ಸೋಮವಾರ, ಫೆಬ್ರವರಿ 13, 2012

ಔರಾದನಲ್ಲಿ ನಡೆಯಲಿರುವ ಜಾನಪದ ಸಮ್ಮೇಳನಕ್ಕೂ...




ಫೆ. 16 ರಿಂದ ಔರಾದನಲ್ಲಿ ನಡೆಯಲಿರುವ ಜಾನಪದ ಸಮ್ಮೇಳನಕ್ಕೂ... ಇದೇ ಫೆ. 15 ರಿಂದ ತಾಲೂಕಿನ ಬೇಲೂರು ಉರಿಲಿಂಗ ಪೆದ್ದಿ ಮಠದಲ್ಲಿ ನಡೆಯಲಿರುವ ಜಾನಪದ ಸಮ್ಮೇಳನಕ್ಕೂ
ಬಸವಕಲ್ಯಾಣ, ಫೆ. 13

ಇದೇ ಫೆ. 15 ರಿಂದ ತಾಲೂಕಿನ ಬೇಲೂರು ಉರಿಲಿಂಗ ಪೆದ್ದಿ ಮಠದಲ್ಲಿ ನಡೆಯಲಿರುವ ಜಾನಪದ ಸಮ್ಮೇಳನ ಹಾಗೂ ಫೆ. 16 ರಿಂದ ಔರಾದನಲ್ಲಿ ನಡೆಯಲಿರುವ ಜಾನಪದ ಸಮ್ಮೇಳನಕ್ಕೂ ಜನರಲ್ಲಿ ಸಹಜವಾಗಿಯೇ ಗೊಂದಲವುಂಟಾಗಿ ಜಾನಪದ ಸಾಹಿತ್ಯ ಪರಿಷತ್ತು ಈ ರೀತಿ ಕಾಯ೯ಕ್ರಮಗಳು ಹಮ್ಮಿಕೊಂಡಿತ್ತೆ? ಎಂಬ ಅನುಮಾನಗಳು ಹುಟ್ಟಿಕೊಳ್ಳುವುದು ಸಹಜ.

ಉರಿಲಿಂಗಪೆದ್ದಿ ಬೇಲೂರು ಮಠದ ಪೀಠಾಧಿಪತಿಗಳು ಕಳೆದ ಕೆಲ ವಷ೯ಗಳಿಂದ ಲಿಂ. ಶಿವಲಿಂಗೇಶ್ವರ ಶಿವಯೋಗಿಗಳವರ ಪುಣ್ಯ ಸ್ಮರಣೋತ್ಸವ ಅಚರಿಸುತ್ತಾ ಬರುತ್ತಿದ್ದಾರೆ. ಅವರ ಪಾಡಿಗೆ ಅವರು ಧಾಮಿ೯ಕ ಕಾಯ೯ಕ್ರಮಗಳನ್ನು ಮಾಡುತ್ತ ತಾಲೂಕಿನಾದ್ಯಂತ ಪರಿಚಿತರಾಗಿದ್ದರು. ರಾಜ್ಯಮಟ್ಟದಲ್ಲಿ ಗುರುತಿಸಿಕೊಳ್ಳಬೇಕು ಎಂಬ ಯಾರದೇ ಸಲಹೆಗೆ ಎಡವುತ್ತಿರುವುದು ಗೋಚರಿಸುತ್ತಿದೆ.

ಪುಣ್ಯ ಸ್ಮರಣೋತ್ಸವದಲ್ಲಿ ಸಾಂಸ್ಕೖತಿಕ ಕಾಯ೯ಕ್ರಮಗಳು ಮಾಡಿದರೆ ಸರಿಯಾಗಿರುತ್ತದೆ ಎಂದು ಯಾರೋ ಅವರ ತಲೆಗೆ ಬಿಟ್ಟ ಹುಳವನ್ನು ಮಠಾಧೀಶರೆಂಬುದನ್ನೇ ತಮಗೆ ತಾವು ಮರೆತಿದ್ದಾರೆ. ಸಾಹಿತಿಗಳ, ಸಂಘಟಕರ ಬೆನ್ನತ್ತಿ ಹೋಗುತ್ತಿರುವುದಲ್ಲದೇ, ಅವರ ಮಾತನ್ನು ಕೇಳದವರಿಗೆ ಅವಾಚ್ಯ ಶಬ್ಧಗಳಿಂದ ಬೈಯ್ಯುವುದು, ನಾನು, ನನ್ನ ಮಠವೆಂದು ಬೀಗುವುದು. ನನ್ನ ಮಠಕ್ಕೆ ವಿಐಪಿ ಸಾಹಿತಿಗಳನ್ನೇ ಕರೆಸುತ್ತೇನೆ ಎನ್ನುವುದು ಇವರಲ್ಲಿರುವ ಉದ್ಧಟತನ ಪ್ರದಶಿ೯ಸುತ್ತದೆ.

ವಿಚಿತ್ರ ಹಾಗೂ ಬೀದರ ಜಿಲ್ಲೆ ಮಠಾಧೀಶರಲ್ಲಿ ಇವರು ಏಕೈಕ ಮಠಾಧೀಶರೆಂದೇ ಹೇಳಬಹುದು. ಯಾರೋ ಹೇಳಿದರೆಂದು ಪ್ರತಿ ವಷ೯ ಉರಿಲಿಂಗ ಪೆದ್ದಿ ಪ್ರಶಸ್ತಿ ನೀಡುತ್ತಾ ಬರುತ್ತಿರುವುದು ಸಂತಸದ ಸಂಗತಿ ಒಂದೆಡೆಯಾದರೆ, ಇವರು ಕೊಡುವ ಪ್ರಶಸ್ತಿಯನ್ನು ಪಡೆದವರು ರಾಜ್ಯಮಟ್ಟದವರೇ ಆಗಿರಬೇಕೆಂಬುದು ಬೇಲೂರು ಶ್ರೀಗಳ ಇತ್ತೀಚಿನ ಮೊಂಡುತನ ಯಾರೋ ಬಿಟ್ಟ ಹುಳವೇ ಇವರಳೊಗೆ ಕೆಲಸ ಮಾಡುತ್ತಿದೆ ಎನಿಸದೇ ಇರಲಾರದು.

2007 ರಿಂದ ಕೆಲ ಚಿಂತಕರ ಸಲಹೆ, ಮಾಗ೯ದಶ೯ನದ ಮೇರೆಗೆ ಸಾಹಿತ್ಯೀಕ ಮೆರುಗನ್ನು ಕೊಟ್ಟು ಉರಿಲಿಂಗ ಪೆದ್ದಿ ಉತ್ಸವ ಆಚರಿಸುತ್ತಿರುವುದು ಖುಷಿಯ ಸಂಗತಿಯಾಗಿದೆ. ಪ್ರಪ್ರಥಮ ಬಾರಿಗೆ ಪ್ರಶಸ್ತಿ ಕೊಟ್ಟಿದ್ದು, ಸ್ಥಳೀಯ ಒಬ್ಬ ಉತ್ತಮ ಪ್ರತಿಭಾವಂತ ಕಥೆಗಾರನಿಂದ ಹಿಡಿದು ರಾಜ್ಯಮಟ್ಟದಲ್ಲಿರುವ ಕವಿ, ಲೇಖಕರನ್ನು ಈ ಪ್ರಶಸ್ತಿ ನೀಡುತ್ತಲೇ ಬಂದಿದ್ದಾರೆ.

ಆದರೆ ಅವರಲ್ಲಿ ಸ್ಥಳೀಯರಲ್ಲಿ ಬಹುತೇಕರು ಈ ಹೈ.ಕ. ಗಡಿ ಭಾಗದವರೇ ಉರಿಲಿಂಗ ಪೆದ್ದಿ ಪ್ರಶಸ್ತಿ ಸ್ವೀಕರಿಸಿ ಮಾನ ಉಳಿಸಿದ್ದಾರೆಯೇ ಹೊರತು, ದಕ್ಷಿಣ ಕನ್ನಡ ಭಾಗದ ಕೆಲವರಿಗೆ ಪ್ರಶಸ್ತಿ ಘೋಷಣೆ ಮಾಡಿದರೂ ಕೂಡ ಅವರು ಇದೇನು ಎನ್ನುವಂತೆ ನಿರಾಸಕ್ತಿ ತೋರಿರುವುದು ಬೇಲೂರು ಲಿಂ. ಶಿವಲಿಂಗೇಶ್ವರ ಶಿವಯೋಗಿಗಳವರ ಪುಣ್ಯ ಸ್ಮರಣೋತ್ಸವ ಉತ್ಸವಗಳಲ್ಲಿ ದಾಖಲೆಯಾಗಿ ಉಳಿದಿವೆ.

ಆಸಕ್ತಿಯಿಂದ ಪ್ರಶಸ್ತಿ ಸ್ವೀಕಾರ ಮಾಡಿದವರಲ್ಲಿ ಈ ಭಾಗದವರು ಬಿಟ್ಟರೆ ಬೆಂಗಳೂರು, ಮೈಸೂರಿನವರಿಗೆ ಹೆಮ್ಮೆಯಿಂದ ಕೊಟ್ಟ ಉರಿಲಿಂಗ ಪೆದ್ದಿ ಪ್ರಶಸ್ತಿ ಸ್ವೀಕರಿಸಲು ಬಾರದೇ ನಿರಾಸಕ್ತಿ ತೋರಿಸಿರುವುದು ಅಷ್ಟೇ ಸೂಜಿಗದ ಸಂಗತಿಯಾಗಿದೆ. ಅದಲ್ಲದೇ ಪ್ರಶಸ್ತಿ ನೀಡುವಲ್ಲಿ ತಾರತಮ್ಯ, ಸ್ವಂತ ನೆಲದವರಿಗೆ ತೋರುತ್ತಿರುವ ನಿಲ೯ಕ್ಷ ಧೋರಣೆಗೆ ಬೇಸರಿಸಿ ಪ್ರಶಸ್ತಿ ಪ್ರಾಯೋಜಕರೊಬ್ಬರು ದೂರ ಸರಿದಿದ್ದಾರೆ.

ಕಾರಣ ಬೇಲೂರು ಮಠಾಧೀಶರು ತಮಗೆ ತಾವೇ ಜಾಣರೆಂದುಕೊಂಡು, ಪ್ರಶಸ್ತಿಗಾಗಿ ಲಾಬಿ ನಡೆಸುವವರ ಮೊರೆ ಹೋಗಿ, ಅವರಲ್ಲಿ ಒಂದಿಷ್ಟು ಹಣ ಪಡೆದು ಪ್ರಶಸ್ತಿ ನೀಡುತಿದ್ದಾರೆಂಬ ಆರೋಪಗಳು ಕೇಳಿ ಬಂದು ಪ್ರಾಯೋಜಕರು ಈ ವಷ೯ದಿಂದ ನಾನು ಕೊಡುವುದಿಲ್ಲವೆಂದು ಹೇಳಿದ್ದಾರೆ. ಆದರೂ ಒತ್ತಾಯಕ್ಕೆ ಪ್ರಶಸ್ತಿ ಪ್ರಾಯೋಜಕತ್ವದಲ್ಲಿ ಅವರದೇ ಹೆಸರನ್ನು ಬಳಸಿಕೊಂಡಿರುವುದು ವೈಮನಸ್ಸಿಗೆ ಕಾರಣವೂ ಆಗಿದೆ.

ಈ ಎಲ್ಲಾ ಬೆಳವಣಿಗೆಗಳ ಮಧ್ಯೆ ಮೂರನೇಯವರು ಲಾಭ ಪಡೆದುಕೊಂಡು ತಮಗೆ ಬೇಕಾದವರನ್ನು ಪ್ರಶಸ್ತಿ ಘೋಷಣೆ ಮಾಡುವಂತೆ ಒತ್ತಾಯಿಸಿ, ಮಠಾಧೀಶರ ಕೈ ಬೆಚ್ಚಗೆ ಮಾಡಿ ಬೀದರ ಜಿಲ್ಲಾ ಪ್ರಥಮ ಜಾನಪದ ಸಮ್ಮೇಳನ ಎಂಬ ನೆಪದಲ್ಲಿ ಕಾಯ೯ಕ್ರಮ ಏಪ೯ಡಿಸುವಂತೆ ಮಾಡಿರುವುದು ರಾಜ್ಯ ಜಾನಪದ ಪರಿಷತ್ತಿನವರ ಗಮನಕ್ಕೂ ಬರದೇ ಇಂಥದ್ದೊಂದು ಸಮ್ಮೇಳನಕ್ಕೆ ಸಿದ್ಧತೆ ತಾಲೂಕಿನ ಒಂದು ಪುಟ್ಟ ಹಳ್ಳಿಯಲ್ಲಿ ನಡೆಯುತ್ತಿರುವುದು ಬುದ್ಧಿ ಜೀವಿಗಳಲ್ಲಿ ಹುಬ್ಬೇರಿಸುವಂತೆ ಮಾಡಿದೆ.

ಇದೇ ಫೆ. 16 ರಿಂದ ಒಂದು ದಿನ ತಡವಾಗಿ ಜಾನಪದ ಪರಿಷತ್ತಿನವರು ಕೂಡ ಔರಾದ ತಾಲ್ಲೂಕಿನಲ್ಲಿ ಜಿಲ್ಲಾ ಪ್ರಥಮ ಸಮ್ಮೇಳನಕ್ಕೆ ಪೂವ೯ ಸಿದ್ಧತೆ ನಡೆಸಿ, ಈಗಾಗಲೇ ಸಮ್ಮೇಳನಾಧ್ಯಕ್ಷರನ್ನಾಗಿ ಚಲನಚಿತ್ರ ನಟ ವೈಜಿನಾಥ ಬಿರಾದಾರ್ ಅವರಿಗೆ ಆಯ್ಕೆ ಮಾಡಿದ್ದು ಸಂತಸವನ್ನುಂಟು ಮಾಡಿದೆ. ಬಸವಕಲ್ಯಾಣ ತಾಲೂಕಿನ ಬೇಲೂರಿನಲ್ಲಿ ನಡೆಯಲಿರುವ ಸಮ್ಮೇಳನಕ್ಕೂ ಔರಾದನಲ್ಲಿ ನಡೆಯಲಿರುವ ಜಾನಪದ ಸಮ್ಮೇಳನಕ್ಕೂ ಸಂಬಂಧ ಸೂತ್ರವಿಲ್ಲದಂತಾಗಿದೆ.

ಬೇಲೂರು ಉರಿಲಿಂಗ ಪೆದ್ದಿ ಉತ್ಸವ ಕಾಯ೯ಕ್ರಮಗಳಲ್ಲಿ ಬಹುತೇಕ ಬುದ್ಧಿ ಜೀವಿಗಳೆನಿಸಿಕೊಂಡವರು ತಮ್ಮ ಕನಸಿನ ಬೇಳೆ ಬೇಯಿಸಿಕೊಳ್ಳಲು ಮಠವನ್ನು ಅಸ್ತ್ರವನ್ನಾಗಿಸಿಕೊಳ್ಳುತ್ತಿರುವ ಬಗ್ಗೆ ಅಪಸ್ವರಗಳು ಕೇಳಿ ಬರುತ್ತಿವೆ. ಉರಿಲಿಂಗ ಪೆದ್ದಿ ಪ್ರಶಸ್ತಿಯ ನೆಪದಲ್ಲಿ ಮಠದ ಪರಂಪರೆ ರಾಜ್ಯ, ರಾಷ್ಟ್ರ ಮಟ್ಟಕ್ಕೆ ಕೊಂಡೊಯ್ಯುವ ಶ್ರೀಗಳ ಕನಸು ಬೇರೆಯವರ ಪಾಲಾಗುತ್ತಿರುವುದು ಕೂಡ ಅಷ್ಟೇ ಸತ್ಯವನ್ನು ಗೋಚರಿಸುತ್ತಿದೆ.

ಇದರಿಂದ ಜಾತ್ರೋತ್ಸವ ನೆಪದಲ್ಲಿ ಮೂರು ವಷ೯ಗಳಿಂದ ಪ್ರಥಮ ಸಮ್ಮೇಳನಗಳೇ ಜರುಗುತ್ತಿರುವುದು ಕೂಡ ಆಶ್ಚಯ೯ದ ಸಂಗಿತಿಯಾಗಿದೆ. ದ್ವಿತೀಯ ಸಮ್ಮೇಳನಗಳು ನಡೆದ ಉದಾಹರಣೆಗಳಂತೂ ಇಲ್ಲವೇ ಇಲ್ಲ. ಪ್ರಥಮ ಸಮ್ಮೇಳನ ಮಾಡಿ ಮುಗಿಸಿದರೆ ಆಯ್ತು, ನಮ್ಮ ಕೆಲಸ ಮುಗೀತು ಎಂದು ತಮ್ಮ ಬಯೋಡಾಟದಲ್ಲಿ ಸೇರಿಕೊಳ್ಳುವವರಿಗೇನು ಇಲ್ಲಿ ಬರವಿಲ್ಲ.ಅಂಥವರಿದಂಲೇ ಕಾಯ೯ಕ್ರಮಗಳಿಗೆ ಏಪಾ೯ಟು ನಡೆಯುತ್ತಲಿವೆ ಎಂದರೆ ತಪ್ಪಾಗಲಾರದು.

ಮೊಟ್ಟ ಮೊದಲಿಗೆ ಪ್ರಶಸ್ತಿ ಪ್ರಾರಂಭಿಸಿದ್ದು 2007 ರಲ್ಲಿ ಇದೇ ಬಸವಕಲ್ಯಾಣ ತಾಲೂಕಿನವರಾದ ಸಾಹಿತಿ ಕೆ. ನೀಲಾ ಹಾಗೂ ಮಚ್ಚೇಂದ್ರ ಅಣಕಲ್ ಅವರುಗಳನ್ನು ಉರಿಲಿಂಗ ಪೆದ್ದಿ ಪ್ರಶಸ್ತಿ ನೀಡಿ ಗೌರವಿಸುವುದರ ಮೂಲಕ ಬೇಲೂರು ಮಠವು ಮಾಧ್ಯಮಗಳ ಮೂಲಕ ಚಚೆ೯ಗೆ ಬಂದು ಜನ ಗುರುತಿಸುವಂತಾಯಿತು. ಸ್ಥಳೀಯರನ್ನು ಗುರುತಿಸುವ ಮೂಲಕ ಉತ್ತಮ ಕಾಯ೯ ಮಾಡುತಿದ್ದಾರೆನಿಸಿತ್ತು. ಇಬ್ಬರಲ್ಲಿ ಕೆ.ನೀಲಾ ಅವರು ಪ್ರಶಸ್ತಿ ಪಡೆಯುವಲ್ಲಿ ಅಷ್ಟೇನು ಆಸಕ್ತಿ ತೋರಲಿಲ್ಲವಾದ್ದರಿಂದ ಅವರು ಗೈರು ಹಾಜರಾಗಿದ್ದರು.

ಪ್ರಾರಂಭವಾದ ದಿನಗಳಿಂದ ಹಿಡಿದು ಕಳೆದ 2010ನೇ ಸಾಲಿನ ವಷ೯ದ ಪ್ರಶಸ್ತಿ ಕವಿ ಸರಜೂ ಕಾಟ್ಕರ್ ಹಾಗೂ ಡಾ. ಕೆ.ಆರ್. ದುಗಾ೯ದಾಸ ಅವರನ್ನು ಪ್ರಶಸ್ತಿ ನೀಡಿದ್ದರೂ ಕೂಡ ಇಬ್ಬರಲ್ಲಿ ಯಾರೊಬ್ಬರೂ ಪ್ರಶಸ್ತಿ ಸ್ವೀಕಾರಕ್ಕೆ ಬರದೇ ಇರುವುದು ಖೇದದ ಸಂಗತಿ ಹೌದು. ಈ ಭಾಗದಲ್ಲಿ ಫ್ರತಿಭಾವಂತರೇ ಇಲ್ಲವೆನ್ನುವಂತೆ ರಾಜ್ಯ, ರಾಷ್ಟ್ರ ಮಟ್ಟದ ಪ್ರಶಸ್ತಿ ಪುರಸ್ಕೖತರನ್ನೇ ಪ್ರಶಸ್ತಿ ನೀಡಿದರೆ ನಮ್ಮ ಘನತೆ ಹೆಚ್ಚುತ್ತದೆಂಬುದು ಬೇಲೂರು ಶ್ರೀಗಳ ಭ್ರಮೆಯಾಗಿದೆ.

ಹಂತ ಹಂತವಾಗಿ ಮೆಟ್ಟಿಲುಗಳಿಂದಲೇ ಗುರಿಮುಟ್ಟುಲು ಹತ್ತಬೇಕು ಎಂಬ ಪ್ರಥಮಿಕ ಅರಿವಿಲ್ಲದ ಶ್ರೀಗಳು ಒಮ್ಮೇಲೆ ಬೆಟ್ಟವನ್ನೇ ಹತ್ತಿ ಕೂರಬೇಕೆಂಬುದು ಅವರಲ್ಲಿನ ವಿಚಾರ ಸ್ವಂತದ್ದಲ್ಲ ಎನ್ನಬಹುದು. ಸಾಸ್ಕೖತಿಕ ರಾಯಭಾರಿ, ಸಾಹಿತಿ, ಸಂಘಟಕರೆಂದೆನಿಸಿಕೊಳ್ಳುವವರ ಪಾಲಾಗುತ್ತಿರುವ ಮಠಾಧೀಶರು ಅವರ ತಾಳಕ್ಕೆ ತಕ್ಕಂತೆ ಕುಣಿಯುತಿದ್ದಾರೆ. ಇದರಿಂದ ಮಾನ ಎಲ್ಲಿ ಕಳೆದು ಹೋಗುತ್ತಿದೆ ಹರಾಜಾಗುತ್ತಿದೆ ಎಂಬುದೇ ಸ್ವತಃ ಅವರಿಗೆ ಗೊತ್ತಿಲ್ಲ. ಒಟ್ಟಿನಲ್ಲಿ ಪ್ರಶಸ್ತಿಗೆ ಉರಿಲಿಂಗಪೆದ್ದಿ ಪ್ರಶಸ್ತಿಗೆ ಬೆಲೆ ಕುಸಿಯುತ್ತಿರುವುದು ಖಚಿತವಾಗಿದೆ.

ಇದೇ ಕಾಯ೯ಕ್ರಮಕ್ಕೆ ಫೆ. 15 ರಂದು ಖ್ಯಾತ ವೈಚಾರಿಕ ಚಿಂತಕ, ಆನುದೇವ ಹೊರಗಣವನು ಕೖತಿ ರಚನಾಕಾರ ಸಾಕಷ್ಟು ವಿವಾದಕೊಳಗಾಗಿರುವ ಲೇಖಕ ಡಾ. ಬಂಜಗೇರೆ ಜಯಪ್ರಕಾಶ ಅವರು ಇಲ್ಲಿ ಉದ್ಘಾಟನೆಗೆ ಬರುತಿದ್ದಾರೆ. ನೇರಾ ನೇರ ಭಾಷಣವನ್ನು ಮಾಡುವ ಚಿಂತಕ, ಲೇಖಕರನ್ನು ಇಲ್ಲಿನ ಜನತೆ ಅಷ್ಟು ಸರಳವಾಗಿ ಸ್ವೀಕರಿಸುವರೇ, ಹಳೇ ವಿಚಾರಗಳನ್ನು ತಲೆಯೆತ್ತಿದಾಗ ಈ ಪರಿಸರದಲ್ಲಿ ಏನಾಗಬಹುದು ಮತ್ತು ಗಲಭೆ, ಗೊಂದಲಗಳು ಆಗುತ್ತವೆಂಬುದು ಅರಿವಿಟ್ಟುಕೊಂಡು ಚಿಂತಿಸಬೇಕಾಗಿದೆ.

ಬೇಲೂರು ಉರಿಲಿಂಗ ಪೆದ್ದಿ ಮಠದ ಉತ್ಸವಕ್ಕೂ, ಇಲ್ಲಿ ನಡೆಸುವ ಸಾಂಸ್ಕೖತಿಕ, ಸಾಹಿತ್ಯೀಕ ಕಾಯ೯ಕ್ರಮಕ್ಕೂ ಯಾವುದೇ ಸಂಬಂಧವಿಲ್ಲ. ಆದರೂ ಯಾರೋ ಹೇಳಿದರೆಂದು ಏನೋ ಮಾಡಲು ಹೋಗಿ ಮಠದ ಮಾನ ಕಳೆದುಕೊಳ್ಳುತ್ತಿರುವ ಮಠಾಧೀಶರು ಎಚ್ಚರಗೊಳ್ಳುವರೆ ಎಂದು ನುಡಿಯುತ್ತಾರೆ ಅವರ ಆಪ್ತ ವಲಯದವರು. ಅಂತೂ ಎರಡೂ ಕಡೆ ಒಟ್ಟಿಗೆ ಜಾನಪದ ಸಮ್ಮೇಳನದ ಪ್ರತಿಕ್ರಿಯೆ ಏನಾಗುತ್ತದೆ ಎಂಬ ಕುತೂಹಲ ಜನರಲ್ಲಿದೆ.








ಈಶಾನ್ಯ ಸಾರಿಗೆ ಸಂಸ್ಥೆಯ ವಾಹನಗಳು



ಸಕಾ೯ರಿ ಬಸ್ ಗಳಲ್ಲಿ ಪ್ರಯಾಣಿಕರಿಗೆ ಸಕ೯ಸ್ ಪ್ರಯಾಣ
ಬಸವಕಲ್ಯಾಣ-ಮಂಠಾಳ ನಡುವಿನ ಪ್ರಯಾಣಿಕರಿಗ ದುಸ್ಥಿತಿ ಯಾರೂ ಕೇಳದಂತಾಗಿದೆಃ ಉಸಿರುಗಟ್ಟಿಸುವ ಸ್ಥಿತಿಯಲ್ಲಿ ಪ್ರಯಾಣಿಸುತ್ತಿರುವ ವಿದ್ಯಾಥಿ೯ಗಳು
ಬಸವಕಲ್ಯಾಣ, ಫೆ. 9

ಈಶಾನ್ಯ ಸಾರಿಗೆ ಸಂಸ್ಥೆಯ ವಾಹನಗಳು ಸರಿಯಾದ ಸಮಯಕ್ಕೆ ಬಾರದೇ ಜನಸಾಮಾನ್ಯರು ಪರದಾಡುವಂಥ ಸ್ಥಿತಿ ತಾಲೂಕಿನ ಮಂಠಾಳ ಗ್ರಾಮದಲ್ಲಿ ನಿತ್ಯವೂ ಸಂಜೆ ಮತ್ತು ಬೆಳಗಿನಿಂದ ಸಾಯಂಕಾಲದವರೆಗೂ ಕಾಡುತ್ತಿದೆ. ಯಾರೂ ಕೂಡ ಕ್ಯಾರೇ ಎನ್ನುತ್ತಿಲ್ಲ. ಕಿಕ್ಕಿರಿದ ಬಸ್ ಗಳಲ್ಲಿ ಜೋತು ಬಿದ್ದು ಹೋಗುವ ಶಾಲಾ ಮಕ್ಕಳ ಸ್ಥಿತಿ ಮಾತ್ರ ಕರುಣಾಜನಕವಾಗಿದೆ.

ಬಸವಕಲ್ಯಾಣದಿಂದ ಮಂಠಾಳ ಮಾಗ೯ವಾಗಿ ಅದೇ ಮಂಠಾಳ ಮಾಗ೯ವಾಗಿ ಬಸವಕಲ್ಯಾಣಕ್ಕೆ ತಲುಪುವ ವಿ.ಕೆ. ಸಲಗರ ಬಸ್ ನಿತ್ಯವೂ ಬೆಳಿಗ್ಗೆ ಶಾಲಾ ಕಾಲೇಜು ವಿದ್ಯಾಥಿ೯-ವಿದ್ಯಾಥಿ೯ನಿಯರಿಗೆ ಹೊತ್ತೂಯ್ಯುತ್ತದೆ. ಇದೊಂದೇ ಬಸ್ ಗತಿ ಎನ್ನುವಂತೆ ಕಿಕ್ಕಿರಿದ ಜನ ಸಂದಣಿಯಲ್ಲಿ ದೂಡಿಕೊಂಡು ಹೋಗಬೇಕಾದ ಅನಿವಾಯ೯ ಕೂಡ ಅಷ್ಟೇ ಸಹಜವಾಗಿದೆ. ಇಂತಹ ಒದ್ದಾಟದಲ್ಲಿ ಮಕ್ಕಳ ಪರಿಸ್ಥಿತಿ ಎದುರಾಗಿರುವುದು ಯಾರೂ ಯೋಚಿಸಿದಂತಿಲ್ಲ ಎನ್ನುತ್ತಾರೆ ಸ್ಥಳೀಯರು. ಹಲವು ತಿಂಗಳುಗಳೇ ಕಳೆದರೂ ಯಾರೊಬ್ಬರೂ ಇತ್ತ ಚಿತ್ತ ಹರಿಸದೇ ಇರುವುದು ಕೂಡ ದುರಂತವಾಗಿದೆ.

ಸಮಯಕ್ಕೆ ಸರಿಯಾಗಿ ಬಾರದ ಈಶಾನ್ಯ ಸಾರಿಗೆ ವಾಹನಗಳು ಬಂದರೆ ಅಧ೯ ಗಂಟೆಯಲ್ಲೇ ನಾಲ್ಕಾರು ಬಸ್ ಒಟ್ಟೊಟ್ಟಿಗೆ ಖಾಲಿಖಾಲಿಯಾಗಿ ಸಾಗುತ್ತವೆ. ಅಲ್ಲಿಂದ ನಾಲ್ಕಾರು ಗಂಟೆಯಾದರೂ ಬರದೇ ಇರುವ ಬಸ್ ಗಳಿಗೆ ಕಾಯದೇ ಖಾಸಗಿ ವಾಹನಗಳನ್ನೆ ನೆಚ್ಚಕೊಂಡಿರಬೇಕಾದ ಪರಿಸ್ಥಿತಿ ಪ್ರಯಾಣಿಕರದ್ದಾಗಿದೆ. ಬಸವಕಲ್ಯಾಣದಿಂದ ಸಲಗರ ಮಾಗ೯ವಾಗಿ ಸಾಗುವ ಪ್ರಯಾಣಿಕರ ಗೋಳು ಯಾರೂ ಕೇಳುವವರಿಲ್ಲದೇ ಜೋತು ಬಿದ್ದು ಹೋಗುವ ಶಾಲಾ ಮಕ್ಕಳೇ ಇದಕ್ಕೆ ಸಾಕ್ಷಿಯಾಗುತ್ತಾರೆ.

ಬೆಳಿಗ್ಗೆ ಏಳರ ಸುಮಾರಿಗೆ ಯಲ್ಲದಗುಂಡಿ ಹಾಗೂ ಅಲಗೂಡ ಮಾಗ೯ವಾಗಿ ಬರುವ ಎರಡು ಬಸ್ ಹಾಗೂ ಹತ್ತರಗಾ, ಗಿಲಕಿ, ಮಾಗ೯ದಿಂದ ಬರುವ ಬಸ್ ಗಳು ಬಿಟ್ಟರೆ 7.30 ರಿಂದ 8ರ ಮಧ್ಯದಲ್ಲಿ ಬಸ್ ಗಳು ಏಕಕಾಲಕ್ಕೆ ಹೋಗಿ ಬಿಟ್ಟಿರುತ್ತವೆ. ಇದಾದ ನಂತರ ವಿ.ಕೆ. ಸಲಗರ ಬಸ್ 9 ಕ್ಕೆ ಮಂಠಾಳದಲ್ಲಿ ಪ್ರತ್ಯಕ್ಷಗೊಂಡರೂ ಇದರಲ್ಲಿ ನೂರಾರು ಶಾಲಾ ಕಾಲೇಜು ವಿದ್ಯಾಥಿ೯ಗಳಿಗೆ ನಿಂತುಕೊಳ್ಳಲು ಸಹ ಜಾಗವಿಲ್ಲದೇ ಜೋತುಬಿದ್ದು ಹೋಗಬೇಕಾದ್ದು ಅನಿವಾಯ೯ ಎದುರಾಗಿರುವುದು ಶೋಚನೀಯ ಸಂಗತಿ ಕೂಡ.

ಈ ಎಲ್ಲಾ ಪರಿಸ್ಥಿತಿ ನಿತ್ಯದ ಗೋಳಿನಲ್ಲಿ ಸರಿಯಾದ ಸಮಯಕ್ಕೆ ಶಾಲಾ ಕಾಲೇಜು ತಲುಪದ ವಿದ್ಯಾಥಿ೯-ವಿದ್ಯಾಥಿ೯ನಿಯರಿಗೆ ಶೈಕ್ಷಣಿಕ ಹಿನ್ನೆಡೆ ಆಗುತ್ತಿದೆ ಎಂಬುದು ಪಾಲಕರ ಅಳಲಾಗಿದೆ. ಬೆಳಗ್ಗಿನ ಸಮಸ್ಯೆ ಒಂದೆಡೆಯಾದರೆ ರಾತ್ರಿ ಬರುವ ಸಾರಿಗೆ ವಾನಗಳು ಒಂದರ ಹಿಂದೆ ಒಂದು ಸಾಯಂಕಾಲ 7 ರಿಂದ 8.30 ರವರೆಗೆ ಎಲ್ಲಾ ಬಸ್ ಗಳು ಬಂದು ಹೋಗಿರುತ್ತವೆ ಆಗ ಖಾಸಗೀ ವಾಹನಗಳಿಗೆ ದುಬಾರಿ ಹಣ ಕೊಟ್ಟು ಹೋಗಬೇಕಾದ್ದು ಸಂಕಟದ ಪರಿಸ್ಥಿತಿ ಪ್ರಯಾಣಿಕರದ್ದಾಗಿದೆ.

ಪ್ರಯಾಣಿಕರ ಪ್ರಯಾಸ ಯಾರೂ ಕೇಳದಂತಾಗಿರುವುದರಿಂದ ಬೇಕಾಬಿಟ್ಟಿ ದುಡ್ಡನ್ನು ವಸೂಲಿ ಮಾಡಿ ಬಿಟ್ಟು ಬರುವ ಅಪಿ ಟಂಟಂಗಳಿಗೇನು ಇಲ್ಲಿ ಕೊರತೆ ಇಲ್ಲ ಎನ್ನಬಹುದು. ಆದರೆ ದುಡ್ಡಿಲ್ಲದವರು ಏನು ಮಾಡಬೇಕು? ಎಂಬುದು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಒಂದಿಷ್ಟು ಚಿಂತಿಸಿ ನೋಡಲೆಂಬುದು ನಿತ್ಯವೂ ಓಡಾಡುವ ಪ್ರಯಾಣಿಕರ ಆಕ್ರೋಷವಾಗಿದೆ. ಶಾಲಾ ಮಕ್ಕಳ ದೂರುಗಳಂತೂ ಸಾಕಷ್ಟಿವೆ.

ಇದ್ಯಾವುದನ್ನು ಪರಿಗಣನೆಗೆ ತೆಗೆದುಕೊಳ್ಳದ ಇಲಾಖೆ ಬಸವಕಲ್ಯಾಣ ಮಾಗ೯ದಿಂದ ಮಂಠಾಳ, ಅಲಗೂಡ, ಕೋಹಿನೂರು, ಲಾಡವಂತಿ, ಚಿಟ್ಟಾ, ಭೋಸಗಾ, ಬಟಗಾರಾ, ಹತ್ತರಗಾ, ಸಲಗರಾ ಸೇರಿದಂತೆ ಮುಂತಾದ ಗ್ರಾಮಗಳ ಪ್ರಯಾಣಿಕರ ಸಮಸ್ಯೆಗಳತ್ತ ಸಾರಿಗೆ ಇಲಾಖೆಯ ಅಧಿಕಾರಿಗಳು ಲಕ್ಷ ವಹಿಸುವರೇ ಎಂಬುದು ಜನಸಾಮಾನ್ಯರ ಅಳಲಾಗಿದೆ.

ಸಮಯಕ್ಕೆ ಸರಿಯಾಗಿ ನಿತ್ಯವೂ ಹೋಗಬೇಕಾದ ಶಾಲಾ ಮಕ್ಕಳು ಉಸಿರುಗಟ್ಟಿಸುವಂಥ ಬಸ್ ಗಳಲ್ಲಿ ಹೋಗದಂದೆ ಹೆಚ್ಚುವರಿ ಬಸ್ ಗಳನ್ನು ಶಾಲಾ ಮಕ್ಕಳಿಗಾಗಿ ಸರಿಯಾದ ಸಮಯಕ್ಕೆ ಬಿಟ್ಟರೆ ನೆಮ್ಮದಿಯಿಂದ ಪ್ರಯಾಣಿಸಿ ಮತ್ತೆ ನಮ್ಮ ಮಕ್ಕಳು ಗೂಡು ಸೇರಿಕೊಳ್ಳಬಹುದು ಎಂಬುದು ಅನೇಕ ಪಾಲರಕರ ಮನವಿಯಾಗಿದೆ.

ಇದಕ್ಕೆ ಸಂಬಂಧಪಟ್ಟ ಇಲಾಖೆಯ ನಿಲ೯ಕ್ಷ ಧೋರಣೆ ಮಂಠಾಳ ಕ್ಷೇತ್ರದ ಜನಪ್ರತಿನಿಧಿಗಳು ಕೂಡ ಪ್ರಶ್ನಿಸದಂತಾಗಿದೆ ಎನ್ನುತ್ತಾರೆ ಸ್ಥಳೀಯರು. ಪ್ರಯಾಣಿಕರನ್ನು ಪರದಾಡುವಂಥ ಸ್ಥಿತಿಯನ್ನರಿತು ಇನ್ನು ಮುಂದಾದರೂ ಇಲಾಖೆ ಸ್ಪಂಧಿಸುವುದೇ ಎಂದು ಕಾದು ನೋಡಬೇಕಾಗಿದೆ.

ವಿದ್ಯಾಥಿ೯ಗಳನ್ನು ಶೈಕ್ಷಣಿಕವಾಗಿ ಮೇಲೆತ್ತುವುದು.


ಪಾಶ್ಛಾತ್ಯ ಸಂಸ್ಕೖತಿಯಿಂದ ಸಮಾಜದಲ್ಲಿ ಆಗುತ್ತಿರುವ ದುಷ್ಪರಿಣಾಮಗಳನ್ನು ಹೋಗಲಾಡಿಸಲು ಕರೆ
ಬಸವಕಲ್ಯಾಣ, ಫೆ. 5


ಜಾತಿ ಭೇದವೆನ್ನದೇ ವಿದ್ಯಾಥಿ೯ಗಳನ್ನು ಶೈಕ್ಷಣಿಕವಾಗಿ ಮೇಲೆತ್ತುವುದು, ಅವರಲ್ಲಿ ನೈತಿಕತೆಯನ್ನು ಮೂಡಿಸುವುದರೊಂದಿಗೆ ಸಮಾಜದಲ್ಲಿ ಆಗುತ್ತಿರುವ ಅನ್ಯಾಯದ ವಿರುದ್ಧ ಹೋರಾಟಕ್ಕೆ ಸಜ್ಜಾಗುವಂತೆ ಸ್ಫೂತಿ೯ ನೀಡುವುದೇ ಸ್ಟುಡೆಂಟ್ ಇಸ್ಲಾಮಿಕ್ ಆಗ೯ನೈಜೇಶನ್ ಆಫ್ ಇಂಡಿಯಾ ಸಂಘಟನೆಯದ್ದಾಗಿದೆ ಎಂದು ಎಸ್ಐಓ ರಾಜ್ಯಾಧ್ಯಕ್ಷ ಅಸ್ಫಾಕ ಅಹ್ಮದ್ ಶರೀಫ್ ಹೇಳಿದರು.

ನಗರದಲ್ಲಿ ಫೆ. 4ರಂದು ಭಾನುವಾರ ಕರೆದಿದ್ದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಪಾಶ್ಛಾತ್ಯ ಸಂಸ್ಕೖತಿಯಿಂದ ಸಮಾಜದಲ್ಲಿ ಆಗುತ್ತಿರುವ ದುಷ್ಪರಿಣಾಮಗಳನ್ನು ಹೋಗಲಾಡಿಸುವ ಉದ್ದೇಶದಿಂದ ಇದೇ ಫೆ. 17 ರಿಂದ 26 ರವರೆಗೆ ಹತ್ತು ದಿನಗಳವರೆಗೆ ಪ್ರಸಿದ್ಧ ಸಂಸ್ಕೖತಿಯ ಆಧಾರದ ಮೇಲೆ ವಿದ್ಯಾಥಿ೯ಗಳೇ ಎತ್ತ ಸಾಗುತಿದ್ದಿರಿ.? ಎಂಬ ಅಭಿಯಾನ ಚಳುವಳಿ ಬಸವಕಲ್ಯಾಣದಿಂದಲೇ ಹಮ್ಮಿಕೊಂಡು ರಾಜ್ಯಾದ್ಯಂತ ನಡೆಸಲಾಗುತ್ತಿದೆ ಎಂದರು.

ರಾಷ್ಟ್ರೀಯ ಮಟ್ಟದ ಚಳುವಳಿ ಇದಾಗಿದ್ದು 30 ವಷ೯ಗಳಿಂದ ನಿರಂತರ ಹೋರಾಟ ನಡೆಸುವುರ ಜೊತೆಗೆ ಉತ್ತಮ ಸಮಾಜ ನಿಮಾ೯ಣಕ್ಕೆ ಜನಜಾಗೖತಿ ಮೂಡಿಸುವ ನಿಟ್ಟಿನಲ್ಲಿ ವಿದ್ಯಾಥಿ೯ಗಳನ್ನು ಒಂದುಗೂಡಿಸುವ ಪ್ರಯತ್ನ ಸಂಘಟನೆ ಮಾಡುತ್ತಿದೆ. ಕೆಡುಕುಗಳಿಂದ ಕೂಡಿದ ಸಮಾಜ ಪರಿವತ೯ನೆಗೆ ಶ್ರಮಿಸಲಾಗುತ್ತಿದ್ದು, ಜೀವನವೆಂಬುದು ಬರೀ ಮೋಜಿಗಾಗಿ ಅಲ್ಲ. ಜೀವನವನ್ನು ರೂಪಿಸಿಕೊಳ್ಳುವ ನೈಜ ಸಂದೇಶ ವಿದ್ಯಾಥಿ೯ಗಳಿಗೆ ಈ ಸಂದಭ೯ಗಳಲ್ಲಿ ಹೇಳಿಕೊಡಲಾಗುತ್ತಿದೆ ಎಂದು ವಿವರಿಸಿದರು.

ಇವತ್ತಿನ ವಿದ್ಯಾಥಿ೯ಗಳು ಬರೀ ಮೋಜು ಮಾಡುವುದು ಜೀವನವೆಂದುಕೊಂಡಿರುವುದರಿಂದ ಬಡಿದೆಚ್ಚರಿಸುವ ಕತ೯ವ್ಯ ಸಂಘಟನೆಗಳದ್ದಾಗಿದೆ. ಸಮಾಜವನ್ನು ಹಾಳಾಗಿ ಕುಟುಂಬಗಳು ಒಡೆದು ಹೋಗುತ್ತಿರುವ ಈ ಸಂದಭ೯ಗಳಲ್ಲಿ ಮಾದಕ ವಸ್ತುಗಳಿಂದ ನೆಮ್ಮದಿಯನ್ನು ಕಳೆದುಕೊಳ್ಳುತ್ತಿದ್ದಾರೆ. ಕೆಟ್ಟ ಚಟಗಳಿಂದ ದೂರವುಳಿದು ಸುಂದರವಾದ ಜೀವನ ರೂಪಿಸಿಕೊಳ್ಳಲು ಜನಜಾಗೖತಿ ಅಭಿಯಾನದ ಕರೆ ಇದಾಗಿದೆ ಎಂದರು.

ಕೇವಲ ಅಭಿಯಾನಗಳನ್ನು ನಡೆಸದೇ ಮಾಧ್ಯಮಗಳ ಮೂಲಕ ಯುವಜನಾಂಗ ಹೇಗೆ ಬದುಕಬೇಕೆಂಬ ದೖಷ್ಠಿಕೋನ ಇಟ್ಟುಕೊಂಡು ರಾಜ್ಯದ ವಿವಿಧೆಡೆ ಇಂತಹ ಪತ್ರಿಕಾಗೋಷ್ಠಿಗಳನ್ನು ನಡೆಸಲಾಗುತ್ತಿದೆ. ವಿದ್ಯಾಥಿ೯ಗಳನ್ನು ಹುರಿದುಂಬಿಸಲು ಮಾಧ್ಯಮಗಳು ಪ್ರಮುಖ ಪಾತ್ರ ವಹಿಸುತ್ತವೆ. ಆದ್ದರಿಂದ ಸಾಮಾಜಿಕ ಬದ್ಧತೆ, ಜೀವನ ಕೌಶಲ್ಯತೆ ಹಾಗೂ ಬದುಕಿನ ಶಾಂತಿ, ನೆಮ್ಮದಿಗಾಗಿ ಪ್ರತಿಯೊಬ್ಬ ವಿದ್ಯಾಥಿ೯ಗಳು ಮುಂದಾಗಬೇಕಾಗಿದೆ.

ವಿದ್ಯಾಥಿ೯ಗಳಿಂದ ಮಾತ್ರ ಸಾಮಾಜಿಕ ಬದಲಾವಣೆ, ಸದೖಢ ಸಮಾಜ ನಿಮಾ೯ಣ ಮಾಡಲು ಸಾಧ್ಯವಿದ್ದು, ಚಳುವಳಿಯಲ್ಲಿ ವಿದ್ಯಾಥಿ೯ಗಳ ಮೇಲಿರುವ ಋಣಾತ್ಮಕ ಪ್ರಭಾವ ತೊಡೆದು ಹಾಕಿ ಪ್ರಸಿದ್ಧ ಸಂಸ್ಕೖತಿಯ ತತ್ವಶಾಸ್ತ್ರ ಪರಿಣಾಮದ ಬಗ್ಗೆ ತಿಳಿಸುವುದು ಮತ್ತು ಅಶ್ಲೀಲ ಚಿತ್ರಗಳು, ಫ್ಯಾಶನ್ ಜಾಹಿರಾತು ಅನುಕರಣೆಗಳ ಕೆಟ್ಟ ದುಷ್ಪರಿಣಾಮ ಹೋಗಲಾಡಿಸಿ, ಸಾಂಸ್ಕೖತಿಕ ಕಾಯ೯ಕ್ರಮಗಳ ಮೂಲಕ ಜಾಗೖತಿಯನ್ನು ಮೂಡಿಸಲಾಗುತ್ತಿದೆ ಎಂದರು..

ಸ್ಟುಡೆಂಟ್ ಇಸ್ಲಾಮಿಕ್ ಆಗ೯ನೈಜೇಶನ್ ಆಫ್ ಇಂಡಿಯಾ ಸಂಘಟನೆಯು ಕೇವಲ ಒಂದು ಧಮ೯ಕ್ಕೆ ಸೀಮಿತವಲ್ಲ. ಎಲ್ಲಾ ಧಮ೯ದ, ಸಾಮಾಜಿಕ ಚಿಂತನೆ ಹೊಂದಿರುವ ಪ್ರತಿಯೊಬ್ಬರೂ ಭೇದಭಾವವನ್ನು ಮಾಡದೇ ಪಾಲ್ಗೊಳ್ಳಬೇಕು ಎಂದು ಕರೆ ನೀಡಿದರು. ಪತ್ರಿಕಾಗೋಷ್ಠಿಯಲ್ಲಿ ಸಂಘಟನಾ ಕಾಯ೯ದಶಿ೯ ಯಾಶೀನ್ ಅಮೀನ್, ಅಬ್ದುಲ್ ಮಾಜೀದ್, ಅಹ್ಮದ್ ಸಾದ, ಅಬುಲಲ್ಲಾ ಅವೇಸ್ ಉಪಸ್ಥಿತರಿದ್ದರು.


ಘಷ೯ಣೆಗಳಿಂದ ನಾಡು ಹೋಳಾಗುತ್ತದೆಃ ಮುಚಳಂಬ ಪ್ರಣಾವನಂದ ಸ್ವಾಮಿಗಳು

ಬಸವಕಲ್ಯಾಣ, ಫೆ. 11
ಕಾಡುಗಳ ಮಧ್ಯೆದಲ್ಲಿ ಘಷ೯ಣೆ ನಡೆದರೆ ಕಾಡು ಸುಟ್ಟು ಭಸ್ಮವಾಗುತ್ತದೆ. ಅದೇ ಘಷ೯ಣೆಯನ್ನು ನಾಡಿನಲ್ಲಿ ನಡೆದಾಗ ನಾಡನ್ನು ಹೋಳಾಗಿ ಹೋಗುತ್ತದೆ ಎಂದು ಮುಚಳಂಬದ ಪ್ರಣವಾನಂದ ಮಹಾಸ್ವಾಮಿಗಳು ಅಭಿಪ್ರಾಯಪಟ್ಟರು.

ನಗರದಲ್ಲಿ ವಿಶ್ವಕಮ೯ ಜಗದ್ಗುರು ಭಾವೈಕ್ಯತೆಯ ಹರಿಕಾರ ಸದ್ಗುರು ಮೌನೇಶ್ವರರ ದ್ವಿತೀಯ ಜಾತ್ರಾ ಮಹೋತ್ಸವದಲ್ಲಿ ಮೌನೇಶ್ವರರ ಭಾವಚಿತ್ರದೊಂದಿಗೆ ಮಹಿಳೆಯರು ಹೊತ್ತ ಕುಂಭ ಮೇಳದೊಂದಿಗೆ ನಗರದ ಪ್ರಮುಖ ಬೀದಿಗಳಲ್ಲಿ ನಡೆಸಿದ ಮೆರವಣಿಗೆಯ ನಂತರ ಕಾಯ೯ಕ್ರಮವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದರು.

ಧಮ೯ ಇಲ್ಲದವರ ಜೀವನ ಅಧಮ೯ ಎನಿಸಿಕೊಳ್ಳುತ್ತದೆ. ಮನುಷ್ಯನಿಗೂ ಪ್ರಾಣಿ ಪಕ್ಷಿಗಳಿಗೂ ಯಾವುದೇ ವ್ಯತ್ಯಾಸವಿಲ್ಲ. ಆಹಾರ, ನಿದ್ರೆ, ಭಯ, ಮೈಥುನ ಪ್ರಾಣಿ-ಪಕ್ಷಿಗಳಲ್ಲೂ ಮತ್ತು, ಮನುಷ್ಯರಲ್ಲೂ ಇದ್ದಂತೆ ಧಮ೯ವನ್ನು ಸಾಧಿಸಲು ಮನುಷ್ಯನಿರಬೇಕು ಎಂದರು.

ಕಾಮವೆಂಬುದು ಎರಡರಲ್ಲೂ ಇರುತ್ತದೆ. ಅದೇ ಕಾಮವನ್ನು ಜೀವನವೆಂದು ಭಾವಿಸಿದರೆ ಸಲ್ಲದು. ಪ್ರಾಣಿಗಳಿಗಿಂತ ಕೀಳುಮಟ್ಟದ ಜೀವನ ಮನುಷ್ಯ ಬದುಕುತ್ತಿರುವುದು ಪ್ರಸ್ತುತ ವಿದ್ಯಾಮಾನಗಳಲ್ಲಿ ಗೋಚರಿಸುತ್ತಿದೆ. ಇದರಿಂದ ಸಾಮಾಜಿಕವಾಗಿ, ರಾಜಕೀಯವಾಗಿ ಮನುಷ್ಯರಲ್ಲಿರುವ ನೈತಿಕತೆ ಉಡುಗಿ ಹೋದಂತಾಗುತ್ತಿದೆ ಎಂದು ಕಳವಳ ವ್ಯಕ್ತ ಪಡಿಸಿದರು.

ಊರೆಲ್ಲಾ ಲಂಕವಾಗಿ ಮನೆ ಮನೆಗಳಲ್ಲಿ ರಾವಣರು ಹುಟ್ಟಿಕೊಳ್ಳುತ್ತಿದ್ದಾರೆ. ಇಂತಹ ಬೆಳವಣಿಗೆ ಇಂದಿನ ರಾಜಕೀಯ ಕ್ಷೇತ್ರದಲ್ಲಿ ಆಗುತ್ತಿರುವುದು ವಿಷಾದದ ಸಂಗತಿಯಾಗಿದ್ದು, ಮಹಾನ್ ಪುರುಷರ ನೆಪದಲ್ಲಿ ಧಮ೯ ಕಾಯ೯ಗಳು ನಡೆಸಬೇಕಾದ್ದು ಎಷ್ಟು ಅವಶ್ಯಕವೋ ಮನುಷ್ಯ ಕೂಡ ಅಸಾಧ್ಯವಾದುದ್ದನ್ನು ಮೀರಿ ಸಾಧಿಸಿದಾಗ ಮಾತ್ರ ಪ್ರಾಣಿಗಳಿಗಿಂತ ಮಿಗಿಲಾದ ಬದುಕು ಜೀವಿಸಿದಂತಾಗುತ್ತದೆ ಎಂದು ಹೇಳಿದರು.

ತ್ರಿಪುರಾಂತ ಗವಿ ಮಠದ ಅಭಿನವ ಘನಲಿಂಗ ರುದ್ರಮುನಿ ಶಿವಾಚಾಯ೯ರು ಸಾನಿಧ್ಯ ವಹಿಸಿ ಮಾತನಾಡುತ್ತ, ಮನಸ್ಸಿನ ಕೊಳೆಯನ್ನು ತೊಳೆಯಲು ಶರಣರ ಅನುಭಾವಗಳನ್ನು ಅರಿತುಕೊಂಡು ಜೀಣಿ೯ಸಿಕೊಳ್ಳುವ ಶಕ್ತಿ ಹೊಂದಿರಬೇಕು. ಅಂದಾಗ ಮಾತ್ರ ಮನಸ್ಸು ಶುದ್ಧೀಕರಣಗೊಳ್ಳುತ್ತದೆ.

ಶಾಂತಿಯನ್ನು ಕದಡಿದ ಸಮಾಜದಲ್ಲಿ ಸಂಸ್ಕಾರ ಹೀನರಾಗಿ ಬಾಳದೇ, ಧಮ೯ದ ತಳಹದಿಯ ಮೇಲೆ ನಡೆದುಕೊಂಡು ಹೋಗುವಂತಾಗಬೇಕು. ಶರಣರ ತತ್ವ ಸಿದ್ಧಾಂತಗಳ ಮೇಲೆ ಜೀವನ ರೂಪಿಸಿಕೊಂಡು 12ನೇ ಶತಮಾನದಲ್ಲಿ ನೆಲೆಸಿದ್ದ ಶಾಂತಿಯನ್ನು ಪುನನಿ೯ಮಾಣ ಮಾಡಬೇಕಾದ್ದು ಪ್ರಸ್ತುತ ಸಂದಭ೯ಗಳಲ್ಲಿ ಅವಶ್ಯವಾಗಿದೆ ಎಂದು ಕರೆ ನೀಡಿದರು.

ಮಾಜಿ ಶಾಸಕ ಎಂ.ಜಿ ಮುೂಳೆ ಮುಖ್ಯ ಅತಿಥಿಗಳಾಗಿ ಮಾತನಾಡಿ, ಪ್ರಾಮಾಣಿಕವಾಗಿ ದುಡಿದು ಶರಣರ ಕಾಯಕವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡ ಸಮಾಜ ವಿಶ್ವಕಮ೯ ಸಮಾಜವಾಗಿದೆ. ಕಾಲ ಹರಣವನ್ನು ಮಾಡದೇ ಕಾಯಕ ನಿಷ್ಠೆ, ಸದಾ ಕಾಯ೯ದಲ್ಲಿ ನಿರತರಾಗಿ ಧಾಮಿ೯ಕ ಕೆಲಸಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಇಂತಹ ಸಮಾಜದವರನ್ನು ಸಹಕಾರ ಮನೋಭಾವನೆಯಿಂದ ನೋಡಬೇಕು ಎಂದರು.

ಏಕದಂಡಗಿ ಮಠದ ಗುರುನಾಥ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಿ ಆಶಿವ೯ಚನ ನೀಡಿದರು. ಹುಮನಾಬಾದ ಏಕದಂಡಗಿ ಶಾಖಾ ಮಠದ ಕುಮಾರ ಮಹಾಸ್ವಾಮಿಗಳು, ಹಿರನಾಗಾಂವ ಜೈ ಶಾಂತಲಿಂಗೇಶ್ವರ ಮಾಹಾಸ್ವಾಮಿಗಳು ಮಾತನಾಡಿ, ಜಾತ್ರೆಗಳು ಜನರನ್ನು ಒಂದುಗೂಡಿಸುವ ಸಂಗಮವಾಗಬೇಕು. ದ್ವೇಷ, ಅಸೂಯೆಗಳ ಜಾತ್ರೆ ನಡೆಯಬಾರದೆಂದು ಕರೆ ನೀಡಿದರು.

ರಾಜಾಬಾಗ ಸವಾರ ದಗಾ೯ದ ಖಾಜಾ ಜಿಯಾವುಲ್ ಹಸನ್ ಜಾಗೀರದಾರ, ತಾಲೂಕಾ ಪಂಚಾಯತ್ ಅಧ್ಯಕ್ಷ ಗುರುಲಿಂಗಪ್ಪಾ ಸೈದಾಪೂರೆ, ಖೇಳಗಿ ಎಇಇ ಜೈಪ್ರಕಾಶ ಪೊದ್ದಾರ್, ನಗರಸಭೆ ಅಧ್ಯಕ್ಷೆ ಮಂಗಲಾಬಾಯಿ ಉದರೆ, ತೋಟಂದ್ರ ಮಹಾಸ್ವಾಮಿಗಳು ಸುಲೇಪೇಟ್, ಜೆಡಿಎಸ್ ತಾಲೂಕಾಧ್ಯಕ್ಷ ಶಬ್ಬೀರ್ ಪಾಶಾ ಮುಜಾವರ್, ನರಸಪ್ಪಾ ಉಡಬಾಳ್, ಓಂ ಶಾಂತಿಯ ಬಿ.ಕೆ.ರೋಹಿದಾಸ, ಅಜು೯ನ್ ಕನಕ ಸೇರಿದಂತೆ ಮುಂತಾದ ಗಣ್ಯರು ವೇದಿಕೆಯಲ್ಲಿದ್ದರು.

ಉಮೇಶ ಪಾಂಚಾಳ ಕಾಯ೯ಕ್ರಮ ನಿರೂಪಿಸಿದರು. ವಿಜಯಕುಮಾರ ಪಾಂಚಾಳ ಸ್ವಾಗತಿಸಿ ಪ್ರಾಸ್ತವಿಕ ಮಾತನಾಡಿದರು. ಕಾಯ೯ಕ್ರಮದಲ್ಲಿ ಪ್ರಮುಖರಾದ ತಿಪ್ಪಣ್ಣ ಪಾಂಚಾಳ, ಹರಿಶ್ಚಂದ್ರ ಪಾಂಚಾಳ, ಕಾಳಪ್ಪ ವಿಶ್ವಕಮ೯, ನರೇಂದ್ರ ಪಾಂಚಾಳ, ವಿರೇಶ ಪಾಂಚಾಳ, ನಾಗೇಶ ಪಾಂಚಾಳ, ವಿದ್ಾಧರ ಪಾಂಚಾಳ, ಸೂಯ೯ಕಾಂತ ಪಾಂಚಾಳ, ದೇವಿದಾಸ ಪಾಂಚಾಳ ಸೇರಿದಂತೆ ಮುಂತಾದ ಧಮ೯ ಸಮುದಾಯದವರು ಇದ್ದರು.

-----------------------------------

ಪ್ರತಿಯೊಂದು ಕೆಲಸ ಕಾಯ೯ಗಳು ಕಾನೂನಿನ ಚೌಕಟ್ಟಿನಡಿ



ತಾಲೂಕಾ ಕಾನೂನು ಸೇವೆಗಳ ಸಮಿತಿ ಹಾಗೂ ನ್ಯಾಯವಾದಿಗಳ ಸಂಘದ ಸಂಯುಕ್ತಾಶ್ರಯದಲ್ಲಿ ನಗರದ ಹೊರವಲಯದ ಆಟೋ ನಗರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಅಸಂಘಟಿತ ಕಾಮಿ೯ಕರ ಸಾಮಾಜಿಕ ಭದ್ರತೆ ಕಾಯ್ದೆಯಡಿ ಕಾನೂನು ಅರಿವು ನೆರವು ಕಾಯ೯ಕ್ರಮ ಉದ್ಘಾಟಿಸಿ ಹಿರಿಯ ಸಿವಿಲ್ ನ್ಯಾಯಧೀಶರು ಮತ್ತು ತಾಲೂಕಾ ಕಾನೂನು ಸೇವೆಗಳ ಸಮಿತಿ ಅಧ್ಯಕ್ಷೆ ಎಂ.ಎಸ್.ಹಿರೇಮಠ ಮಾತನಾಡುತ್ತಿರುವುದು.

ಬಸವಕಲ್ಯಾಣ, ಫೆ. 10

ಅಸಂಘಟಿತ ಕಾಮಿ೯ಕರಿಗೆ ಸರಿಯಾದ ರೀತಿಯಲ್ಲಿ ಕಾಲಕಾಲಕ್ಕೆ ವೇತನ, ಇನ್ಸೂರೆನ್ಸ ಜಾರಿಯಾಗಬೇಕು. ಇದರಿಂದ ಅವರ ಬದುಕನ್ನು ಯಾವುದೇ ರೀತಿಯ ಸಂಕಷ್ಟಕ್ಕೆ ಒಳಗಾಗದಂತೆ ಜೀವನ ಸರಾಗವಾಗಿ ಸಾಗುತ್ತದೆ ಎಂದು ಹಿರಿಯ ಸಿವಿಲ್ ನ್ಯಾಯಧೀಶರು ಮತ್ತು ತಾಲೂಕಾ ಕಾನೂನು ಸೇವೆಗಳ ಸಮಿತಿ ಅಧ್ಯಕ್ಷೆ ಎಂ.ಎಸ್.ಹಿರೇಮಠ ಹೇಳಿದರು.

ತಾಲೂಕಾ ಕಾನೂನು ಸೇವೆಗಳ ಸಮಿತಿ ಹಾಗೂ ನ್ಯಾಯವಾದಿಗಳ ಸಂಘದ ಸಂಯುಕ್ತಾಶ್ರಯದಲ್ಲಿ ನಗರದ ಹೊರವಲಯದ ಆಟೋ ನಗರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಅಸಂಘಟಿತ ಕಾಮಿ೯ಕರ ಸಾಮಾಜಿಕ ಭದ್ರತೆ ಕಾಯ್ದೆಯಡಿ ಕಾನೂನು ಅರಿವು ನೆರವು ಕಾಯ೯ಕ್ರಮ ಉದ್ಘಾಟಿಸಿ ಮಾತನಾಡಿದರು.

ಪ್ರತಿಯೊಂದು ಕೆಲಸ ಕಾಯ೯ಗಳು ಕಾನೂನಿನ ಚೌಕಟ್ಟಿನಡಿ ನಿವ೯ಹಿಸಿಕೊಂಡು ಹೋದರೆ ದುಡಿಯುವ ವಗ೯ಕ್ಕೂ ದುಡಿಸಿಕೊಳ್ಳುವ ವಗ೯ಕ್ಕೂ ಸುರಕ್ಷಿತವಾಗಿರುತ್ತದೆ. ಕಾಮಿ೯ಕರ ಜೀವನ ಸುಭದ್ರವಾಗಿರಲು ಪ್ರತ್ಯೇಕವಾದ ಕಾಯ್ದೆಗಳು ರೂಪಿಸಲಾಗಿದೆ ಎಂದು ವಿವರಿಸಿದರು.

ಯಾರನ್ನೂ ತೊಂದರೆಯಾಗದಂತೆ ನಡೆದುಕೊಂಡು ಕಾನೂನು ಬಾಹಿರ ವಿಚಾರಗಳಿಂದ ದೂರವಿದ್ದು, ಕಾಮಿ೯ಕರನ್ನು ಸಮಾನವಾಗಿ ಕಾಣುವಂತಾಗಬೇಕು. ಮಾಲೀಕ, ನೌಕರನೆಂಬ ಭೇದವನ್ನು ಮಾಡದೇ ಸಾಮಾಜಿಕ ಬೆಳವಣಿಗೆಗಳಲ್ಲಿ ಉತ್ತಮ ಕಾಯ೯ಗಳನ್ನು ಮಾಡಿದ್ದಲ್ಲಿ ನಮ್ಮ ವ್ಯಕ್ತಿತ್ವಕ್ಕೆ ಧಕ್ಕೆ ಉಂಟಾಗುವುದಿಲ್ಲ ಎಂದು ಎಚ್ಚರಿಸಿದರು.

ಸಿವಿಲ್ ನ್ಯಾಧೀಶರು ಮತ್ತು ಪ್ರಥಮ ದಜೆ೯ ನ್ಯಾಯಿಕ ದಂಡಾಧಿಕಾರಿ ಎಂ.ಆರ್. ಒಡೆಯರ ಮುಖ್ಯ ಅತಿಥಿಗಳಾಗಿ ಮಾತನಾಡಿ, ಕಾನೂನಿಲ್ಲದ ಬದುಕು ಗುರುವಿಲ್ಲದ ವಿದ್ಯೆಯಂತಾಗುತ್ತದೆ. ಪ್ರತಿಯೊಂದು ಹಂತದಲ್ಲೂ ಕಾನೂನು ಒಳ್ಳೆಯದಕ್ಕಾಗಿ ನೆರವು ನೀಡುತ್ತದೆ. ಕೆಟ್ಟದ್ದಕ್ಕಾಗಿ ಶಿಕ್ಷೆಯನ್ನು ವಿಧಿಸುವುದಾಗುತ್ತದೆ ಎಂದರು.

ಕನಾ೯ಟಕ ಟೆಕನೋಕ್ರೆಟ್ಸ ಅಸೋಷಿಯನ್ ಅಧ್ಯಕ್ಷ ಅಸಂಘಟಿತ ಕಾಮಿ೯ಕರ ಬಗ್ಗೆ ಅವರ ಜೀವನವನ್ನು ಕುರಿತಾಗಿ ಸುಧೀಘ೯ವಾಗಿ ಮಾತನಾಡಿದರು. ನ್ಯಾಯವಾದಿಗಳ ಸಂಘದ ಉಪಾಧ್ಯಕ್ಷ ಚನ್ನಬಸಪ್ಪಾ ಹಾರಕೂಡೆ, ರಸೂಲ್ ಪಟೇಲ್, ಸಿಪಿಐ ಎನ್.ಡಿ.ಸವದಿ, ಸಿ. ಪಿಡಿತರಾವ, ರಾಜಕುಮಾರ ಮುಡಬಿ, ನಾಗೇಶ ಡೋಂಗ್ರೆ ವೇದಿಕೆಯಲ್ಲಿದ್ದರು.

ಕಾಯ೯ಕ್ರಮದಲ್ಲಿ ನ್ಯಾಯವಾದಿಗಳಾದ ಎಸ್.ಬಿ.ಮಾಶಾಳಕರ್, ವಿಜಯಲಕ್ಷ್ಮೀ ಹೂಗಾರ್, ಖಲೀಲ ಮಿಯ್ಯಾ,ಮಝರ್ ಆಶಿಫ್, ಜಮೀಲ ಮಾಮು, ಅಹ್ಮದ್ ಅಸ್ಫಾಕ್ ಸೇರಿದಂತೆ ಮುಂತಾದವರಿದ್ದರು. ಕಾಮಿ೯ಕರು ಸಹ ಪಾಲ್ಗೊಂಡಿದ್ದರು.

-------------------

ಎಲ್ಲರೊಂದಿಗೆ ಹೊಂದಿಕೊಳ್ಳುವ ಮನೋಭಾವ ಬೆಳೆಸಿಕೊಳ್ಳಬೇಕು.



ವ್ಯಕ್ತಿಯೊಬ್ಬ ಯಶಸ್ವಿಯಾದ ಜೀವನ ನಡೆಸಬೇಕಾದರೆ ಎಲ್ಲರೊಂದಿಗೆ ಹೊಂದಿಕೊಳ್ಳುವ ಮನೋಭಾವ ಬೆಳೆಸಿಕೊಳ್ಳಬೇಕುಃ ಬೆಲ್ದಾಳ ಶ್ರೀ
ಬಸವಕಲ್ಯಾಣ, ಫೆ. 6

ವ್ಯಕ್ತಿಯೊಬ್ಬ ಯಶಸ್ವಿಯಾದ ಜೀವನ ನಡೆಸಬೇಕಾದರೆ ಎಲ್ಲರೊಂದಿಗೆ ಹೊಂದಿಕೊಳ್ಳುವ ಮನೋಭಾವ ಬೆಳೆಸಿಕೊಳ್ಳಬೇಕು. ಇದರಿಂದ ಅಭಿನಂದನೆಗಳಂಥ ಗೌರವಕ್ಕೆ ಪಾತ್ರನಾಗಿ ಸಾಧನೆಯ ಪಥದಲ್ಲಿ ಸಾಗಲು ಪ್ರೇರಕವಾಗಿರುತ್ತದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸಿದ್ರಾಮಪ್ಪ ಮಾಸಿಮಾಡೆ ಅಭಿಪ್ರಾಯಪಟ್ಟರು.

ನಗರದ ಸರಕಾರಿ ಪ್ರಥಮ ದಜೆ೯ ಕಾಲೇಜಿನಲ್ಲಿ ಸಾಕ್ಷಿ ಪ್ರತಿಷ್ಠಾನ ಹುಮನಾಬಾದ, ಧರಿನಾಡು ಕನ್ನಡ ಸಂಘದ ಆಶ್ರಯದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ನಾಲ್ಕು ಪ್ರಶಸ್ತಿ ಪುರಸ್ಕೖತ ಪ್ರೊ. ಎಂ.ಎಂ. ತಂಬಾಕೆ ಅವರಿಗೆ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಸಾಹಿತ್ಯೀಕ, ಸಾಂಸ್ಕೖತಿಕವಾಗಿ ದುಡಿದವರಿಗೆ ಸಲ್ಲುವ ಗೌರವದಂತೆ ಶೈಕ್ಷಣಿಕ, ಆಡಳಿತ ಸೇವೆಯಲ್ಲಿ ಶ್ರಮಿಸಿದ ತಂಬಾಕೆಯವರ ಜೀವನದ ಸಾಥ೯ಕತೆಗೆ ಅಭಿನಂದನಾ ಸಮಾರಂಭಗಳು ಅವಶ್ಯವಾಗಿದೆ. ನಮ್ಮ ವಯಕ್ತಿಕ ಕೆಲಸಗಳ ಮಧ್ಯೆಯೊ ಸಮಾಜ, ನಾಡಿಗಾಗಿ ಸಮಪಿ೯ಸಿಕೊಳ್ಳುವುದೇ ಸಾಧನೆಯೆನಿಸಿಕೊಳ್ಳುತ್ತದೆ ಎಂದರು.

ಹಣಕ್ಕಿಂತ ಮುಖ್ಯವಾಗಿ ಅಭಿನಂದಿಸಿಕೊಳ್ಳುವ ಕಾಯ೯ದಲ್ಲಿ ತೊಡಗುವುದೇ ನಿಜಾಥ೯ದ ಬದುಕೆನಿಸಿಕೊಳ್ಳಲು ಸಾಧ್ಯ. ಎಲ್ಲಾ ಉನ್ನತಿಗಿಂತ ಶಿಕ್ಷಕ ವೖತ್ತಿ ಶ್ರೇಷ್ಠವಾದುದ್ದಾಗಿದ್ದು, ಸನ್ಮಾನ್ಯರ ಸಮಾರಂಭಗಳಲ್ಲಿ ಕೇವಲ ಭಾಷಣವನ್ನು ಕೇಳಿ ಹೋಗದೇ ಅದರ ಮಹತ್ವವನ್ನು ಅರಿತುಕೊಳ್ಳುವುದು, ಸಾಧಕರ ಜೀವನ ತಿರುಗಿ ನೋಡುವುದು ಅವಶ್ಯವೆಂದು ಕರೆ ನೀಡಿದರು.

ಕಾಯ೯ಕ್ರಮದ ಸಾನಿಧ್ಯ ವಹಿಸಿ ಕೌಠಾ ಬಸವಯೋಗಾಶ್ರಮದ ಸಿದ್ಧರಾಮ ಶರಣರು ಬೆಲ್ದಾಳ ಮಾತನಾಡಿ, ಸಮಾಜದಲ್ಲಿ ಉತ್ತಮ ಕಾಯ೯ ನಿವ೯ಹಿಸಿದವರನ್ನು ಗುರುತಿಸುವುದೇ ನಾಡಿನ ಘನತೆ ಉಳಿಸಿದಂತಾಗುತ್ತದೆ. ವ್ಯಕ್ತಿಯೊಬ್ಬರ ಹತ್ತು ಗುಣಗಳಲ್ಲಿ ಎಂಟು ದುಗು೯ಣಗಳನ್ನು ಏಣಿಸದೇ ಎರಡು ಉತ್ತಮವಾದ ಗುಣಗಳನ್ನು ಗುರುತಿಸುವುದೇ ಶರಣರ ವಚನ ಪರಿಪಾಲಿಸಿದಂತಾಗುತ್ತದೆ.

ಆ ಎರಡು ಉತ್ತಮ ಗುಣಗಳು ಗುರುತಿಸಿದಾಗ ಉಳಿದೆಲ್ಲಾ ದುಗು೯ಣಗಳನ್ನು ಬಿಟ್ಟು ಹೊಸ ಜೀವನಕ್ಕೆ ಪರಿವತ೯ನೆಗೊಳ್ಳುತ್ತಾನೆ. ಸನ್ನಡತೆಯ ಮಾಗ೯ದಲ್ಲಿ ನಡೆಯುವ ಸಂಕಲ್ಪವನ್ನು ಮಾಡಿ ಉತ್ತಮವಾದ ಜೀವನ ನಡೆಸಲು ಪ್ರತಿಯೊಬ್ಬರೂ ಆಶಿಸುತ್ತಾರೆ. ಸಮಾಜದಲ್ಲಿ ಕೆಟ್ಟವರಾಗಬೇಕೆಂದು ಯಾರೂ ಬಯಸುವುದಿಲ್ಲ ಎಂದು ನುಡಿದರು.

ಮುಂದೊರೆದು ಮಾತನಾಡಿ, ಸಮಾಜ ಕಾಯ೯ ಸೇವೆಯೆಂದರೆ ಗೊತ್ತಿದ್ದು ಮುಳ್ಳು ದಾರಿಯಲ್ಲಿ ನಡೆದಂತೆ ಎಂದಿರುವ ಸಂವಿಧಾನಶಿಲ್ಪಿ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ಮಾತಿನಲ್ಲಿ ಮುಳ್ಳಿನ ಹಾಸಿಗೆಯಲ್ಲಿ ನಡೆದವರೇ ಶ್ರೇಷ್ಠ ಸಾಧಕರೆನಿಸಿಕೊಳ್ಳುತ್ತಾರೆ ಎನ್ನುವಂತೆ ತಂಬಾಕೆಯವರು ಅನೇಕ ಕಷ್ಟಗಳ ಮಧ್ಯೆಯೊ ಮೇಲೆದ್ದು ಬಂದವರಾಗಿದ್ದಾರೆ ಎಂದು ಶ್ಲಾಘಿಸಿದರು.

ಪ್ರೊ. ಎಂ.ಎಂ. ತಂಬಾಕೆ ಹಾಗೂ ಪ್ರೊ. ಕಮಲಾತಾಯಿ ತಂಬಾಕೆ ದಂಪತಿ ಅಭಿನಂದನೆ ಸ್ವೀಕರಿಸಿ ತಮ್ಮ ಜೀವನದ ಅನುಭವಗಳನ್ನು ಹಂಚಿಕೊಂಡು, ಬದುಕಿನ ಕುರಿತ ವಿಚಾರಗಳನ್ನು ಮಂಡಿಸಿದರು. ಪ್ರಾಚಾಯ೯ ಪ್ರೊ. ನಾಗೇಂದ್ರ ಡೋಲೆ ಮಾತನಾಡಿದರು. ನೀಲಾಂಬಿಕಾ ಕಾಲೇಜಿನ ಪ್ರಾಚಾಯ೯ ಎಂ.ಕೆ.ಗಾದಗೆ, ನಗರಸಭೆ ಅಧ್ಯಕ್ಷೆ ಮಂಗಲಾಬಾಯಿ ಉದರೆ, ಉಪಾಧ್ಯಕ್ಷ ಪಾಶಾಮಿಯ್ಯಾ ಜಾರೆಗಾರ್ ವೇದಿಕೆಯಲ್ಲಿದ್ದರು.

ಡಾ. ಗವಿಸಿದ್ಧಪ್ಪ ಪಾಟೀಲ ಸ್ವಾಗತಿಸಿ ಪ್ರಸ್ತಾವಿಕ ಮಾತನಾಡಿದರು. ಜೈಶೇನ್ ಪ್ರಸಾದ ನಿರೂಪಿಸಿದರು. ದಶವಂತ ಬಂಡೆ ವಂದಿಸಿದರು. ತ್ರಿವೇಣಿ ಮಠಪತಿ, ರಾಜಶೇಖರ ಶೀಲವಂತ, ನರೇಂದ್ರ ಜಾಧವ, ಮೇನಕಾ, ಪವಿತ್ರಾ ಬಿರಾದಾರ್ ಪ್ರಾಥ೯ನೆ ಸಂಗೀತ ಗಾಯನ ನಡೆಸಿಕೊಟ್ಟರು.

ಕಾಯ೯ಕ್ರಮದಲ್ಲಿ ಮಲ್ಲಿಕಾಜು೯ನ ಹುಣಸಗೇರಾ, ಈಶ್ವರ ಹೆಬ್ಬಾಳಕರ್, ಶಿವರಾಜ ರಾಜೋಳೆ, ಸುನೀತಾ ವಿಠ್ಠಲ, ದೀಪಕ ಗಾಯಕವಾಡ್, ಪ್ರಭುಲಿಂಗಯ್ಯಾ ಟಂಕಸಾಲಿಮಠ, ಬಸವರಾಜ ಶಿಂಧೆ, ಡಾ. ಗೋವಿಂದ ಕಟಕೆ, ಶಾಂತಕುಮಾರ, ವಿಲಾಸ್ ಚೌಹ್ವಾಣ್ ಸೇರಿದಂತೆ ವಿವಿಧ ಕಾಲೇಜು ಸಿಬ್ಬಂದಿಗಳು, ಪ್ರಾಚಾಯ೯ರು, ಸಂಘಟನೆಗಳ ಪದಾಧಿಕಾರಿಗಳು ಇದ್ದರು.
















ಪ್ರೆಸ್ ಮೀಟ್ ಅಲ್ಲ-ಪ್ರೆಸ್ ಈಟ್...!


ಮಾಜಿ ಶಾಸಕ ಎಂ.ಜಿ.ಮುೂಳೆ

ಪ್ರೆಸ್ ಮೀಟ್ ಕರೆದಿಲ್ಲ.!ಪತ್ರಕತ೯ರನ್ನು ಪ್ರೆಸ್ ಈಟ್(ತಿಂಡಿಗಾಗಿ) ಕರೆದಿದ್ದೇನೆಃ ಮಾಜಿ ಶಾಸಕ ಎಂ.ಜಿ.ಮೂಳೆ ಅವರ ಹಾಸ್ಯಾಸ್ಪದ ಹೇಳಿಕೆ

ಬಸವಕಲ್ಯಾಣ, ಫೆ. 12

ನಾಲ್ಕು ಸಲ ಸೋತು, ಒಂದು ಸಲ ವಿಧಾನ ಸಭಾ ಚುನಾವಣೆಯಲ್ಲಿ ವಿಜಯಿಶಾಲಿಯಾದ ನಂತರ ಮತ್ತೆ ಸೋಲುಂಡ ಮಾಜಿ ಶಾಸಕ ಎಂ.ಜಿ ಮುೂಳೆ ಅವರು, ಅವರನ್ನು ಬೆಳೆಸಿದ ಕಾಂಗ್ರೆಸ್ ಪಕ್ಷವನ್ನೇ ತ್ಯಜಿಸಿ ಭಾರತೀಯ ಜನತಾ ಪಕ್ಷಕ್ಕೆ ಸೇರಿದ್ದು ಆಕಸ್ಮಿಕ ಬೆಳವಣಿಗೆ. ಬಿಜೆಪಿ ಪಕ್ಷದಲ್ಲಿಯೂ ಕಾಸಿನ ಕಿಮ್ಮತ್ತಿಲ್ಲದಂತಾಗಿ ಬೇಸರಿಸಿಕೊಂಡಿರುವ ಮುೂಳೆ ಅವರಿಗೀಗ ಗಟ್ಟಿ ತಳಪಾಯದ ಬೇರೂರಿದ ಪಕ್ಷ ಯಾವುದೆಂದು ಸಹ ಕಲ್ಪನೆಗೂ ನಿಲುಕದ ರಾಜಕೀಯ ಜೀವನ ನಡೆಸುತಿದ್ದಾರೆ ಎನ್ನಬಹುದು.

ಆಕಸ್ಮಿಕವಾಗಿ ಎಂಬಂತೆ ಬಹಳ ದಿನಗಳ ನಂತರ ಇದೇ ಭಾನುವಾರ ಫೆ. 12 ರಂದು ಬೆಳಿಗ್ಗೆ 9ಕ್ಕೆ ಮಾಜಿ ಶಾಸಕ ಮುೂಳೆ ಅವರು ತಮ್ಮ ನಿವಾಸದಲ್ಲಿ ಪತ್ರಿಕಾಗೋಷ್ಠಿ ಕರೆಯಲಾಗಿದೆ ಎಂಬ ಮೊಬೈಲ್ ಸಂದೇಶಗಳು ತಾಲೂಕಾ ಪತ್ರಕತ೯ರ ಸಂಘದ ಪ್ರತಿನಿಧಿಗಳಿಂದ ಎಲ್ಲಾ ಪತ್ರಿಕೆಗಳ ಪತ್ರಕತ೯ರಿಗೆ ರವಾನೆಯಾಗಿದ್ದವು. ಆ ಸಂದೇಶಗಳನ್ನು ಕಂಡು ಎಲ್ಲರೂ ಅವರ ಮನೆ ಮುಂದೆ ಬೆಳಿಗ್ಗೆ ಹಾಜರಾಗಿದ್ದರು.

ಪತ್ರಿಕಾ ಗೋಷ್ಠಿಗೆಂದು ಹೋದ ಪತ್ರಕತ೯ರಿಗೆ ಮಾಜಿ ಶಾಸಕ ಎಂ.ಜಿ ಮುೂಳೆ ಅವರಿಂದಾಗಲಿ, ಅವರ ಕಾಯ೯ಕತ೯ರಿಂದ ಇಂತಹ ಒಂದು ಅಚ್ಚರಿಯ ಮಾತುಗಳನ್ನು ಹೊರ ಬೀಳುತ್ತದೆಂದು ಯಾರೂ ಕೂಡ ಭಾವಿಸಿರಲಿಲ್ಲ. ಪ್ರೆಸ್ ಮೀಟ್ ಎಂದು ನಾನು ಕರೆದಿಲ್ಲ. ಪ್ರೆಸ್ ಈಟ್ (ತಿಂಡಿಗಾಗಿ) ಕರೆದಿದ್ದೇನೆ. ಅಂದರೆ ಪತ್ರಕತ೯ರಲ್ಲಿರುವ ಸೊಕ್ಕನ್ನು ಮುರಿಯಲು ಕರೆದಿದ್ದೇನೆಂಬ ಅಣಕು ನೋಟ ಅವರಲ್ಲಿ ಅಡಗಿತ್ತೇನೋ ಎಂಬ ರೀತಿಯಲ್ಲಿ ಮಾತನಾಡಿದ್ದು ಪತ್ರಕತ೯ರನ್ನೇ ಮುಜುಗರಕ್ಕೆ ಒಳಪಡಿಸಿತ್ತು.

ರಾಜ್ಯ ಸಕಾ೯ರ ಇತ್ತೀಚಿಗೆ ಛತ್ರಪತಿ ಶಿವಾಜಿ ಅವರ ಜಯಂತ್ಯೋತ್ಸವ ಆಚರಣೆಗೆ ಆದೇಶ ಹೊರಡಿಸಿರುವ ಕುರಿತ ಹಿನ್ನೆಲೆಯಲ್ಲಿ ಮಾತನಾಡುವುದಿದೆ. ಅದಕ್ಕಾಗಿ ನಿಮ್ಮ ಪತ್ರಕತ೯ರೆಲ್ಲರನ್ನು ನಾಳೆ ಭಾನುವಾರ ನಮ್ಮನಿವಾಸಕ್ಕೆ ಕರೆಯಿರಿ ಎಂದು ಸ್ವತಃ ಮುೂಳೆ ಅವರು ತಾಲೂಕಾ ಕಾಯ೯ನಿರತ ಪತ್ರಕತ೯ರ ಸಂಘದ ಜಿಲ್ಲಾ ಪ್ರತಿನಿಧಿ ಹಾಗೂ ತಾಲೂಕಾಧ್ಯಕ್ಷರಿಗೆ ಹೇಳಿದ್ದರು.

ಇದೇ ವಿಷಯವನ್ನು ಎಲ್ಲಾ ಪತ್ರಕತ೯ರಿಗೆ ಸಂದೇಶವನ್ನು ಕೂಡ ಮೊಬೈಲ್ ಡಿಸಿಪ್ಲೇಗಳಿಗೆ ರವಾನೆಯಾಗಿದ್ದವು. ಆದರೆ ಮಾಜಿ ಶಾಸಕರ ಮನೆಯಲ್ಲಿ ಪ್ರತ್ಯಕ್ಷಗೊಂಡ ಪತ್ರಕತ೯ರಿಗೆ ಇದು ಪ್ರೆಸ್ ಮೀಟ್ ಅಲ್ಲ, ಪ್ರೆಸ್ ಈಟ್ ಎಂದರೆ ಯಾವ ಪತ್ರಕತ೯ನಿಗೂ ಊಟದ ಗತಿ ಇಲ್ಲವೇ? ಮಾಜಿ ಶಾಸಕರ ಮನೆಯಲ್ಲಿಯೇ ಹೋಗಿ ಊಟ, ತಿಂಡಿ ಮಾಡಬೇಕೆ ಎಂದು ಚಿಂತಿಸುವಂತಾಗಿದೆ. ಇಷ್ಟೇ ಅಲ್ಲದೇ..

ಎಂ.ಜಿ.ಮೂಳೆ ಅವರ ನಿವಾಸದಲ್ಲಿ ನಡೆದ ಮಹತ್ವದ ಚಚೆ೯ ಏನೆಂದರೆ ಅವರ ಕಾಯ೯ಕತ೯, ಕಾಂಗ್ರೆಸ್ ಪಕ್ಷದ ಮಾಜಿ ತಾಲೂಕಾಧ್ಯಕ್ಷ ಅಜು೯ನ ಕನಕ ಹಾಗೂ ಸಕಾ೯ರಿ ಉಪನ್ಯಾಸಕರಾಗಿ ರಾಜಕೀಯ ಸೇವೆಗೆ ಕಂಕಣ್ಣ ಬದ್ಧರಾಗಿ ನಿಂತಿರುವ ವ್ಯಕ್ತಿಯೊಬ್ಬರು ಯಾರೂ ನಿರೀಕ್ಷಿಸಿರದ ಒಂದು ಮಾತನ್ನು ಹೇಳಿ, ಪತ್ರಕತ೯ರ ಸ್ವಾಭಿಮಾನ ಕೆರಳುವಂತೆ ಮಾಡಿದ್ದು ವಿಷಾದದ ಸಂಗತಿಯೇ ಎನ್ನಬಹುದು.

ಈ ಮಾತನ್ನು ಕೇಳಿ ಸ್ವಾಭಿಮಾನಿ ಪತ್ರಕತ೯ರು ಎಂದೂ ಎದುರಿಸಲಾಗದ ಪ್ರಸಂಗ ನಡೆದದ್ದು ಭಾನುವಾರ. ಒಮ್ಮೆ ನಿಮ್ಮಪತ್ರಕತ೯ರೆಲ್ಲರ ಸಭೆ ಕರೆಯಿರಿ ಆ ಸಭೆಯಲ್ಲಿ ನಾವು ಬಂದು ಪತ್ರಕತ೯ರಿಗೆ ನಮ್ಮಿಂದ ಕೆಲವೊಂದು ಸಲಹೆ, ಸೂಚನೆಗಳನ್ನು ನೀಡಬೇಕು. ವರದಿಗಳನ್ನು ಹೇಗೆ ಬರೆಯಬೇಕು, ಹೇಗೆ ಬರಬೇಕು ಎಂಬುದನ್ನು ಚಚಿ೯ಸುತ್ತೇವೆ ಎನ್ನಬೇಕೆ..?

ಪತ್ರಕತ೯ರಿಗೆ ಸಲಹೆ, ಸೂಚನೆಗಳೇನಿದ್ದರೂ ಹೇಳಲು, ಕೇಳಲು ಅವರವರ ಪತ್ರಿಕೆಗಳ ಸಂಪಾದಕರಿದ್ದಾರೆ. ಮಾಗ೯ದಶ೯ನ ಮಾಡಲು ಜಿಲ್ಲಾ ವರದಿಗಾರರಿದ್ದಾರೆ. ಅಂಥದ್ದರಲ್ಲಿ ರಾಜಕೀಯ ಪ್ರತಿನಿಧಿಯೊಬ್ಬರು ಹಾಗೂ ಸಕಾ೯ರಿ ನಿಯೋಜಿತರೊಬ್ಬರು ಪತ್ರಕತ೯ರಿಗೆ ಸಲಹೆ ನೀಡುವಷ್ಟರ ಮಟ್ಟಿಗೆ ಬೆಳೆದು ಬಿಟ್ಟಿದ್ದಾರಾ ಎಂಬ ಚಚೆ೯ಗಳು ಪತ್ರಕತ೯ರ ವಲಯದಲ್ಲಿ ನಡೆದದ್ದು ಸಹಜ.

ರಾಜಕೀಯ ಮುಖಂಡರುಗಳ ಸಲಹೆಗಳೇನೆಂದರೆ, ಪತ್ರಿಕೆಗಳಲ್ಲಿ ದೊಡ್ಡ ದೊಡ್ಡ ಅಕ್ಷರಗಳಲ್ಲಿ ಅವರ ಹೆಸರುಗಳು ರಾರಾಜಿಸಬೇಕು, ಚಿತ್ರ ಸಮೇತ ಅವರ ವರದಿಗಳು ಪ್ರಕಟವಾಗಬೇಕು. ಅವರು ನಡೆಸುವ ಸಭೆ, ಸಮಾರಂಭಗಳಲ್ಲಿ ಕುಳಿತರೂ ಸುದ್ಧಿಯಾಗಬೇಕು, ನಿಂತರೂ ಸುದ್ಧಿಯಾಗಬೇಕು ಎಂಬ ಹಪಾಹಪಿತನ ಇಟ್ಟುಕೊಂಡಿರುವ ಇವರು ತಪ್ಪದೇ ಎಲ್ಲಾ ಕಾಯ೯ಕತ೯ರ ಹೆಸರುಗಳು ಪತ್ರಿಕೆಗಳಲ್ಲಿ ಬಿಡದೇ ಪ್ರಕಟಿಸಬೇಕು ಎಂಬುದಷ್ಟೇ ಅವರ ಉದ್ದೇಶವಾಗಿದೆ ಎನ್ನಬಹುದು.

ಯಾವುದೇ ಒಂದು ವರದಿ ಪತ್ರಿಕೆಗಳಲ್ಲಿ ನೀಡಿದಾಗ ಅದು ಇಲ್ಲ, ಇದು ಇಲ್ಲ, ಹೆಸರುಗಳೇ ಬಂದಿಲ್ಲ, ಫೋಟೊ ಸರಿ ಇಲ್ಲ ಎಂದು ತಲೆ ತಿನ್ನುವವರಿಗೇನು ಕಡಿಮೆ ಇಲ್ಲ. ಇಂಥವರು ಇನ್ನೇನು ಸಲಹೆ ಕೊಡಲು ಸಾಧ್ಯವೆಂಬುದು ಪತ್ರಕತ೯ರು ಯೋಚಿಸಬೇಕಾಗಿದೆ. ಪತ್ರಕತ೯ರೆದುರು ಕನಕ ಎನ್ನುವವರು ಇಂತಹ ಹಾಸ್ಯಾಸ್ಪದ ಹೇಳಿಕೆ ನೀಡಿದ್ದು ನಾಚಿಕೆಗೇಡಿನ ಸಂಗತಿ ಎಂದರೆ ತಪ್ಪಾಗಲಾರದು.

ಹೀಗೆ ಹೇಳುವ ಅವರು ಮಾಡುತ್ತಿರುವುದೇನು? ಕಾಂಗ್ರೆಸ್ ಪಕ್ಷದವನೆಂದು ಹೇಳಿಕೊಂಡು ಬಿಜೆಪಿ ಪಕ್ಷದ ಮಾಜಿ ಶಾಸಕ ಎಂ.ಜಿ.ಮುೂಳೆ ಅವರ ಹಿಂಬಾಲಕರಾಗಿ ಕೆಲಸ ಮಾಡುತ್ತಾರೆ ಏಕೆ? ಅದೇ ಕಾಂಗ್ರೆಸ್ ಪಕ್ಷದ ರಾಜಕೀಯ ಧುರೀಣರನ್ನು, ಕಾಯ೯ಕತ೯ರನ್ನು ಹಿಯ್ಯಾಳಿಸುವ ಅವರು, ತಾವು ಯಾವ ಪಕ್ಷದಲ್ಲಿದ್ದೇವೆಂಬುದು ಅವರಿಗೆ ಸ್ಪಷ್ಟವಾದ ಅರಿವಿರಲಿ. ಪತ್ರಕತ೯ರಿಗೆ ಸಲಹೆ ಕೊಡುವುದೇನಿದೆ ಎನ್ನುವುದಕ್ಕೆ ಸ್ಪಷ್ಟ ಉತ್ತರ ನೀಡಲಿ ಎಂಬ ಚಚೆ೯ಗಳು ಪತ್ರಕತ೯ರ ವಲಯದಲ್ಲಿ ನಡೆಯುತ್ತಿವೆ.

ಪತ್ರಿಕಾಗೋಷ್ಠಿಯೆಂದು ತಿಳಿದು ಹೋದ ಪತ್ರಕತ೯ರಿಗೆ ರಾಜಕೀಯ ನಾಯಕರುಗಳಿಂದ ಇಂತಹ ಮಾಗ೯ದಶ೯ನಗಳು ಬೇಕಿತ್ತಾ ಎನ್ನುವಂತಾಗಿದೆ. ಮಾಜಿ ಶಾಸಕ ಮುೂಳೆ ಅವರು ಪತ್ರಕತ೯ರೆದುರು ಈ ಸಂದಭ೯ದಲ್ಲಿ ಮಾತನಾಡಿ, ನಾನು ಬೆಂಗಳೂರಿನಲ್ಲಿ ರಾಷ್ಟ್ರೀಯ ನಾಯಕ ಎಲ್.ಕೆ. ಅಡ್ವಾಣಿ ಅವರ ನೇತೖತ್ವದಲ್ಲಿ ಬಿಜೆಪಿ ಸೇಪ೯ಡೆಯಾಗಿದ್ದೇನೆ. ಅದಕ್ಕಾಗಿ ನನಗೆ ಸ್ಥಳೀಯ ಶಾಸಕರು ಇಲ್ಲಿಯವರೆಗೆ ಯಾವುದೇ ಸಭೆ, ಸಮಾರಂಭಗಳಿಗೂ ಕರೆಯದೇ ಇರುವುದು ಬೇಸರ ತರಿಸುತ್ತಿದೆ ಎಂದರು.

ಮುಂದೊರೆದು ಮಾತನಾಡಿ, ಜಿ.ಪಂ, ತಾಪಂ, ಚುನಾವಣೆ ಸಂದಭ೯ದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮಂಠಾಳಕ್ಕೆ ಬಂದಾಗಲೂ ಶಾಸಕ ಅಟ್ಟೂರ್ ಅವರು ನನಗೆ ಕರೆದಿಲ್ಲ, ರಾಜ್ಯಾಧ್ಯಕ್ಷ ಈಶ್ವರಪ್ಪ ಅವರು ಬಂದಾಗಲೂ ಕರೆದಿಲ್ಲ. ಯಾವುದೇ ಸಭೆ ಸಮಾರಂಭಗಳಿಗೂ ಆಹ್ವಾನಿಸುತ್ತಿಲ್ಲ ಎಂದರು.

ಅದಕ್ಕಾಗಿ ನಾನು ಮನೆಯಲ್ಲಿಯೇ ಕುಳಿತುಕೊಳ್ಳಬೇಕಾಯಿತು. ಇದರಿಂದ ನನಗೆ ಮಾನಸಿಕವಾಗಿ ತುಂಬಾ ಹಿಂಸೆಯನ್ನು ನೀಡಿದ್ದಾರೆ. ಆದರೂ ಬಿಜೆಪಿ ಪಕ್ಷದಲ್ಲೇ ಇದ್ದು ತಾಳ್ಮೆಯಿಂದ ಕುಳಿತಿರುವೆ. ಮುಂಬರುವ ಚುನಾವಣೆಗೆ ಯಾವ ಪಕ್ಷ ಸೇರುತ್ತೇನೆಂಬುದು ಆರು ತಿಂಗಳುಗಳ ಬಳಿಕ ನಿಧ೯ರಿಸುತ್ತೇನೆ ಎಂದು ವಿವರಿಸಿದರು.

ಇದ್ದ ಪಕ್ಷದಲ್ಲಿಯೇ ಬೆಲೆಯಿಲ್ಲ. ತಮ್ಮ ಸುತ್ತಲಿನ ವಾತಾವರಣ ನೋಡಿದರೆ ಎಲ್ಲಾ ಕಾಯ೯ಕತ೯ರು ಕಾಂಗ್ರೆಸ್ ನವರಾಗಿದ್ದಾರೆ, ಇನ್ನೂ ಕೆಲವರು ಪಕ್ಷೇತರರು ಆಗಿದ್ದಾರೆ. ವಿವಿಧ ಸಂಘಟನೆಯವರು ಮುೂಳೆ ಅವರ ಬೆಂಬಲಿಗರಾಗಿಯೂ, ಇನ್ನೂ ಕೆಲವು ಸಂದಭ೯ಗಳಲ್ಲಿ ಅಟ್ಟೂರ್, ಖೂಬಾ ಅವರ ಬೆಂಬಲಿಗರಾಗಿಯೂ ಮೂೂರು ಕಡೆಗಳಲ್ಲಿರುವ ಕಾಯ೯ಕತ೯ರು ಇಲ್ಲಿದ್ದಾರೆ. ಅಲ್ಲದೇ ಸಕಾ೯ರಿ ಹುದ್ದೆಯಲ್ಲಿರುವ ಉಪನ್ಯಾಸಕರುಗಳು ಸಹ ಮಾಜಿ ಶಾಸಕರ ಕಾಯ೯ಕತ೯ರಾಗಿಯೊ ದುಡಿಯುತಿರುವುದು ಅಚ್ಚರಿಯ ಸಂಗತಿ.

ಅಂದರೆ ಈ ಎಲ್ಲಾ ಬೆಳವಣಿಗೆಗಳ ಮಧ್ಯೆ ಮಾಜಿ ಶಾಸಕ ಮಾರುತಿರಾವ.ಜಿ.ಮೂಳೆ ಅವರು ಮುಂಬರುವ ಚುನಾವಣಾ ಸ್ಪಧಿ೯ಯಾಗಿ ನಿಲ್ಲುವುದು ಶತಸಿದ್ಧ. ಇದರಲ್ಲಿ ಯಾವುದೇ ಅನುಮಾನಗಳಿಲ್ಲ. ಕಾಯ೯ಕತ೯ರು ಯಾವ ಪಕ್ಷವನ್ನು ಬೆಂಬಲಿಸುತ್ತಾರೋ ಆ ಪಕ್ಷದಲ್ಲಿ ಸೇರಿಕೊಳ್ಳುವ ಇಚ್ಛೇ ವ್ಯಕ್ತಪಡಿಸುತ್ತಾರೆ. ಅವರು ರಾಜಕೀಯ ಜೀವನದಲ್ಲಿ ಸುಸೂತ್ರವಾಗಿ ವಿಜಯಿಶಾಲಿಯಾಗಿ ಬರಲಿ ಎಂಬುದು ಅನೇಕ ಅಭಿಮಾನಿಗಳ ಹಾರೈಕೆಗಳು ಇದೆ ಎಂದು ವಿವರಿಸುತ್ತಾರೆ.