರಣೆಯರ ಸಂಪಕ೯ ಸಾಧಿಸುವ ಅಂತರಂಗದ ತುಮುಲ ಚಿಂತನೆಗಳನ್ನು ಬಹಿರಂಗಗೊಳಿಸುವುದೇ ಚಿತ್ರದಲ್ಲಿ ಪ್ರಮುಖ ಪಾತ್ರಧಾರಿಣಿ ಅನುಪ್ರಭಾಕರ ಅವರದ್ದಾಗಿದೆ ಎಂದು ಹೇಳಿದರು.

ಒಂದು ವಾರ ನಡೆಯಲಿರುವ ಅಕ್ಕ ಚಿತ್ರದ ಪ್ರಮುಖ ನಾಯಕ ನಟರಾಗಿ ನವೀನ್್ ಕೖಷ್ಣ ಹಾಗೂ ನೀನಾಸಂ ಅಶ್ವಥ್್, ಅರುಣ ಸಾಗರ್್, ಪ್ರಮೋದ ಕಾಸರವಳ್ಳಿ ಮತ್ತಿತರರು ತಾರಾಗಣದಲ್ಲಿ ಇದ್ದಾರೆ. ಚಿತ್ರಕಥೆ, ಸಂಭಾಷಣೆ, ನಿದೇ೯ಶನ ಮಂಜು ಸಿದ್ಧನಮಠ ಅವರು ನಿವ೯ಹಿಸಲಿದ್ದಾರೆ. ಛಾಯಾಗ್ರಹಣ ನಾಗರಾಜ ಅದವಾನಿ, ಶ್ರೀ ಲಕ್ಷ್ಮೀ ಜಿ. ರಾಜ್್ ಸಂಗೀತ, ನಿಮಾ೯ಣ ಹಾಗೂ ನಿವ೯ಹಣೆ ವಿಜಯ ಉಪ್ಪುಂದ, ಮಲ್ಲಿಕಾಜು೯ನ, ದಿನೇಶ, ಹೇಮಂತ ಸಹ ನಿದೇ೯ಶಕರಾಗಿದ್ದಾರೆ ಎಂದು ವಿವರಿಸಿದರು.

ನಿದೇ೯ಶಕ ಮಂಜು ಸಿದ್ಧನಮಠ ಅವರು ಸತತ 25 ವಷ೯ಗಳಿಂದ ಸಿನಿಮಾ ರಂಗದಲ್ಲಿ ಸೇವೆ ಸಲ್ಲಿಸುತ್ತಾ ಎಂ.ಎಸ್.ಸತ್ಯು ಅವರೊಂದಿಗೆ ಕೆಲಸ ಮಾಡಿದ ಅನುಭವ ಪಡೆದಿದ್ದಾರೆ. ಅಂತಿಮ ರಾಜಾ, ಪ್ರತಿಧ್ವನಿ, ಕಾಯರ್್, ಚೋಲಿಧವನ ಪ್ರಶಸ್ತಿ ವಿಜೇತ ಹಿಂದಿ ಕಿರು ಚಿತ್ರಗಳು ನಿದೇ೯ಶಿಸಿ, ಸುರೇಶ ಹೆಬ್ಳಿಕರ್ ಅವರೊಂದಿಗೆ ಅಂತರಾಳ, ಆಗಂತುಕ, ಕಾಡಿನ ಬೆಂಕಿ ಎಂಬ ಸಿನಿಮಾಗಳನ್ನು ನಿದೇ೯ಶಿಸಿದ ಅಕ್ಕ ಸಿನಿಮಾ ಸ್ವತಂತ್ರ ಚಿತ್ರವಾಗಲಿದೆ.

ಆವರಣ, ಅಮಾಯಕರು, ಹೊಸ ಹಾದಿ, ನಾಡ ದೀಪ, ಚಿರಸ್ಮರಣೆ, ಆಡೋಣ ಬಾ,ಸ್ತ್ರೀ ಲೋಕ, ಅನುಭವ ಸೇರಿದಂತೆ ಮುಂತಾದ ಕನ್ನಡದ ಧಾರಾವಾಹಿಗಳಲ್ಲಿ ಸಹ ನಿದೇ೯ಶಕರಾಗಿ, ನಿದೇ೯ಶಕರಾಗಿ ಕೆಲಸ ಮಾಡಿದ ಅನುಭವ ಇವರಿಗಿದೆ. ಹೀಗೆ ಕಿರು ಚಿತ್ರ, ಅನೇಕ ಸಾಕ್ಷಚಿತ್ರಗಳು ಸಹ ನಿದೇ೯ಶಿಸಿದ್ದಾರೆ. ಈಟಿವಿ ಹಾಗೂ ಎನ್್ಜಿಓಎಸ್್ ಗಳಲ್ಲಿ ಕಿರು ಚಿತ್ರಗಳು ನಿದೇ೯ಶಿಸಿದ್ದಾರೆ.
-----------------------------------------

ಬಸವಕಲ್ಯಾಣ, ಮಾ. 20

ಕಳೆದೆರಡು ವಷ೯ಗಳಿಂದ ಚಲನಚಿತ್ರ ತಂಡಗಳು ಬೀದರ ಜಿಲ್ಲೆಯತ್ತ ಗಮನ ಹರಿಸುತ್ತಿರುವಂತೆ ಚಿತ್ರೀಕರಣಕ್ಕಾಗಿ ಐತಿಹಾಸಿಕ ಮತ್ತು ಪ್ರಮುಖವಾದ ಸ್ಥಳಗಳನ್ನು ಆಯ್ಕೆ ಮಾಡಿಕೊಳ್ಳುತ್ತಿರುವುದು ಚಿತ್ರ ಪೇಮಿಗಳಿಗೆ ಸಂಭ್ರಮದ ಹಬ್ಬವನ್ನಾಗಿ ವಾತಾವರಣ ಸೖಷ್ಠಿಯಾಗುತ್ತಿರುವುದು ಕಂಡು ಬರುತ್ತಿದೆ.

ಇತ್ತೀಚಿನ ದಿನಗಳಲ್ಲಿ ಕನ್ನಡ ಚಿತ್ರ ತಂಡಗಳು ಬೀದರ, ಬಸವಕಲ್ಯಾಣ, ಹುಮನಾಬಾದ ತಾಲೂಕಿನ ದುಬಲಗುಂಡಿ ಗ್ರಾಮಗಳತ್ತಲೂ ಲಗ್ಗೆ ಇಡುತ್ತಿರುವುದು ಸಾಮಾನ್ಯವಾಗಿದೆ. ಸಿನಿಮಾ ನಟ-ನಟಿಯರೆಂದರೆ ಅಚ್ಚರಿಯಿಂದ ಬೆರಗಾಗಿ ನೋಡುವ ಕಾಲ ದೂರವಾಗಿ ನಾಯಕ ನಾಯಕಿಯರನ್ನು ಮುಖಾಮುಖಿ ನೋಡಿ ಚಿತ್ರ ರಸಿಕರು ಕಣ್ಮನ ತಣಿಸಿಕೊಳ್ಳುತ್ತಿದ್ದಾರೆ.

ದೖಷ್ಟಿ ನಿಮಾ೯ಣದಲ್ಲಿ ತಯ್ಯಾರಾಗುತ್ತಿರುವ ಅಕ್ಕ ಚಿತ್ರೀಕರಣದ ಮುಹೂತ೯ ಬಸವಕಲ್ಯಾಣ ನಗರದ ಅನುಭವ ಮಂಟಪದಲ್ಲಿ ಮಂಗಳವಾರ ಆರಂಭಗೊಂಡಿದೆ. ಚಿತ್ರದ ಪ್ರಮುಖ ನಾಯಕಿಯಾಗಿ ಹಿನ್ನೆಲೆ ಕಲಾವಿದೆ ಗಾಯತ್ರಿ ಪ್ರಭಾಕರ ಅವರ ಮಗಳು ಖ್ಯಾತ ನಟಿ ಅನು ಪ್ರಭಾಕರ ಅವರು ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುತಿದ್ದಾರೆ.

ಬಸವಕಲ್ಯಾಣ ನಗರದೆಲ್ಲೆಡೆ ಒಂದು ವಾರ ಪಯ೯ಂತ ನಡೆಯಲಿರುವ ಅಕ್ಕ ಕನ್ನಡ ಚಲನಚಿತ್ರದಲ್ಲಿ ಜ್ಯೋತಿ ಎಂಬ ಪಾತ್ರದಲ್ಲಿ ಪಿಎಚ್್ಡಿ ವಿದ್ಯಾಥಿ೯ನಿಯಾಗಿ ನಟಿಸುತ್ತಿರುವ ಅನು ಪ್ರಭಾಕರ 12 ನೇ ಶತಮಾನದ ಶರಣೆ ಅಕ್ಕ ಮಹಾದೇವಿ ಬಗ್ಗೆ ಸಂಶೋಧನೆ ಕೈಗೊಂಡು ಆಧುನಿಕ ಮಹಿಳೆಯೊಬ್ಬಳು ಎದುರಿಸುವ ಸವಾಲುಗಳಲ್ಲಿ ತಮ್ಮ ಪ್ರತಿಭೆಯನ್ನು ಪ್ರದಶಿ೯ಸಲಿದ್ದಾರೆ.

ಶರಣೆ ಅಕ್ಕ ಮಹಾದೇವಿ ಅವರಿಗೆ ಒಂಬೈನೂರು ವಷ೯ಗಳ ಹಿಂದೆ ನೀಡಿದ ಸಮಾನತೆಗೂ ಇವತ್ತಿನ ಆಧುನಿಕ ಜಗತ್ತಿನಲ್ಲಿ ಮಹಿಳೆಯೊಬ್ಬಳಿಗೆ ಸಮಾಜ ನೀಡುವ ಸ್ಥಾನಮಾನ, ಸ್ವಾತಂತ್ರ್ಯ ಎಂಥಹುದು ಎಂಬುದು ಚಿತ್ರದ ಕಥಾ ಹಂದರವಾಗಿದೆ. ಅಂತಹ ಕೆಲವು ದೖಶ್ಯದ ತುಣುಕುಗಳು ದಿನವೀಡಿ ಶರಣರ ಸ್ಮಾರಕಗಳೆಲ್ಲೆಡೆ ಚಿತ್ರೀಕರಣಗೊಳ್ಳಲಿವೆ ಎಂದು ನಿದೇ೯ಶಕ ಮಂಜು ಸಿದ್ಧನಮಠ ವಿವರಿಸಿದರು.

ಮಂಗಳವಾರದ ದೖಶ್ಯ 2 ರಲ್ಲಿ ನಟಿ ಅನು ಪ್ರಭಾಕರ ಅವರು ಸಂಶೋಧನಾ ವಿದ್ಯಾಥಿ೯ನಿ ಜ್ಯೋತಿ ಪಾತ್ರದಲ್ಲಿ ಕಾಣಿಸಿಕೊಂಡು ಗೆಳತಿಯೊಂದಿಗೆ ಕಾರಿನಲ್ಲಿ ಬಂದಿಳಿದ ದೖಶ್ಯ ಚಿತ್ರೀಕರಣಗೊಂಡಿತ್ತು. ಚಿತ್ರ ದೖಶ್ಯದ ಸಂಭಾಷಣೆಯಂತೆ, ಇದಕ್ಕೆ ಅನುಭ ಮಂಟಪ ಎಂದು ಕರೆಯುತ್ತಾರೆ ಮೇಡಮ್್ ನಿಮಗೆ ಗೊತ್ತಿದ್ದ ಹಾಗೇ... ಎಂಬ ಸಂಭಾಷಣೆ ತುಣುಕು ಸೆರೆ ಹಿಡಿಯಲಾಯಿತ್ತು.

ತಂತ್ರಜ್ಞ ನಿಮಾ೯ಪಕರಾಗಿ ಅಣಜಿ ನಾಗರಾಜ, ಛಾಯಾಗ್ರಹಕರಾಗಿ ನಾಗರಾಜ ಅದವಾನಿ, ಶ್ರೀ ಲಕ್ಷ್ಮೀ ಜಿ. ರಾಜ್್ ಸಂಗೀತದಲ್ಲಿ ಸಹಾಯಕ ನಿದೇ೯ಶಕರಾಗಿ ಮಲ್ಲಿಕಾಜು೯ನ, ದಿನೇಶ, ಹೇಮಂತ ಕಾಯ೯ ನಿವ೯ಹಿಸುತಿದ್ದಾರೆ. ಪ್ರಮುಖ ತಾರಾಗಣದಲ್ಲಿ ನಾಯಕ ನಟರಾಗಿ ನವೀನ ಕೖಷ್ಣ ಅಭಿನಯಿಸುತಿದ್ದಾರೆ.

ಶುಭಾ ಪೂಂಜ, ನೀನಾಸಂ ಅಶ್ವಥ್್, ಅರುಣ್್ ಸಾಗರ್್, ಪ್ರಮೋದ ಕಾಸರವಳ್ಳಿ, ಮಾಲತಿ, ರಾಧಾ ಮುಂತಾದವರ ಅಭಿನಯದಲ್ಲಿ ಬಸವಕಲ್ಯಾಣ ಸೇರಿದಂತೆ ಶ್ರೀಶೈಲ್್, ಬೆಂಗಳೂರು ಮುಂತಾದೆಡೆ ಚಿತ್ರೀಕರಣ ನಡೆಯಲಿದೆ. ಚಿತ್ರದ ಮುಹೂತ೯ ಇಲ್ಲಿಂದಲೇ ಆರಂಭಿಸಬೇಕೆಂಬ ಕನಸು ನಮ್ಮದಾಗಿತ್ತು ಎಂದು ನಿದೇ೯ಶಕ ಮಂಜು ತಿಳಿಸಿದ್ದಾರೆ.











ಶನಿವಾರ, ಮಾರ್ಚ್ 10, 2012

ನಾರಾಯಣಪೂರ ವಾಸ್ತುಶಿಲ್ಪ ಕಲೆಗಳ ವೈಭವ




ಬಸವಕಲ್ಯಾಣ, ಮಾ. 10

ಇತಿಹಾಸದ ಗಭ೯ದಲ್ಲಿ ಅನೇಕ ಕುರುಗಳು ಇವತ್ತಿಗೂ ಜೀವಂತ ಸಾಕ್ಷಿಯಾಗಿ ಎಲ್ಲೆಡೆ ಸಿಗುವಂತೆ ಬಸವಕಲ್ಯಾಣ ತಾಲೂಕಿನ ಸುತ್ತಲಿನ ಗ್ರಾಮಗಳಲ್ಲಿ ಅಳಿದುಳಿದ ಇತಿಹಾಸದ ಪುಟಗಳು ತೆರೆದುಕೊಳ್ಳಲು ಮೂಲ ಸಂಶೋಧನಕಾರರ ಅವಶ್ಯಕತೆ ಬಹಳಷ್ಟಿದೆ. ಇದರಿಂದ ಇತಿಹಾಸ ಮರು ಜೀವ ಪಡೆಯಲು ಸಾಧ್ಯವಾಗುತ್ತದೆ ಎನ್ನುವುದಕ್ಕೆ ಇಲ್ಲೊಂದು ನಾರಾಯಣಪೂರ ವಾಸ್ತುಶಿಲ್ಪ ಕಲೆಗಳ ಪುಸ್ತಕವು ಸಾಕ್ಷೀಕರಿಸುತ್ತದೆ.

ಇಂತಹ ಒಂದು ಅಪರೂಪದ ಇತಿಹಾಸದ ಕುರಿತು ಬರೆಯಲ್ಪಟ್ಟ ಪುಸ್ತಕವು ವೀರಶೆಟ್ಟಿ ಎಂ. ಪಾಟೀಲ್್ ಎನ್ನುವವರು ಸತತ ಅಧ್ಯಯನ ಹಾಗೂ ತಿರುಗಾಟದಿಂದ ಅವರಲ್ಲಿರುವ ಕ್ರಿಯಾಶೀಲತೆ ಎತ್ತಿ ಹಿಡಿದಿದ್ದಾರೆ. ಪಾಟೀಲರ ಮೂಲ ವೖತ್ತಿ ಛಾಯಾಚಿತ್ರಕಾರರಾಗಿದ್ದಾರೆ. ಇವರು ಚಿತ್ರ ಕಲಾವಿದರೂ ಹೌದು. ಅನೇಕ ಇತಿಹಾಸದ ದೖಷ್ಠಾಂತ ಗಳನ್ನು ತಮ್ಮ ನಾರಾಯಣಪೂರ ವಾಸ್ತುಶಿಲ್ಪ ಕಲೆಗಳ ಪುಸ್ತಕದಲ್ಲಿ ಸೆರೆ ಹಿಡಿದಿರುವುದು ಕಂಡು ಬರುತ್ತದೆ.

ಐತಿಹಾಸಿಕ ಸ್ಮಾರಕಗಳ ಬಗ್ಗೆ ತೀವ್ರ ಹುಡುಕಾಟ ನಡೆಸಿದ ಬಳಿಕ ಒಂದು ಗೖಂಥದ ರೂಪದಲ್ಲಿ ಹೊರ ತರುವಲ್ಲಿ ಪ್ರಯತ್ನಿಸಿದ್ದು ಸ್ವಾಗತಾಹ೯ವಾಗಿದೆ. ಪುಸ್ತಕದ 10-11 ನೇ ಪುಟದಲ್ಲಿ ಲೇಖಕರು ಹೇಳಿರುವಂತೆ 21 ಯುಗಗಳಲ್ಲಿ ವಿಶ್ವಗುರು ಬಸವಣ್ಣನವರು ಹುಟ್ಟಿ ಬಂದಿದ್ದಾರೆ ಎಂದು ಉಲ್ಲೇಖಿಸಿದ್ದಾರೆ.

ತಳಂಧರ ಯುಗದಲ್ಲಿ ಬಸವಣ್ಣನವರ ಹೆಸರು ನಿಃಶೂನ್ಯನೆಂಬ ಗಣೇಶ್ವರ, ಗುರವಿನ ಹೆಸರು ಪ್ರಕಾಶನೆಂಬ ಪ್ರಭು, ಲಿಂಗದ ಹೆಸರು ಸ್ವಯಂಜ್ಯೋತಿ ಲಿಂಗ, ವಿಮಲಾಪೂರ ಎಂಬುದು ಈಗಿನ ಬಸವಕಲ್ಯಾಣಕ್ಕೆ ಪ್ರಾರಂಭದ ಹೆಸರಾಗಿತ್ತು ಎಂದು ಆಯಾ ಯುಗಗಳಲ್ಲಿ ಬಸವಣ್ಣನವರಿಗೆ ಇದ್ದ ಕಾವ್ಯನಾಮಗಳನ್ನು ಸಹ ಸೂಚಿಸಿ, ಕಲಿಯುಗದಲ್ಲಿ ಬಸವನೆಂಬ ಗಣೇಶ್ವರ ಇತ್ತೆಂದು ದಾಖಲಿಸಿದ್ದಾರೆ.

ಇಂತಹ ಅಪರೂಪದ ಪ್ರಯತ್ನ ನಡೆಸಲು ಬಸವಕಲ್ಯಾಣ ತಾಲೂಕಿನ ಗೋಟಾ೯ ಗ್ರಾಮದ ರುದ್ರಮುನಿ ವಿಶ್ವನಾಥಯ್ಯ ಮಠಪತಿ ಸಹಕರಿಸಿದ್ದಾರೆ ಎನ್ನುವ ಲೇಖಕರು, ಗೋಟಾ೯ದ ಮಠಪತಿ ಅವರಲ್ಲಿರುವ ಮೂಲ ಹಸ್ತಪ್ರತಿಗಳಲ್ಲಿ ಬಸವಣ್ಣನವರು ಆಯಾ ಕಾಲ, ಯುಗಗಳಲ್ಲಿ ಹುಟ್ಟಿ ಬಂದಿರುವ ಬಗ್ಗೆ ತಾಡೊಲೆಗಳಲ್ಲಿ ಬರೆದಿರುವುದನ್ನು ಸ್ಪಷ್ಟವಾಗಿ ಕಂಡು ಬಂದಿರುತ್ತದೆ ಎಂದು ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ.

ಆಯಾ ಯುಗಗಳಲ್ಲಿ ಬಸವಣ್ಣನವರಿಗೆ ಇದ್ದ ಮೂಲ ಹೆಸರು, ಗುರುವಿನ ಹೆಸರು, ಕಾವ್ಯನಾಮ ಲಿಂಗದ ಹೆಸರು ಮತ್ತು ಈಗಿನ ಬಸವಕಲ್ಯಾಣಕ್ಕೆ ಇಪ್ಪತ್ತೊಂದು ಶತಮಾನಗಳಲ್ಲಿ ಕರೆಯಲ್ಪಟ್ಟ ಬೇರೆ ಬೇರೆ ಹೆಸರುಗಳ ಸಮೇತ ನಾರಾಯಣಪೂರ ವಾಸ್ತುಶಿಲ್ಪ ಕಲೆಗಳ ಪುಸ್ತಕದಲ್ಲಿ ಸವಿವರವಾಗಿ ಸಿಗುವಂತೆ ವೀರಶೆಟ್ಟಿ ಪಾಟೀಲ ಅವರು ದಾಖಲಿಸಿದ್ದಾರೆ.

12ನೇ ಶತಮಾನದ ಮಹಾಮಾನವತಾವಾದಿ ಬಸವಣ್ಣನವರು ಹಿಂದಿನ ಎಲ್ಲಾ ಯುಗಗಳಲ್ಲಿ ಹುಟ್ಟಿ ಬಂದವರು. ಹದಿನೈದನೇ ಯುಗ ಎನ್ನಲಾದ ವಿಶ್ವಾಸು ಯುಗದಲ್ಲಿ ಬಸವಣ್ಣನವರು ಇದೇ ನಾರಾಯಣಪೂರದಲ್ಲಿ ಹುಟ್ಟಿ ಬಂದಿದ್ದರು. ಆಗ ಬಸವಣ್ಣನವರ ಹೆಸರು ಹಂಸನೆಂಬ ಗಣೇಶ್ವರ, ಇವರ ಗುರುಗಳು ಪರಮಹಂಸ ಹಾಗೂ ಅವರ ಲಿಂಗದ ಹೆಸರು ಪ್ರಾಣಲಿಂಗ ಎಂದು ತಿಳಿಯುತ್ತದೆ ಎಂದು ಪು-12 ರಲ್ಲಿ ಪ್ರಸ್ತಾಪಿಸಿದ್ದಾರೆ.

ನಾರಾಯಣಪೂರ ಗ್ರಾಮವೂ ಕಲ್ಯಾಣ ಚಾಲುಕ್ಯರ ತವರೂರು ಎಂದೇ ಪ್ರಸಿದ್ಧಿ ಪಡೆದಿದೆ. ನಾರಾಯಣಪೂರದ ದಕ್ಷಿಣಕ್ಕೆ ಶ್ರೀಮನ್್ ನಾರಾಯಣ(ವಿಷ್ಣು) ದೇವಾಲಯ ಇತ್ತೆಂದು ಹೇಳಲಾಗುತ್ತದೆ. ಈಗಿದು ಪೂತಿ೯ ಶಿಥಿಲಗೊಂಡಿದೆ. ಈಗಿಲ್ಲಿ ಮಸೀದಿಯೊಂದು ನಿಮಾ೯ಣವಾಗಿದ್ದು, ದೇವಸ್ಥಾನದಿಂದಲೇ ಊರಿಗೆ ನಾರಾಯಣಪೂರ ಎಂಬ ಹೆಸರು ಬಂದಿರಬಹುದೆಂದು ಪು-13 ರಲ್ಲಿ ಊಹಿಸುತ್ತಾರೆ.

ಹೀಗೆ ನಾರಾಯಣಪೂರ ವಾಸ್ತುಶಿಲ್ಪ ಕಲೆಗಳ ಪುಸ್ತಕ ಒಟ್ಟು 69 ಪುಟಗಳಲ್ಲಿ 2011 ನೇ ಸಾಲಿನಲ್ಲಿ ಪ್ರಕಟಗೊಂಡಿದೆ. ಇದೇ ಮಾ. 12 ರಂದು ಮಂಠಾಳ ವಲಯ ಜಾನಪದ ಪರಿಷತ್್ ಉದ್ಘಾಟನಾ ಸಮಾರಂಭದಲ್ಲಿ ಕೖತಿ ಬಿಡುಗಡೆ ಮಾಡಲಾಗುತ್ತಿದೆ. ಕಲ್ಯಾಣದಲ್ಲಿ ಚಾಲುಕ್ಯರು ಆಳಿದ ಅನೇಕ ಕುರುಹುಗಳು ಇತಿಹಾಸಕಾರರು ನಿಬ್ಬೆರಗಾಗುವಂತೆ ನೋಡುವುದರಲ್ಲಿ ಸಂದೇಹವಿಲ್ಲ.

ಶಿಲ್ಪಕಲೆಗಳಲ್ಲಿ ಇರುವ ಕಲಾ ಕುಸುರಿಗಳು ಮಹಾಭಾರತದ ಕಥೆಯನ್ನೇ ಹೇಳುವಂತಿದೆ. ಕಲ್ಯಾಣ ಚಾಲುಕ್ಯರ ಆಳ್ವಿಕೆಯಲ್ಲಿ ಹಂತ ಹಂತವಾಗಿ ಕಲಾಕುಸುರಿಗಳು ವೖದ್ಧಿಯಾದಂತೆ ಕಾಣುತ್ತದೆ. 3ನೇ ಸೋಮೇಶ್ವರನು ಅರಸನಷ್ಟೇ ಅಲ್ಲದೇ ಕವಿಯೂ ಆಗಿದ್ದನು ಎಂದು ಪು-25 ರಲ್ಲಿ ಉಲ್ಲೇಖಿಸಿರುವ ಲೇಖಕರು ಅನೇಕ ಅರಸರುಗಳ ಮಾಹಿತಿಗಳ ಸಮೇತ ಇತಿಹಾಸವನ್ನು ಕೆದಕಿ ನೋಡಿದ್ದಾರೆ.

ನಾರಾಯಣಪೂರ ಶಿವ ದೇವಾಲಯದಲ್ಲಿರುವ ಅಪರೂಪದ ಇಷ್ಟ ಲಿಂಗಾಚ೯ನೆಯ ಶಿವ ಶಿಲ್ಪಕ್ಕೆ ಕೖತಿ ಅಪಿ೯ಸುವುದರ ಮೂಲಕ ಇತಿಹಾಸದ ವೈಭವವನ್ನು ಸಾರುವ 39 ಚಿತ್ರಗಳ ಸಮೇತವಾಗಿ ಉತ್ತಮವಾದ ಗೖಂಥವನ್ನು ರಚಿಸಿ ಓದುಗರ ಕೈಗಿಟ್ಟಿದ್ದಾರೆ. ಹೆಚ್ಚಿನ ಸಂಶೋಧನೆಗೆ ಇತಿಹಾಸಕಾರರಿಗೆ ಅನುಕೂಲವನ್ನು ಮಾಡಿಕೊಡುವಲ್ಲಿ ಸಹಕರಿಸುತ್ತದೆ ಎನ್ನಬಹುದು.

ಮಹತ್ವಪೂಣ೯ವಾದ ನಾರಾಯಣಪೂರ ವಾಸ್ತುಶಿಲ್ಪ ಕಲೆಗಳ ಪುಸ್ತಕದಲ್ಲಿ ದಾಖಲಾದ ಮಾಹಿತಿಯಂತೆ ಬಸವಕಲ್ಯಾಣ ಅಭಿವೖದ್ಧಿ ಪ್ರಾಧಿಕಾರ ಮಂಡಳಿ ನಾರಾಯಣಪೂರ ಗ್ರಾಮದತ್ತ ಚಿತ್ತ ಹರಿಸಬೇಕಾದ್ದು ಅವಶ್ಯವಾಗಿದೆ. ನಾರಾಯಣಪೂರ ಕೆರೆಯ ಬಗ್ಗೆ ಕೂಡ ವಿವರಗಳಿವೆ. ಗೊತ್ತಿಲ್ಲದೇ ಮಣ್ಣಿನಲ್ಲಿ ಮುಚ್ಚಿ ಹೋದ ಇತಿಹಾಸದ ಕುರುಹುಗಳ ಬಗ್ಗೆ ಸ್ಪಷ್ಟ ಚಿತ್ರಣವನ್ನು ನೀಡಿದ್ದಾರೆ.