ಮಂಗಳವಾರ, ಜೂನ್ 5, 2012

ಬಸವಕಲ್ಯಾಣಃ ಬಸ್ ನಿಲ್ದಾಣದಲ್ಲಿ ಅವ್ಯವಸ್ಥೆಯ ಆಗರ


ಬಸವಕಲ್ಯಾಣ ಪಟ್ಟಣದ ಪ್ರಮುಕ ಬಸ್್ ನಿಲ್ದಾಣ ದಲ್ಲಿ ಈಶಾನ್ಯ ಸಾರಿಗೆ ಸಂಸ್ಥೆಯ ಬಸ್ ಗಳು ಮುಖ್ಯರಸ್ತೆಯಿಂದಲೇ ತಿರುವು ಪಡೆದು ಬಂದು ನಿಲ್ದಾಣದಲ್ಲಿ ಆಶ್ರಯ ಪಡೆಯಬೇಕಾದ ಅನಿವಾಯ೯ತೆ.

ವೀರಣ್ಣ ಮಂಠಾಳಕರ್

ಬಸವಕಲ್ಯಾಣಃ  ನಗರದ ಹೊರವಲಯದಲ್ಲಿರುವ ಪ್ರಮುಖ ಬಸ್ ನಿಲ್ದಾಣದಿಂದ ಮುಚಳಂಬ, ಗೋಟಾ೯ ಹಾಗೂ ಹುಲಸೂರು ಮಾಗ೯ದಿಂದ ಭಾಲ್ಕಿ ಕಡೆ ಸಾಗುವ ಈಶಾನ್ಯ ಸಾರಿಗೆ ಸಂಸ್ಥೆ ವಾಹನಗಳಿಗೆ ಸೂಕ್ತ ನಿಲ್ದಾಣವಿಲ್ಲದೇ ಪರದಾಡುವಂತಿದ್ದರೂ ಸಂಬಂಧಪಟ್ಟವರು ಪಯಾ೯ಯ ವ್ಯವಸ್ಥೆಯನ್ನು ಮಾಡದೇ ಕಣ್ಮುಚ್ಚಿ ಕುಳಿತಿರುವುದು ವಿಪಯಾ೯ಸವಾಗಿದೆ.

ಮುಖ್ಯ ರಸ್ತೆಗೆ ಅಂಟಿಕೊಂಡಿರುವ ಸಂಬಂಧಿಸಿದ ಮಾಗ೯ಗಳಿಗೆ ಸಾಗಬೇಕಾದ ಸಕಾ೯ರಿ ವಾಹನಗಳು ಜನದಟ್ಟಣೆಯ ರಸ್ತೆಯ ಮೇಲಿಂದಲೇ ತಿರುವು ಪಡೆಯಬೇಕಾಗುತ್ತಿದೆ. ಇದರಿಂದ ಪ್ರಯಾಣಿಕರು ರಸ್ತೆ ದಾಟುವಾಗ ಪ್ರಾಣ ಭಯದಿಂದ ನಡೆದಾಡುವ ಸ್ಥಿತಿ ಯಾರೂ ಕೇಳದಂತಾಗಿದೆ.

ಹುಲಸೂರು ಮಾಗ೯ದ ಈ ಮುಖ್ಯರಸ್ತೆಯು ಎರಡೂ ಬದಿಯಿಂದ ಬರುವ ವಾಹನಗಳಿಗೆ ನಿಲ್ದಾಣಕ್ಕೆ ಬರುವ ಸಾರಿಗೆ ಸಂಸ್ಥೆಯ ಬಸ್್ಗಳಿಂದ ತೊದರೆಯುಂಟು ಮಾಡುವುದಲ್ಲದೇ ಇಲ್ಲಿಂದ ಓಡಾಡುವ ಪ್ರಯಾಣಿಕರು ಜೀವಭಯದಿಂದ ಚಲಿಸಬೇಕಾದ ಪರಿಸ್ಥಿತಿ ಸಂಬಂಧಪಟ್ಟ ಇಲಾಖೆಯವರು ಗಮನಿಸಿದಂತಿಲ್ಲ.

ಸುಸಜ್ಜಿತವಾದ ಬಸ್್ ನಿಲ್ದಾಣ ನಗರದಲ್ಲಿ ಇದೆ ಎಂಬ ನೆಮ್ಮದಿ ಒಂದೆಡೆ ಇದ್ದರೆ, ಇದೇ ಬಸ್ ನಿಲ್ದಾಣದ ಹಿಂದೆ ಹುಲಸೂರು ಮುಖ್ಯ ರಸ್ತೆಗೆ ಅಂಟಿಕೊಂಡಿರುವ ನಿಲ್ದಾಣದಲ್ಲಿ ಗೋಟಾ೯, ಮುಚಳಂಬ, ಹಾಗೂ ಹುಲಸೂರು ಮಾಗ೯ದ ಭಾಲ್ಕಿ ಕಡೆ ಸಾಗುವ ಸಾರಿಗೆ ವಾಹನಗಳು ಕಿಕ್ಕಿರಿದ ಪ್ರಯಾಣಿಕರನ್ನು ತುಂಬಿಕೊಂಡೇ ವಿಶ್ರಾಂತಿ ಪಡೆಯಲು ಆಗಮಿಸುತ್ತವೆ.

ಅಧೀಕವಾದ ವಾಹನ ಸಂಚಾರವಿರುವ ಈ ಮುಖ್ಯ ರಸ್ತೆಯ ಮೇಲೆ ಬಸ್ ನಿಲ್ದಾಣಕ್ಕೆ ಬಂದು ಹೋಗುವ ವಾಹನಗಳಿಗೆ ಬೇರೆ ಸುರಕ್ಷಿತವಾಗಿ ನಿಲ್ಲಲು ಸ್ಥಳವೇ ಇಲ್ಲದಂತಾಗಿ ಪರದಾಡಬೇಕಾಗಿದೆ. ಇಲ್ಲಿ ಇಲಾಖೆಯ ನಿಲ೯ಕ್ಷತನವೂ ಗೋಚರಿಸುವುದರಿಂದ ಪಯಾ೯ಯ ವ್ಯವಸ್ಥೆಗಾಗಿ ಸಂಬಂಧಪಟ್ಟವರಿಗೆ ಮನವಿ ಮಾಡುವುದಕ್ಕೂ ಮೀನಾಮೇಷ ಏಣಿಸುವಂತಾಗಿದೆ.

ಯಾವುದೇ ಸಂದಭ೯ದಲ್ಲಿ ಮುಖ್ಯರಸ್ತೆ ಮೇಲೆ ಓಡಾಡುವ ಹುಮನಾಬಾದ ಮಾಗ೯ದ ವಾಹನಗಳು ಮತ್ತು ಭಾಲ್ಕಿ ಕಡೆಯಿಂದ ಬರುವ ವಾಹನಗಳು ವೇಗದ ನಿಯಂತ್ರಣವನ್ನು ತಪ್ಪಿದರೆ ಮುಗಿಯಿತು. ಪ್ರಾಣಪಾಯ ಕಟ್ಟಿಟ್ಟಂತಾಗಿದೆ ಎನ್ನುತ್ತಾರೆ ವಿವಿಧೆಡೆ ಗ್ರಾಮಗಳಿಗೆ ಹೋಗುವ ಅನೇಕ ಪ್ರಯಾಣಿಕರು.

ಈಶಾನ್ಯ ಸಾರಿಗೆ ಸಂಸ್ಥೆಯ ಬಸ್ ಚಾಲಕರ ನಿಯಂತ್ರಣ ತಪ್ಪಿದರಂತೂ ಭಾರಿ ಪ್ರಮಾಣದ ಅಪಘಾತವಾಗುವುದರಲ್ಲಿ ಸಂಧೇಹವಿಲ್ಲ. ನಿತ್ಯವೂ ಇಲ್ಲಿಂದ ಪ್ರಯಾಣಿಸುವ ಪ್ರಯಾಣಿಕರ ಅಳಲನ್ನು ಯಾರೂ ಕೇಳಿಸಿಕೊಳ್ಳದಂತಾಗಿದೆ. ಸಂಬಂಧಪಟ್ಟ ಜನಪ್ರತಿನಿಧಿಗಳಿಗೆ ಕೇಳಿಸುತ್ತಿಲ್ಲ ಎಂಬ ಆರೋಪಗಳು ಕೇಳಿ ಬರುತ್ತವೆ.

ನಿಲ೯ಕ್ಷತನಕ್ಕೆ ಒಳಗಾಗಿರುವ ಕಾರಣ ಸಣ್ಣಪುಟ್ಟ ಅಪಘಾತಗಳು ಸಂಭವಿಸಿರುವುದಂತೂ ಮರೆಯಲಾಗದು. ಇದೇ ಬಸ್ ನಿಲ್ದಾಣದ ಹತ್ತಿರವೇ ಖಾಸಗಿ ವಾಹನಗಳ ಸಂಖ್ಯೆ ಕಡಿಮೆಯೇನು ಇಲ್ಲವೆಂಬಂತೆ ರಾಜಾರೋಷವಾಗಿ ಓಡಾಡುತ್ತವೆ. ಆದ್ದರಿಂದ ಪೊಲೀಸ್್ ಇಲಾಖೆ ಸಹ ಇತ್ತ ಗಮನ ಹರಿಸಬೇಕಾಗಿದೆ ಎನ್ನುತ್ತಾರೆ ಪ್ರಮುಖರು.

ಜನದಟ್ಟಣೆಯ ಪ್ರದೇಶದಲ್ಲಿ ಕೂಡಿರುವ ಪ್ರಮುಖ ಬಸ್್ ನಿಲ್ದಾಣದಲ್ಲಿ  ಆಟೋಗಳ ಕಿರಿಕಿರಿಯಂತೂ ಕೇಳುವವರೇ ಇಲ್ಲ. ಸಾರಿಗೆ ವಾಹನಗಳು ಬಂದು ನಿಲ್ಲುತಿದ್ದಂತೆ ಪ್ರಯಾಣಿಕರನ್ನು ಇಳಿಯುವಾಗಲೇ ಬಾಗಿಲಲ್ಲೇ ಬಂದು ನಿಲ್ಲುವ ಆಟೋಗಳಿಂದ ಅಪಾಯ ಖಚಿತ ಎನ್ನುವಂತಾಗಿದೆ.

ಸಾರಿಗೆ ಸಂಸ್ಥೆಯ ಅಧಿಕಾರಿಗಳು ದಿವ್ಯ ನಿಲ೯ಕ್ಷತನದಿಂದ ಕಾಲ ಕಳೆಯದೇ, ಪ್ರಯಾಣಿಕರು ತಮ್ಮ ಜೀವ ಮುಷ್ಠಿಯಲ್ಲಿ ಹಿಡಿದುಕೊಂಡು ಓಡಾಡುವಂಥ ಪರಿಸ್ಥಿತಿ ಎದುರಾಗಿರುವುದನ್ನು ಮನಗಾಣಬೇಕು ಎಂಬುದು ಸಾವ೯ಜನಿಕರ ಅಭಿಪ್ರಾಯವಾಗಿದೆ.

ಸಂಬಂಧಪಟ್ಟವರಲ್ಲಿ ಈ ಸಮಸ್ಯೆ ಕುರಿತು ಕೂಡಲೇ ಮನವಿಸಬೇಕಾದ್ದು ಇಲಾಖೆಯ ಕತ೯ವ್ಯ ಹೌದು.  ಮೇಲಿಂದ ಮೇಲೆ ನಗರ ಅಭಿವೖದ್ಧಿಯಲ್ಲಿ ಸಾಗುತ್ತಿದೆ ಎಂದು ಬೀಗಿಕೊಳ್ಳುವ  ಜನಪ್ರತಿನಿಧಿಗಳು ಇಂತಹ ಸಮಸ್ಯೆಗಳತ್ತ ಗಮನ ಹರಿಸಿ ಎಲ್ಲಾ ಜನಸಾಮಾನ್ಯರ ಕುಂದು ಕೊರತೆಗಳ ಆಶಯದಂತೆ ಸ್ಪಂಧಿಸುವಂತಾಗಲಿ ಎಂಬ ನಿರೀಕ್ಷೆಯಲ್ಲಿ ಪ್ರಯಾಣಿಕರಿದ್ದಾರೆ.

ಹಾಳು ಕೊಂಪೆಯಾಗಿರುವ ಹುಲಸೂರು ಬಸ್ ನಿಲ್ದಾಣ

 , ಕೆಲವು ವಷ೯ಗಳ ಹಿಂದೆ ಹುಲುಸೂರು ಮತಕ್ಷೇತ್ರವಾಗಿದ್ದ ಸಂದಭ೯ದಲ್ಲಿ ಗ್ರಾಮದ ಹೊರ ವಲಯದಲ್ಲಿ ಕಟ್ಟಲ್ಪಟ್ಟ ಬಸ್್ ನಿಲ್ದಾಣ ಬಳಕೆಗೆ ಬಾರದೇ ಹಾಳು ಕೊಂಪೆಯಾಗಿರುವುದು.

  ಬಸವಕಲ್ಯಾಣ ತಾಲೂಕಿನ ಹುಲಸೂರು ಗ್ರಾಮದಲ್ಲಿ ಎದುರಿಸುತ್ತಿರು ಪ್ರಯಾಣಿಕರಿಗೆ ಬಸ್್ ನಿಲ್ದಾಣದ ಕೊರತೆಯಿಂದಾಗಿ ಯಾವುದೇ ಕಟ್ಟಡವಿಲ್ಲದ ಮುಖ್ಯ ರಸ್ತೆಯ ಪಕ್ಕದ ಜಾಗದಲ್ಲಿ, ಪೊಲೀಸ್್ ಠಾಣೆ ಎದುರು ವಾಹನಗಳಿಗಾಗಿ ಕಾದು ನಿಂತಿರುವವರು ಹಾಗೂ ಖಾಸಗೀ ವಾಹನಗಳನ್ನು ಕಾಣಬಹುದು.

ವೀರಣ್ಣ ಮಂಠಾಳಕರ್

ಬಸವಕಲ್ಯಾಣ, ಜೂ. 3

ಬಸವಕಲ್ಯಾಣಃ ತಾಲೂಕಿನ ಹುಲಸೂರಿನಿಂದ ತಾಲೂಕಾ ಕೇಂದ್ರಗಳಿಗಾಗಲಿ ಇನ್ಯಾವುದೇ ಗ್ರಾಮಗಳಿಗೆ ತೆರಳಬೇಕಾದ ಪ್ರಯಾಣಿಕರಿಗೆ ಕನಿಷ್ಠ ಪಕ್ಷ ಕುಳಿತುಕೊಳ್ಳಲು ಆಸರೆ ಇಲ್ಲ. ಬಸ್್ ನಿಲ್ದಾಣವಿಲ್ಲದೇ ಪರದಾಡುವಂಥ ಸ್ಥಿತಿ ಹಲವು ವಷ೯ಗಳಿಂದ ಸಹ ಪ್ರಯಾಣಿಕರು ಎದುರಿಸುತಿದ್ದರೂ ಯಾರೂ ಕೇಳದಂತಾಗಿದೆ.

ಬಸ್್ ನಿಲ್ದಾಣದ ಸಮಸ್ಯೆ ಅನುಭವಿಸುತ್ತಿರುವ ಪ್ರಯಾಣಿಕರು ಜನಪ್ರತಿನಿಧಿಗಳ ಅರಿವಿಗೆ ಬರದೇ ಇರುವುದಕ್ಕೆ ಕಾರಣ ಗೊತ್ತಾಗುತ್ತಿಲ್ಲ. ಗ್ರಾಮದ ಹೊರವಲಯದಲ್ಲಿ ಹುಲಸೂರು ಮತಕ್ಷೇತ್ರವಾಗಿದ್ದ ಸಂದಭ೯ದಲ್ಲಿ ಕಟ್ಟಲ್ಪಟ್ಟ ಬಸ್್ ನಿಲ್ದಾಣವೊಂದು ಕೆಲಸಕ್ಕೆ ಬರದಂತಾಗಿದೆ. ಇದೀಗ ಅದು ಹಾಳು ಕೊಂಪೆಯಾಗಿ ರಾತ್ರಿ ಸಮಯದಲ್ಲಿ ಇಲ್ಲಿ ಏನೆಲ್ಲಾ ನಡೆಯುತ್ತದೆ ಎನ್ನಲು ಕಲ್ಪಿಸಿಕೊಳ್ಳಲು ಸಹ ಸಾಧ್ಯವಿಲ್ಲ ಎನ್ನಬಹುದು.

ಕೆಲವೇ ವಷ೯ಗಳ ಹಿಂದೆ ಕಟ್ಟಲ್ಪಟ್ಟ ಬಸ್್ ನಿಲ್ದಾಣ ಹಾಳು ಕೊಂಪೆಯಾಗಿರುವುದು ಶಾಸಕರ ಗಮನಕ್ಕೆ ಬರದಿರುವುದಕ್ಕೆ ದುರಾದೖಷ್ವವೇ ಸರಿ. ಆದರೆ ಜನಪಯೋಗಿ ಕಾಯ೯ಕ್ಕೆ ಬಳಕೆಯಾಗುತ್ತಿಲ್ಲ ಎಂಬುದಕ್ಕೆ ನಿತ್ಯವೂ ಬಿಸಿಲಿರಲಿ, ಮಳೆ, ಗಾಳಿಗೆ ಮೈಯೊಡ್ಡಿ ನಿಲ್ಲುವಂಥ ವಾತಾವರಣ, ನೆರಳಿಗಾಗಿ ಪರಿತಪಿಸುವ ಮಕ್ಕಳು ಮಹಿಳೆಯರೇ ಇದಕ್ಕೆ ಸಾಕ್ಷಿಯಾಗಬಲ್ಲರು.

ಮುಖ್ಯ ರಸ್ತೆಯಲ್ಲಿರುವ ಪೊಲೀಸ್್ ಠಾಣೆಯ ಮುಂಭಾಗದಲ್ಲೇ ಜನ ನಿಂತುಕೊಳ್ಳಬೇಕಾಗಿದೆ. ಇಂತಹ ಸಂಕಷ್ಟದಲ್ಲಿರುವವರು ಅಕ್ಕಪಕ್ಕದಲ್ಲಿರುವ ಹೊಟೇಲ್್ಗಳಿಗೆ ನುಗ್ಗಿ ಒಂದಿಷ್ಟು ದಣಿವಾರಿಸಿಕೊಳ್ಳಲು ಸಹ ಹಣ ತೆತ್ತಬೇಕಾದ್ದು ನಿಜ. ತಾವು ಹೋಗಬೇಕಾದ ವಾಹನಗಳಿಗೆ ಬಸ್್ ನಿಲ್ದಾಣವಿಲ್ಲದೇ ಕಾದು ನಿಲ್ಲಬೇಕಾದ ಸ್ಥಿತಿ ಚಿಂತಾಜನಕವಾಗಿದೆ.

ಇಲ್ಲಿ ಬಂದು ಹೋಗುವ ಪ್ರಯಾಣಿಕರೆಲ್ಲಾ ಬೆವರಳಿಸಿಕೊಂಡೇ ಬಸ್್ ಹತ್ತಬೇಕು. ಯಾಕೆಂದರೆ ಯಾವುದೇ ನೆರಳಿನಾಸರೆ ಇಲ್ಲದೇ ಪ್ರಯಾಣಿಕರ ಗೋಳು ಯಾರೂ ಕೇಳದಂತಾಗಿದೆ. ಜನಪ್ರತಿನಿಧಿಗಳು ಈ ಸಮಸ್ಯೆ ಕುರಿತು ಗಂಭೀರವಾಗಿ ತೆಗೆದುಕೊಳ್ಳದೇ ಇರುವುದಕ್ಕೆ ಅನೇಕ ಹಿರಿಯ ಜೀವಿಗಳು ಆಕ್ರೋಷವನ್ನು ವ್ಯಕ್ತಪಡಿಸುತ್ತಾರೆ.

ಬಸವಕಲ್ಯಾಣ ಹಾಗೂ ಭಾಲ್ಕಿ ತಾಲೂಕು ಕೇಂದ್ರಗಳಿಂದ ಬಂದು ಹೋಗುವ ಈಶಾನ್ಯ ಸಾರಿಗೆ ಸಂಸ್ಥೆಯ ವಾಹನಗಳು ಮತ್ತು ಖಾಸಗೀ ವಾಹನಗಳು ಇದೇ ಹುಲಸೂರಿನ ಪೊಲೀಸ್್ ಠಾಣೆ ಎದುರಿನ ಬಸ್್ ನಿಲ್ದಾಣದಲ್ಲಿ ಅಂದರೆ, ಅಧಿಕೖತವಾಗಿ ಕಟ್ಟಡವಿಲ್ಲದಂಥ ಮುಖ್ಯ ರಸ್ತೆಯ ಪಕ್ಕದ ಬಸ್್ ನಿಲ್ದಾಣದಲ್ಲಿ ವಾಹನಗಳೆಲ್ಲ ಬಂದು ಸೇರುತ್ತವೆ.

ಜನಸಾಮಾನ್ಯರ ಮೂಲ ಸೌಲಭ್ಯಗಳತ್ತ ಚಿಂತನೆ ನಡೆಸುವ ನಾಯಕರುಗಳ ಕೊರತೆ ಬಸವಕಲ್ಯಾಣ ತಾಲೂಕಿನಲ್ಲಿ ಪ್ರಮುಖವಾಗಿ ಎದ್ದು ಕಾಣುತ್ತಿರುವುದಕ್ಕೆ ಮೇಲಿಂದ ಮೇಲೆ ಕೇಳಿ ಬರುತ್ತಲೇ ಇರುವ ಸಾವ೯ಜನಿಕರ ಅಳಲು ಇದಾಗಿದೆ. ಮಾಧ್ಯಮಗಳ ಮೂಲಕವಾದರೂ ಹೇಳಿಕೊಳ್ಳುವಂಥ ಅನಿವಾಯ೯ತೆ ಎದುರಾಗಿದೆ ಎಂದು ಗ್ರಾಮದ ಪ್ರಮುಖರು ದೂರುತ್ತಾರೆ.

ಪ್ರಯಾಣಿಕರಿಗೆ ಅನುಕೂಲವಾಗುವಂಥ ಬಸ್್ ನಿಲ್ದಾಣದ ನಿಮಾ೯ಣ ಸಾಧ್ಯವಾಗುವುದೆ ಎಂದು ಕಾದು ನೋಡುವಂತಾಗಿದೆ. ಚುನಾವಣೆಗಳು ಬಂದಾಗಲಷ್ಟೇ ನೆನಪಾಗುವ ನಾವು ಸಾವ೯ಜನಿಕರ ಮೂಲ ಸೌಲಭ್ಯಗಳ ಕೊರತೆಗಳಿಗೆ ಸ್ಪಂಧಿಸುವ ನಾಯಕರುಗಳ ಸ್ಪಂಧನೆಗೆ ಎದುರು ನೋಡುವಂತಾಗಿದೆ ಎನ್ನುತ್ತಾರೆ ಸಮಾಜ ಚಿಂತಕರು.

ಇನ್ನೊಂದು ಪ್ರಮುಖವಾದ ಸಂಗತಿಯೆಂದರೆ, ಹುಲಸೂರು ಗ್ರಾಮದಲ್ಲಿ ಪ್ರತಿ ವಷ೯ ನಡೆಯುವ ಗುರು ಬಸವೇಶ್ವರ ಸಂಸ್ಥಾನ ಮಠದ ಜಾತ್ರಾ ಮಹೋತ್ಸವದಲ್ಲಿ ಹೆಚ್ಚಿನ ಸಕಾ೯ರಿ ವಾಹನಗಳು ಬಿಟ್ಟರೆ ಬೇರೆ ದಿನಗಳಲ್ಲಿ ಖಾಸಗೀ ವಾಹನಗಳ ದಬಾ೯ರಿನಲ್ಲೇ ನಿತ್ಯವೂ ಪ್ರಯಾಣಿಸಬೇಕಾದ ಅನಿವಾಯ೯ತೆ ಇಲ್ಲಿನ ಜನಸಾಮಾನ್ಯರದ್ದಾಗಿದೆ

ಹುಲಸೂರಿನಿಂದ ಬೇರೆ ಮಾಗ೯ಗಳಿಗೆ ನಿಗ೯ಮಿಸಲು ಖಾಸಗೀ ವಾಹನಗಳ ಮೊರೆ ಹೊಕ್ಕದೇ ಬೇರೆ ಗತಿ ಇಲ್ಲ. ಒಂದೆರಡು ಸಕಾ೯ರಿ ಬಸ್್ ಹೊರತುಪಡಿಸಿ ಮ್ಯಾಕ್ಸಿಕ್ಯಾಬ್್ ಖಾಸಗೀ ವಾಹನಗಳೇ ಇಲ್ಲಿಂದ ಸಂಚರಿಸುತ್ತವೆ ಎಂಬ ದೂರುಗಳಿದ್ದರೂ ಸಕಾ೯ರಿ ವಾಹನಗಳ ಸೌಲಭ್ಯ ಅಷ್ಟಕಷ್ಟೇ ಎನ್ನಬಹುದು.

ಗ್ರಾಮಕ್ಕೆ ಸಕಾ೯ರಿ ವಾಹನಗಳಿಲ್ಲ ಎಂಬ ಕಾರಣಕ್ಕೇನಾದರೂ ಬಸ್್ ನಿಲ್ದಾಣದ ಅವಶ್ಯಕತೆಗೆ ಕಣ್ಮುಚ್ಚಿ ಕುಳಿತ್ತಿದ್ದಾರೆಯೇ ಎಂಬ ಅನುಮಾನಗಳು ಕಾಡುತ್ತವೆ. ಸಂಬಂಧಪಟ್ಟವರು ಇದಕ್ಕೇನಂತಾರೆ ಎಂಬುದು ಸಹ ಕಾದು ನೋಡಬೇಕಾಗಿದೆ. ಅನೇಕ ಅನುಮಾನಗಳಿಗೆ ಎಡೆಮಾಡಿಕೊಡುತ್ತಿರುವ ಇಲ್ಲಿನ ಮೂಲ ಬಸ್್ ನಿಲ್ದಾಣದ ಸಮಸ್ಯೆ ಬಗೆಹರಿಸುವವರೇ ಎಂದುನಿರೀಕ್ಷಿಸೋಣ.


 ರಸ್ತೆ ಅಗಲೀಕರಣ ನಡೆಯುತ್ತಿರುವುದನ್ನು ಕುತೂಹಲದಿಂದ ವೀಕ್ಷಿಸುತ್ತಿರು ಜನ



 ದಕ್ಷ ಅಧಿಕಾರಿಗಳ ಕೊರತೆ-ಮಂದಗತಿಯಲ್ಲಿ ಸಾಗುತ್ತಿರುವ ರಸ್ತೆ ಅಗಲೀಕರಣ


ಬಸವಕಲ್ಯಾಣ, ಜೂ. 2

ನಗರದೆಲ್ಲೆಡೆ ರಸ್ತೆ ಅಗಲೀಕರಣ ಹಾಗೂ ಸೌಂದಯೀ೯ಕರಣಕ್ಕಾಗಿ ಕಳೆದ ಮೂರು ದಿನಗಳಿಂದ ಕೇಳಿ ಬರುತ್ತಿರುವ ಬುಲ್ಡೋಜರ್್ ಶಬ್ಧಗಳು ಕೇಳಿಯೇ ಕೆಲವರು ಬೆಚ್ಚಿ ಬಿದ್ದಿದ್ದಾರೆ. ಇನ್ನೂ ಕೆಲವರಿಗೆ ಕಟ್ಟಡಗಳು ಉರುಳಿ ಬೀಳುತ್ತಿರುವುದನ್ನು ನೋಡಿ ದುಸ್ವಪ್ನವಾಗಿ ಕಾಡುತ್ತಿರುವುದರಿಂದ ಸ್ಥಳೀಯ ಅಧಿಕಾರಿಗಳು ಎಚ್ಚೆತ್ತುಕೊಂಡು ಚುರುಕಾದ ಕಾಮಗಾರಿ ನಡೆಸುತ್ತಿರುವುದು ಕಂಡು ಬರುತ್ತಿದೆ.

ಬಸವಕಲ್ಯಾಣ ನಗರಕ್ಕೆ ದಕ್ಷ ಆಡಳಿತದ ಅಧಿಕಾರಿಯೊಬ್ಬರ ಅವಶ್ಯಕತೆ ಇದ್ದು, ಅಂಥವರನ್ನು ಬರಮಾಡಿಕೊಳ್ಳುವ ನಿರೀಕ್ಷೆಯಲ್ಲಿದಂತೆ ಅಭಿವೖದ್ಧಿ ಬಯಸುವವರು ಖುಷಿಯಲ್ಲಿದ್ದರೆ, ಇನ್ನೂ ಕೆಲವರಿಗೆ ದಕ್ಷ ಆಡಳಿತಾಧಿಕಾರಿಯ ಆಗಮನದಿಂದ ಇರಿಸುಮುರುಸಾಗಿದೆ. ಅನಧಿಕೖತ ಕಟ್ಟಡ ವ್ಯಾಪಾರಿಗಳಿಗೆ ದಿಕ್ಕೆ ತೋಚದಂತಾಗಿದೆ ಎನ್ನುತ್ತಾರೆ ಸ್ಥಳೀಯರು.

12 ನೇ ಶತಮಾನದ ಶರಣರ ನೆಲೆಬೀಡಾದ ಕಲ್ಯಾಣದಲ್ಲಿ ಕಾಯ೯ಕ್ಷೇತ್ರವಾಗಿಸಿಕೊಂಡಿದ್ದ ಎಲ್ಲಾ ಶರಣರ ಸ್ಮಾರಕಗಳ ಜೀಣೋ೯ದ್ಧಾರ ಕಾಯ೯ ಭರದಿಂದಲೇ ನಡೆಯುತ್ತಿವೆ ಎನ್ನುವಂತಿದ್ದರೂ ಸಹ  ಕೆಲವು ಕಾಮಗಾರಿಗಳು ಮಂದಗತಿಯಲ್ಲಿ ಸಾಗುತ್ತಿವೆ. ಇನ್ನೂ ಕೆಲವು ಅಭಿವೖದ್ಧಿ ಪ್ರಾಧಿಕಾರದ ಕಾಮಗಾರಿಗಳಿಗೆ ಗ್ರಹಣ ಹಿಡಿದಂತಾಗಿರುವುದಂತೂ ನಿಜ.

ಯಾಕೆಂದರೆ ಕಳೆದ ವಷ೯ದಿಂದ ಬಸವಕಲ್ಯಾಣ ಅಭಿವೖದ್ಧಿ ಪ್ರಾಧಿಕಾರದ ಸಹಾಯಕ ಆಯುಕ್ತರ ಹುದ್ದೆ ಖಾಲಿಯೇ ಇರುವುದರಿಂದ ಇಲ್ಲಿ ಇದೀಗ ಕೆಲವು ತಿಂಗಳಿಂದ ತಹಸೀಲ್್ ಕಚೇರಿಯ ಸಹಾಯಕ ಆಯುಕ್ತ ಎಚ್್. ಪ್ರಸನ್ನ ಅವರೇ ಕಾಯ೯ಭಾರ ವಹಿಸಿಕೊಂಡಿದ್ದಾರೆ.

ನಗರಸಭೆಯ ಜವಾಬ್ದಾರಿಯೂ ಅವರ ತಲೆಯ ಮೇಲೆ ಇರುವುದರಿಂದ ಯಾವುದೇ ಕೆಲಸಗಳು ಮಂದಗತಿಯಲ್ಲಿ ಸಾಗುತ್ತಿರುವುದಕ್ಕೆ ಪ್ರಮುಖ ಕಾರಣವಾಗಿದೆ. ಒಬ್ಬರಿಂದಲೇ ಇಷ್ಟೆಲ್ಲಾ ಕಾಯ೯ಭಾರ ನಿಭಾಯಿಸಿಕೊಂಡು ಹೋಗುವುದು ಮತ್ತು ಎಲ್ಲಾ ಇಲಾಖೆಗಳ ಕಾಮಗಾರಿಗಳು ಚುರುಕಾಗಿ ನಡೆಸಲು ಸ್ವಲ್ಪ ಕಷ್ಟವಾಗುತ್ತದೆ ಎನ್ನುವಂತಾಗಿದೆ.

ಹೀಗಾಗಿ ಜನರ ಕನಸಿನ ಕಲ್ಪನೆಯಾದ ಐತಿಹಾಸಿಕ ಬಸವಕಲ್ಯಾಣ ಪಟ್ಟಣವನ್ನು ಪ್ರವಾಸಿ ತಾಣವಾಗಿ ರೂಪುಗೊಳ್ಳುವುದು ಯಾವಾಗ ಎನ್ನುವಂತೆ ಜನ ಭಾರಿ ನಿರೀಕ್ಷೆಯಲ್ಲಿದ್ದಾರೆ. ಆದರೆ ಕೆಲವರಿಗದು ಬೇಕೇ ಇಲ್ಲ ಎನ್ನುವಂಥ ಮಾತುಗಳು ಎಲ್ಲೆಡೆ ಕೇಳಿ ಬರುತ್ತಿರುವುದು ವಿಷಾದದ ಸಂಗತಿಯೆಂದು ಅಭಿವೖದ್ಧಿ ಚಿಂತಕರು ಖೇದವನ್ನು ವ್ಯಕ್ತಪಡಿಸುತ್ತಾರೆ.

ಹಾಗೊಂದು ವೇಳೆ ಬಸವಕಲ್ಯಾಣ ಪಟ್ಟಣ ರಸ್ತೆ ಅಗಲೀಕರಣಗೊಂಡು ಅಭಿವೖದ್ದಿ ಸಾಧ್ಯವಾದರೆ ದೈನಂದಿನ ವ್ಯವಹಾರ, ವ್ಯಾಪಾರಗಳು, ಪ್ರಮುಖ ಅಂಗಡಿ ಮಾಲೀಕರುಗಳಿಗೆ ನಷ್ಟವಾಗುತ್ತದೆಂಬ ಭ್ರಮೆ ಹಾಗೂ ಕೆಲ ಪ್ರಮುಖ ಸಂಸ್ಥೆಯ ಚಟುವಟಿಕೆಗಳು ನಿಂತು ಬಿಡುತ್ತವೆ ಎನ್ನಬಹುದು.

ಬಸವಕಲ್ಯಾಣಕ್ಕೆ ಹಷ೯ಗುಪ್ತ ಅವರಂಥ ದಕ್ಷ ಆಡಳಿತಧಿಕಾರಿ ಯಾಕಾದರೂ ಬರುತ್ತಾರೆ ಎಂಬ ಪ್ರಶ್ನೆ ಒಳಗೊಳಗೆ ಕೇಳಿ ಬರುವಂತಿದ್ದರೂ ಅಭಿವೖದ್ಧಿಪರವಾಗಿ ಚಿಂತಿಸುವವರ ಆಶಯ ಬಹುತೇಕ ನಿಜವಾಗಲಿದೆ ಎನ್ನಲು ಪ್ರಮುಖ ಕಾರಣವೆಂದರೆ ಬಿಕೆಡಿಬಿ ವಿಶೇಷಧಿಕಾರಿಯಾಗಿದ್ದ ಡಾ. ಎಸ್್.ಎಂ. ಜಾಮದಾರ್್ ಅವರ ನಿವೖತ್ತಿಯ ನಂತರ ಹಷ೯ಗುಪ್ತ ಅವರೇ ವಿಶೇಷಧಿಕಾರಿಯಾಗಿ ಬರಲೆಂಬುದು ಅನೇಕರು ಒತ್ತಾಯಿಸಿದ್ದಾರೆ ಎನ್ನಲಾಗುತ್ತಿದೆ.

ಬೀದರ ಜಿಲ್ಲಾಧಿಕಾರಿಯಾಗಿ ಜಿಲ್ಲೆಯ ಚಿತ್ರಣವನ್ನೇ ಬದಲಾಯಿಸಿರುವ ಹಷ೯ಗುಪ್ತ ಅವರು ಒಂದು ವೇಳೆ ಬಸವಕಲ್ಯಾಣಕ್ಕೆ ಬಂದರೆ ಅಭಿವೖದ್ಧಿ ತಾಣವಾಗಿ, ಪ್ರವಾಸಿಗರಿಗೆ 12 ನೇ ಶತಮಾನದ ಶರಣರನ್ನು, ಐತಿಹಾಸಿಕ ಪಳೆಯುಳಿಕೆಗಳನ್ನು ಅಳಿದುಳಿದಿರುವುದನ್ನು ಜೀವಂತ ನೋಡಲು ಸಿಗುವುದರಲ್ಲಿ ಸಂದೇಹವಿಲ್ಲ.

ಪ್ರವಾಸಿಗರಿಗೆ ಬಸವಕಲ್ಯಾಣ ಪಟ್ಟಣ ಕೈಬೀಸಿ ಕರೆಯುವಲ್ಲಿ ಹಷ೯ಗುಪ್ತ ಅವರಂಥ ಅಧಿಕಾರಿಗಳು ಬಂದರೆ ಮಾತ್ರ ಬಹುತೇಕ ನಿಜವಾಗಲಿದೆ ಎಂಬುದು ಜನಮನದಲ್ಲಿ ಖಚಿತವಾಗಿದೆ. ಆದ್ದರಿಂದಲೇ ಹಷ೯ಗುಪ್ತ ಅವರಿದ್ದಾಗಲೇ ಆಗಬೇಕಾದ ಅನೇಕ ಕಾಮಗಾರಿಗಳು ಇಷ್ಟೊಂದು ಭರದಲ್ಲಿ ಸಾಗುತ್ತಿರುವುದಕ್ಕೆ ಬುಲ್ಡೋಜರ್್ ಶಬ್ಧಗಳು ಕೇಳಿ ಬರುತ್ತಿರುವುದಕ್ಕೆ ಸಾಕ್ಷಿಯೆನ್ನುತ್ತಾರೆ ಅನೇಕ ಸಂಘಟನಾ ಪ್ರಮುಖರು.