ಮಂಗಳವಾರ, ಜುಲೈ 26, 2011

ಸಕಾ೯ರದ ಮಹತ್ವದ ಯೋಜನೆಗಳಲ್ಲಿ ಸೈಕಲ್ ವಿತರಣೆ ಮಾಡಿರುವುದ ಸೂಕ್ತ, ಆದರೆ ನಿಲ್ಲಿಸಲು ಸ್ಥವಿಲ್ಲದೇ ಶಾಲೆಯ ಮುಂಭಾಗ ಮುಖ್ಯರಸ್ತೆಯ ಮುಂದೆ ನಿಲ್ಲಿಸಿರುವುದರಿಂದ ಪ್ರಯಾಣಿಕರಗಾಗುತಿರುವ ತೊಂದರೆ.


ಶಾಲೆಗಳಲ್ಲಿ ಸೈಕಲ್ ನಿಲ್ಲಿಸಲು ಜಾಗವಿಲ್ಲದೇ ಮುಖ್ಯರಸ್ತೆಗಳಲ್ಲಿ ನಿಲ್ಲಿಸುವ ಅವಾಂತರಃ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹರಿಸಲಿ ಇತ್ತ-ಚಿತ್ತ!
ವೀರಣ್ಣ ಮಂಠಾಳಕರ್, ಬಸವಕಲ್ಯಾಣ

ಬಸವಕಲ್ಯಾಣಃ ಜು,25 ಸಕಾ೯ರ ಪ್ರೌಢ ಶಾಲಾ ವಿದ್ಯಾಥಿ೯-ವಿದ್ಯಾಥಿ೯ನಿಯರಿಗೆ ನೀಡುತಿರುವ ಸೈಕಲ್ ವಿತರಣೆ ಉತ್ತಮವಾದ ಬೋಜನೆಗಳಲ್ಲಿ ಒಂದಾಗಿದೆ ಎಂಬ ಖುಷಿಯ ವಿಚಾರ ಸಂಗತಿ ಒಂದೆಡೆಯಾದರೆ ಕೆಲವೊಂದು ಶಾಲೆಗಳಲ್ಲಿ ಸೈಕಲ್ ನಿಲ್ಲಿಸಲು ಜಾಗವಿಲ್ಲದೇ ಸಾವ೯ಜನಿಕ ಮುಖ್ಯ ರಸ್ತೆಗಳಲ್ಲಿ ನಿಲ್ಲಿಸುವಂಥ ಪರಿಸ್ಥಿತಿ. ಇದರಿಂದ ವಾಹನಗಳ ಸವಾರರಿಗೂ ಅಡಚಣೆ, ಪಾದಚಾರಿಗಳಿಗೂ ಕಿರಿಕಿರಿಯಾಗಿ ನಿತ್ಯವೂ ಕಿಕ್ಕಿರಿದು ನಿಲ್ಲುವ ಸೈಕಲ್ ಗಳ ಮಧ್ಯೆಯಿಂದ ದಾಟಿ ಹೋಗುವುದೇ ಹರಸಾಹಸದ ಕೆಲಸವಾಗಿದೆ.

ಇಂತಹ ಅವಾಂತರಕ್ಕೆ ಎದುರಾಗಿದ್ದು ಬೇರೆಲ್ಲೂ ಅಲ್ಲ ಬಸವಕಲ್ಯಾಣ ನಗರದ ಪ್ರಮುಖವಾದ ಅಂಬೇಡ್ಕರ್ ವ್ರತ್ತದಲ್ಲಿ. ಇಲ್ಲಿಂದಲೇ ಮುಖ್ಯ ಬಸ್ ನಿಲ್ದಾಣಕ್ಕೆ ಹೋಗುವ ಮೇನೆ ರೋಡ್ಗೆ ಅಂಟಿಕೂಂಡಿರುವ ಸಕಾ೯ರಿ ನೀಲಾಂಬಿಕಾ ಬಾಲಕಿಯರ ಪದವಿಪೂವ೯ ಕಾಲೇಜ್ ಮತ್ತು ಪ್ರೌಢಶಾಲೆಯ ಎದುರಿಗೆ ಕಂಡು ಬರುತದೆ. ಸೈಕಲ್...ಸೈಕಲ್....ಬೈಸಿಕಲ್ ಗಳು ಇದೇನು ಸೈಕಲ್ ಮಾರಾಟದ ಅಂಗಡಿಯೋ ಎಂಬಂತೆ ಒಂದು ಕ್ಷಣ ಹೊಸಬರಿಗನಿಸದೇ ಇರಲಾರದು.

ಇಲ್ಲಿಂದ ಪ್ರಯಾಣಿಸುವ ವಾಹನಗಳಿಗೂ ಪಾದಚಾರಿಗಳಿಗೂ ಮುಖ್ಯ ರಸ್ತೆಗೆ ಅಂಟಿಕೊಂಡು ಸಾಲಾಗಿ ನಿಂತಿರುವ ವಿದ್ಯಾಥಿ೯ನಿಯರ ಸೈಕಲ್ ಗಳಿಗೆ ಪ್ರತ್ಯೇಕವಾದ ಸ್ಟ್ಯಾಂಡ್ ಇಲ್ಲದೇ ಪರಿತಪಿಸುವಂತಾಗಿದೆ. ಅದಕ್ಕಾಗಿ ಸಾವ೯ಜನಿಕ ಸ್ಥಳದಲ್ಲಿ ನಿಲ್ಲಿಸುವಂಥ ಅನಿವಾಯ೯ ಆಗಿರುವುದರಿಂದ ಅವಾಂತರವನ್ನು ಸ್ರಷ್ಟಿಸಿ ಅಪಘಾತಗಳಿಗೆ ಎಡೆಮಾಡಿಕೊಡುವಂತಿದೆ. ಇಷ್ಟಕ್ಕೂ ಸಂಬಂಧಪಟ್ಟ ಶಿಕ್ಷಕ ವ್ರಂದವಾಗಲಿ, ಶಿಕ್ಷಣ ಇಲಾಖೆಯ ಕ್ಷೇತ್ರ ಶಿಕ್ಷಣಾಧಿಕಾರಿಗಳು ಇತ್ತ ಗಮನ ಹರಿಸದೇ ಇರುವುದು ಎಂಥ ದುರಂತವಾಗಿದೆ ಎಂದು ನಿತ್ಯವೂ ಓಡಾಡುವವರ ಗೋಳಾಗಿದೆ.

ಇಂಥದೇ ಸಮಸ್ಯೆಗಳು ಹಲವು ಶಾಲೆಗಳಲ್ಲಿದ್ದರೂ ಬಸವಕಲ್ಯಾಣ ನಗರದ ಮುಖ್ಯ ರಸ್ತೆಯಲ್ಲೇ ಸೈಕಲ್ ಗಳಿಗೊಂದು ತಾಣವನ್ನಾಗಿಸುವ ಸಂದಿಗ್ಧತೆ ಎದುರಾಗಿದೆ. ಇಲ್ಲಿಂದ ನಿತ್ಯವೂ ಓಡಾಡುವ ಜನರಿಗೆ ತೀರಾ ಕಿರಿಕಿರಿ ಉಂಟು ಮಾಡುತಿದೆ. ಅಷ್ಟೇ ಅಲ್ಲದೇ ಇದೇ ಶಾಲೆಯ ಮುಂಭಾಗದಲ್ಲಿ ಬಸ್ ಗಳಿಗಾಗಿ ಕಾದು ನಿಲ್ಲುವ ಪ್ರಯಾಣಿಕರಿಗೆ ಅಡ್ಡಡ್ಡವಾಗಿ ನಿಂತ ಸೈಕಲ್ ಗಳು ಅವಸರದ ಕಾಲುಗಳಿಗೆ ಎಡತಾಕುತವೆ.

ಶಾಲೆಗೆ ಕಂಪೌಂಡ್ ಗೋಡೆ ಮತ್ತು ಗೇಟ್ ಇರುವುದರಿಂದ ಒಳಗೆ ನುಗ್ಗಿಸಲು ಆಗದೇ ಹೊರಗಡೆಯೇ ನಿಲ್ಲಿಸುವಂಥ ಪರಿಸ್ಥಿತಿ. ಎಲ್ಲರನ್ನು ಮುಜುಗರಗೊಳಪಡಿಸು ಸ್ಥಿತಿಯಲ್ಲಿರುವ ಜನರು ಶಾಲೆಯ ಮುಖ್ಯೋಪಾದ್ಯಯರಲ್ಲಿ ದೂರಿದಿದೆ. ಅದಕ್ಕೆ ಅವರು ನೀಡು ಉತ್ತರ, ಏನ್ ಮಾಡೇದ್ರಿ ಶಾಲೆ ಒಳಗಡೆ ಜಾಗವಿಲ್ಲ. ಇಕ್ಕಟ್ಟಿನ ಪರಿಸ್ಥಿತಿಯಲ್ಲಿ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗುತದೆಂದು ಹೊರಗಡೆ ನಿಲ್ಲಿಸಬೇಕಾಗುತದೆ. ಅದಕ್ಕೆ ಪಯಾ೯ಯ ವ್ಯವಸ್ಥೆ ಮಾಡುವವರಿಗೆ ಚಿಂತೆವಿಲ್ಲ ನಾವೇನು ಮಾಡೋದು ಎಂದು ಜಾರಿಕೊಳ್ಳುತ್ತಾರೆ.

ಯಾವುದಕ್ಕೂ ಮುಖ್ಯ ರಸ್ತೆಯಲ್ಲಿ ವಾಹನಗಳಿಗೂ, ಪಾದಚಾರಿಗಳಿಗೂ, ನಿತಯವೂ ಪ್ರಯಾಣಿಸುವ ಪ್ರಯಾಣಿಕರಿಗೂ ತೀರಾ ಅಡ್ಡಿಯುಂಟು ಮಾಡುತಿರುವ ಶಾಲೆ ಮುಂಭಾಗದಲ್ಲಿ ನಿಲ್ಲಿಸಿರುವ ಸೈಕಲ್ ಗಳಿಗೆ ಪಯಾ೯ಯ ವ್ಯವಸ್ಥೆಯನ್ನು ಮಾಡಿದರೆ ಉತ್ತಮವಾಗುತ್ತದೆ. ಇಲ್ಲವಾದರೆ ಕಿಕ್ಕಿರಿದು ಓಡಾಡುವ ವಾಹನಗಳಿಂದ ಸಾವ೯ಜನಿಕರಿಗೂ ತೊಂದರೆ, ಶಾಲಾ ಮಕ್ಕಳಿಗೂ ತೊಂದರೆಯುಂಟಾಗಿ ಪರಿಸ್ಥಿತಿ ವಿಕೋಪಕ್ಕೆ ತಿರುಗುವಂಥ ವಾತಾವರಣ ಇಲ್ಲಿ ನಿಮಾ೯ವಾಗಿದೆ.

ಸಂಬಂಧಪಟ್ಟ ಶಿಕ್ಷಣ ಇಲಾಖೆಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಸಕಾ೯ರಿ ನೀಲಾಂಬಿಕಾ ಬಾಲಕೀಯರ ಪ್ರೌಢ ಶಾಲೆಯಿಂದ ಕೆಲವೇ ಅಂತರದಲ್ಲಿದ್ದರೂ ನಿಲ೯ಕ್ಷಿಸಲಾಗುತಿದೆ. ಜನಪ್ರತಿನಿಧಿಗಳ ನಿಲ೯ಕ್ಷತನವೂ ಇಂತಹ ಸಮಸ್ಯೆಗಳಿಗೆ ಕಾರಣವಾಗುತಿದೆ ಎನ್ನಲಾಗುತಿದೆ. ಒಟ್ಟಿನಲ್ಲಿ ವಿದ್ಯಾಥಿ೯ನಿಯರ ಸೈಕಲ್್ ಗಳಿಗೆ ನಿಲ್ಲಲು ಪಯಾ೯ಯ ವ್ಯವಸ್ಥೆ ಮತ್ತು ಸಾವ೯ಜನಿಕರಿಗೂ ಮತ್ತು ವಾಹನಗಳಿಗೂ ಆಗುತಿರುವ ತೊಂದರೆ ನೀಗಿಸಲು ಇಲಾಖೆ ಮುಂದಾಗಬಹುದೇ ಎಂದು ಕಾದು ನೋಡಬೇಕಷ್ಟೆ

ಮಕ್ಕಳ ಶೈಕ್ಷಣಿಕ ವಿದ್ಯಾಭ್ಯಾಸ ವಿಕಾಸಗೊಳ್ಳುವುದಾದರೂ ಹೇಗೆ

ಮಾಜಿ ಶಾಸಕ ಮಲ್ಲಿಕಾಜು೯ನ ಖೂಬಾ
ಮಕ್ಕಳ ಶೈಕ್ಷಣಿಕ ವಿದ್ಯಾಭ್ಯಾಸ ವಿಕಾಸಗೊಳ್ಳುವುದಾದರೂ ಹೇಗೆ..? ಮಾಜಿ ಶಾಸಕ ಮಲ್ಲಿಕಾಜು೯ನ ಖೂಬಾ ಕಳವಳ


ವೀರಣ್ಣ ಮಂಠಾಳಕರ್
ಬಸವಕಲ್ಯಾಣಃ ಜು,25ಃ ತಾಲೂಕಿನಾದ್ಯಂತ ಇರುವ ಸಕಾ೯ರಿ ಪ್ರಾಥಮಿಕ ಮತ್ತು ಪ್ರೌಢ 67 ಶಾಲೆಗಳಲ್ಲಿ ಗರಿಷ್ಠಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಒಂದೇ ಕೋಣೆಯಲ್ಲಿ ನೂರರಿಂದ ನೂರಿಪ್ಪತ್ತು ಮಕ್ಕಳು ಕುಳಿತುಕೊಂಡು ವಿದ್ಯಾಭ್ಯಾಸ ಮಾಡುತಿರುವುದು ಕಂಡು ಬರುತಿದೆ. ಇದರಿಂದ ಕುಂಠಿತಗೊಳ್ಳುತಿರುವ ಮಕ್ಕಳ ಶೈಕ್ಷಣಿಕ ವಿದ್ಯಾಭ್ಯಾಸ ವಿಕಾಸಗೊಳ್ಳುವುದಾದರೂ ಹೇಗೆ ಎಂದು ಮಾಜಿ ಶಾಸಕ ಮಲ್ಲಿಕಾಜು೯ನ ಖೂಬಾ ವಾಗ್ದಾಳಿ ನಡೆಸಿದರು.

ಅವರು ಸೋಮವಾರ ಕರೆದಿದ್ದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತ, ಈ ಹಿಂದೆ ಪ್ರೌಢ ಶಿಕ್ಷಣ ಇಲಾಖೆಯ ಸಚಿವರಾಗಿ ಹಲುವು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಶಾಸಕ ಬಸವರಾಜ ಪಾಟೀಲ ಅಟ್ಟೂರ್ ಅವರಿಗೆ ಮಕ್ಕಳ ಭವಿಷ್ಯದ ಬಗ್ಗೆಯಾಗಲಿ, ಶೈಕ್ಷಣಿಕ ಅಭಿವ್ರದ್ಧಿ ಹಾಗೂ ಅವರ ಮೇಲೆ ವಿಶ್ವಾಸವನ್ನಿಟ್ಟು ಆರಿಸಿ ತಂದಿರುವ ಸಾವ೯ಜನಿಕರ ಬಗ್ಗೆ ಕಿಂಚಿತ್ತು ಕಾಳಜಿ ಇಲ್ಲ, ಜನರ ಕಣ್ಣಿಗೆ ಮಣ್ಣೆರಚಿ ಭ್ರಷ್ಟಾಚಾರ ಎಸಗುತಿರುವ ಅಧಿಕಾರಿಗಳನ್ನು ಬೆಂಬಲಿಸುತ್ತಾ ತಾಲೂಕಿನ ಅಭಿವ್ರದ್ಧಿ ಕಾಯ೯ಗಳಿಗೆ ಹಿನ್ನಡೆ ತರುತಿದ್ದಾರೆ ಎಂದು ಆರೋಪಿಸಿದರು.

ಸಕಾ೯ರದ ಆದೇಶದಂತೆ ಪ್ರಾಥಮಿಕ ಶಾಲೆಯ ಒಂದು ಕೋಣೆಯಲ್ಲಿ 40 ವಿದ್ಯಾಥಿ೯ಗಳು ಮತ್ತು ಪ್ರೌಢ ಶಾಲಾ ಕೋಣೆಗಳಲ್ಲಿ 60ರಿಂದ 70 ವಿದ್ಯಾಥಿ೯ಗಳಿರಬೇಕೆಂಬ ನಿಯಮಗಳಿದ್ದರೂ ನಿಯಮ ಬಾಹಿರವಾಗಿ ನೂರರಿಂದ ನೂರಿಪ್ಪತ್ತು ವಿದ್ಯಾಥಿ೯ಗಳು ಒಂದೇ ಕೋಣೆಯಲ್ಲಿ ಕುಳಿತುಕೊಳ್ಳುವಂಥ ಪರಿಸ್ಥಿತಿ ಶಾಲೆಗಳಲ್ಲಿ ಎದುರಾಗಿದೆ. ಆದರೂ ಇತ್ತ ಲಕ್ಷ ವಹಿಸದ ಶಾಸಕರು ಮಕ್ಕಳ ಭವಿಷಯವನ್ನು ಉಜ್ವಲಗೊಳಿಸುವುದರಲ್ಲಿ ಆಸಕ್ತಿ ಹೊಂದಿಲ್ಲ ಎಂಬುದು ಸ್ಪಷಟವಾಗಿ ಗೊತ್ತಾಗುತ್ತದೆ.

ಮಿತಿಮೀರಿದ ಮಕ್ಕಳನ್ನು ಬೋಧನೆ ಮಾಡುವ ಶಿಕ್ಷಕರು ಮಕ್ಕಳಿಗೆ ಉತ್ತಮವಾದ ವಿದ್ಯಾಭ್ಯಾಸ ನೀಡಲು ತಡಕಾಡುವಂಥ ವಾತಾವರಣ ಇಲ್ಲಿದೆ. ಆದ್ದರಿಂದ ಶೈಕ್ಷಣಿಕ ವಿದ್ಯಾಭ್ಯಾಸವನ್ನು ಮಕ್ಕಳ ತಲೆಗೆ ಹತ್ತದೇ ಅರಳಬೇಕಾದ ಅವರ ಭವಿಷ್ಯವನ್ನು ಕುಂಠಿತಗೊಳ್ಳುತಿದೆ. ಇಂತಹ ಅನೇಕ ಕಡೆಗಳಲ್ಲಿ ಸಮಸ್ಯೆಗಳನ್ನು ಎದುರಿಸುತಿರುವ ಶಾಲೆಗಳಲ್ಲಿ ಶಿಕ್ಷಣ ಬಡವಾದರೆ ಮಕ್ಕಳ ಭವಿಷ್ಯದ ಗತಿಯೇನು ಎಂದು ಪ್ರಶ್ನಿಸಿದರು.

ಹಾಲಿ ಶಾಸಕರಾದ ಬಸವರಾಜ ಪಾಟೀಲ ಅಟ್ಟೂರ್ ಅವರ ಲಕ್ಷವನ್ನು ಅಭಿವ್ರದ್ಧಿಯತ್ತ ಕಾಣದೇ ಹಣದ ಬೆನ್ನತ್ತಿ ಹೊರಟಿದ್ದಾರೆ. ಹಣ ಆಸ್ತಿ ಸಂಪಾದನೆಯಲ್ಲಿ ಮೀಸಲಾಗಿಟ್ಟು ಸ್ವಾಥ೯ಕ್ಕಾಗಿ ಮಾತ್ರ ರಾಜಕೀಯದಲ್ಲಿ ಆಸಕ್ತಿ ಹೊಂದಿದ್ದಾರೆ. ಒಳ್ಳೆಯವರೆಂದು ಜನ ಆರಿಸಿ ತಂದಿರುವುದಕ್ಕೆ ಜನರ ವಿಶ್ವಾಸವನ್ನೇ ಕಳೆದುಕೊಳ್ಳುತಿರುವ ಇವರು ಈಗಾಗಲೆ 37 ತಿಂಗಳು ಅಧಿಕಾರ ನಡೆಸಿದ್ದಾರೆ. ಜನರ ಸಮಸ್ಯೆಗಳಿಗೆ ಎಷ್ಟರ ಮಟ್ಟಿಗೆ ಸ್ಪಂಧಿಸುತ್ತಾರೆಂಬುದಕ್ಕೆ ಇನ್ನೊಂದು ತಿಂಗಳು ಅವರಿಗೆ ಅವಕಾಶ ಕೊಟ್ಟು ನೋಡುತ್ತೇನೆ.

ನಾನು ಶಾಸಕನಾಗಿ 39 ತಿಂಗಳುಗಳಲ್ಲಿ ತಾಲೂಕಿನ ಗ್ರಾಮ ಮಟ್ಟದ ಜನತೆಯ ಸಮಸ್ಯೆಗಳಿಗೆ ಸ್ಪಂಧಿಸಿ, ಗ್ರಾಮಗಳಿಗೆ ಭೇಟಿಕೊಟ್ಟು ಪರಿಹಾರ ಒದಗಿಸಿದ್ದೇನೆ. ಅದೇ ರೀತಿ ಶಾಸಕ ಅಟ್ಟೂರ್ ಅವರು ಅಷ್ಟೇ ಸಮಯದಲ್ಲಿ ಎಷ್ಟು ಜನರ ಸಮಸ್ಯೆಗಳಿಗೆ ಸ್ಪಂಧಿಸಿದ್ದಾರೆ ಮತ್ತು ಅದೇಷ್ಟು ಗ್ರಾಮಗಳಿಗೆ ಭೇಟಿ ನೀಡಿದ್ದಾರೆಂಬುದು ನನ್ನ ಬಳಿ ಲೆಕ್ಕ ಇದೆ. ಅವರು ಮಾಡಿರುವ ಅಭಿವ್ರದ್ಧಿ ಕಾಯ೯ದ ತೂಕ ಮಾಡಿ ನೋಡುವಂಥ ಕಾಲ ಈಗ ಬಂದಿದೆ. ನಾನೇನು ಮಾಡಿದ್ದೇನೆ, ಅಟ್ಟೂರ್ ಅವರು ಏನು ಮಾಡಿದ್ದಾರೆ ಮತ್ತು ಮಾಜಿ ಶಾಸಕ ಎಂಜಿ.ಮುಳೆ ಏನು ಮಾಡಿದ್ದಾರೆಂಬುದಕ್ಕೆ ಸಮಗ್ರವಾದ ಚಚೆ೯ ನಡೆಸಲು ನಗರದ ಗಾಂಧಿ ಚೌಕ್ ನಲ್ಲಿ ಹೋರಾಟವನ್ನು ಬಸವಕಲ್ಯಾಣದಲ್ಲಿ ನಡೆಸುತ್ತೇವೆ.

ಇನ್ನು ಮುಂದೆ ಜನರ ಸಮಸ್ಯೆಗಳೇನು, ಯಾವ ಇಲಾಖೆಗಳಿಂದ ಯಾವ ಕೆಲಸಗಳು ಹೇಗೆ, ಯಾವಾಗ ಮಾಡಿಸಿಕೊಳ್ಳಬೇಕೆಂಬುದರ ಕುರಿತ ಜಾಗ್ರತಿಯನ್ನು ಮೂಡಿಸುವ ಕಾಯ೯ಕ್ರಮಗಳನ್ನು ಜೆಡಿಎಸ್ ಪಕ್ಷದಿಂದ ಹಮ್ಮಿಕೊಂಡಿದ್ದೇವೆ. ಹಳ್ಳಿ ಹಳ್ಳಿಗಳಿಗೆ ಹೋಗಿ ಕಾನೂನು ಅರಿವು ಜನಜಾಗ್ರತಿ ಮೂಡಿಸುವಂಥ ಕಾಯ೯ಕ್ರಮಗಳೊಂದಿಗೆ ನಿರಂತರ ಜನಸ್ಪಂಧನ ಕಾಯ೯ಕ್ರಮಗಳು ಹೇಗೆ ನಡೆಸಬೇಕೆಂಬು ನಾವು ಜೆಡಿಎಸ್ ಪಕ್ಷದ ನೇತ್ರತ್ವದಲ್ಲಿ ತೋರಿಸಿ ಕೊಡುತ್ತೇವೆ ಎಂದರು. ಪತ್ರಿಕಾ ಗೋಷ್ಠಿಯಲ್ಲಿ ದಿಲೀಪಗೀರ್ ಕಿಟ್ಟಾ, ಮದನೆ ಉಪಸ್ಥಿತರಿದ್ದರು

ಗುರುವಾರ, ಜುಲೈ 14, 2011

ಬಟಗೇರಾ ಸರಕಾರಿ ಪ್ರೌಢ ಶಾಲೆಯಲ್ಲಿ ಕಳೆದ ಒಂದು ವಷ೯ದಿಂದ ಶಿಕ್ಷಕರ ಕೊರತೆ


ಬಸವಕಲ್ಯಾಣ ತಾಲೂಕಿನ ಬಟಗೇರಾದಲ್ಲಿ  ಶಿಕ್ಷಕರ ಕೊರತೆಯನ್ನು ನೀಗಿಸಬೇಕೆಂದು ಒತ್ತಾಯಿಸಿ ಶಾಲಾ ಮಕ್ಕಳು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಎದುರಲ್ಲಿ ರಸ್ತೆ ತಡೆ ನಡೆಸಿ ತಮ್ಮ ಪಾಲಕರೊಂದಿಗೆ ಪ್ರತಿಭಟನೆ ಮಾಡಿದರು.

  ವೀರಣ್ಣ ಮಂಠಾಳಕರ್,

ಬಸವಕಲ್ಯಾಣಃ ತಾಲೂಕಿನ ಬಟಗೇರಾ ಸರಕಾರಿ ಪ್ರೌಢ ಶಾಲೆಯಲ್ಲಿ ಕಳೆದ ಒಂದು ವಷ೯ದಿಂದ ಶಿಕ್ಷಕರ ಕೊರತೆಯನ್ನು ಅನುಭವಿಸುತಿರುವುದರಿಂದ ಮಂಗಳವಾರ ನಗರದ ಗಾಂಧಿ ವ್ರತ್ತದಿಂದ ಬಿ.ಇ.ಓ ಕಚೇರಿವರೆಗೆ ಪ್ರತಿಭಟನಾ ರ್ಯಾಲಿ ನಡೆಸಿದ ಶಾಲಾ ಮಕ್ಕಳು ಮತ್ತು ಪಾಲಕ-ಪೋಷಕರು ಶಾಲಾ ಶಿಕ್ಷಕರ ಕೊರತೆ ನೀಗಿಸಬೇಕೆಂಬ ಘೋಷಣೆಗಳೊಂದಿಗೆ ಕೆಲಹೊತ್ತು ರಸ್ತೆ ತಡೆ ನಡೆಸಿದರು.

ಬಟಗೇರಾದಲ್ಲಿ ಕೇವಲ ಮೂರು ಜನ ಶಿಕ್ಷಕರು ಸಧ್ಯದಲ್ಲಿ ಕಾಯ೯ನಿವ೯ಹಿಸುತಿದ್ದು, ಶಿಕ್ಷಕರ ಕೊರತೆ ಬಗ್ಗೆ ಹಲವು ಬಾರಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಗಮನಕ್ಕೆ ತಂದರೂ ಕೂಡ ತಲೆ ಕೆಡಿಸಿಕೊಳ್ಳದ ಅಧಿಕಾರಿಗಳು ಇದ್ದಂಥ ಶಿಕ್ಷಕರನ್ನೆ ಮತ್ತೆ ವಗಾ೯ವಣೆ ಮಾಡಿದ್ದಾರೆ. ಉತ್ತಮವಾದ ಬೋಧನೆ ಇಲ್ಲದೇ ಮಕ್ಕಳು ಪರೀಕ್ಷೆಯಲ್ಲಿ ಪ್ರತಿಶತ ಫಲಿತಾಂಶ ಪಡೆಯುವುದು ಹೇಗೆ ಎಂಬ ದೂರಿನೊಂದಿಗೆ ರಸ್ತೆಗಿಳಿದ ಪಾಲಕರು ಮತ್ತು ಶಾಲಾ ಮಕ್ಕಳು ಶಾಲೆಗೆ ಹೆಚ್ಚುವರಿ ಶಿಕ್ಷಕರನ್ನು ನೇಮಿಸಬೇಕೆಂದು ಒತ್ತಾಯಿಸಿ ಪ್ರತಿಭಟಿಸಿದರು.

ಬೇಕೆ ಬೇಕು ಶಿಕ್ಷಕರು ಬೇಕು ಎಂಬ ಘೋಷಣೆಗಳೊಂದಿಗೆ ರಸ್ತೆಗಿಳಿದ ಸಕಾ೯ರಿ ಪ್ರೌಢ ಶಾಲಾ ಮಕ್ಕಳ ಪ್ರತಿಭಟನೆಯಲ್ಲಿ ಪಾಲ್ಗೊಂಡ ಪೋಷಕರು ಆಕ್ರೋಶಕಿಳಿದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಳ್ಳಲು ಮುಂದಾದರು. ಪ್ರತಿಭಟನಾಕಾರರು ಬಿ.ಇ.ಓ ಕಚೇರಿಗೆ ಸಮೀಪಿಸುತಿದ್ದಂತೆ ಅಧಿಕಾರಿಗಳು ಗೈರು ಹಾಜರಿ ಇರುವುದನ್ನು ಕಂಡು ಮತ್ತಷ್ಟು ಆಕ್ರೋಶಕಿಳಿದರು. ನಂತರ ನೂರಾರು ಸಂಖ್ಯೆಯಲ್ಲಿದ್ದ ಜನಸಮೂಹ ರಸ್ತೆ ನಡೆಸಿ ಧಿಕ್ಕಾರದ ಘೋಷಣೆಗಳನ್ನು ಕೂಗುತ್ತಾ ನಗರದ ಹೊರವಲಯದಲ್ಲಿರುವ ತಹಶೀಲ ಕಚೇರಿಗೆ ತೆರಳಿದರು.

ಬಟಗೇರಾದಲ್ಲಿ ಇನ್ನೂ ಕನಿಷ್ಠ ಐದಾರು ಶಿಕ್ಷಕರ ಅಗತ್ಯವಿದ್ದು ಶಿಕ್ಷಕರ ಕೊರತೆಯನ್ನು ಕೂಡಲೇ ಒದಗಿಸಿಕೊಡಬೇಕು. ಇದ್ದಂಥ ಮೂರು ಜನ ಶಿಕ್ಷಕರು ಶಾಲಾ ಮಕ್ಕಳಿಗೆ ನ್ಯಾಯಯುತವಾಗಿ ಪಾಠ ಹೇಳಿಕೊಡಲು ಹೇಗೆ ಸಾಧ್ಯವಾಗುತ್ತದೆ. ಸರಿಯಾದ ಬೋಧನೆ ಇಲ್ಲದ ಕಾರಣ ಈ ಬಾರಿಯ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಮಕ್ಕಳು ಪ್ರತಿಶತ ಫಲಿತಾಂಶವನ್ನು ಕಾಣದೇ ಅವರ ವ್ಯಕ್ತಿತ್ವ ವಿಕಾಸದತ್ತ ದುಷ್ಟ ಪರಿಣಾಮವನ್ನು ಬೀರುತಿದೆ.

ಹೀಗೆ ಶಿಕ್ಷಣ ವ್ಯವಸ್ಥೆ ಮುಂದೊರೆದರೆ ಮಕ್ಕಳ ಭವಿಷ್ಯವನ್ನು ಹಾಳಾಗುವುದರಲ್ಲಿ ಸಂದೇಹವಿಲ್ಲ. ಹಿಂದುಳಿದ ಗ್ರಾಮಗಳೆಂಬ ಹಣೆಪಟ್ಟಿ ಅಂಟಿಸಿಕೊಂಡಿರುವ ಊರುಗಳತ್ತ ಸಕಾ೯ರ ಮೊದಲ ಅಧ್ಯತೆಯನ್ನು ನೀಡಿ ಇಲ್ಲಿರುವ ಮೂಲಭೂತ ಸೌಲಭ್ಯಗಳನ್ನು ಒದಗಿಸಿಕೊಡುವಲ್ಲಿ ಮುತುವ೯ಜಿ ವಹಿಸಬೇಕೆಂದು ಗ್ರಾಮಸ್ಥರೆಲ್ಲ ಒತ್ತಾಯಿಸಿದರು. ಒಂದು ವೇಳೆ ವ್ಯವಸ್ಥೆಯನ್ನು ಇದೇ ರೀತಿ ಇದ್ದರೆ ಮುಂಬರುವ ದಿನಗಳಲ್ಲಿ ಉಗ್ರ ಹೋರಾಟಕ್ಕೂ ಸಿದ್ಧರಿದ್ದೇವೆ. ಅರಳಬೇಕಾದ ಮಕ್ಕಳ ಭವಿಷ್ಯದಲ್ಲಿ ಕರಾಳ ದಿನಗಳು ಬಾರದಂತಿರಲಿ ಎಂದು ಮನವಿ ಮಾಡಿದ್ದಾರೆ.

ಬಟಗೇರಾ ಪ್ರೌಢ ಹತ್ತಾರು ಸಲ ಶಿಕ್ಷಕರ ಕೊರತೆಯನ್ನು ಅಧಿಕಾರಿಗಳ ಗಮನ ಸೆಳೆದರೂ ಕೂಡ ನಿಲ೯ಕ್ಷಕೊಳಪಟ್ಟ ಶಾಲೆಗೆ ಶೀಘ್ರವೇ ಶಿಕ್ಷಕರ ಕೊರತೆಯನ್ನು ನೀಗಿಸಬೇಕು. ಇಲ್ಲವಾದರೆ ಶಾಲೆಗೆ ಬೀಗ ಜಡಿದು ಇನ್ನಷ್ಟು ಉಗ್ರವಾದ ಹೋರಾಕ್ಕಿಳಿಯಲು ಸಿದ್ಧರಿದ್ದೇವೆ ಎಂದು ಗ್ರಾಮಸ್ಥರು ಹಾಗೂ ಸುತ್ತಮುತ್ತಲಿನ ಗ್ರಾಮಗಳಿಂದ ಆಗಮಿಸಿದ್ದ ಶಾಲಾ ಮಕ್ಕಳ ಪಾಲಕರು ಎಚ್ಚರಿಸಿದರು. ಮನವಿಯನ್ನು ಉಪ ತಹಸೀಲ್ದಾರ್ ಜಗನ್ನಾಥರೆಡ್ಡಿ ಸ್ವೀಕರಿಸಿದರು.

ಶರಣ ಹರಳಯ್ಯನ ಮೂಲ ವಾಸಸ್ಥಾನ ಹಳ್ಳಿ ಗ್ರಾಮಕ್ಕೆ ಬಸವನಹಳ್ಳಿ ಎಂದು ಕರೆಯಬೇಕುಃ ಸಾಹಿತಿ ರಂಜಾನ ದಗಾ೯ ಹೇಳಿಕೆ, ಸಮಂಜಸವಲ್ಲಃ ಹರಳಯ್ಯನ ಹಳ್ಳಿ ಎಂದು ಕರೆಯುವಂತಾಗಬೇಕು ಎಂಬುದು ಚಿಂತಕರ ಅನಿಸಿಕೆಯಾಗಿದೆ. ಸಕಾ೯ರ ಯಾರ ಪರವಾಗಿರುತ್ತದೆ ಎಂಬುದು ಕಾದು ನೋಡಬೇಕು.

 ಹರಳಯ್ಯ ಮತ್ತು ಕಲ್ಯಾಣಮ್ಮ ವಾಸವಾಗಿರುವ ಕುರಿತು ಬಸವಕಲ್ಯಾಣ ತಾಲೂಕಿನ ಹಳ್ಳಿ ಎಂಬ ಗ್ರಾಮಕ್ಕೆ ಹತ್ತಿಕೊಂಡಿರುವ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಹರಳಯ್ಯನ ದೇವಸ್ಥಾನ ಮೇಲ್ವಗ೯ದವರಿಂದ ನಿಲ೯ಕ್ಷಕೊಳಗಾಗಿರುವುದು. ಕೆಳವಗ೯ದ ಜನರಿಗೆ ಇದರ ಪರಿಪೂಣ೯ ಮಾಹಿತಿಯಿಲ್ಲದ್ದೇ ಮೂಲ ಸಮಸ್ಯೆಯಾಗಿದೆ.
   ವಿಶ್ವಗುರು ಬಸವಣ್ಣನವರ ಮೂತಿ೯ ಅನಾವರಣ ಕಾಯ೯ಕ್ರಮ ಉದ್ಘಾಟಿಸಿರುವ ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷ ಭೀಮಣ್ಣ ಖಂಡ್ರೆ, ಈ ಸಂದಭ೯ದಲ್ಲಿ ಸಾಹಿತಿ ರಂಜಾನ್ ದಗಾ೯, ತಡೋಳಾ ಶ್ರೀಗಳು ಇದ್ದರು.    
ಕಾಯ೯ಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಸಾಹಿತಿ, ಪತ್ರಕತ೯ ರಂಜಾನ ದಗಾ೯ ಮಾತನಾಡಿ, ಈ ಹಳ್ಳಿ ಎಂಬ ಗ್ರಾಮಕ್ಕೆ ಇನ್ನೂ ಮುಂದೆ ಬಸವನ ಹಳ್ಳಿ ಎಂದು ಪ್ರತಿಯೊಬ್ಬರೂ ಕರೆಯುವಂತಾಗಬೇಕು. ಯಾಕೆಂದರೆ ಬಸವಣ್ಣ ಕ್ರಾಂತಿಭೂಮಿಯಾಗಿ ಬಸವಣ್ಣನವರು ಆಳಿದ ನೆಲದಲ್ಲಿ ಇರುವ ಪುಟ್ಟ ಗ್ರಾಮ ಹಳ್ಳಿ ಗ್ರಾಮಕ್ಕೆ ಗ್ರಾಮಸ್ಥರು ಬಸವನ ಹಳ್ಳಿ ಎಂಬ ಕರೆಯುವದನ್ನು ರೂಢಿಸಿಕೊಳ್ಳಬೇಕು. ಎಂದಿದ್ದಾರೆ ಆದರೆ ಅದೇ ಹಳ್ಳಿ ಗ್ರಾಮದಲ್ಲಿ ಹರಳಯ್ಯನ ಹೊಂಡ ಮತ್ತು 12ನೇ ಶತಮಾನದ ಶರಣರಾದ ಹರಳಯ್ಯ ಮತ್ತು ಕಲ್ಯಾಣಮ್ಮ ವಾಸವಾಗಿರುವ ಕುರಿತು ಅನೇಕ ಕುರುಹುಗಳು ಇರುವುದರಿಂದ ಗ್ರಾಮಕ್ಕೆ ಹರಳಯ್ಯನ ಹಳ್ಳಿ ಎಂದು ಕರೆಯುವುದು ಸೂಕ್ತವೆನಿಸುತ್ತದೆ ಎಂಬುದು ಬುದ್ಧಿಜೀವಿಗಳ ಅಭಿಪ್ರಾಯ ಸಕಾ೯ರ ಗಂಭೀರ ಚಿಂತನೆ ನಡೆಸಿ ಹಳ್ಳಿ ಗ್ರಾಮಕ್ಕೆ ಹರಳಯ್ಯನ ಹಳ್ಳಿ ಎಂದು ಮರುನಾಮಕರಣ ಮಾಡುವಲ್ಲಿ ಆಸಕ್ತಿ ವಹಿಸುವುದೇ ಎಂದು ಕಾದು ನೋಡಬೇಕಾಗಿದೆ.
 ವೇದಿಕೆಯಲ್ಲಿ ಸಾಹಿತಿ ಚಿಂತಕ ರಂಜಾನ ದಗಾ೯, ತಡೋಳಾ ಶ್ರೀಗಳು ಸೇರಿದಂತೆ ಮತ್ತಿತರೆ ಗಣ್ಯರಿದ್ದರು   

ವೀರಣ್ಣ ಮಂಠಾಳಕರ್ 
ಬಸವಕಲ್ಯಾಣಃ ಸಾವ೯ದನಿಕ ವಲಯದಲ್ಲಿ ವ್ಯಕ್ತಿ ಉತ್ತಮವಾದ ಕಾಯ೯ ಮಾಡುವುದನ್ನು ರೂಢಿಸಿಕೊಳ್ಳಬೇಕು. ನಮ್ಮಲ್ಲಿ ಸಂಸ್ಕಾರ ಇಲ್ಲದ ಕಾರಣ ದೇಶದಲ್ಲಿ ಭಯೋತ್ಪಾದನೆಯಂಥ ಚಟುವಟಿಕೆಗಳಿಗೆ ಪ್ರಶ್ನಿಸುವಂಥ ಸಾಮಥ್ಯ೯ ಬೆಳೆದಿಲ್ಲ. ದೇಶದ ಕೆಲಸ, ಸಮಾಜ ಕಾಯ೯ ಮಾಜಬೇಕಾದರೆ ಅದಕ್ಕಾಗಿ ನಮ್ಮ ಪ್ರಾಣವನ್ನೆ ಮುಡುಪಾಗಿಡಬೇಕೆಂದು ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷ ಭೀಮಣ್ಣ ಖಂಡ್ರೆ ಅಭಿಪ್ರಾಯಪಟ್ಟರು.

ಅವರು ಬಸವಕಲ್ಯಾಣ ತಾಲೂಕಿನ ಹಳ್ಲಿ ಗ್ರಾಮದಲ್ಲಿ ಮಹಾಮಾನವತಾವಾದಿ ವಿಶ್ವಗುರು ಬಸವಣ್ಣನವರ ಮೂತಿ೯ ಅನಾವರಣ ಮಾಡಿ, ನಂತರ ಹಮ್ಮಿಕೊಂಡ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತ, ಒಂಬತ್ತುನೂರು ವ,೯ಗಲ ಹಿಂದೆ ಕೆಟ್ಟು ಹೋಗಿದ್ದ ಸಮಾಜದ ಪರಿಸ್ಥಿತಿಯನ್ನು ಸುಧಾರಣೆ ಮಾಡಲು ಪಣತೊಟ್ಟಿದ್ದ ಮಹಾನ ಸಾಧಕ, ಜಾತಿ ರಹಿತ ಪರಿಸರವನ್ನು ನಿಮಾ೯ಣ ಮಾಡುವ ಸಂಕಲ್ಪವನ್ನು ತೊಟ್ಟ ವಿಶ್ವಗುರು ಬಸವಣ್ಣನವರ ಮೂತಿ೯ ಅನಾವರಣಗೊಂಡಂತೆ ಅವರ ಮಾಗ೯ದಲ್ಲಿ ನಡೆಯುವಂತೆ ಜೀವನ ಪರಿವತಿ೯ಸಿಕೊಳ್ಳಬೇಕು.

ಜಾತಿಯತೆ ಮತ್ತು ಮತಭೇದವನ್ನು ಹೋಗಲಾಡಿಸಲು ನಾವೆಲ್ಲ ಇದು ಸಿದ್ಧರಾಹಬೇಕಾಗಿದೆ. ಯಾವ ಜಾತಿಗಾಗಿ ನಾಡು ದೇಶ ಹಾಥಾಗೋಯ್ತೋ ಮರುಜೀವ ಕೊಟ್ಟು ನಾವೇ ವ್ಯವಸ್ಥೆ ಹಾಳು ಮಾಡುತಿದ್ದೇವೆ. ಇಂತಹ  ಒಂದು ಮನೋಭಾವ ಬದಲಾಗಬೇಕಾಗಿದೆ. ಜಾತಿ ನಿಮೂ೯ಲನೆಗೆ ದೊಡ್ಡ ಸಂಘಟನೆ, ಯುವಶಕ್ತಿ ಒಂದುಗೂಡಿ ಜಾತಿಯತೆ ವಿರುದ್ಧ ಹೋರಾಜಬೇಕಾಗಿದೆ ಎಂದು ಸಲಹೆ ನೀಡಿದರು.

ಕಾಯ೯ಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಸಾಹಿತಿ, ಪತ್ರಕತ೯ ರಂಜಾನ ದಗಾ೯ ಮಾತನಾಡಿ, ಈ ಹಳ್ಳಿ ಎಂಬ ಗ್ರಾಮಕ್ಕೆ ಇನ್ನೂ ಮುಂದೆ ಬಸವನ ಹಳ್ಳಿ ಎಂದು ಪ್ರತಿಯೊಬ್ಬರೂ ಕರೆಯುವಂತಾಗಬೇಕು. ಯಾಕೆಂದರೆ ಬಸವಣ್ಣ ಕ್ರಾಂತಿಭೂಮಿಯಾಗಿ ಬಸವಣ್ಣನವರು ಆಳಿದ ನೆಲದಲ್ಲಿ ಇರುವ ಪುಟ್ಟ ಗ್ರಾಮ ಹಳ್ಳಿ ಗ್ರಾಮಕ್ಕೆ ಗ್ರಾಮಸ್ಥರು ಬಸವನ ಹಳ್ಳಿ ಎಂಬ ಕರೆಯುವದನ್ನು ರೂಢಿಸಿಕೊಳ್ಳಬೇಕು.

ನಾನು ಸಕಾ೯ರಕ್ಕೆ ಮನವಿಯನ್ನು ಸಲ್ಲಿಸಿ ಒಂದೇ ವಷ೯ದಲ್ಲಿ ಬಸವನ ಹಳ್ಳಿ ಮರನಾಮಕರಣಕ್ಕೆ ಹಸಿರು ನಿಶಾನೆ ಕೊಡಿಸುವಂತೆ ಎಲ್ಲಾ ಕಡತಗಳಲ್ಲಿ ಬರುವಂತೆ ಪ್ರಯತ್ಲಿಸುತ್ತೇನೆ ಎಂದು ಆಶ್ವಾಸನೆ ನೀಡಿದರು. ಮುಂದೊರೆದು ಮಾತನಾಡಿದ ಅವರು, ಬಸವಣ್ಣನವರ ಸುಂದರವಾದ ಮೂತಿ೯ ಸ್ಥಾಪಿಸಿದ ಕಲಾವಿದ ಮಾರುತಿ ಮಂಠಾಳ ಅವರ ಕಾಯ೯ ಶ್ಲಾಘನೀಯವಾಗಿದೆ. ಮೂತಿ೯ಯಲ್ಲಿ ಬಸವಣ್ಣನವರು  ಆಶಿವ೯ದಿಸುವಂತಿರುವ ಕೈ ಸನ್ನೆ ಅದು ಸಮಾಜ ರಕ್ಷಣೆಯ ಸಂಕೇತದಂತೆ ಸುದರವಾದ ಮೂತಿ೯ ರೂಪಿಸಿದ್ದಾರೆ ಎಂದು ಬಣ್ಣಿಸಿದರು.

ದಗಾ೯ ಅವರ ಭಾಷಣದ ನಂತರ ಪ್ರತಿಸ್ಪಂಧಿಸಿದ ಪತ್ರಕತ೯ರ ಸಂಘದ ಅಧ್ಯಕ್ಷ ಗುರುನಾಥ ಗಡ್ಡೆ ಹಳ್ಳಿ ಗ್ರಾಮದಲ್ಲಿ 800 ವಷ೯ಗಳ ಹಿಂದೆ ಬಸವಣ್ಣನವರ ಅನುಯಾಯಿ ಶರಣ ಹರಳಯ್ಯ ಹಾಗೂ ಕಲ್ಯಾಣಮ್ಮ ವಾಸವಾಗಿರುವ ಊರಾಗಿರುವುದರಿಂದ ಇದಕ್ಕೆ ಹ, ಎಂಬ ಅಕ್ಷರವನ್ನಷ್ಟೇ ಉಳಿದುಕೊಂಡು ಹಳ್ಳಿಯಾಗಿದೆ ಅದಕ್ಕಾಗಿ ಗ್ರಾಮಕ್ಕೆ ಹರಳಯ್ಯನ ಹಳ್ಳಿ ಎಂದು ಕರೆಯಲು ಸೂಕ್ತವೆನಿಸುತ್ತದೆ.

ಇದಕ್ಕೆ ಸಂಬಂಧಿಸಿದಂತೆ ಹಲವು ಕುರುಹುಗಳನ್ನು ಇದೇ ಗ್ರಾಮದಲ್ಲಿ ಹರಳಯ್ಯನವರು ವಾದವಾಗಿರುವ ಕುರಿತು ದಾಖಲೆಗಳು ಸಿಗುತ್ತವೆ. ಅವು ಈಗ ಅಳಿವಿನಂಚಿನಲ್ಲಿ ಇವೆ. ಇತಿಹಾಸಕಾರರು ಇಲ್ಲಿನ ಮೂಲವನ್ನು ಕೆದಕುವದರೊಂದಿಗೆ ಗ್ರಾಮದ ಮಹತ್ವನನ್ನು ಅರಿಯುವ ಪ್ರಯತ್ನ ಮಾಡಬೇಕಾಗಿದೆ. ಆ ನಿಚ್ಚಿನಲ್ಲಿ ಗ್ರಾಮಕ್ಕೆ ಹರಳಯ್ಯನ ಹಳ್ಳಿ ಎಂದೇ ಕರೆಯುವಂತಾಗಲು ರಂಜಾನ ದಗಾ೯ ಅವರೊಂದಿಗ ಸಮಾಲೋಚಿಸಿದರು. ಯಾವುದಕ್ಕೂ ವಿಷಯ ಚಚೆ೯ಗೊಳಪಡುವಂತಾಗಲಿ ಎಂದು ರಾಜೇಶ್ವರ ಶಿವಾಚಾಯ೯ರಲ್ಲಿ ಹಾಗೂ ದಗಾ೯ ಅವರಲ್ಲಿ ಗಡ್ಡೆ ಮನವಿ ಮಾಡಿದರು.

ಕಾಯ೯ಕ್ರಮದಲ್ಲಿ ಶ್ರೀಪತರಾವ ಪಾಟೀಲ, ಶಿವಶರಣಪ್ಪ ಪಾಟೀಲ ಹುಗ್ಗೆ, ದಯಾನಂದ ಖಳಾಳೆ, ಪಿಎಸ್ಐ ಗುಂಡೇರಾವ, ತಾ.ಪಂ ಅಧ್ಯಕ್ಷ ಗುರುಲಿಂಗಪ್ಪಾ ಸೈದಾಪುರೆ, ಸುಧಾಕರ ಮದನೆ, ಮುಂತಾದ ಗಣ್ಯರು ಇದ್ದರು. ನವಲಿಂಗ ಪಾಯೀಲ ನಿರೂಪಿಸಿದರೆ ನಾಗಶೆಟ್ಟಿ ಸ್ವಾಗತಿಸಿದರು.

ಬಸವಕಲ್ಯಾಣದಲ್ಲಿ ಸಾವ೯ಜನಿಕ ಶೌಚಾಲಯ ಇಲ್ಲದೇ ಪರದಾಡುವ ಜನಗಳು

ಡಾ.ಗವಿಸಿದ್ಧಪ್ಪ ಪಾಟೀಲ 

ಃ ವಿಶ್ವಗುರು ಬಸವಣ್ಣನವರ ಪುಣ್ಯಭೂಮಿಯೆಂದರಿತು ಇಲ್ಲಿಗೆ ಆಗಮಿಸುವ ದೇಶ ವಿದೇಶ, ರಾಜ್ಯದ ನಾನಾ ಭಾಗಗಳಿಂದ ಆಗಮಿಸುವ ಪ್ರವಾಸಿಗರಿಗೆ ಮೊಟ್ಟ ಮೊದಲು ಬೆಳಗಿನ ಕ್ರಿಯಾಕ್ರಮಗಳನ್ನು ಮುಸಿಕೊಳ್ಳುವಂಥ ಮೂಲಭೂತ ಸೌಲಭ್ಯಗಳು ಇಲ್ಲಿ ನಿಮಾ೯ಣವಾಗಬೇಕು. ನಂತರ ತಾವು ಬಂದಿರುವ ಉದ್ದೇಶದತ್ತ ಹೊರಡಲು ಸನ್ನಿದ್ಧರಾಗಿ ಇಲ್ಲಿನ ವಾತಾವರಣವನ್ನು ಕಂಡು ಖುಷಿ ಪಡುವಂತಾಗಬೇಕು. ಇಲ್ಲಿನ ಜನಪ್ರತಿನಿಧಿಗಳಿಂದ ಆಗಬೇಕಾದ ಕೆಲಸಗಳು ಕನಿಷ್ಠ ಪಕ್ಷ ಇಲ್ಲಿನವರೇ ಅವುಗಳನ್ನು ಅನುಭವಿಸುವಂತಿಲ್ಲ. ಅಂಥದರಲ್ಲಿ ನಗರ ಅಭಿವ್ರದ್ಧಿಗಾಗಿ ಕೈಗೆತ್ತಿಕೊಂಡಿರುವ ಬಿಕೆಡಿಬಿ ಮತ್ತು ಇಲ್ಲಿನ ಜನಪ್ರತಿನಿಧಿಗಳ ಸಹಕಾರದಡಿಯಲ್ಲಿ ಪ್ರವಾಸಿಗರ ಮೂಲಸೌಕಯ೯ಗಳತ್ತ ಗಮನ ಹರಿಸುವುದು ಅತಿ ಮುಖ್ಯವಾಗಿದೆ. ಹಾಗಾದಾಗ ಮಾತ್ರ ಐತಿಹಾಸಿಕ ಹಿನ್ನೆಲೆ ಇರುವ ಬಸವಕಲ್ಯಾಣಕ್ಕೆ ಪ್ರವಾಸಿಗರು ನಿತ್ಯವೂ ಲಗ್ಗೆ ಇಡುವುದರಲ್ಲಿ ಸಂದೇಹವಿಲ್ಲ.

                                                                              ಡಾ ಗವಿಸಿದ್ಧಪ್ಪ ಪಾಟೀಲ
                                                               ಕನ್ನಡ ವಿಭಾಗದ ಪ್ರಧ್ಯಾಪಕರು, ಬಸವಕಲ್ಯಾಣ


ಬಸವಕಲ್ಯಾಣಃ ಜೂನ್, 11ಃ  ಐತಿಹಾಸಿಕ ಹಿನ್ನೆಲೆಯುಳ್ಳ ಬಸವಕಲ್ಯಾಣ ನಗರದಲ್ಲಿ ಪ್ರವಾಸಿಗರ ಅನುಕಾಲಕ್ಕಾಗಿ ಸಾವ೯ಜನಿಕ ಶೌಚಾಲಯ ಸೇರಿದಂತೆ ಯಾವುದೇ ಮೂಲಭೂತ ಸೌಲಭ್ಯಗಳಿಲ್ಲದಿರುವುದು ಇಲ್ಲಿನ ಜನಪ್ರತಿನಿಧಿಗಳ ಕಾಳಜಿಗೆ ಹಿಡಿದ ಕನ್ನಡಿಯಾಗಿದೆ. ಪ್ರವಾಸಿ ತಾಣವನ್ನಾಗಿ ಮಾಡಬೇಕೆನ್ನುವ ಬಿಕೆಡಿಬಿ ಕನಸು ದೂರದಿಂದ ಬರುವವರ ಪಾಲಿಗೆ ಬಸವಕಲ್ಯಾಣ ಪಟ್ಟಣ ದೂರದ ಗುಡ್ಡ ನುಣ್ಣಗೆನ್ನುವಂತಿರುವುದು ವಿಪಯಾ೯ಸದ ಸಂಗತಿಯಾಗಿದೆ ಎಂದು ಹಲವರಲ್ಲಿ ಚಚೆ೯ಯಾಗುತಿದೆ.

ದೇಶದ ನಾನಾ ಭಾಗಗಳಿಂದ ಆಗಮಿಸುವ ಸಾಮಾನ್ಯ ವಗ೯ದ ಪ್ರವಾಸಿಗರು ಇಲ್ಲಿ ನರಕಯಾತನೆ ಅನುಭವಿಸುವಂಥ ಅನುಭವ. ನಗರದ ಪ್ರಮುಖ ಬಸ್ ನಿಲ್ದಾಣವೊಂದರಲ್ಲಿ ಶೌಚಾಲಯ ಬಿಟ್ಟರೆ ಬೇರೆಲ್ಲೂ ಇಲ್ಲದಿರುವುದು ಎಂಥ ದುರಂತವೆಂದು ಇಲ್ಲಿಗೆ ಬಂದು ಹೋಗುವವರು ಇದೆಂಥ ಕಲ್ಯಾಣವೆಂದು ಕನವರಿಸಿಕೊಂಡು ಬಂದ ದಾರಿಗೆ ಸುಂಕವಿಲ್ಲವೆನ್ನುವಂತೆ ವಾಪಸ್ಸಾಗುತ್ತಾರೆ.

12ನೇ ಶತಮಾನದ ಶರಣರ ಐತಿಹಾಸಿಕ ಸ್ಥಳಗಳನ್ನೆಲ್ಲಾ ಜೀಣೋ೯ದ್ದಾರ ಕಾಯ೯ಕ್ಕೆ ಮುಂದಾಗಿರುವ ಬಿಕೆಡಿಬಿಯ ಕಾಯ೯ವೈಖರಿಯನ್ನು ಮೆಚ್ಚಿ ಇಲ್ಲಿಗೆ ವಿವಿಧ ಭಾಗಗಳಿಂದ ಜನಸಾಮಾನ್ಯರಿಂದ ಹಿಡಿದು ಪ್ರತಿಷ್ಠಿತ ವ್ಯಕ್ತಿಗಳು ದಿನನಿತ್ಯ ಬಂದು ಹೋಗುವುದು ಸವೆ೯ ಸಾಮಾನ್ಯವಾಗಿದೆ. ಅಷ್ಟೇ ಅಲ್ಲದೇ ನಗರದಲ್ಲಿ ಸೇರಿದಂತೆ ತಾಲೂಕಿನಾದ್ಯಂತ  ಐತಿಹಾಸಿಕ ಕುರುಹುಗಳು ಇಲ್ಲಿರುವುದರಿಂದ ಅದಕ್ಕೆ ಆಕಷಿ೯ತರಾಗಿ ಪ್ರತಿಯೊಬ್ಬರೂ ಇತ್ತ ಚಿತ್ತ ಹರಿಸುವುಂತಾಗಿದೆ.

ಬಸವಕಲ್ಯಾಣಕ್ಕೆ ಬಂದು ಹೋಗುವ ಪ್ರವಾಸಿಗರಿಗೆ ಇಲ್ಲಿ ಕನಿಷ್ಠ ಪಕ್ಷ ಮೂಲಭೂತ ಸೌಲಭ್ಯಗಳಿಲ್ಲದಿದ್ದರೆ ಶರಣರ ನಾಡೆಂದೆನಿಸಿಕೊಳ್ಳುವ ನಗರವನ್ನು ಕಂಡು ಮೂಗು ಮುರಿಯುವ ಕಾಲ ಬಂದೊದಗುವಂಥ ಪರಿಸ್ಥಿತಿ ಇಲ್ಲಿ ನಿಮಾ೯ಣಗೊಳ್ಳುತಿದೆ. ರಸ್ತೆ ಸಂಚಾರ ನಿಯಂತ್ರಣವನ್ನು ಮಾಡದಿರುವುದರಿಂದ ಹಿಡಿದು ಇಲ್ಲಿನ ನಗರ ಬಡಾವಣೆಗಳ ಸ್ವಚ್ಛತೆಯನ್ನೂ ಕೂಡ ಮಾಡುವುದಕ್ಕೆ ಮೀನಾಮೇಷ ಏಣಿಸುವ ಅಧಿಕಾರಿಗಳು, ಜನಪ್ರತಿನಿಧಿಗಳ ನಿಲ೯ಕ್ಷ ಹೇರಳವಾಗಿದೆ ಎಂಬುದು ನಿತ್ಯವೂ ಜನಗಳ ಗೋಳಾಗಿದೆ.

ಮೊನ್ನೆ ಮೂರು ತಿಂಗಳುಗಳ ಹಿಂದೆ ಸುನಾಮಿಗೆ ತುತ್ತಾದ ಜಪಾನ ದೇಶ ಸಾವಿರಾರು ಜನರನ್ನು ಕಳೆದುಕೊಂಡಿರುವ ದುಖದಲ್ಲೂ ಅಭಿವ್ರದ್ಧಿಯತ್ತ ಮೊಟ್ಟ ಮೊದಲ ಗಮನ ಹರಿಸಿರುವ ಜಪಾನ ದೇಶ ಅಸ್ತವ್ಯಸ್ತವಾಗಿದ್ದ ಜನಜೀವನ ಸ್ವಚ್ಛ ನಗರವನ್ನಾಗಿಸಿಕೊಂಡು ಇದೀಗ ಮತ್ತೆ ಚೇತರಿಸಿಕೊಂಡಿರುವಾಗ ನೂರಾರು ವಷ೯ಗಳಿಂದ ನೆನಗುದಿಗೆ ಬಿದ್ದಿರುವ ಇಲ್ಲಿನ ಅಭಿವ್ರದ್ಧಿ ಕಾಯ೯ಗಳತ್ತ ಯಾಕೆ ನಮ್ಮ ಜನಪ್ರತಿನಿಧಿಗಳಾಗಲಿ, ಸಕಾ೯ರ ಗಮನ ಹರಿಸುವುದಿಲ್ಲ ಎಂಬುದು ಇಲ್ಲಿಗೆ ಬಂದು ಹೋಗುವ ಪ್ರವಾಸಿಗರು ನುಲಿಯುತ್ತಾರೆ.

ಕಲ್ಯಾಣದಲ್ಲಿ ಬಸವ ಮಹಾಮನೆ

 ಸುದ್ಧಿಗೋಷ್ಠಿಯಲ್ಲಿ ಕೌಠಾದ ಬೆಲ್ದಾಳ ಶ್ರೀಗಳು ಮಾತನಾಡುತಿರುವುದು. ಭಾಲ್ಕಿಯ ಬಸವಲಿಂಗ ಪಟ್ಟದೇವರು, ಕೂಡಲ ಸಂಗಮದ ಮ್ರತ್ಯುಂಜಯ ಸ್ವಾಮಿಗಳು ಇದ್ದರು.

ವೀರಣ್ಣ ಮಂಠಾಳಕರ್ 
--------------------------
ಬಸವಕಲ್ಯಾಣಃ ಮೂವತ್ತು ವಷ೯ಗಳ ಹಿಂದೆಯೇ ಬಸವಕಲ್ಯಾಣದಲ್ಲಿ ಬಸವ ಮಹಾಮನೆಯೊಂದನ್ನು ನಿಮಿ೯ಸುವ ಕಲ್ಪನೆ ಬಂದಿತ್ತು. ಆ ಕನಸನ್ನು ನನಸಾಗಿಸುವ ಸಂಕಲ್ಪದಿಂದ ಈಗಿನ ಅನುಭವ ಮಂಟಪದ ಹತ್ತಿರ ಈಗಾಗಲೆ 8 ಎಕರೆ ಜಮೀನು ಖರೀದಿಸಲಾಗಿದ್ದು 2 ಎಕರೆ ಭೂಮಿಯಲ್ಲಿ ಬಸವ ಮಹಾಮನೆ ಮತ್ತು ಶರಣೆಯರ ಧ್ಯಾನಕ್ಕಾಗಿ ನೀಲಾಂಬಿಕಾ ಯೋಗಕೇಂದ್ರವನ್ನು ವಿಶಾಲವಾದ ಸ್ಥಳದಲ್ಲಿ ನಿಮಿ೯ಸಲಾಗುತಿದೆ ಎಂದು ಕೌಠಾದ ಸಿದ್ಧರಾಮ ಶರಣರು ಬೆಲ್ದಾಳ ನುಡಿದರು.

ನಗರದ ಅನುಭವ ಮಂಟಪದಲ್ಲಿ ಮಂಗಳವಾರ ಕರೆಯಲಾದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತ, ಕಲ್ಯಾಣದಲ್ಲಿ ಬಸವ ಮಹಾಮನೆ ಮಾಡುವ ಮೂಲಕ 12ನೇ ಶತಮಾನದಲ್ಲಿದ್ದ ಯೋಗಿಗಳು ಭೂಕೈಲಾಸವನ್ನು ಕಂಡ ಅನುಭವದಂಥ ವಾತಾವರಣ ನಿಮಿ೯ಸುವ ಉದ್ದೇಶ ಹೊಂದಲಾಗಿದೆ. ಇದಕ್ಕಾಗಿ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದ್ದೇವೆ. ಇಂತಹ ಒಂದು ಮಹತ್ವ ಯೋಜನೆಗೆ ಕೆಲವರ ಹಸ್ತಕ್ಷೇಪದಿಂದ ಅಡ್ಡಿಪಡಿಸುತಿದ್ದಾರೆ ಅದಕ್ಕಾಗಿ ಎಲ್ಲಾ ದಾಖಲೆಗಳ ಸಮೇತ ನಾನು ಸಿದ್ಧನಾಗಿದ್ದೇನೆ ಎಂದರು.

ಬಸವ ಮಹಾಮನೆ ನಿಮಾ೯ಣಕ್ಕಾಗಿ ಬೀದರನಲ್ಲಿ 5 ಎಕರೆ ಜಮೀನು ಮಂಜೂರಾಗಿತ್ತು. ಆದರೆ ಇಂತಹ ಮಹತ್ವದ ಯೋಜನೆ ಬಸವಕಲ್ಯಾಣದಲ್ಲಿಯೇ ಆಗಬೇಕೆಂದು ಭಾಲ್ಕಿಯ ಬಸವಲಿಂಗ ಪಟ್ಟದೇವರು ಒತ್ತಾಯಿಸಿದಾಗ ಜಿಲ್ಲಾಡಳಿತಕ್ಕೆ ಮಂಜೂರಾದ ಜಾಗ ವಾಪಸ್ ಮಾಡಿ ಇದೀಗ ಬಸವಕಲ್ಯಾಣದ ಅನುಭವ ಮಂಟಪದ ಹತ್ತಿರ 8 ಎಕರೆ ಜಮೀನಿಗೆ ಎನ್-ಎ, ಲೇಔಟ್ ಮಾಡಿಸಿ ನೋಂದಣಿ ಮಾಡಿಸಲಾಗಿದೆ ಇದಕ್ಕಾಗಿ ಬೇಕಾಗುವ ಅನುದಾನ ಸಕಾ೯ರಕ್ಕೆ ಮನವಿ ಸಲ್ಲಿಸಲಾಗುವುದು ಎಂದರು.

ಶರಣ ಸಂಸ್ಕ್ರತಿ ಅಧ್ಯಯನ ಕೇಂದ್ರವನ್ನಾಗಿ ಮಾಡುವ ಬಸವ ಮಹಾಮನೆಯು ನಾಡಿನ ನೂರಾರು ಶರಣೆಯರಿಗೆ ಇದು ಧ್ಯಾನ ಕೇಂದ್ರವಾಗಲಿದೆ. 2 ಕೋಟಿ ರು. ವೆಚ್ಚದಲ್ಲಿ ಬಸವ ಮಹಾಮನೆ ಟ್ರಸ್ಟ್ ಅಡಿಯಲ್ಲಿ ನೀಲಾಂಬಿಕಾ ಯೋಗಕೇಂದ್ರ ಸೇರಿದಂತೆ ಹಲವು ಬಗೆ ಹಣ್ಣುಗಳನ್ನು ಈ ಜಾಗದಲ್ಲಿ ಬೆಳೆಸಲಾಗುತ್ತದೆ.

ಇದೇ 2011ರ ಅಕ್ಟೋಬರ್ ದಿಂದ ಡಿಸೆಂಬರ್ ಒಳಗಾಗಿ ರಾಷ್ಟ್ರಪತಿ ಪ್ರತಿಭಾ ದೇವಿಸಿಂಗ್ ಅವರನ್ನು ಕರೆಸಿ, ಕಾಮಗಾರಿ ಉದ್ಘಾಟನಾ ಸಮಾರಂಭಕ್ಕೆ ಆಹ್ವಾನಿಸಲಾಗುತಿದೆ. ದಿಬ್ಬದ ಮೇಲೆ 2 ಎಕರೆ ಜಾಗದಲ್ಲಿ ಬಸವ ಮಹಾಮನೆ ಮತ್ತು ಉಳಿದ ಜಾಗದೆಲ್ಲಿ ಯೋಗ ಧ್ಯಾನ ಕೇಂದ್ರದ ಕಾಮಗಾರಿ ಶೀಘ್ರವೆ ಪ್ರಾರಂಭಿಸಲಾಗುತ್ತದೆ. ವಯಕ್ತಿಕ ಸಾಧನೆ ಮಾಡುವವರಿಗೆ ಇದು ಸೂಕ್ತವಾಗುತ್ತದೆ ಎಂದು ವಿವರಿಸಿದರು.

ಬಸವಕಲ್ಯಾಣ ಪತ್ರಕತ೯ರ ಸಂಘದಿಂದ ಪತ್ರಿಕಾ ದಿನಾಚರಣೆ

 ಬಸವಕಲ್ಯಾಣ ತಾಲೂಕಾ ಕಾಯ೯ನಿರತ ಪತ್ರಕತ೯ರ ಸಂಘದ ಅಧ್ಯಕ್ಷ ಗುರುನಾಥ ಗಡ್ಡೆ ಅವರು ಕಾಯ೯ಕ್ರಮವನ್ನುದ್ದೇಶಿಸಿ ಮಾತನಾಡುತಿರುವುದು.

 ಪತ್ರಕತ೯ ದೇವು ಪತ್ತಾರ್
ಜುಲೈ, 6,2011 ರಂದು ಜರುಗಿದ ಪತ್ರಿಕಾ ದಿನಾಚರಣೆ ಸಮಾರಂಭದಲ್ಲಿ ಪ್ರಶಸ್ತಿ ಪುರಸ್ಕ್ರತರಾದ ದೇವು ಪತ್ತಾರ್ ಮಾತನಾಡುತಿರುವುದು.

ವೀರಣ್ಣ ಮಂಠಾಳಕರ್
-------------------
(ಕಾಯ೯ಕ್ರಮದ ಮುನ್ನದಲ್ಲಿ ಪ್ರಕಟವಾದ ವರದಿ.)
ಬಸವಕಲ್ಯಾಣಃ ಜೂ,01ಃ ಪ್ರತಿ ವಷ೯ದಂತೆ ಈ ವಷ೯ವೂ ತಾಲೂಕಿನ ಕನಾ೯ಟಕ ಕಾಯ೯ನಿರತ ಪತ್ರಕತ೯ರ ಸಂಘ ವತಿಯಿಂದ ಪತ್ರಿಕಾ ದಿನಾಚರಣೆ ನಡೆಯಲಿದ್ದು ಇದರ ಅಂಗವಾಗಿ ಪತ್ರಕತ೯ರಿಗೆ ನೀಡುವ ವಿವಿಧ ಪ್ರಕಾರದ ಪ್ರಶಸ್ತಿಗಳು ಹಾಗೂ ವಿಶೇಷ ಉಪನ್ಯಾಸ ಜುಲೈ 6 ರಂದು ನಗರದ ಆಯ೯ ಸಮಾಜ ಭವನದಲ್ಲಿ ಜರುಗಲಿದೆ ಎಂದು ಕಾಯ೯ನಿರತ ಪತ್ರಕತ೯ರ ಸಂಘದ ಅಧ್ಯಕ್ಷ ಗುರುನಾಥ ಗಡ್ಡೆ ಪ್ರಕಟಣೆಲ್ಲಿ ತಿಳಿಸಿದ್ದಾರೆ.

ಈ ಬಾರಿಯ ಶಂಕರ ಪ್ರಸಾದ ದುಬೆ ಪ್ರಶಸ್ತಿ ಬೀದರ ಜಿಲ್ಲಾ ಪ್ರಜಾವಾಣಿ ವರದಿಗಾರರಾದ ದೇವು ಪತ್ತಾರ ಅವರನ್ನು ನೀಡಲಾಗುತಿದ್ದು ನಗದು ಪುರಸ್ಕಾರ ಐದು ಸಾವಿರ ರು. ಮತ್ತು ಪ್ರಶಸ್ತಿ ಪತ್ರ ಒಳಗೊಂಡಿದ್ದು, ದುಬೆ ಪರಿವಾರದ ಪ್ರಾಯೋಜಕತ್ವದಲ್ಲಿ ಪ್ರಶಸ್ತಿ ನೀಡಲಾಗುತಿದೆ.

ಬೀದರ ಜಿಲ್ಲಾ ಉತ್ತಮ ಸಂಪಾದಕ ಪ್ರಶಸ್ತಿ ಕಾರಂಜಾ ಎಕ್ಸಪ್ರೆಸ್ ಸಂಪಾದಕ ತಿಪ್ಪಣ್ಣ ಭೋಸ್ಲೆ, ಬೀದರ ಸ್ಥಳೀಯ ಪತ್ರಿಕಾ ವರದಿಗಾರ ಪ್ರಶಸ್ತಿ ಅಶೋಕ ಕೋಟೆ ವರದಿಗಾರ ಸೋಮನಾಥ ಬಿರಾದಾರ, ಕನ್ನಡೇತರ ಪತ್ರಿಕೆ ಉತ್ತಮ ಪತ್ರಿಕಾ ಪ್ರಶಸ್ತಿ ಶಿಯಾಸತ್ ಪತ್ರಿಕೆಯ ವರದಿಗಾರ ಖೇಸರ್ ರೆಹಮಾನ, ಬಸವಕಲ್ಯಾಣ ತಾಲೂಕಿನ ಉತ್ತಮ ವರದಿಗಾರ ಪ್ರಶಸ್ತಿ ವಿಜಯಕನಾ೯ಟಕ ವರದಿಗಾರ ಮಾಥ೯ಂಡ ಜೋಶಿ, ಇವರುಗಳಿಗೆ ನಗದು ಪುರಸ್ಕಾರ ಹಾಗೂ ಪ್ರಶಸ್ತಿ ಪತ್ರ ಒಳಗೊಂಡ ಸ್ಮರಣಿಗೆಗಳೊಂದಿಗೆ ಗೌರವಿಸಲಾಗುತಿದೆ ಎಂದು ತಿಳಿಸಿದ್ದಾರೆ.

ಮೇಲ್ಕಂಡ ಎಲ್ಲಾ ಐದು ಪ್ರಶಸ್ತಿಗಳನ್ನು ತಾಲೂಕಾ ಸಂಘದ ಸವ೯ ಸದಸ್ಯರ ಸವಾ೯ನುಮತದಿಂದ ಆಯ್ಕೆ ಮಾಡಲಾಗಿದ್ದು, ಜುಲೈ 6 ರಂದು ನಡೆಲಿರುವ ಪತ್ರಿಕಾ ದಿನಾಚರಣೆ ಮತ್ತು ಪತ್ರಕತ೯ರ ಕಾಯಾ೯ಗಾರ ವಿಶೇಷ ಉಪನ್ಯಾಸ ಸಂದಭ೯ದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಗುತ್ತದೆ ಎಂದು ಗುರುನಾಥ ಗಡ್ಡೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಭೆಯಲ್ಲಿ ಮಾಣಿಕ ಭುರೆ, ಮುಕುಂದ ನಿಂಬಾಳಕರ್, ರಾಜೇಂದ್ರ ಗೋಖಲೆ, ಮಲ್ಲಿಕಾಜು೯ನ ಬಂಡೆ, ಉದಯಕುಮಾರ ಮುಳೆ, ಪ್ರಭುಲಿಂಗಯ್ಯಾ ಟಂಕಸಾಲಿಮಠ, ಶಿವಕುಮಾರ ಮಠಪತಿ, ನೈಮೋದ್ದಿನ, ಕಲ್ಯಾಣರಾವ ಮದರಗಾಂವಕರ್, ಪ್ರಲ್ಹಾದ ಡಿ.ಕೆ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.


ಜುಲೈ, 6,2011 ರಂದು ಜರುಗಿದ ಪತ್ರಿಕಾ ದಿನಾಚರಣೆ ಸಮಾರಂಭದಲ್ಲಿ ಪ್ರಶಸ್ತಿ ಪುರಸ್ಕ್ರತರಾದ ದೇವು ಪತ್ತಾರ್ ಮಾತನಾಡುತಿರುವುದು. ಪತ್ರಕತ೯ ದೇವು ಪತ್ತಾರ್  ಬಸವಕಲ್ಯಾಣ ತಾಲೂಕಾ ಕಾಯ೯ನಿರತ ಪತ್ರಕತ೯ರ ಸಂಘದ ಅಧ್ಯಕ್ಷ ಗುರುನಾಥ ಗಡ್ಡೆ ಅವರು ಕಾಯ೯ಕ್ರಮವನ್ನುದ್ದೇಶಿಸಿ ಮಾತನಾಡುತಿರುವುದು. 


ಬುಧವಾರ, ಜುಲೈ 13, 2011

ಪತ್ರಿಕಾ ದಿನಾಚರಣೆ ಅಂಗವಾಗಿ

 ಪತ್ರಕತ೯ರಾದ ದೇವು ಪತ್ತಾರ್ ಅವರು ಶಂಕರ ಪ್ರಸಾದ ದುಬೆ ಪ್ರಶಸ್ತಿ ಸ್ವೀಕರಿಸಿ ಮಾತನಾಡುತಿರುವುದು.
 ಮುಚಳಂಬ ಪ್ರಣವಾನಂದ ಶ್ರೀಗಳು ಪತ್ರಿಕಾ ದಿನಾಚರಣೆ ಅಂಗವಾಗಿ ಮಾತನಾಡುತಿರುವುದು.
 ಪ್ರಶಸ್ತಿ ಪುರಸ್ಕ್ರತರು ಮತ್ತು ಅತಿಥಿಗಳು

ಕಾಯ೯ಕ್ರಮದಲ್ಲಿ ಶಾಸಕ ಬಸವರಾಜ ಪಾಟೀಲ ಅಟ್ಟೂರ್, ಈ ಸಂದಭ೯ದಲ್ಲಿ ಮುಚಳಂಬದ ಪ್ರಣವಾನಂದ ಸ್ವಾಮಿಗಳು, ಕ.ಕಾ.ಪ.ಸಂಘದ ಜಿಲ್ಲಾಧ್ಯಕ್ಷ ಮಾಥಪ್ಪ ಅಡಸಾರೆ, ನಗರ ಸಭೆ ಅಧ್ಯಕ್ಷೆ ಮಂಗಲಾಬಾಯಿ ಉದರೆ, ಆನಂದ ದೇವಪ್ಪ, ಸಿದ್ರಾಮಯ್ಯ ಸ್ವಾಮಿ, ದೇವು ಪತ್ತಾರ, ಮಾಳಪ್ಪ ಅಡಸಾರೆ, ಡಾ.ಗವಿಸಿದ್ಧಪ್ಪ ಪಾಟೀಲ, ಮಂಗಲಬಾಯಿ ಉದರೆ ಮುಂತಾದವರಿದ್ದರು.
----------------------------------------------------------------------------------------------------------------------------

ಬಸವಕಲ್ಯಾಣಃ ಜು.06ಃ ಪತ್ರಿಕಾ ರಂಗ ಎಂಬುದು ಪವಿತ್ರವಾದಂಥ ಕಾಯ೯ ಆಗಿರುವುದರಿಂದ ಪತ್ರಿಕೆಗಳ ಪಾವಿತ್ರ್ಯತೆ ಕಾಪಾಡಿಕೊಂಡು ಹೋಗುವಂಥ ಜವಾಬ್ದಾರಿ ಪತ್ರಕತ೯ರ ಮೇಲಿರುತ್ತದೆ. ಯಾವುದೇ ರಾಜಕೀಯ ವ್ಯಕ್ತಿಗಳ ಕಣ್ಣನ್ನು ತೆರೆಸುವ ಪತ್ರಿಕೆಗಳು ತಪ್ಪನ್ನು ಮಾಡಿದವರನ್ನು ಬಡಿದೆಚ್ಚರಿಸುವ ಕೆಲಸ ಮಾಡುತಿವೆ. ಇನ್ನಷ್ಟು ಪರಿಣಾಮಕಾರಿಯಾದ ವರದಿಗಳಿಂದ ಜನಸಾಮಾನ್ಯರ ಮನಸನ್ನು ಗೆಲ್ಲವಂತಾಗಬೇಕು ಎಂದು ಶಾಸಕ ಬಸವರಾಜ ಪಾಟೀಲ ಅಟ್ಟೂರ್ ಅವರು ಅಭಿಪ್ರಾಯಪಟ್ಟರು.

ನಗರದಲ್ಲಿ ತಾಲೂಕಾ ಕನಾ೯ಟಕ ಕಾಯ೯ನಿರತ ಪತ್ರಕತ೯ರ ಸಂಘ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಉಪನ್ಯಾಸ ಮತ್ತು ಪ್ರಶಸ್ತಿ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತ, ಪತ್ರಕತ೯ರು ತಮ್ಮ ಜೀವಭಯವನ್ನು ಬಿಟ್ಟು ವರದಿಗಳನ್ನು ಮಾಡುವಾಗ ಅನೇಕ ಎಡರುತೊಡರುಗಳನ್ನು ಎದುರಿಸಬೇಕಾಗುತ್ತದೆ. ತಪ್ಪು ಮಾಡಿದವರ ಕುರಿತು ಬರೆದ ವರದಿಯನ್ನು ತಿದ್ದಿಕೊಳ್ಳುವ ಪ್ರಯತ್ನ ತಪ್ಪಿತಸ್ಥರು ಮಾಡಬೇಕೆ ಹೊರತು ವರದಿ ಅಥವಾ ವರದಿಗಾರ ತಪ್ಪೆಂದು ಭಾವಿಸಲಾಗದು ಎಂದರು.

ಪತ್ರಕತ೯ರಿಗಾಗಯೆ ಸಕಾ೯ರ ಅನೇಕ ಸೌಲಭ್ಯಗಳನ್ನು ಒದಗಿಸಿಕೊಡಲು ಮುಂದಾಗಿದೆ. ಅವುಗಳನ್ನು ಪಡೆಯಲು ಅಹ೯ರಾದ ತಾಲೂಕಾ ಪತ್ರಕತ೯ರು ಪಿಂಚಣಿ ಯೋಜನೆ ಸೇರಿದಂತೆ ಮುಂತಾದ ಸೌಲಭ್ಯಗಳನ್ನು ಪಡೆಯಬೇಕು. ಅದಕ್ಕೆ ಬೇಕಾದ ಸಹಕಾರ ಒದಗಿಸುತ್ತೇನೆಂದರು.

ಶಂಕರ ಪ್ರಸಾದ ದುಬೆ ಪ್ರಶಸ್ತಿ ಸ್ವೀಕರಿಸಿ ಪತ್ರಕತ೯ ದೇವು ಪತ್ತಾರ ಮಾತನಾಡಿ, ಪತ್ರಕತ೯ರ ಶ್ರಮಕ್ಕೆ ಮನ್ನಣೆ ಸಿಕ್ಕಾಗ ಇನ್ನಷ್ಟು ಉತ್ತೇಜನ ಸಿಗುತ್ತದೆ. ಆದರೆ ಹಿರಿಯರೊಂದಿಗೆ ಕಿರಿಯ ಪತ್ರಕತ೯ರನ್ನು ಗುರುತಿಸಿ ಸನ್ಮಾನಿಸುವುದೆಂದರೆ ಇನ್ನಷ್ಟು ಉತ್ತಮವಾದ ಕಾಯ೯ ಪತ್ರಿಕಾರಂಗದಲ್ಲಿ ಮಾಡಲಿ ಎಂದಾಗಿರುತ್ತದೆ ಎಂಬುದು ಭಾವಿಸಿದ್ದೇನೆ. ಪತ್ರಿಕೋದ್ಯಮದಲ್ಲಿ ಇರುವವರೆಲ್ಲ ಸೋಮಾರಿಗಳು ಆಗಿರುತ್ತಾರೆ ಎಂಬ ಕಲ್ಪನೆ ಇತ್ತು. ಇದೀಗ ಬೀದರಗೆ ಬಂದಾಗ ನಿಜಕ್ಕೂ ಪತ್ರಕತ೯ನ ಜವಾಬ್ದಾರಿ ಮತ್ತು ಒತ್ತಡಗಳು ಎಷ್ಟಿರುತ್ತವೆಂಬುದು ಅರಿತುಕೊಂಡಿದ್ದೇನೆ. ನನ್ನನ್ನು ಗುರುತಿಸಿ ಸನ್ಮಾನಿಸಿರುವುದು ನನ್ನ ಕತ೯ವ್ಯದಲ್ಲಿರುವ ಜವಾಬ್ದಾರಿಗಳು ಇನ್ನಷ್ಟು ಹೆಚ್ಚಾಗಿವೆ ಎಂದರು.

ಜಿಲ್ಲಾ ಮಟ್ಟದ ಸಂಪಾದಕರಿಗೆ ನೀಡುವ ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡಿದ ತಿಪ್ಪಣ್ಣಾ ಭೋಸಲೆ ತಾಲೂಕಾ ಮಟ್ಟದಲ್ಲಿ ಅಚ್ಚುಕಟ್ಟಾದ ಸಮಾರಂಭವವನ್ನು ಮಾಡಿ ಸೇವೆ ಸಲ್ಲಿಸಿದವರನ್ನು ಗುರುತಿಸಿ ಪ್ರಶಸ್ತಿ ನೀಡುತಿರುವುದು ಇಂದಿನ ಅನೇಕ ಲಾಬಿಗಳ ನಡುವೆ ಪಡೆದುಕೊಳ್ಳುವ ಪ್ರಶಸ್ತಿಗಳಿಗಿಂತ ಪಾರದಶ೯ಕತೆ ಹೊಂದಿದೆ. ಪತ್ರಿಕೆ ನಡೆಸುವುದು ಸರಳವಾದುದ್ದಲ್ಲ. ಪತ್ರಕತ೯ನ ಜೀವನ ಬಹಳ ಕಷ್ಟಕರವಾಗಿದೆ.

ಪತ್ರಕತ೯ರು ತಮ್ಮ ಹೊಣೆಗಾರಿಕೆಯನ್ನು ಅಥೈ೯ಸಿಕೊಂಡು ಸಮಾಜದ ನಾನ ಬಗೆಯ ಜನರೊಂದಿಗೆ ಸ್ಪಂಧಿಸುವ ನಿಟ್ಟಿನಲ್ಲಿ ಉತ್ತಮ ವರದಿಗಳನ್ನು ನೀಡುವುದರ ಜೊತೆಗೆ ಸಮಾಜದ ಓರೆಕೋರೆಗಳನ್ನು ತಿದ್ದುವ ಕೆಲಸ ಮಾಡುತ್ತಾನೆ. ಕೇಳಿ ಪಡೆಯುವಂಥ ಪ್ರಶಸ್ತಿ ಸ್ವೀಕರಿಸದೇ ಗುರುತಿಸಿ ಕೊಡುವಂಥ ಪ್ರಶಸ್ತಿಗಳಿಗೆ ಮಾನ್ಯತೆ ಕೊಡಬೇಕು ಎಂದರು.

ಮುಖ್ಯ ಅತಿಥಿಗಳಾಗಿಕನಾ೯ಟಕ ಕಾಯ೯ನಿರತ ಪತ್ರಕತ೯ರ ಸಂಘ ಕೇಂದ್ರ ಸಮಿತಿ ಸದಸ್ಯ ಆನಂದ ದೇವಪ್ಪ ಮಾತನಾಡಿ, ರಾಜಕೀಯ ಪ್ರತಿನಿಧಿಗಳ ಕಾಯ೯ಕ್ರಮಗಳ ಉತ್ತಮವಾದ ವರದಿಗಳನ್ನು ಪತ್ರಕತ೯ರು ಮಾಡಿದಾಗ ಖುಷಿ ಪಡುವಂತೆ ಕೆಟ್ಟ ಕೆಲಸಗಳನ್ನು ಮಾಡಿರುವ ಬಗ್ಗೆ ಪತ್ರಕತ೯ರು ರಾಜಕೀಯ ವ್ಯಕ್ತಿಗಳ ಮತ್ತು ಅಧಿಕಾರಿಗಳ ವರದಿ ಮಾಡಿದಾಗ ಕೋಪ ಮಾಡಿಕೊಳ್ಳದೇ ಮಾಡಿರುವ ತಪ್ಪುಗಳನ್ನು ತಿದ್ದಿಕೊಳ್ಳಬೇಕು ಎಂದರು.

ಜಿಲ್ಲಾ ಮಟ್ಟದ ಕನ್ನಡೇತರ ಪತ್ರಕತ೯ ಪ್ರಶಸ್ತಿ ಕೈಸರ್ ರೆಹಮಾನ, ಜಿಲ್ಲಾ ಮಟ್ಟದ ಉತ್ತಮ ವರದಿಗಾರ ಪ್ರಶಸ್ತಿ ಸೋಮನಾಥ ಬಿರಾದಾರ, ತಾಲೂಕಾ ಮಟ್ಟದ ಉತ್ತಮ ವರದಿಗಾ ಪ್ರಶಸ್ತಿ ಮಾಥ೯ಂಡ ಜೋಶಿ ಅವರುಗಳು ಪ್ರಶಸ್ತಿ ಸ್ವೀಕರಿಸಿ ತಮ್ಮ ಅನುಭವಗಳನ್ನು ಹಂಚಿಕೊಂಡರು.

ಕಾಯ೯ಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾಳಪ್ಪ ಅಡಸಾರೆ ಮಾತನಾಡಿ, ಬೀದರ ಜಿಲ್ಲೆಯಲ್ಲಿ ಒಂದು ಕೋಟಿ ರು. ವೆಚ್ಚದಲ್ಲಿ ಪತ್ರಕತ೯ರ ಭವನ ನಿಮಿ೯ಸಲು ಈಗಾಗಲೆ ಮುಖ್ಯಮಂತ್ರಿ ಯಡಿಯೂರಪ್ಪನವರು ಅಡಿಗಲ್ಲು ಸಮಾರಂಭ ನೆರವೇರಿಸಿದ್ದಾರೆ. ಅದೇ ರೀತಿ ಬಸವಕಲ್ಯಾಣದಲ್ಲಿ ಶೀಘ್ರವೇ ಪತ್ರಕತ೯ರ ಭವನಕ್ಕೆ ಹಸಿರು ನಿಶಾನೆ ದೊರೆತಿದೆ. ಕಾ೯ರದಿಂದ ಪತ್ರಕತ೯ರಿಗಾಗಿ ಪ್ರತ್ಯೇಕ ನಿವೇಶನಗಳು ಇಲ್ಲಿಯ ಸ್ಥಳೀಯ ಶಾಸಕರು ಮಾಡಿಸಿ ಕೊಡಬೇಕು ಎಂದರು.

ಮುಚಳಂಬ ಪ್ರಣವಾನಂದ ಸ್ವಾಮಿಗಳು ಅಶಿವ೯ಚನ ನೀಡಿ, ಸಮಾಜದ ಕಣ್ಣನ್ನು ತೆರೆಸುವ ಶಕ್ತಿ ಪತ್ರಿಕೆಗಳಿಗಿದೆ. ಅದರ ಹಿಂದಿನ ಶಕ್ತಿಯಾಗಿ ಪತ್ರಕತ೯ರು ನಿವ೯ಹಿಸುತಿದ್ದಾರೆ. ಅವರಿಗೆ ಯ3ವುದೇ ರೀತಿಯ ಆದಾಯವಲ್ಲದಿದ್ದರೂ ಸಮಾಜದ ಪರಿವತ೯ನೆಗೆ ಪಣತೊಟ್ಟು ತ್ಯಾಗ ಮನೋಭಾವನೆಯಿಂದ ನಿಸ್ವಾಥ೯ ಸೇವೆ ಮಾಡುವವರಾಗಿರುತ್ತಾರೆ. ಅವರ ಕಷ್ಟಗಳಿಗೆ ಸಮಾಜದವರೆಲ್ಲ ಸಹಕರಿಸುತ್ತ ಉತ್ತಮ ಸಮಾಜ ನಿಮಾ೯ಣಕ್ಕೆ ಕೈಜೋಡಿಸಬೇಕು ಎಂದು ನುಡಿದರು.

ಇದೇ ಸಂದಭ೯ದಲ್ಲಿ ಹಿರಿಯ ಪತ್ರಕತ೯ ಧನರಾಜ ಫುಲಾರೆ ಅವರನ್ನು ಗೌರವ ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಡಾ. ಗವಿಸಿದ್ಧಪ್ಪ ಪಾಟೀಲ, ಮಾಥ೯ಂಡ ಜೋಶಿ ಇದ್ದರು. ಗುರುನಾಥ ಗಡ್ಡೆ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಚನ್ನಬಸವ ಬಿರಾದಾರ ನಿರೂಪಿಸಿದರೆ ಭೀಮಾಶಕಂರ ಬಿರಾದಾರ ಸಂದಿಸಿದರು. ಕಾಯ೯ನಿರತ ಪತ್ರಕತ೯ರ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಮಂಠಾಳಕರ್ ಕವನ ವಾಚನ

 ಮಂಠಾಳಕರ್ ಕವನ ವಾಚನ
ಇದೇ ಜುಲೈ 12, 2011 ರಂದು ಭಾಲ್ಕಿಯಲ್ಲಿ ನಡೆದ ತಾಲೂಕಾ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ವೀರಣ್ಣ ಮಂಠಾಳಕರ್ ಅವರು ಕವಿಗೋಷ್ಠಿಯಲ್ಲಿ ಭಾಗವಹಿಸಿದ್ದ ಸಂದಭ೯ದಲ್ಲಿ ಸಮ್ಮೇಳನಾಧ್ಯಕ್ಷರಾದ ಸುಬ್ಬಣ್ಣ ಅಂಬೆಸಂಗೆ ಅವರಿಂದ ಗೌರವ ಸನ್ಮಾನ ಸ್ವೀಕರಿಸಿದರು. ಇದೇ ಸಂದಭ೯ದಲ್ಲಿ ಮತ್ತೆ ಹುಟ್ಟಿ ಬರುವುದನ್ನೇ ಮರೆತಿದ್ದಾರೆ ಎಂಬ ಕವಿತೆಯನ್ನು ಓದುವುದರಲ್ಲಿ... ಮೇಲ್ಕಾಣುವ ಚಿತ್ರದಲ್ಲಿ ವೀರಣ್ಣ ಮಂಠಾಳಕರ್.

ಶುಕ್ರವಾರ, ಜೂನ್ 24, 2011

ಬಸವಕಲ್ಯಾಣ ನೆಲದ ಸುತ್ತ


ಮಾಜಿ ಶಾಸಕ ಮಲ್ಲಿಕಾಜು೯ನ ಖೂಬಾ ಶಾಸಕ ಬಸವರಾಜ ಪಾಟೀಲ ಅಟ್ಟೂರ್



ದಿನಾಂಕಃ 24-ಜೂನ್, 2011
--------------------------------------------------------------------------------------------------------------------
ಭಾಲ್ಕಿಯಲ್ಲಿ ಈಗಾಗಲೇ ಈಶ್ವರ ಖಂಡ್ರೆ ಅವರು ಶಾಸಕರಿದ್ದು ಅವರು ಬಸವಕಲ್ಯಾಣಕ್ಕೆ ಬರುವ ಅವಶ್ಯಕತೆ ಏನಿದೆ..? ಅಲ್ಲಿ ಅವರು ಪ್ರಕಾಶ ಖಂಡ್ರೆಯವರಿಗೆ ನೇರಸ್ಪಧಿ೯ ಇದ್ದು ಇಲ್ಲಿಗ್ಯಾಕೆ ಬರಬಹುದೆಂಬ ಜನರಲ್ಲಿರುವ ಪ್ರಶ್ನೆಗೆ ಒಂದು ಸ್ಪಷ್ಟ ಉತ್ತರವೂ ಕಂಡು ಹಿಡಿದಂತಿದೆ. ಅದೇನೆಂದರೆ ಕಳೆದ ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಕಾಂಗ್ರೇಸ್ ಪಕ್ಷಕ್ಕೆ ಬಹುಮತ ಸಾಬೀತುಪಡಿಲು ಆಗದಿರುವುದು ಒಂದು ನೆಪವಾದರೆ, ಒಂದೇ ಪರಿವಾರದಲ್ಲಿರುವ ಬಿಕ್ಕಟ್ಟನ್ನು ಬಗೆಹರಿಸಿಕೊಳ್ಳಲು ಇದೊಂದು ಸುಲಭ ಮಾಗ೯ವಾದೀತು. ಒಳಗೊಳಗೇ ಇರುವ ಖಂಡ್ರೆ ಪರಿವಾರದಲ್ಲಿರುವ ಒಳಜಗಳಗಳಿಗೆ ತುಪ್ಪ ಸುರಿಯುವುದಕ್ಕಿಂತ ದೂರವಿದ್ದು ಹತ್ತಾರು ವಷ೯ಗಳಿಂದಲೂ ಪ್ರಬಲ ನಾಯಕರ ಕೊರತೆಯನ್ನು ಎದುರಿಸುತಿರುವ ಬಸವಕಲ್ಯಾಣಕ್ಕೆ ಹೋಗಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜಿಗಿಯಬೇಕೆಂಬ ಅಪೇಕ್ಷೆ ಹೊಂದಿದ್ದಾರೆ ಎನ್ನಲಾಗುತಿದೆ. ಪಕ್ಷದಲ್ಲಿರುವ ಬಿಕ್ಕಟ್ಟು ನಿವಾರಿಸುವ ನಿಟ್ಟಿನಲ್ಲಿ ಈಶ್ವರ ಖಂಡ್ರೆ ಅವರು ಚಿಂತಿಸುತಿದ್ದಾರೆ ಎಂಬ ವಾದಗಳು ಸಹ ಜನ ವಲಯದಲ್ಲಿ ಕೇಳಿ ಬರುತಿವೆ. ಬಸವಕಲ್ಯಾಣ ತಾಲೂಕಿನ ಕಾಂಗ್ರೇಸ್ ಮುಖಂಡರುಗಳಲ್ಲಿಯೇ ಒಬ್ಬರಿಗೊಬ್ಬರು ಕಂಡರೆ ಹಾವು ತುಳಿದವರಂತೆ ವತಿ೯ಸುವ ಪಕ್ಷದ ಕಾಯ೯ಕತ೯ರುಗಳಲ್ಲಿ ಮುಸುಕಿನ ಗುದ್ದಾಟ ಶುರುವಾಗಿದೆ. ಬಸವಕಲ್ಯಾಣದಲ್ಲಿ ಯಾರೊಬ್ಬರಿಗೂ ಪ್ರಬಲ ನಾಯಕರಾಗಿ ಬೆಳೆಯುವುದಕ್ಕೆ ಜನಬೆಂಬಲದ ಕೊರತೆ ಸಾಕಷ್ಟಿದೆ ಎನ್ನುವವರು ಈಶ್ವರ ಖಂಡ್ರೆ ಅವರು ಭಾಗಕ್ಕೆ ಬಂದರೆ ಸ್ವಾಗತಿಸುವವರು ಇದ್ದಾರೆನ್ನುವಂತಿದೆ. ಆದರೆ ಜೆಡಿಎಸ್ ನಿಂದ ಕಾಂಗ್ರೇಸ್ ಪಕ್ಷದಲ್ಲಿ ಸೇಪ೯ಡೆ ಹೊಂದಬೇಕೆಂಬುದು ಮಾಜಿ ಶಾಸಕ ಮಲ್ಲಿಕಾಜು೯ನ ಖೂಬಾ ಅವರು ತಮ್ಮ ಆಪ್ತ ವಲಯಗಳಲ್ಲಿ ಪ್ರಸ್ತಾಪಿಸುತಿರುವುದನ್ನು ಗಾಳಿ ಸುದ್ದಿ ಹರಡುತಿದೆ. ಇನ್ನೋವ೯ ಮಾಜಿ ಶಾಸಕ ಎಂ.ಜಿ.ಮೂಳೆ ಅವರು ಕೂಡ ಕಾಂಗ್ರೇಸ್ ನಿಂದ ಟಿಕೇಟ್ ಪಡೆಯುವ ಅಕಾಂಕ್ಷಿ ಆಗಿದ್ದಾರೆ ಎನ್ನುವ ಅದೇ ಜನಗಳು ಹಳೇ ಮುಖಗಳನ್ನು ಕಂಡು ಕಂಡು ಬೇಸರಿಸಿದವರಂತೆ ಪ್ರತಿಕ್ರಿಯಿಸುತ್ತಾರೆ. ಹೀಗಾಗಿ ಈಶ್ವರ ಖಂಡ್ರೆ ಅವರು ಬಸವಕಲ್ಯಾಣಕ್ಕೆ ಬಂದರೆ ಉತ್ತಮವಾಗುತ್ತದೆ ಎಂಬುದು ಸಹಸ್ರಾರು ಸಂಖ್ಯೆಯಲ್ಲಿರುವ ಜನಭಿಪ್ರಾಯದಲ್ಲಿ ಅಲಲ್ಲಿ ಕೇಳಿ ಬರುತಿದೆ. ಅದಕ್ಕಾಗಿ ಹೀಗೊಂದು ಸುತ್ತು ಜನಸಾಮಾನ್ಯರೊಂದಿಗೆ ಸಮೀಕ್ಷೆ ನಡೆಸಿದಾಗ ಹಲವು ಕುತೂಹಲದ ಸಂಗತಿಗಳು ಕಂಡು ಬಂದವು. ಬಳಿಕ ರಾಜಕೀಯ ವಲಯದಲ್ಲಿರುವ ನೆಗೆಟೀವ್ ಪಾಜೀಟಿವ್ ವಿಚಾರಗಳು ಸಮಸಮವಾಗಿ ಗೋಚರಿಸಿರುವುದನ್ನು ಹಲವರ ವಿಚಾರಗಳಿಂದ ತಿಳಿದು ಬಂತು. ಒಟ್ಟಿನಲ್ಲಿ ಬಸವಕಲ್ಯಾಣ ತಾಲೂಕಿಗೆ ಒಬ್ಬ ಪ್ರಬಲ ನಾಯಕನ ಕೊರತೆ ಯಾರು ನೀಗಿಸುತ್ತಾರೆ ಎಂಬುದು ಕುತೂಹಲದ ಸಂಗತಿ ಮುಂದಿನ ರಾಜಕೀಯ ಬೆಳವಣಿಗೆ ಏನಾಗಬಹುದೆಂಬ ನಿಗೂಢ ಗುಪ್ತಚಾರಗಳು ದಿನೆ ದಿನೆ ಬಹಿರಂಗಗೊಳ್ಳುತಿವೆ. ಬಸವಕಲ್ಯಾಣ ತಾಲೂಕಿನ ರಾಜಕೀಯ ಬೆಳವಣಿಗೆ ಮುಂದೆ ಏನಾಗಬಹುದು ಮತ್ತು ಸಧ್ಯದ ಪರಿಸ್ಥಿತಿಯಲ್ಲಿ ರಾಜಕೀಯದಲ್ಲಿ ಏನು ನಡೆಯುತಿದೆ ಎಂಬ ಕುರಿತು ಸುದೀಘ೯ವಾದ ದಿನಗಳಲ್ಲಿ ಹಲವರಿಂದ ಕೇಳಿ ಬಂದ ಮಾತುಗಳನ್ನು ಇಲ್ಲಿ ಕಲೆ ಹಾಕಿಕೊಂಡು ಪ್ರಸ್ತಾಪಿಸಲಾಗಿದೆ. ನಿಮ್ಮ ಅಭಿಪ್ರಾಯ ಏನಾಗಿರಬಹುದೆಂಬುದು ತಿಳಿಸುವುದಕ್ಕೆ ಇಲ್ಲಿ ಮುಕ್ತ ಅವಕಾಶವಿದೆ........


ನಿಮ್ಮ ಸಂಪಾದಕ
ವೀರಣ್ಣ ಮಂಠಾಳಕರ್

ಬಸವಕಲ್ಯಾಣ ತಾಲೂಕಿನಲ್ಲಿ ಪ್ರಬಲ ಕಾಂಗ್ರೇಸ್ ನಾಯಕರಿಲ್ಲದ ಕೊರಗನ್ನು ನೀಗಿಸುವ ನಿಟ್ಟಿನಲ್ಲಿ ಬೀದರ ಜಿಲ್ಲೆಯ ರಾಜಕೀಯ ಗಣ್ಯರ ಕಣ್ಣು ಬಸವಕಲ್ಯಾಣ ನೆಲದ ಮೇಲೆ ಬಿದ್ದಿದೆ. ಮುಂದಿನ ದಿನಗಳಲ್ಲಿ ಬಸವಕಲ್ಯಾಣ ಉಸ್ತುವಾರಿ(ಜವಾಬ್ದಾರಿ) ನನ್ನದೆಂದು ಹೇಳಿದ ಬಾಲ್ಕಿ ಶಾಸಕ ಈಶ್ವರ ಖಂಡ್ರೆ ಅವರು ಬಹಿರಂಗವಾಗಿ ಕಾಯ೯ಕ್ರಮಗಳಲ್ಲಿ ಹೇಳಿಕೊಂಡಿರುವುದರಿಂದ ಅನೇಕರಲ್ಲಿ ಈಶ್ವರ ಅವರು ಮುಂಬರುವ ವಿಧಾನಸಭಾ ಚುನಾವಣೆಗೆ ಇಲ್ಲಿ ಬಂದರೂ ಬರಬಹುದೆಂಬ ಊಹಾಪೂಹಗಳು ಶುರುವಾಗಿವೆ.

ಕಾರಣ ಬಸವಕಲ್ಯಾಣದಲ್ಲಿ ಹಲವಾರು ವಷ೯ಗಳಿಂದ ಖಂಡ್ರೆ ಪರಿವಾರದಿಂದ ನಡೆಯುವ ಪ್ರತಿವಷ೯ದ ಅದ್ಧೂರಿಯ ಶರಣ ಕಮ್ಮಟಗಳಿಂದ ಇವರ ಬಗ್ಗೆ ಆತ್ಮವಿಶ್ವಾಸ ಹೆಚ್ಚಿಸಿದೆ. ಇದರಿಂದ ಅವರಿಗೆ ಲಾಭದಾಯಕ ಅಂಶವೆನ್ನಲಾಗುತಿದೆ. ಬಸವಕಲ್ಯಾಣದೊಂದಿಗೆ ಹಲವು ದಶಕಗಳ ನಂಟನ್ನು ಬೆಳೆಸಿಕೊಂಡಿರುವ ಬೀಮಣ್ಣ ಖಂಡ್ರೆ ಹಾಗೂ ಅವರ ಮಗ ಭಾಲ್ಕಿಯ ಪ್ರಭಾವಿ ಶಾಸಕ ಈಶ್ವರ ಖಂಡ್ರೆ ಅವರು ಕಲ್ಯಾಣದ ಜನತೆಯೊಂದಿಗೆ ಉತ್ತಮವಾದ ಬಾಂಧವ್ಯವನ್ನು ಇಟ್ಟುಕೊಂಡಿದ್ದಾರೆ.

ಬಸವಕಲ್ಯಾಣದಲ್ಲಿ ಮಹತ್ವದ ಅನೇಕ ಕಾಯ೯ಕ್ರಮಗಳು ನಡೆಸಿರುವ ಈಶ್ವರ ಖಂಡ್ರೆ ಅವರಲ್ಲಿ ವಿಶಿಷ್ಟ ವ್ಯಕ್ತಿತ್ವ ಕಂಡಿರುವ ಜನರ ಮನದಲ್ಲಿ ಉಳಿದುಕೊಂಡಿದ್ದಾರೆ. ಹಾಗಾಗಿ ಈ ರೀತಿ ನಡೆಯುತಿರುವ ಜನಸಾಮಾನ್ಯರ ಒಳಗಿನ ಚಚೆ೯ಗಳಿಂದ ಮುಂದಿನ ಶಾಸಕರಾಗಿ ಖೂಬಾ, ಅಟ್ಟೂರ್, ಎ.ಜಿ.ಮೂಳೆ, ಖಂಡ್ರೆ ಇವರಲ್ಲಿ ಯಾರಾಗಬಹುದೆಂಬ ಚಚೆ೯ಗೆ ಗ್ರಾಸವಾಗಿ ರಾಜಕೀಯ ವಲಯದಲ್ಲಿ ಕೈ ಕೈ ಹಿಸುಕಿಕೊಳ್ಳುವಂತಾಗಿದೆ.

ಇಲ್ಲಿ ನಡೆಯುವ ಕಾಂಗ್ರೇಸ್ ಪಕ್ಷದ ವತಿಯಿಂದ ಯಾವುದೇ ಕಾಯ೯ಕ್ರಮಗಳನ್ನು ಯಾವ ರೀತಿ ಹೇಗೆ ನಡೆಯಬೇಕೆಂಬುದು ಚಾಕ್ಔಟ್ ಮಾಡುತ್ತೇನೆ. ಬಸವಕಲ್ಯಾಣದಲ್ಲಿರುವ ಪಕ್ಷದ ಕಾಯ೯ಕತ೯ರೊಂದಿಗೆ ಪ್ರತಿ ತಿಂಗಳು ಸಮಾಲೋಚಿಸಿ ಬಸವಕಲ್ಯಾಣದಲ್ಲಿಯ ಕಾಂಗ್ರೇಸ್ ಪಕ್ಷದಲ್ಲಿರುವ ತೊಡಕುಗಳನ್ನು ನಿವಾರಿಸಿ ನಾಯಕರ ಕೊರತೆಯನ್ನು ನೀಗಿಸುವಲ್ಲಿ ಮುಂದಾಗುತ್ತೇನೆ ಎಂದಿರುವ ಖಂಡ್ರೆಯವರು ಇಲ್ಲಿನ ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಹೊರಟಿದ್ದಾರೆ. ಇದರಿಂದ ಸ್ಥಳೀಯ ಕಾಯ೯ಕತ೯ರಲ್ಲಿ ಕೂಡ ಹೊಸ ಹುರುಪನ್ನು ತುಂಬಿ ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸುವಂಥ ವಾತಾವರಣ ಬದಲಾಗುತಿದೆ.

ಶಾಸಕ ಈಶ್ವರ ಖಂಡ್ರೆ ಅವರು ಮುಂಬರುವ ವಿಧಾನಸಭಾ ಚುನಾವಣೆಗೆ ಕಲ್ಯಾಣದ ನೆಲದಲ್ಲಿ ಬಂದು ನೆಲೆಯೊರುವರೇ ಎಂಬ ಚಚೆ೯ಗಳು ಸಹ ಹೋಟೆಲ್, ಅಂಗಡಿ, ಸೇರಿದಂತೆ ತಾಲೂಕಿನ ಸುತ್ತಲಿರುವ ಗ್ರಾಮಗಳಲ್ಲಿ, ಗುಂಪುಕಟ್ಟಿ ಚಚಿ೯ಸುವ ಜನರಲ್ಲಿ ವಿಸ್ಮಯಕಾರಿ ಊಹಾಪೂಹಗಳು ನಡೆಯುತಿವೆ. ಇಂತಹ ಚಚಾ೯ಸ್ಪದ ಮಾತುಗಳು ಕೇಳಿ ಬರುತಿರುವುದು ಸಹಜವೆನ್ನುವಂತಿದ್ದರೂ ಕಾಂಗ್ರೇಸ್ ಪಕ್ಷದ ತಾಲೂಕಾ ಮಾಜಿ ಅಧ್ಯಕ್ಷರುಗಳಲ್ಲಿ ಪಕ್ಷದ ತಾಲೂಕಾ ಅಧ್ಯಕ್ಷನಾಗಬೇಕೆಂಬ ಹಂಬಲದಲ್ಲಿರುವ ಕಾಯ೯ಕತ೯ರಲ್ಲೂ ತಾಲೂಕಿನಲ್ಲಿ ನಾಯಕತ್ವ ಪಡೆಯಬೇಕೆಂಬ ಮುಸುಕಿನ ಗುದ್ದಾಟ ಶುರುವಾಗಿದೆ.

ಸ್ಥಳೀಯ ಮಾಜಿ ಶಾಸಕ ಮಲ್ಲಿಕಾಜು೯ನ ಖೂಬಾ ಅವರು ಇತ್ತೀಚಿಗೇಕೋ ಮೌನವಹಿಸಿದ್ದರೂ ಕೂಡ ಬೂದಿ ಮುಚ್ಚಿದ ಕೆಂಡದಂತೆ ಅವರು ಒಳಗೊಳಗೆ ಮುಂಬರುವ ಚುನಾವಣೆಗಾಗಿ ಎಲ್ಲಾ ರೀತಿಯ ತಯ್ಯಾರಿ ನಡೆಸುತಿದ್ದಾರೆ ಎನ್ನಲಾಗುತಿದೆ. ಹಾಲಿ ಶಾಸಕ ಬಸವರಾಜ ಪಾಟೀಲ ಅಟ್ಟೂರ್ ಅವರು ಮುಂದಿನ ಚುನಾವಣೆಯ ಅಖಾಡಕಿಳಿಯಲು ಜನರ ವಿಶ್ವಾಸ ಉಳಿಸಿಕೊಳ್ಳಬೇಕು ಎನ್ನುವ ಜನರು ವಿಧಾನಸಭಾ ಚುನಾವಣೆ ಮುನ್ನದ ಉಳಿದ ದಿನಗಳಲ್ಲಿ ಅಭಿವ್ರದ್ಧಿ ಕಾಯ೯ಗಳು ಚುರುಕುಗೊಳಿಸಿ ಆಮೆಗತಿ ನಡಿಗೆಯಲ್ಲಿರುವ ಹತ್ತು ಹಲವು ಅಭಿವ್ರದ್ದಿಯ ಕಾಮಗಾರಿಗಳು, ನೆನೆಗುದಿಗೆ ಬಿದ್ದಿರುವ ಭರವಸೆಗಳು ಈಡೇರಿಸುವ ಯತ್ನದಲ್ಲಿ ಸಾಗಬೇಕು. ಜನರಲ್ಲಿ ವಿಶ್ವಾಸವನ್ನು ಮೂಡಿಸುವಂಥ ಪ್ರಯತ್ನ ಅಟ್ಟೂರ್ ಅವರು ಮಾಡಿದರೆ ಉತ್ತಮವೆಂದು ಭಾವಿಸುವ ಅವರ ಹಿತ ಚಿಂತಕರು ಇಲ್ಲಿದ್ದಾರೆ.

ಇತ್ತೀಚಿಗೆ ಕನಾ೯ಟಕ ಕ್ಷತ್ರಿಯ ಮರಾಠಾ ಪರಿಷತ್ತಿನ ಗೌನಿ೯ಂಗ್ ಕೌನ್ಸಿಲ್ ಅಧ್ಯಕ್ಷರಾಗಿ ಮಾಜಿ ಶಾಸಕ ಎಂ.ಜಿ.ಮುಳೆಯವರು ನೇಮಕಗೊಂಡಿದ್ದಾರೆ. ಕನಾ೯ಟಕ ರಾಜ್ಯದಲ್ಲಿ 60 ಲಕ್ಷ ಮರಾಠಾ ಮತದಾರರಿದ್ದು ಬೀದರ ಜಿಲ್ಲೆಯಲ್ಲಿ ಮೂರು ಲಕ್ಷ ಮರಾಠಾ ಜನರಿದ್ದಾರೆ. ಮುಳೆಯವರ ನೇಮಕದಿಂದ ಬೀದರ ಜಿಲ್ಲೆ ಅಷ್ಟೇ ಅಲ್ಲದೆ, ಕನಾ೯ಟಕದ ಮರಾಠಾ ಜನರನ್ನು ಒಗ್ಗೂಡಿಸುವ ಕಾಯ೯ ಮುಳೆಯವರು ಮಾಡಲಿದ್ದಾರೆ ಎಂದು ಮೂಳೆ ಅವರ ಕಾಯ೯ಕತ೯ರಲ್ಲಿ ಮತ್ತು ಬೆಂಬಲಿಗರಲ್ಲಿ ಇರುವುದರಿಂದ ಆ ಒಂದು ವಿಶ್ವಾಸ ಮತದಿಂದ ಇವರು ಸಹ ಚುನಾವಣೆಗೆ ಯಾವ ಕ್ಷೇತ್ರದಿಂದ ಚುನಾವಣಾ ಕಳಕಿಳಿಯುವರು ಎಂಬ ಕುತೂಹಲದ ಸಂಗತಿಯಾಗಿದೆ. ಈಶ್ವರ ಖಂಡ್ರೆ ಅವರು ಬಸವಕಲ್ಯಾಣ ಕ್ಷೇತ್ರಕ್ಕೆ ಬಂದರೆ ಪ್ರತಿಯೊಬ್ಬರ ಮತಬ್ಯಾಂಕ್ ಗಳಿಗೆ ಗ್ರಹಣ ಹಿಡಿಯುವುದಂತೂ ಖಚಿತ ಎನ್ನುತಿರುವ ಜನರಲ್ಲಿ ಕೂಡ ಮುಂದೇನಾಗಬಹುದೆಂಬ ಗೊಂದಲದ ಗೂಡಾಗಿದೆ.

ಮಾಚ೯ 2011 ರಂದು ಅಖಿಲ ಭಾರತ ವೀರಶೈವ ಮಹಾಸಭಾದ ವತಿಯಿಂದ ಭೀಮಣ್ಣ ಖಂಡ್ರೆ ಅವರ ನೇತ್ರತ್ವದಲ್ಲಿ ಶರಣ ಹರಳಯ್ಯ ಮತ್ತು ಮಧುವಯ್ಯರ ಸ್ಮರಣೋತ್ಸವ ಸಮಾರಂಭ ಬಸವಕಲ್ಯಾಣದಲ್ಲಿ ಅದ್ಧೂರಿಯಾಗಿ ಜರುಗಿತು. ಭಾರಿ ಪ್ರಮಾಣದಲ್ಲಿ ಜನರನ್ನು ಸೇರಿಸುವ ಪ್ರಯತ್ನದಲ್ಲಿ ರಾಜ್ಯದ ನಾನಾ ಭಾಗಗಳಿಂದ ಮಠಾಧೀಶರನ್ನು ಚಿಂತಕರನ್ನು ಆಹ್ವಾನಿಸಿ ಯಶಸ್ವಿ ಕಾಯ೯ಕ್ರಮವನ್ನು ಮಾಡಿ ತಾಲೂಕಿನಾದ್ಯಂತ ಜನರ ಗಮನ ಸೆಳೆದಿದ್ದು ಒಂದು ವಿಶೇಷ. ಇದರಿಂದ ಖಂಡ್ರೆ ಪರಿವಾರಕ್ಕೆ ಮತ್ತೊಂದು ಪ್ಲಸ್ ಪಾಯಿಂಟ್ ಆಗಿದೆ ಎಂದು ಸ್ಥಳೀಯ ಸಾಮಾನ್ಯ ಜನರಿಂದ ಹಿಡಿದು ರಾಜಕೀಯ ವಲಯದವರೆಗೆ ಮುಸುಕಿನ ಚಚೆ೯ ನಡೆಯುತಿದೆ.

ಈಶ್ವರ ಖಂಡ್ರೆ ಅವರಿಗೆ ಮತ್ತು ಅಟ್ಟೂರ್ ಅವರಿಗೆ ಪೈಪೋಟಿಯಾಗಿ ಎದುರಿಸಲು ಸಕಲ ಸಿದ್ದತೆಯಲ್ಲಿ ಇರುವ ಖೂಬಾ ಅವರು ಪಕ್ಷವನ್ನು ಬದಲಾಯಿಸುವ ನಿಣ೯ಯದಲ್ಲಿ ಚಿಂತಿಸುತಿದ್ದಾರೆ ಎಂಬ ಮಾತುಗಳು ಕೂಡ ಅಸ್ಪಷ್ಟವಾಗಿ ಕೇಳಿ ಬರುವಂತಿವೆ. ಆದರೆ ಖೂಬಾ ಅವರು ಯಾವುದೇ ಪಕ್ಷದಲ್ಲಿದ್ದರೂ ಅವರ ಗೆಲುವಿಗಾಗಿ ಪಣತೊಟ್ಟಿರುವ ಜನಬೆಂಬಲ ವಗ೯ ಒಂದೆಡೆ ಇದ್ದೇ ಇದೆ ಎಂಬುದು ಜನರ ಅಭಿಪ್ರಾಯದಲ್ಲಿ ಮನೆ ಮಾಡಿದೆ. ಅವರಿದ್ದರೆ ಅಭಿವ್ರದ್ದಿ ಕಾಮಗಾರಿಗಳು, ನೆನಗುದಿಗೆ ಬಿದ್ದಿರುವ ಭರವಸೆಗಳು ಚುರುಕಾದ ರೀತಿಯಲ್ಲಿ ಈಡೇರುತವೆ. ಜನಸಾಮಾನ್ಯರ ಸಕಾ೯ರಿ ಕೆಲಸಗಳು ಅಧಿಕಾರಿಗಳಿಂದ ಸುಲಭವಾಗಿ ಮಾಡಿಸಿಕೊಳ್ಳಬುದು ಎನ್ನುವವರಿದ್ದಾರೆ.

ಹೀಗೆನ್ನುವ ಅದೇ ಜನ ಕೆಲವೊಮ್ಮೆ ಆದರೆ... ಎಂಬ ಮಾತಿನೊಂದಿಗೆ ಮೌನವಹಿಸುತ್ತಾರೆ. ಒಟ್ಟಿನಲ್ಲಿ ಉತ್ತಮ, ವಿಶಿಷ್ಟ ನಾಯಕನ ಆಯ್ಕೆ, ಬಸವಕಲ್ಯಾಣ ಜನತೆಗೆ ಬೇಕಾಗಿದೆ. ಜನರ ಹಿತವನ್ನು ಕಾಪಾಡುವಂಥವರು, ಜನಸಾಮಾನ್ಯರ ಕೆಲಸಗಳು ಕಚೇರಿ ಕಾಯ೯ಗಳಲ್ಲಿ ಸುಲಭವಾಗಿ ನಡೆಯಬೇಕಾದರೆ ನಾಯಕನ ಆಯ್ಕೆಯಲ್ಲಿ ಜನರ ಮನದ ಮಾತು ಏನೆಂದು ಹೇಳದಂತೆ ಯಕ್ಷ ಪ್ರಶ್ನೆಯಾಗಿ ಉಳಿದಿದೆ. ಉತ್ತಮ ನಾಯಕನ ಆಯ್ಕೆ ಇಲ್ಲಿ ಮುಖ್ಯವಾಗಿರುವುದರಿಂದ ಯಾರೇ ಬಂದರೂ ಸ್ವಾಗತಿಸುವರಿಗೆ ಬೇಕಾಗಿರುವುದು ತಾಲೂಕಾ ಅಭಿವ್ರದ್ಧಿ ಎಂಬುದು ಮಾತ್ರ ಸ್ಪಷ್ಟವಾಗಿ ಕೇಳಿ ಬರುತಿದೆ.

ಒಟ್ಟಿನಲ್ಲಿ ಹೇಳುವುದಾದರೆ ಬಸವಕಲ್ಯಾಣದಲ್ಲಿರುವ ಕಾಂಗ್ರೇಸ್ ಪಕ್ಷದ ಪ್ರಬಲ ನಾಯಕರ ಕೊರತೆಯನ್ನು ಬಹುತೇಕ ನೀಗಿಸುವ ಪ್ರಯತ್ನದಲ್ಲಿ ಈಶ್ವರ ಖಂಡ್ರೆ ಅವರು ನಗರ ಸೇರಿದಂತೆ ತಾಲೂಕಿನಾದ್ಯಂತ ಗ್ರಾಮಗಳಲ್ಲಿ ಒಳ್ಳೆಯ ಸಂಬಂಧವನ್ನು ಇಟ್ಟುಕೊಂಡಿದ್ದಾರೆ. ಅವರೇ ಖುದ್ದಾಗಿ ಆಸಕ್ತಿಯನ್ನು ತೋರಿದರೆ ರಾಜಕೀಯ ಬೆಳವಣಿಗೆಯಲ್ಲಿ ಏನು ಬೇಕಾದರೂ ನಡೆಯಬುದೆಂದು ನಂಬುವಂತಾಗಿದೆ. ಶರಣರ ನಾಡಿನ ನೆಲದಲ್ಲಿ ಎಲ್ಲರೂ ಸಲ್ಲುವರೆಂಬ ಮಾತನ್ನು ಎಲ್ಲರೂ ಅರಗಿಸಿಕೊಳ್ಳುವರೇ ಎಂಬುದು ಕಾಲವೇ ನಿಣ೯ಯಿಸುವಂತಿದೆ. ಸ್ಥಳೀಯ ಮುಖಂಡರುಗಳು ಇದರಿಂದ ಸ್ವಲ್ಪವಾದರೂ ವಿಚಲಿತರಾಗದೇ ಇರಲಾರರು ಎಂಬುದು ಕೂಡ ಸತ್ಯವಾಗಿದೆ.


ಶನಿವಾರ, ಮೇ 14, 2011

ಚಿತ್ರನಟ ವಿಜಯ ವೀರಣ್ಣ ಮಂಠಾಳಕರ್ ಕವನ ಸಂಕಲನ ಓದುತಿರುವುದು.




ಮೇ 10, 2011 ರಂದು ಬಸವಕಲ್ಯಾಣ ಐತಿಹಾಸಿಕ ಕೋಟೆಗೆ ಕನ್ನಡ ಚಲನಚಿತ್ರ ತಂಡವು ಜರಾಸಂಧ ಎಂಬ ಸಿನಿಮಾದ ಒಂದು ಹಾಡಿನ ಚಿತ್ರೀಕರಣಕ್ಕಾಗಿ ಆಗಮಿಸಿದ್ದ ಸಂದಭ೯ದಲ್ಲಿ ಬಸವಕಲ್ಯಾಣ ತಾಲೂಕಿನ ಮಂಠಾಳ ಗ್ರಾಮದ ಸ್ಥಳೀಯ ಕವಿ ವೀರಣ್ಣ ಮಂಠಾಳಕರ್ ಅವರ ಇತ್ತೀಚಿನ ಗಾಂಧಿ ಆಗ್ಬೇಕಂದುಕೊಂಡಾಗ ಕವನ ಸಂಕಲನ ಓದುವ ಮಗ್ನದಲ್ಲಿ ಚಿತ್ರ ನಟ ದುನಿಯಾ ಖ್ಯಾತಿ ವಿಜಯ ಅವರು ಮಂಠಾಳಕರ್ ಕವನ ಸಂಕಲನ ಗಂಭೀರವಾಗಿ ಓದುತಿದ್ದಾರೆ. ಇದೇ ಸಂದಭ೯ದಲ್ಲಿ ಮಾತುಕತೆ ನಡೆಸಿದ ವಿಜಯ ಅವರು ನೀವು ಯಾರನ್ನಾದ್ರೂ ಪ್ರೀತಿಸಿದ್ದಿರಾ? ಎಂದು ಕೇಳಿದರು. ಯಾಕೆಂದರೆ ಪ್ರೀತಿಸದೇ ಏನನ್ನೂ ಬರೆಯಲು ಸಾಧ್ಯವಿಲ್ಲ. ಪ್ರೀತಿಸಿದವರು ಮಾತ್ರ ಇಂತಹ ಪ್ರೇಮ ಕವಿತೆಗಳು ಬರೆಯಲು ಸಾಧ್ಯವೆಂದು ಹೇಳಿದಾಗ ಕವಿ ಮಂಠಾಳಕರ್ ಪ್ರೀತಿಯ ಪ್ರತೀಕವೇ ಕವನಗಳು ಬರೆಯಲು ಪ್ರೇರಣೆ ಸಿಕ್ಕಿರುವುದಾಗಿ ಹೇಳಿದರು. ಪ್ರೀತಿ ಇಲ್ಲದೇ ಕವಿಯಾಗಲಾರ ಎಂಬ ಮಾತು ಇಲ್ಲಿ ಚಚೆ೯ಗೆ ಬಂದಿತು.


ಚಿತ್ರ ನಟ ವಿಜಯ ಅವರು ಓದುತ್ತಿರುವುದನ್ನು ಮಂಠಾಳಕರ್ ಇಣುಕು ನೋಟ ಬೀರುತ್ತ ನಿಂತಿರುವುದು. ಸುತ್ತಲೂ ಚಿತ್ರತಂಡದ ಸಹಾಯಕರು,


ಮೇ 10, 2011 ರಂದು ಬಸವಕಲ್ಯಾಣ ಐತಿಹಾಸಿಕ ಕೋಟೆಗೆ ಕನ್ನಡ ಚಲನಚಿತ್ರ ತಂಡವು ಜರಾಸಂಧ ಎಂಬ ಸಿನಿಮಾದ ಒಂದು ಹಾಡಿನ ಚಿತ್ರೀಕರಣಕ್ಕಾಗಿ ಆಗಮಿಸಿದ್ದ ಸಂದಭ೯ದಲ್ಲಿ ಬಸವಕಲ್ಯಾಣ ತಾಲೂಕಿನ ಮಂಠಾಳ ಗ್ರಾಮದ ಸ್ಥಳೀಯ ಕವಿ ವೀರಣ್ಣ ಮಂಠಾಳಕರ್ ಅವರ ಇತ್ತೀಚಿನ ಗಾಂಧಿ ಆಗ್ಬೇಕಂದುಕೊಂಡಾಗ ಕವನ ಸಂಕಲನ ಓದುವ ಮಗ್ನದಲ್ಲಿ ಚಿತ್ರ ನಟ ದುನಿಯಾ ಖ್ಯಾತಿ ವಿಜಯ. ಚಿತ್ರ ತಾರೆ ವಿಜಯ ಅವರು ಓದುತ್ತಿರುವುದನ್ನು ಮಂಠಾಳಕರ್ ಇಣುಕು ನೋಟ ಬೀರುತ್ತ ನಿಂತಿರುವುದು. ಸುತ್ತಲೂ ಚಿತ್ರತಂಡದ ಸಹಾಯಕರು,

ಬಸವಕಲ್ಯಾಣ ಐತಿಹಾಸಿಕ ಕೋಟೆಯಲ್ಲಿಃ ಜರಾಸಂದ ಸಿನಿಮಾ ಚಿತ್ರೀಕರಣ


ಬಸವಕಲ್ಯಾಣಃ ಬೆಂಗಳೂರಿನಿಂದ ಆಗಮಿಸಿದ್ದ ಕನ್ನಡ ಚಿತ್ರಿಕರಣ ತಂಡವು ಮೂರು ದಿನಗಳ ಕಾಲ ಬೀದರನ ಐತಿಹಾಸಿಕ ಕೋಟೆಯಲ್ಲಿ ಜರಾಸಂಧ ಸಿನಿಮಾ ಚಿತ್ರಿಕರಣ ಮುಗಿಸಿಕೊಂಡು ಬಸವಕಲ್ಯಾಣ ನಗರದ ಐತಿಹಾಸಿಕ ಕೋಟೆಗೆ ಮಂಗಳವಾರ ಲಗ್ಗೆ ಇಟ್ಟಿತ್ತು. ಬೆಳಿಗ್ಗೆಯಿಂದ ಪ್ರಾರಂಭಗೊಂಡಿರುವ ಶೂಟಿಂಗ್ ಕಾತುರತೆಯಿಂದ ಚಿತ್ರಭಿಮಾನಿಗಳಿಗೆ ನೋಡುವ ಸೌಭಾಗ್ಯ ಸಿಗದೇ ಪರಿತಪಿಸುವಂತಿತ್ತು.

ಜರಾಸಂಧ ಹೊಚ್ಚ ಹೊಸ ಚಿತ್ರದ ನಾಯಕ ಪ್ರೀತಿಯಿಂದ ಕರಿಯಾ ಎಂದು ಕರೆಯಿಸಿಕೊಳ್ಳುವ ದುನಿಯಾ ವಿಜಯ ಅವರನ್ನು ಕನ್ನಡಪ್ರಭ ಚಿತ್ರೀಕರಣಕ್ಕೆ ಇಲ್ಲಿಗೆ ಬಂದಿರುವ ಅನುಭವ ಕುರಿತು ಮಾತಿಗೆಳೆದಾಗ ಅವರು ಹೇಳಿದ್ದಿಷ್ಟುಃ

ಇಂತಹ ಒಂದು ಐತಿಹಾಸಿಕ ಸ್ಥಳಗಳಿಗೆ ಬಂದು ಶೂಟಿಂಗ್ ಮಾಡುವುದೆಂದರೆ ತುಂಬಾ ಖುಷಿಯ ಸಂಗತಿಯಾಗುತದೆ. ವಿದೇಶಗಳಲ್ಲಿ ಚಿತ್ರೀಕರಣ ಮಾಡುವುದಕ್ಕಿಂತ ಐತಿಹಾಸಿಕ ಹಿನ್ನೆಲೆಯುಳ್ಳ ಸ್ಥಳಗಳಿಗೆ ಭೇಟಿ ಕೊಡುವುದರಿಂದ ಒಂದು ರೀತಿಯಲ್ಲಿ ಹೊಸ ಅನುಭವ ಸಿಗುತ್ತದೆ. ಜೊತೆಗೆ ಇಲ್ಲಿನ ಜನರ ಪ್ರೀತಿಯೂ ಧಾರಾಳವಾಗಿ ದೊರೆಯುತ್ತದೆಂದು ತೀರಾ ಭಾವುಕರಾಗಿ ನುಡಿದರು.

ಹೈಟೆಕ್ ನಗರ ಪ್ರದೇಶಗಳಿಗಿಂತ ಐತಿಹಾಸಿಕ ನಗರಗಳಿಗೆ ಬಂದು ಹೋಗುವುದರಿಂದ ಕಡಿಮೆ ವೆಚ್ಚದಲ್ಲಿ ಭಾರಿ ಅದ್ಧೂರಿ ಚಿತ್ರೀಕರಣ ಮಾಡಿಕೊಂಡು ಯಶಸ್ವಿಯಾದ ಸಿನಿಮಾಗಳು ತಯ್ಯಾರಿಸಬುದು. ನಾವಿಲ್ಲಿ ಬಂದಿದ್ದು ಹಾಡಿನ ಚಿತ್ರೀಕರಣವೊಂದಕ್ಕೆ. ಇಲ್ಲೇನೇನಿದೆ ಎಂದು ತಿಳಿದುಕೊಡು ಮುಂಬರುವ ದಿನಗಳಲ್ಲಿಯೂ ಇದೇ ಕೋಟೆಯಲ್ಲಿ ಹೊಸ ಹೊಸ ಸಿನಿಮಾಗಳ ಚಿತ್ರೀಕರಣ ಮಾಡಬೇಕೆಂಬ ಉದ್ದೇಸ ಹೊಂದಿದ್ದೇವೆ. ವಿದೇಶಗಳಲ್ಲಿ ಹೆಜ್ಜೆ ಇಟ್ಟರೆ ಸಾಕು ಪ್ರತಿಯೊಂಕ್ಕೂ ದುಡ್ಡನ್ನೇ ಕೇಳುತ್ತಾರೆ. ಇಂತಹ ಸ್ಥಳಗಳಲ್ಲಿ ಬಂದರೆ ದುಡ್ಡು ಮತ್ತು ಸಮಯ ಎರಡನ್ನೂ ಉಳಿಸಬಹುದು ಎಂದು ಅಭಿಪ್ರಾಯಪಟ್ಟರು.

ಕನಾ೯ಟಕದ ಕಿರೀಟದಲ್ಲಿರುವ ಬೀದರ ಜಿಲ್ಲೆ ಆಯ್ಕೆ ಮಾಡಿರುವುದಕ್ಕೆ ಕಾರಣ ಇಲ್ಲಿನ ಜನ ತುಂಬಾ ಶ್ರಮ ಜೀವಿಗಳು. ದುಡಿದುದ್ದಕ್ಕೆ ಉತ್ತಮ ಪ್ರತಿಫಲ ನಿರೀಕ್ಷಿಸುವವರು ಬೆವರು ಸುರಿಸುವ ಜನರೆಂದರೆ ನನಗೆ ತುಂಬಾನೆ ಹೆಮ್ಮೆಯಾಗುತ್ತದೆ. ಅಡಂಬರದ ಜೀವನವನ್ನು ಇಷ್ಟಪಡದೇ ನೀವೆಲ್ಲ ಇಲ್ಲಿ ಬಿಸಿಲುಂಡು ಹೇಗೆ ಗಟ್ಟಿಮುಟ್ಟಾಗಿದ್ದರೋ ಹಾಗೆ ನಾನು ತೀರಾ ಕೆಳಮಟ್ಟದಿಂದ ಬೆಳೆದು ಬಂದವನಾಗಿದ್ದೇನೆ. ಸಾಮಾನ್ಯ ಜನರೊಂದಿಗೆ ಬೆರೆಯುವುದು ನನಗೆ ಬಹಳ ಇಷ್ಚ ಎಂದು ತಮ್ಮ ಸರಳ ಜೀವನವನ್ನು ವಿವರಿಸಿದರು.

ವಿಜಯ ಅವರ ಮುಂದಿನ ಚಿತ್ರ ಜಾನಿ ಮೇರಾ ನಾಮ, ಪ್ರೀತಿ ಮೇರಾ ಕಾಮ ಚಿತ್ರೀಕರಣ ಸೆಟ್ಟೇರುತಿದೆ. ಜರಾಸಂಧ ಚಿತ್ರದ ಸಾಹಿತ್ಯ ಮತ್ತು ನಿದೇ೯ಶನ ಶಶಾಂಕ ಅವರದ್ದಾಗಿದೆ. ಚಂದ್ರು ಅವರದು ಛಾಯಗ್ರಹಣ, ಸಂಗೀತ ಅಜು೯ನ ಚಿತ್ರದಲ್ಲಿ ಪ್ರಣತಿ ನಾಯಕಿಯಾಗಿ ಅಭಿನಯಿಸುತಿದ್ದಾರೆ. ಈ ಒಂದು ಐತಿಹಾಸಿಕ ಕೋಟೆಯಲ್ಲಿ ವಿದೇಸಿ ಬೆಡಗಿಯರ ನ್ರತ್ಯದೊಂದಿಗೆ ನಾಯಕ ವಿಜಯ ಹೆಜ್ಜೆ ಹಾಕಿದರು.




ಬುಧವಾರ, ಏಪ್ರಿಲ್ 27, 2011


ವರದಿ-ವೀರಣ್ಣ ಮಂಠಾಳಕರ್
-------------------------------
ಮಂಠಾಳ ಸಕಾ೯ರಿ ಆಸ್ಪತ್ರೆಯ ಹೊರನೋಟದ ಚಿತ್ರ

ವೈದ್ಯರಿಗಾಗಿ ಕಾದು ಕುಳಿತಿರುವ ಹೊರ ರೋಗಿಗಳು.
ವೈದ್ಯರುಗಳ ದಿವ್ಬ ನಿಲ೯ಕ್ಷಃ ರೋಗಿಗಳಿಲ್ಲದೇ ಖಾಲಿಯಾಗಿ ಬಿದ್ದಿರುವ ಸಕಾ೯ರಿ ಆಸ್ಪತ್ರೆಯಲ್ಲಿನ ಹಾಸಿಗೆಗಳು.

ಬಸವಕಲ್ಯಾಣಃ ಸಕಾ೯ರಿ ಆಸ್ಪತ್ರೆಗಳೆಂದರೆ ಇನ್ನೂ ಮುಂದೆ ಕನಸಿನ ಮಾತಾಗುತದೇನೋ ಎನ್ನುವಷ್ಟರ ಮಟ್ಟಿಗೆ ಆಸ್ಪತ್ರೆಗಳಲ್ಲಿನ ವ್ಯವಸ್ಥೆಗೆ ಜನ ಬೇಸತ್ತು ಖಾಸಗಿ ಆಸ್ಪತ್ರೆಗಳತ್ತ ಮುಖಮಾಡಿ ನಿಲ್ಲುವಂತಾಗಿದೆ. ಅದೇ ಸಕಾ೯ರಿ ಆಸ್ಪತ್ರೆಗಳಲ್ಲಿರುವ ವೈದ್ಯರುಗಳು ತಮ್ಮ ಖಾಸಗಿ ಆಸ್ಪತ್ರೆಳಲ್ಲಿ ರೋಗಿಗಳಿಗೆ ತಪಾಸಣೆ ಮಾಡಿ, ಯಾವುದೇ ಚಿಕಿತ್ಸೆಗೆ ಮುಂದಾಗುತ್ತಾರೆ. ಆದರೆ ಸಕಾ೯ರದ ಸೌಲಭ್ಯಗಳನ್ನು ಅರಸಿಕ್ಕೂಂಡು ಸಕಾ೯ರಿ ಆಸ್ಪತ್ರೆಗಳಿಗೆ ಬರುವವ ರೋಗಿಗಳನ್ನು ದೂರದ್ರಷ್ಠಿಯಿಂದ ನೋಡುತ್ತಾರೇಕೆ ಎಂಬುದು ಜನರಲ್ಲಿ ಯಕ್ಷಪ್ರಶ್ನೆಯಾಗಿ ಉಳಿಯುತ್ತಿದೆ.

ಜನಗಳ ಬೇಸರಕ್ಕೆ ಕಾರಣವಾಗಿರುವ ಬಸವಕಲ್ಯಾಣ ತಾಲೂಕಿನ ಮಂಠಾಳ ಗ್ರಾಮದಲ್ಲಿರುವ ಸಕಾ೯ರಿ ಆಸ್ಪತ್ರೆಗಳಲ್ಲಿ ಮುೂರು ಜನ ವೈದ್ಯರುಗಳು ಸೇರಿದಂತೆ ಒಟ್ಟು 25 ಜನ ಸಿಬ್ಬಂದಿಗಳಿದ್ದರೂ ಇಲ್ಲಿ ಯಾವುದೇ ರೀತಿಯ ಚಿಕಿತ್ಸೆ ದೊರೆಯುತದೆಂಬ ಭರವಸೆ ಇಲ್ಲ. ಹಾಗೊಂದು ವೇಳೆ ನಂಬಿಕೊಂಡು ಹೋದರೆ ಪ್ರಾಣವನ್ನೇ ಕಳೆದುಕೊಳ್ಳಬೇಕಾಗುತ್ತದೆ. ಶ್ರೀಮಂತ ಜನ ಖಾಸಗಿ ಆಸ್ಪತ್ರೆಗಳನ್ನಾದರೂ ಅರಸಿಕೊಂಡು ಹೋಗಬಹುದು. ಬಡ ಜನತೆ ಎಲ್ಲಿ ಹೋಗಬೇಕೆಂಬುದು ಇಲ್ಲಿನ ಕೂಲಿನಾಲಿ ಮಾಡಿ ಜೀವನ ಸಾಗಿಸುತ್ತಿರುವ ಬಡವರ ಅಳಲಾಗಿದೆ.

ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆಯೇ ಇಲ್ಲವೆಂದ ಮೇಲೆ ಹೋಗಿ ಉಪಯೋಗವೇನು? ಎಂದು ಬಾವಿಸಿರುವಿದರಿಂದ ಆಸ್ಪತ್ರೆಯಲ್ಲಿನ ಹಾಸಿಗೆಗಳೆಲ್ಲ ಖಾಲಿ ಖಾಲಿಯಾಗಿಯೇ ಉಳಿದು ಬಿಟ್ಟಿವೆ. ತುತು೯ ಹೇರಿಗೆಗಂದು ಬರುವವರಿಗಿಲ್ಲಿ ಸ್ಮಶಾನ ಸದ್ರಸ್ಯದ ಅನುಭವವಾಗದೇ ಇರದು. ಸಾಮಾನ್ಯ ಜ್ವರಕ್ಕೂ ಪರದಾಡುವಂಥ ಸ್ಥಿತಿ ಮಂಠಾಳ ಆಸ್ಪತ್ರೆಯಲ್ಲಿ ಇರುವುದರಿಂದ ಊರಿಗೊಂದು ದೊಡ್ಡ ಆಸ್ಪತ್ರೆಯಿದ್ದರೂ ಗ್ರಾಮದ ಸುತ್ತಲಿರುವ ಹತ್ತಾರು ಹಳ್ಳಿಗಳ ಜನ ತೀರಾ ತೊಂದರೆ ಅನುಭವಿಸುವಂತಾಗಿದೆ.

ಇಲ್ಲಿನ ವ್ಯವಸ್ಥೆಗಳ ಕುರಿತು ಖುದ್ದಾಗಿ ಕನ್ನಡಪ್ರಭ ಪ್ರತಿನಿಧಿ ವೈದ್ಯರುಗಳನ್ನು ಸಂಪಕಿ೯ಸಿದಾಗ, ನಾವೇನು ಮಾಡುವುದು, ಈ ಆಸ್ಪತ್ರಯಲ್ಲಿ ಕೊಟ್ಟಿರುವಂಥ ಸೌಲಭ್ಯಗಳನ್ನು ಎಷ್ಟಿದೆಯೋ ಅಷ್ಟು ಜನರಿಗೆ ತಲುಪಿಸುತ್ತಿದ್ದೇವೆ. ಇಲ್ಲದ್ದನ್ನು ಕೊಡುವುದಕ್ಕೆ ನಮಗೆ ಆದೇಶವಿಲ್ಲ. ಇದ್ದಂಥ ಮುೂರು ಜನ ವೈದ್ಯರುಗಳಲ್ಲಿ ಇಬ್ಬರನ್ನು ಈಗಾಗಲೆ ವಗಾ೯ವಣೆ ಆಗಿದೆ. ಇರುವುದು ಈಗ ಒಬ್ಬರೆ ಮೂರು ಜನ ವೈದ್ಯರುಳಿರುವಾಗಲೆ ರೋಗಿಗಳ ಆರೈಕೆ ಆಗುತ್ತಿಲ್ಲವೆಂದು ದೂರುತ್ತಿದ್ದಾರೆ. ಈಗ ಊರಿನ ಜನ ಅದೇಷ್ಟು ದೂರುಗಳನ್ನು ಯಾರ ಮೇಲೆ ಕೊಡುತ್ತಾರೆ ಕೊಡಲಿ ಎನ್ನುವಂತೆ ಉಡಾಫೆಯ ಮಾತುಗಳನ್ನು ಇಲ್ಲಿ ಕೇಳಿ ಬರುತವೆ.


ಈ ಹಿಂದೆ ಕನ್ನಡಪ್ರಭ ಪತ್ರಿಕೆ ಸೇರಿದಂತೆ ವಿವಿಧ ಪತ್ರಿಕೆಗಳಲ್ಲಿ ಮಂಠಾಳ ಸಕಾ೯ರಿ ಆಸ್ಪತ್ರೆ ಅವ್ಯವಸ್ಥೆಯ ಕುರಿತು ಬರೆದ ವರದಿಗೆ ಆಕ್ರೋಶದಿಂದ ಪ್ರತಿಕ್ರಿಯಿಸುವ ವೈದ್ಯರು, ಸಕಾ೯ರದ ಆದೇಶದಂತೆ ಕತ೯ವ್ಯ ಪಾಲಿಸುತಿದ್ದೇವೆ ಎನ್ನುತ್ತಾರೆ. ಸಕಾ೯ರದ ಆದೇಶದಲ್ಲಿ ರೋಗಿಗಳಿಗೆ ಚಿಕಿತ್ಸೆಯೇ ಇಲ್ಲವೆನ್ನುವಂತೆ ಮಾತಾಡುವ ಅವರು ಸಕಾ೯ರದ ಕೆಲಸ ದೇವರ ಕೆಲಸವೆಂದು ಭಾವಿಸುವುದಕ್ಕೆ ಇಲ್ಲಿ ತದ್ವಿರುದ್ಧವಾಗಿದೆ ಎಂದರೆ ತಪ್ಪಾಗಲಾರದು.

ದಿನನಿತ್ಯ ಬರುವ ರೋಗಿಗಳು ವೈದ್ಯರುಗಳಿಗಾಗಿ ಗಂಟೆಗಟ್ಟಲೆ ಕಾದು ಕುಳಿತರೂ ಸರಿಯಾದ ಸಮಯಕ್ಕೆ ಬಾರದೆ ಇರುವುದರಿಂದ ಸಾವಿರಾರು ರುಪಾಯಿ ಖಚು೯ ಮಾಡಿ ಖಾಸಗಿ ಆಸ್ಪತ್ರೆಗಳ ಮೊರೆ ಹೋಗಬೇಕಾದ್ದು ಅನಿವಾಯ೯ವಾಗಿದೆ. ಆಸ್ಪತ್ರೆಗೆ ಸಂಬಂಧಿಸಿದ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಇತ್ತ ಕೂಡಲೇ ಗಮನ ಹರಿಸಿದರೆ ಇಲ್ಲಿರುವ ಗೊಂದಲ ಹಾಗೂ ವ್ಯವಸ್ಥೆ ಸರಿಪಡಿಸಲು ತಡವೇನಿಲ್ಲ.

ಒಂದು ವೇಳೆ ಹೀಗೆಯೇ ನಿಲ೯ಕ್ಷಿಸುತ್ತಾ ನಡೆದರೆ ಮುಂದೊಂದು ದಿನ ಮಂಠಾಳದಲ್ಲಿರುವ ಸಕಾ೯ರಿ ಆಸ್ಪತ್ರೆ ಮುಚ್ಚಿ ಹೋಗುವುದರಲ್ಲಿ ಅನುಮಾನವೇ ಇಲ್ಲ. ಆಸ್ಪತ್ರೆ ಮುಚ್ಚಿ ಹೇಗುವುದಕ್ಕಿಂತ ಮುನ್ನ ಸಂಬಂಧಿಸಿದವರು ಇತ್ತ ಮುಖಮಾಡಿ ನಿಲ್ಲಲಿ ಎಂಬುದು ಜನರ ಆಶಯವಾಗಿದೆ. ಇಲ್ಲಿಗೆ ಸೂಕ್ತ ವೈದ್ಯರನ್ನು ನೇಮಿಸಿ ಜನರ ಬಗ್ಗೆ ಕಾಳಜಿ, ಕೆಲಸದ ಮೇಲೆ ಆಸಕ್ತಿ ಇದ್ದವರನ್ನು ಮಾತ್ರ ಆಸ್ಪತ್ರೆಗೆ ನೇಮಿಸಬೇಕೆಂದು ಜನ ಒತ್ತಾಯಿಸುತ್ತಾರೆ.
                                                                                                       -ವೀರಣ್ಣ ಮಂಠಾಳಕರ್