ಶನಿವಾರ, ಫೆಬ್ರವರಿ 4, 2012

ದುಶ್ಚಟಗಳಿಂದ ಮುಕ್ತಿ ಹೊಂದಿ, ದುಗು೯ಣಗಳನ್ನು ಬಿಟ್ಟಾಗ ಸಮೖದ್ಧವಾದ ಜೀವನ ನಡೆಸಲು ಸಾಧ್ಯ

ಯೋಗ ಗುರು ಬಾಬಾ ರಾಮದೇವ ಯೋಗ ಸಾಧನೆಯ ನಕ್ಕು ಹಗುರಾಗಿಸಿಕೊಳ್ಳುತ್ತಿರುವ ಬಸವಕಲ್ಯಾಣ ಜನತೆ


ಸಮಾಜೋದ್ಧಾರಕ ದಲಿತಪರ ಚಿಂತಕ ಮಹಾನ ಸತ್ಪುರುಷನ ಕಮ೯ಭೂಮಿ ಕಲ್ಯಾಣದಲ್ಲಿ ಯೋಗ ಸಾಧನೆಯ ಕುರಿತು ಹೇಳಲು ಬಂದಿರುವ ನನಗೆ ಬಸವಣ್ಣನವರ ಜೀವನ ಸಾಧನೆಯನ್ನು ಕಂಡು ರೋಮಾಂಚಿತನಾಗಿದ್ದೇನೆ.

ಬಸವಕಲ್ಯಾಣಃ 12ನೇ ಶತಮಾನದಲ್ಲಿ ವಿಶ್ವಗುರು ಬಸವಣ್ಣನವರು ನೀಡಿದ ಸಂದೇಶವನ್ನು ಇಂದಿಗೂ ಪ್ರಸ್ತುತವಾಗಿದೆ. ಸಮಾಜೋದ್ಧಾರಕ ದಲಿತಪರ ಚಿಂತಕ ಮಹಾನ ಸತ್ಪುರುಷನ ಕಮ೯ಭೂಮಿ ಕಲ್ಯಾಣದಲ್ಲಿ ಯೋಗ ಸಾಧನೆಯ ಕುರಿತು ಹೇಳಲು ಬಂದಿರುವ ನನಗೆ ಬಸವಣ್ಣನವರ ಜೀವನ ಸಾಧನೆಯನ್ನು ಕಂಡು ರೋಮಾಂಚಿತನಾಗಿದ್ದೇನೆ. ಅಂತಹ ಮಹಾತ್ಮನ ಪುಣ್ಯಕ್ಷೇತ್ರದಲ್ಲಿ ನಾನು ಬಂದಿರುವುದಕ್ಕೆ ಹೆಮ್ಮೆ ಪಡುತ್ತೇನೆ ಎಂದು ಯೋಗ ಗುರು ರಾಮದೇವ ಬಾಬಾ ಅಭಿಪ್ರಾಯಪಟ್ಟರು.

ನಗರದ ಥೇರ್ ಮೈದಾನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಉಚಿತ ಯೋಗ ವಿಜ್ಞಾನ ರಾಷ್ಟ್ರ ನಿಮಾ೯ಣ ಶಿಬಿರವನ್ನು ಉದ್ಘಾಟಿಸಿ ಮಾತನಾಡುತ್ತ, ಭಕ್ತಿ ಧ್ಯಾನಗಳ ಮೂಲಕ ಕಮ೯ವನ್ನು ಮಾಡಬೇಕು. ಉತ್ತಮ ಸಮಾಜ ನಿಮಾ೯ಣಕ್ಕಾಗಿ ಸಂಪೂಣ೯ ಭ್ರಷ್ಟಾಚಾರ ನಿಮೂ೯ಲನೆ ಮಾಡಿದ್ದಾಗ ಮಾತ್ರ ರೋಗ ರಹಿತ ಜೀವನವನ್ನು ನಡೆಸಲು ಸಾಧ್ಯವಾಗುತ್ತದೆ. ಜಾತಿ ರಹಿತ, ರೋಗ ರಹಿತ ಸಮಾಜ ನಿಮಾ೯ಣಕ್ಕೆ ಪ್ರತಿಯೊಬ್ಬರೂ ಸಂಕಲ್ಪ ಮಾಡಬೇಕು ಎಂದರು.

ವಿಶ್ವದ ಆಥಿ೯ಕ ಸ್ಥಿತಿಗತಿ ಬಲಪಡಿಸಬೇಕಾದರೆ ಭ್ರಷ್ಟಾಚಾರ ಮುಕ್ತವಾಗಬೇಕು. ನವ ರಾಷ್ಟ್ರ ನಿಮಾ೯ಣವಾಗಲು ನಿರುದ್ಯೋಗ ಸಮಸ್ಯೆ ನಿವಾರಣೆಯಾಗಬೇಕು. ಸಾಮಾಜಿಕ ನ್ಯಾಯಕ್ಕಾಗಿ ಉದ್ಯೋಗ ಸಹಿತ ಜೀವನ ನಡೆಸುವಂಥ ವಾತಾವರಣ ಸೖಷ್ಠಿಯಾದಾಗ ಮಾತ್ರ ಸದೖಢ ಸಮಾಜ ನಿಮಾ೯ಣವಾಗುತ್ತದೆ.

ನಮ್ಮ ಪೂವ೯ಜರು ಯೋಗಿಗಳಾಗಿದ್ದರೂ ಆದರೆ ಇವತ್ತಿನ ದಿನಗಳಲ್ಲಿ ಅದೇ ಪೂವ೯ಜರ ಪೀಳಿಗೆ ರೋಗಿಗಳಾಗಿ ಭೋಗಿಗಳಾಗುತಿರವುದು ವಿಷಾದಕರವಾಗಿದೆ. ಅದಕ್ಕಾಗಿ ಯೋಗ ಜೀವನವನ್ನು ನಡೆಸುವುದರ ಮೂಲಕ ನಿರೋಗಿಯಾಗಿರಲು ಯೋಗ ಧ್ಯಾನವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ್ದು ಪ್ರಸ್ತುತ ಸಂದಭ೯ಗಳಲ್ಲಿ ಅವಶ್ಯಕತೆಯಾಗಿದೆ.

ದುಶ್ಚಟಗಳಿಂದ ಮುಕ್ತಿ ಹೊಂದಿ, ದುಗು೯ಣಗಳನ್ನು ಬಿಟ್ಟಾಗ ಸಮೖದ್ಧವಾದ ಜೀವನ ನಡೆಸಲು ಸಾಧ್ಯವಾಗುತ್ತದೆ. ಯೋಗ ಸಾಧನೆಯಿಂದ ಬದುಕನ್ನು ರೂಪಿಸಿಕೊಳ್ಳಲು ನೆರವಾಗುತ್ತದೆ. ನಮ್ಮ ವ್ಯಕ್ತಿತ್ವಕೊಂದು ಹೊಸ ಮೆರುಗನ್ನು ತಂದುಕೊಡುತ್ತದೆ. ಬಸವಣ್ಣನವರು ಜಾತಿರಹಿತ ಸಮಾಜ ನಿಮಾ೯ಣಕ್ಕೆ ಸಂಕಲ್ಪವನ್ನು ಮಾಡಿದಂತೆ ಲಿಂಗಾಯತರಾದವರಿಂದ ಹಿಡಿದು ಎಲ್ಲಾ ವಗ೯ದವರು ಸಹ ಯೋಗಿಗಳಾಗಬೇಕು ಅಂದಾಗ ಬಸವಣ್ಣನವರ ಅನುಯಾಯಿಗಳೆಂದು ಹೇಳಿಕೊಳ್ಳುವುದಕ್ಕೆ ಅಥ೯ ಸಿಗುತ್ತದೆ ಎಂದರು.

ಸತ್ಯ ಶುದ್ಧ ಕಾಯಕದಿಂದ ಸದೖಢ ಶರೀರಕ್ಕೆ ಯೋಗಾಸನ ಮಹತ್ವಪೂಣ೯ವಾಗಿದೆ. ಪ್ರಾಣಾಯಾಮ ಮತ್ತು ಯೋಗಾಸನದ ಹತ್ತು ಹಲವು ಉಪಯೋಗಗಳಿಂದ ರೋಗಮುಕ್ತರಾಗಿರಲು ಸದುಪಯೋಗವಾಗುತ್ತದೆ. ದಯಾನಂದ ಸರಸ್ವತಿ ಮತ್ತು ಸ್ವಾಮಿ ವಿವೇಕಾನಂದರು ಯೋಗಿ ಪುರುಷರಾದಂತೆ ಬಸವಣ್ಣನವರು ಸಹ ಮಹಾನ್ ಯೋಗಿಗಳಾಗಿದ್ದರು. ಅಂತಹ ಸಾಧಕರ ಜೀವನವನ್ನು ಅನುಸರಿಸುವುದರ ಜೊತೆಗೆ ಬದುಕು ಸುಂದರವಾಗಿಸಿಕೊಳ್ಳಬೇಕು ಎಂದು ಹೇಳಿದರು.

ಪ್ರತಿಯೊಬ್ಬರ ಆಹಾರ ಮತ್ತು ವಿಚಾರಗಳು ಶುದ್ಧವಾಗಿದ್ದರೆ ವ್ಯಕ್ತಿಯ ಜೀವನ ಬುದ್ಧನಂತೆ ಪ್ರಬುದ್ಧತೆ ಹೊಂದುತ್ತದೆ. ಸಂತುಷ್ಟ ಜೀವನಕ್ಕೆ ಯೋಗವೊಂದು ದಿವ್ಯಔಷಧವಾಗಿದೆ. ಯೋಗವಿಲ್ಲದ ಜೀವನ ರೋಗಕ್ಕೆ ಆಹ್ವಾನಿಸಿದಂತೆ. ಅದಕ್ಕಾಗಿ ಯೋಗ, ಧ್ಯಾನ ಬದುಕಿನ ಮಹತ್ವದ ಘಟ್ಟಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಮುಚಳಂಬ ಪ್ರಣಾವನಂದ ಸ್ವಾಮಿಗಳು ಆಶಿವ೯ಚನ ನೀಡಿದರು. ಹಾರಕೂಡ ಚೆನ್ನವೀರ ಶಿವಾಚಾಯ೯ರು ನೇತೖತ್ವ ವಹಿಸಿದ್ದರು. ಡಾ. ಎಸ್.ಬಿ. ಮಹಾಜನ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಡಾ. ಬಸವರಾಜ ಸ್ವಾಮಿ ಕಾಯ೯ಕ್ರಮ ನಿರೂಪಿಸಿದರು. ವೇದಿಕೆಯಲ್ಲಿ ಹುಲಸೂರು ಶಿವಾನಂದ ಮಹಾಸ್ವಾಮಿಗಳು, ಭಾತಂಬ್ರಾ ಶ್ರೀಗಳು, ತಡೋಳಾ ಶ್ರೀಗಳು, ಔಸಾ ಮಹಾರಾಜರು, ಘನಲಿಂಗ ರುದ್ರಮುನಿ ಶಿವಾಚಾಯ೯ರು, ಬಸವಮಹಾಮನೆಯ ಬಸವಪ್ರಭುಗಳು ಸೇರಿದಂತೆ ಮುಂತಾದ ಮಠಾಧೀಶರು ಗಣ್ಯರು, ಸ್ಥಳೀಯ ಮುಖಂಡರುಗಳು ಉಪಸ್ಥಿತರಿದ್ದರು.



ವಿಶ್ವಮಾನ್ಯರ ಸಂದೇಶಗಳಂತೆ ಸಾಗುತಿದ್ದೇನೆ: ಯೋಗಗುರು ಬಾಬಾ ರಾಮದೇವ

ಬಾಬಾ ರಾಮದೇವ ಮಾತನಾಡುತ್ತಿರುವುದು. ಈ ಸಂದಭ೯ದಲ್ಲಿ ಹಾರಕೂಡ ಚೆನ್ನಬಸವೇಶ್ವರ ಸಂಸ್ಥಾನದ ಚೆನ್ನವೀರ ಶಿವಾಚಾಯ೯ರು ಇದ್ದರು.


ಬಸವಕಲ್ಯಾಣ. ಡಿ. : ಬಸವಣ್ಣನವರು ಕೊಟ್ಟ ವಚನ ಸಾಹಿತ್ಯ ಅನುಭಾವಗಳಲ್ಲಿ ನಾನು ಭ್ರಷ್ಟಾಚಾರ ಮುಕ್ತ ಭಾರತ ನಿಮಾ೯ಣದ ಕಾಯ೯ವನ್ನು ಕೈಗೆತ್ತಿಕೊಂಡು ವಿಶ್ವಮಾನ್ಯರ ಸಂದೇಶಗಳಂತೆ ಸಾಗುತಿದ್ದೇನೆ ಎಂದು ಭಾರತ ಸ್ವಾಭಿಮಾನ ನಿಮಿತ್ಯ ಗುರುವಾರ ನಗರಕ್ಕೆ ಆಗಮಿಸಿದ ಸಂದಭ೯ದಲ್ಲಿ ಯೋಗಗುರು ಬಾಬಾ ರಾಮದೇವ ನುಡಿದರು.

ನಗರದ ಬಸವಧಮ೯ ಪೀಠ ಬಸವ ಮಹಾಮನೆಯ ಆವರಣದಲ್ಲಿ ಅನಾಥಾಲಯ ಮಕ್ಕಳು ಬಾಬಾ ರಾಮದೇವ ಅವರನ್ನು ಬರಮಾಡಿಕೊಂಡ ವೇಳೆ ಮಾತನಾಡುತ್ತ, ಇಡೀ ಜಗತ್ತಿನಲ್ಲಿಯೇ ಅತಿ ಎತ್ತರದ ವಿಶ್ವಗುರು ಬಸವಣ್ಣನವರ ಮೂತಿ೯ ಸ್ಥಾಪನೆ ಬಸವಕಲ್ಯಾಣದಲ್ಲಿ ಆಗುತಿರುವುದು ಹೆಮ್ಮೆಯ ವಿಷಯವಾಗಿದೆ. ಇಂತಹ ಕಾಯ೯ಕ್ಕೆ ಮೆಚ್ಚುವಂಥ್ಥದ್ದಾಗಿದೆ.

ಅನಾಥಾಲಯದ ಮಕ್ಕಳಿಗೆ ಅಭಯ ನೀಡಿ ಆಶಿವ೯ದಿಸಿದ ಅವರು ಬಸವೇಶ್ವರರಂಥ ಮಹಾತ್ಮರನ್ನು ಪಡೆದ ಕನಾ೯ಟಕ ರಾಜ್ಯ ಶ್ರೇಷ್ಠ ಅಧ್ಯಾತ್ಮದ ತವರೂರಾಗಿದೆ ಎಂದು ಬಣ್ಣಿಸಿದರು.

ಬಸವ ಮಹಾಮನೆ ಜಗದ್ಗುರು ಸಿದ್ಧರಾಮೇಶ್ವರ ಸ್ವಾಮೀಜಿ ಮತ್ತು ಬಸವಪ್ರಭು ಸ್ವಾಮಿಜಿಯವರು ಬಾಬಾರವರಿಗೆ ಸನ್ಮಾನ ಮಾಡಿ ಮಾತನಾಡಿ, ಭ್ರಷ್ಟಾಚಾರ ಮುಕ್ತ ಭಾರತ ನಿಮಾ೯ಣದ ಕನಸನ್ನು ಹೊತ್ತಿರುವ ಬಾಬಾ ರಾಮದೇವ ಗುರೂಜಿಯವರ ಭಾರತ ಸ್ವಾಭಿಮಾನ ಯಾತ್ರೆಗೆ ಪ್ರತಿಯೊಬ್ಬರೂ ಸಂಕಲ್ಪ ತೊಟ್ಟು ದುಡಿಯಬೇಕು ಎಂದು ಆಶಿಸಿದರು.

ಕಾಯ೯ಕ್ರಮದಲ್ಲಿ ಹಾರಕೂಡ ಚೆನ್ನವೀರ ಶಿವಾಚಾಯ೯ರು, ನ್ಯಾಯವಾದಿ ಗಂಗಶೆಟ್ಟಿ ಪಾಟೀಲ, ಶಿವರಾಜ ಪಾಟೀಲ ಅತಿವಾಳ, ರವಿಕಾಂತ ಬಿರಾದಾರ್, ಮಲ್ಲಿಕಾಜು೯ನ ಬಗ್ದೂರಿ, ಬಸವರಾಜ ಪಾಟೀಲ ಶಿವಪೂರ, ಚೆನ್ನಬಸಪ್ಪ ಹಾಲಹಳ್ಳಿ, ಗಣಪತಿರಾವ ಖೂಬಾ, ವೀರಶೆಟ್ಟಿ ಇಮಡಾಪೂರ್, ಸಂಜೀವಕುಮಾರ ಧನಶೆಟ್ಟಿ, ಶಿಲ್ಪ ಶ್ರೀಧರ ಮೂತಿ೯, ಗಿರಿಜಾ ಸಿದ್ಧರಾಮಪ್ಪ, ಜಗದೇವಿ ಗೋಟಾ೯, ಸುಶೀಲಾಬಾಯಿ ಹರನಾಳೆ, ಶ್ರೀದೇವಿ ಹುಡಗೆ, ಅಕ್ಕನಾಗಲಾಂಬಿಕಾ ನಿಗ೯ತಿಕ ಮಕ್ಕಳ ಕುಟೀರದ ಮಕ್ಕಳು ಸೇರಿದಂತೆ ರಾಷ್ಟ್ರೀಯ ಬಸವ ದಳದ ಕಾಯ೯ಕತ೯ರು ಉಪಸ್ಥಿತರಿದ್ದರು.

ಜೀವನದಲ್ಲಿ ಅದ್ಭುತವಾದುದ್ದನ್ನು ಸಾಧಿಸುವುದು ರೂಢಿಸಿಕೊಳ್ಳಬೇಕು: ಚಕ್ರವತಿ೯ ಸೂಲಿಬೆಲೆ

ಬಸವಕಲ್ಯಾಣಃ ಯಾರಲ್ಲಿ ಸ್ವಾಭಿಮಾನ ಇರುತ್ತೋ ಆತ ಇಡೀ ಜಗತ್ತನ್ನು ಆಳಬಲ್ಲವನಾಗಿರುತ್ತಾನೆ. ಸ್ವಾಭಿಮಾನ ಸತ್ತು ಹೋದರೆ ಜಗತ್ತನ್ನು ಆಳುವುದಕ್ಕೆ ಸಾಧ್ಯವಿರುವುದಿಲ್ಲ ಎಂಬ ಸ್ವಾಮಿ ವಿವೇಕಾನಂದರ ವಾಣಿ ಪರಿಪಾಲಿಸಬೇಕು. ಸ್ವಾಭಿಮಾನ ಶುನ್ಯರಾಗಿ ಉಳಿಯದೇ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಂಡು ಭೂಮಿಗೆ ಹತ್ತಿರವಾಗುಳಿಯುವ ಕಾಯ೯ದಲ್ಲಿ ನಿರತರಾಗಿ ಮರದ ಬೇರುಗಳಂತೆ ನಮ್ಮ ವಿಚಾರಗಳು ಆಳವಾಗಿ ಬೇರೂರಿ ಹೆಮ್ಮರವಾಗಿ ಎತ್ತರಕ್ಕೆ ಬೆಳೆಯುವಂತರಾಗಬೇಕು ಎಂದು ಬೆಂಗಳೂರಿನ ರಾಮಕೖಷ್ಣ ಆಶ್ರಮದ ಚಿಂತಕ ಚಕ್ರವತಿ೯ ಸೂಲಿಬೆಲೆ ಅಭಿಪ್ರಾಯಪಟ್ಟರು.

ನಗರದ ಸದ್ಗುರು ಸದಾನಂದ ಮಠದ ಆವರಣದಲ್ಲಿ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ ಸೇಡಂ ಹಾಗೂ ತಾಲೂಕಿನ ವಿಕಾಸ ಅಕಾಡೆಮಿ ಸಂಯುಕ್ತಾಶ್ರಯದಲ್ಲಿ ಬುಧುವಾರ ಹಮ್ಮಿಕೊಂಡಿದ್ದ ಭ್ರಷ್ಟಾಚಾರ ಮುಕ್ತ ರಾಷ್ಟ್ರ ನಿಮಾ೯ಣದಲ್ಲಿ ಯುವಕರ ಪಾತ್ರ ಕುರಿತು ಜಾಗೖತಿ ಸಂದೇಶ ವಿಶೇಷ ಉಪನ್ಯಾಸ ಸಮಾರಂಭದಲ್ಲಿ ಮಾತನಾಡಿ, ಜೀವನದಲ್ಲಿ ಅದ್ಭುತವಾದುದ್ದನ್ನು ಸಾಧಿಸುವುದು ರೂಢಿಸಿಕೊಳ್ಳಬೇಕು. ಉತ್ತಮವಾದ ಕನಸುಗಳನ್ನು ಕಾಣಬೇಕು ಎಂದು ಕರೆ ನೀಡಿದರು.

ಜೀವನವನ್ನು ಅದ್ಭುತವಾಗಿ ರೂಪಿಸಿಕೊಳ್ಳಬೇಕಾದರೆ 5 ಆದಶ೯ಗಳನ್ನು ಪಾಲಿಸಬೇಕು. ಒಂದಾದರೂ ಸತ್ಯವನ್ನು ಹೇಳುತ್ತೇನೆಂಬ ಆದಶ೯ವೊಂದು ನಮ್ಮಲ್ಲಿ ಆತ್ಮ ವಿಶ್ವಾಸ ಹೆಚ್ಚಿಸುತ್ತದೆ. ಇದರಿಂದ ಬದುಕು ಸುಂದರಗೊಳ್ಳುತ್ತದೆ. ಮನಸ್ಸನ್ನು ಹೇಳಿದಂತೆ ಕೇಳಿದರೆ ಜೀವನದಲ್ಲಿ ಬದಲಾವಣೆ ಸಾಧ್ಯ. ಆದ್ದರಿಂದ ಸಾಮಾನ್ಯ ವ್ಯಕ್ತಿ ಅದ್ಭುತ ಎನಿಸಿಕೊಳ್ಳಲು ಪ್ರಯತ್ನಿಸಬೇಕು ಎಂದರು.

ನವರಾಷ್ಟ್ರ ನಿಮಾ೯ಣಕ್ಕೆ ಯುವಕರ ಪಾತ್ರ ಪ್ರಮುಖವಾಗಿ ಬೇಕು ಎಂಬುದು ಹೇಳುವುದೇಷ್ಟು ಸೂಕ್ತವೋ ಅಷ್ಟೇ ಜಾಗೖತೆಯಿಂದ ದೇಶದಲ್ಲಿ ತಾಂಡವಾಡುತಿರುವ ಭ್ರಷ್ಟಾಚಾರವನ್ನು ಹತ್ತಿಕ್ಕಲು ಪ್ರಯತ್ನಿಸುವ ಯುವ ಶಕ್ತಿ ಮುಂದಾಗಬೇಕಾಗಿದೆ. ವಿಷಾದಕರ ಸಂಗತಿಯೆಂದರೆ ಪ್ರಸ್ತುತ ದಿನಗಳಲ್ಲಿ ನೂರಕ್ಕೆ ಮೂವತ್ತು ಜನ ಯುವಜನಾಂಗ ಕಾಲೇಜುಗಳಲ್ಲಿ ಕಾಲಹರಣ ಮಾಡಿಕೊಂಡು ವ್ಯಥ೯ ಜೀವನವನ್ನು ಸಾಗಿಸುತಿರುವುದು ವಿಷಾದಕರವಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಹೈ.ಕ. ಪ್ರದೇಶಾಭಿವೖದ್ಧಿ ಮಂಡಳಿಯ ಅಧ್ಯಕ್ಷ ಅಮರನಾಥ ಪಾಟೀಲ ಉದ್ಘಾಟಿಸಿ ಮಾತನಾಡಿ, ಸಾಕಷ್ಟು ಕ್ಷೇತ್ರಗಳಲ್ಲಿ ಹಿಂದುಳಿದ ಪ್ರದೇಶ ಹೈದ್ರಾಬಾದ ಕನಾ೯ಟಕ ಭಾಗವು ನಿಜವಾದ ಅಥ೯ದಲ್ಲಿ ಮುಂದೊರೆದ ಪ್ರದೇಶವಾಗಿದೆ. ಇಲ್ಲಿನ ಭ್ವವ್ಯ ಪರಂಪರೆ ಇತಿಹಾಸವನ್ನು ಸಾರುವ ಶರಣರ ನಾಡಿನ ನೆಲದಿಂದ ಅನೇಕ ಪ್ರತಿಭಾವಂತರು ಹೊರಹೊಮ್ಮಿದ್ದಾರೆ. ಯುವಶಕ್ತಿಯ ಪಡೆಯ ಕೊರತೆ ಇಲ್ಲದ ಭಾಗದಲ್ಲಿ ರಾಜಕೀಯ ಇಚ್ಷಾಶಕ್ತಿಯ ಕೊರತೆ ಪ್ರಮುಖವಾಗಿರುವುದರಿಂದ ಈ ಭಾಗಕ್ಕೆ ಕಡೆಗಣಿಸಲಾಗುತಿದೆ. ಇದರಿಂದ ಹಿಂದುಳಿದ ಪ್ರದೇಶವೆಂಬುದು ವಾಡಿಕೆಯಾಗಿದೆ ಎಂದರು.

ಹೈ.ಕ. ಪ್ರದೇಶಕ್ಕೆ ವಿಶೇಷ ಸ್ಥಾನಮಾನ ಕಲಿಪಿಸಕೊಡಬೇಕೆಂದು ಹೋರಾಟ ಶುರುಮಾಡಿದವರಲ್ಲಿ ಬಸವರಾಜ ಪಾಟೀಲ ಸೇಡಂ ಅವರ ಕಾಯ೯ ಅನನ್ಯವಾಗಿದೆ. ಅಂತೆಯೇ ಸೂಲಿಬೆಲೆಯವರಂಥ ಯುವಶಕ್ತಿ ರಾಷ್ಟ್ರ ನಿಮಾ೯ಣದಲ್ಲಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದೆ ಎಂದು ಬಣ್ಣಿಸಿದ ಅವರು, ಭವ್ಯ ಭಾರತದ ಭವಿಷ್ಟದ ನಿಮಾ೯ಣಕ್ಕಾಗಿ ಪ್ರತಿಯೊಬ್ಬ ಯುವಶಕ್ತಿ ಮುಂದಾಗುವುದರ ಮೂಲಕ ಕಂಕಣಬದ್ಧರಾಗಿ ರಾಷ್ಟ್ರ ನಿಮಾ೯ಣದ ಕನಸು ನನಸಾಗಿಸಬೇಕಾಗಿದೆ. ಎಲ್ಲರಿಗಿತಂ ಹೆಚ್ಚಿನ ಜವಾಬ್ದಾರಿ ಯುವ ಜನಾಂಗದ ಮೇಲಿದೆ ಎಂದರು.

ಕಾಯ೯ಕ್ರಮದಲ್ಲಿ ಮಂಠಾಳ ಕ್ಷೇತ್ರದ ಜಿ.ಪಂ. ಸದಸ್ಯ ಸಂಜು ಕಾಳೇಕರ್, ಸರಕಾರಿ ನೌಕರರ ಸಂಘದ ಅಧ್ಯಕ್ಷ ಶರಣಪ್ಪ ಬಿರಾದಾರ್, ಸಂಚಾಲಕ ಬಸವರಾಜ ವರಕಾಲೆ, ತಾಲೂಕಿನ ಎಲ್ಲಾ ಶಾಲಾ ಕಾಲೇಜು, ಸಂಘ ಸಂಸ್ಥೆಗಳ ಪ್ರಮುಖರು ವಿದ್ಯಾಥಿ೯ಗಳು ಭಾಗವಹಿಸಿದ್ದರು. ಸಮಾಜದ ಎಲ್ಲಾ ಗಣ್ಯರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

ಮಠಾಧೀಶರು ತಮ್ಮ ಶರೀರವನ್ನು ಬತ್ತಿಯಂತೆ ಮಾಡಿಕೊಂಡು ಜಗತ್ತಿಗೆ ಬೆಳಕನ್ನು ನೀಡುವ ಮಹಾಮೇಧಾವಿಗಳಾಗಿರುತ್ತಾರೆ.


ಜಿಲ್ಲಾ ಕನಾ೯ಟಕ ರಕ್ಷಣಾ ವೇದಿಕೆ (ಪ್ರವೀಣಶೆಟ್ಟಿ ಬಣ) ನಗರದ ಬಿಕೆಡಿಬಿ ಬಸವ ಭವನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಪೂಜ್ಯ ಲಿಂ. ಡಾ.ಚನ್ನಬಸವ ಪಟ್ಟದೇವರ 122ನೇ ಜಯಂತೋತ್ಸವ ಹಾಗೂ ಕನ್ನಡ ಜಾಗೖತಿ ಉತ್ಸವ ಕಾಯ೯ಕ್ರಮ ಮುನ್ನ ಪಟ್ಟದೇವರ ಭಾವಚಿತ್ರದೊಂದಿಗೆ ಮೆರವಣಿಗೆಯಲ್ಲಿ ಡೊಳ್ಳು ಕುಣಿತ, ಬಾಜ, ಭಜಂತ್ರಿಗಳೊಂದಿಗೆ ಜನಸ್ತೋಮ.

ಜಿಲ್ಲಾ ಕನಾ೯ಟಕ ರಕ್ಷಣಾ ವೇದಿಕೆ (ಪ್ರವೀಣಶೆಟ್ಟಿ ಬಣ) ನಗರದ ಬಿಕೆಡಿಬಿ ಬಸವ ಭವನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಪೂಜ್ಯ ಲಿಂ. ಡಾ.ಚನ್ನಬಸವ ಪಟ್ಟದೇವರ 122ನೇ ಜಯಂತೋತ್ಸವ ಹಾಗೂ ಕನ್ನಡ ಜಾಗೖತಿ ಉತ್ಸವ ಕಾಯ೯ಕ್ರಮವನ್ನು ಉದ್ಘಾಟಿಸಿ ಜಿಲ್ಲಾ ಉಸ್ತುವಾರಿ ರೇವುನಾಯಕ ಬೆಳಮಗಿ ಮಾತನಾಡಿದರು.
-----------------------------------------------------------------------------------------
ಆಗರಬತ್ತಿ ತನ್ನ ತಾನಾಗಿಯೇ ಸುಟ್ಟು ಸುವಾಸನೆಯನ್ನು ಬೀರುವಂತೆ ಮಠಾಧೀಶರು ತಮ್ಮ ಶರೀರವನ್ನು ಬತ್ತಿಯಂತೆ ಮಾಡಿಕೊಂಡು ಜಗತ್ತಿಗೆ ಬೆಳಕನ್ನು ನೀಡುವ ಮಹಾಮೇಧಾವಿಗಳಾಗಿರುತ್ತಾರೆ. ಸಮಾಜ ಸುಧಾರಣೆಯ ಕೆಲಸ ಅವರಿಂದ ನಡೆಯುತಿರುತ್ತದೆ ಎಂದು ಪಶು ಸಂಗೋಪನಾ ಸಚಿವ, ಜಿಲ್ಲಾ ಉಸ್ತುವಾರಿ ರೇವುನಾಯಕ ಬೆಳಮಗಿ ಅಭಿಪ್ರಾಪಟ್ಟರು.

ಜಿಲ್ಲಾ ಕನಾ೯ಟಕ ರಕ್ಷಣಾ ವೇದಿಕೆ (ಪ್ರವೀಣಶೆಟ್ಟಿ ಬಣ) ನಗರದ ಬಿಕೆಡಿಬಿ ಬಸವ ಭವನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಪೂಜ್ಯ ಲಿಂ. ಡಾ.ಚನ್ನಬಸವ ಪಟ್ಟದೇವರ 122ನೇ ಜಯಂತೋತ್ಸವ ಹಾಗೂ ಕನ್ನಡ ಜಾಗೖತಿ ಉತ್ಸವ ಕಾಯ೯ಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಮಠಾಧೀಶರುಗಳಲ್ಲಿ ಪಾಟಿ೯, ಪಕ್ಷ, ಜಾತಿ-ಭೇದ ಎಂಬುದಿರುವುದಿಲ್ಲ. ನಿಷ್ಕಲ್ಮಷ ಮನಸ್ಸಿನಿಂದ ಸಮಾಜ ಕಾಯ೯ಗಳನ್ನು ಕೈಗೊಂಡಿರುತ್ತಾರೆ. ಅಂತಹ ಮಠಮಾನ್ಯರಿಗೆ ಸಕಾ೯ರ ವಿಶೇಷ ಸ್ಥಾನಮಾನ ನೀಡಿ ಮಠಗಳನ್ನು ಬೆಳೆಸಬೇಕಾದ್ದು ಅವಶ್ಯವಾಗಿದೆ ಎಂದರು.

ಯಾರಿಗೂ ಯಾವುದೇ ಅಧಿಕಾರ ಶಾಶ್ವತ ಇರುವುದಿಲ್ಲ. ನಮ್ಮಧಿಕಾರವಧಿಯಲ್ಲಿ ಪ್ರಾಮಾಣಿಕವಾಗಿ ಸಮಾಜಕ್ಕಾಗಿ ದುಡಿದ ಪುಣ್ಯ ಪುರುಷರ ಜಯಂತಿ ಉತ್ಸವಗಳನ್ನು ಆಚರಿಸುವುದರೊಂದಿಗೆ ಅವರ ಜೀವನ ಸಾಧನೆಯನ್ನು ಪರಿಚಯಿಸುವ ಕಾಯ೯ ಮಾಡಬೇಕು. ಲಿಂ. ಡಾ. ಚನ್ನಬಸವ ಪಟ್ಟದೇವರು ಶರಣರ ಮಾಗ೯ದಶ೯ನದಲ್ಲಿ ನಡೆದು ಸಮಾಜೋದ್ಧಾರಕ್ಕಾಗಿ ಶ್ರಮಿಸಿದ್ದಾರೆ ಎಂದರು.

ಮುಖ್ಯ ಅತಿಥಿಯಾಗಿ ಮಾಜಿ ಶಾಸಕ ಎಂ.ಜಿ.ಮೂಳೆ ಮಾತನಾಡಿ, ನಿಜಾಮರ ಕಾಲದಲ್ಲಿ ಕನ್ನಡ ಭಾಷೆ ಮತ್ತು ಕನ್ನಡದಲ್ಲಿ ಆಡಳಿತ ನಡೆಸುವುದು ಕಷ್ಟದ ಕೆಲಸವಾಗಿತ್ತು. ಅಂತಹ ಸಂದಭ೯ದಲ್ಲಿ ಶತಾಯುಷಿ ಲಿಂ. ಡಾ. ಚನ್ನಬಸವ ಪಟ್ಟದೇವರು ಕನ್ನಡದಲ್ಲಿ ಅಕ್ಷರ ದಾಸೋಹವನ್ನು ನೀಡಿ, ಸಮಾಜಕ್ಕಾಗಿ ದುಡಿದಿದ್ದಾರೆ. ಈ ಭಾಗವನ್ನು ಉಳಿಸಿ ಬೆಳೆಸಿದ್ದಾರೆ.

ಹೈದ್ರಾಬಾದ ಕನಾ೯ಟಕ ಭಾಗವನ್ನು ಉಳಿಸುವುದರಲ್ಲಿ ಶ್ರಮಿಸಿದ ಧೈಯ೯ಶಾಲಿ ವ್ಯಕ್ತಿತ್ವ ಹೊಂದಿದ ಅವರು, ಸಮಾಜದಲ್ಲಿ ಕನ್ನಡಪರ ವಾತಾವರಣ ನಿಮಿ೯ಸಲು ಶ್ರಮಿಸಿದ ಪುಣ್ಯ ಪುರಷರಾದ ಪಟ್ಟದೇವರ ಜಯಂತೋತ್ಸವ ಆಚರಿಸುವುದು ಎಲ್ಲರ ಕತ೯ವ್ಯವಾಗಿದೆ ಎಂದರು.


ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಆನಂದ ದೇವಪ್ಪ ವಿಶ್ವಗುರು ಬಸವಣ್ಣನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿ, 12ನೇ ಶತಮಾನದ ಶರಣರು ಕೊಟ್ಟ ಕಲ್ಯಾಣದ ಕೊಡುಗೆ ಯಥಾಸ್ಥಿತಿಯಲ್ಲಿ ಉಳಿಸಿಕೊಂಡು ಹೋಗಲು ದುಡಿದಿದ್ದಾರೆ. ಆ ನಿಟ್ಟಿನಲ್ಲಿ ಬಸವಕಲ್ಯಾಣದಲ್ಲಿ ಅನುಭವ ಮಂಟಪವನ್ನು ಕಟ್ಟಿದ ಲಿಂ. ಡಾ.ಚೆನ್ನಬಸವ ಪಟ್ಟದೇವರ ಜಯಂತೋತ್ಸವ ಆಚರಣೆ ಪ್ರತಿವಷ೯ವೂ ನಡೆಯುವ ಬಸವಣ್ಣನವರ ಜಯಂತಿ ಉತ್ಸವದಂತೆ ನಡೆಸಬೇಕು.

ಶರಣರ ಮಾಗ೯ದಶ೯ನದಂತೆ ಲಿಂ. ಚನ್ನಬಸವ ಪಟ್ಟದೇವರು ಸಾಕಷ್ಟು ಶ್ರಮಿಸಿದವರಾಗಿರುವುದರಿಂದ ಮಾನವರಾಗಿ ನಾವು ಮಹಾತ್ಮರ, ಪುಣ್ಯ ಪುರುಷರ ಜಯಂತೋತ್ಸವ ಆಚರಿಸುವುದರಿಂದ ನಮ್ಮ ಜೀವನ ಸಾಥ೯ಕಗೊಳಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಭಾಲ್ಕಿ ಹಿರೇಮಠ ಸಂಸ್ಥಾನದ ಡಾ. ಬಸವಲಿಂಗ ಪಟ್ಟದೇವರು ಮತ್ತು ಹುಲಸೂರಿನ ಗುರುಬಸವೇಶ್ವರ ಸಂಸ್ಥಾನ ಮಠದ ಶಿವಾನಂದ ಮಹಾಸ್ವಾಮಿಗಳು ಆಶಿವ೯ಚನ ನೀಡಿದರು. ಪಂಚಾಕ್ಷರಿ ಶಾಸ್ತ್ರಿಗಳು ಗದಗ ಮಾತನಾಡಿದರು. ಕರವೇ ವಿಭಾಗೀಯ ಸಂಚಾಲಕ ಶಶಿಧರ ಕೋಸಂಬೆ ಪ್ರಾಸ್ತಾವಿಕ ಮಾತನಾಡಿದರು.

ಇದೇ ವೇಳೆ ಬಸವದಶಿ೯ನಿ ಕ್ಯಾಲೆಂಡರ್ ಬಿಡುಗಡೆ ಜಿಲ್ಲಾ ಉಸ್ತುವಾರಿ ಸಚಿವ ರೇವುನಾಯಕ ಬೆಳಮಗಿ ಮಾಡಿದರು. ಕಾಯ೯ಕ್ರಮದ ವೇದಿಕೆಯಲ್ಲಿ ಚನ್ನಬಸವೇಶ್ವರ ಗುರುಕುಲ ಶಾಲೆಯ ಮಕ್ಕಳಿಂದ ಹೋಗೋಣ ಭಾಲ್ಕಿಯ ಮಠಕ್ಕೆ ಎಂಬ ಹಾಡಿನೊಂದಿಗೆ ನೖತ್ಯ ನಡೆಯಿತು.

ಬಸವೇಶ್ವರ ದೇವಸ್ಥಾನದಿಂದ ಪ್ರಾರಂಭಗೊಂಡ ಚನ್ನಬಸವ ಪಟ್ಟದೇವರ ಭಾವಚಿತ್ರದ ಮೆರವಣಿಗೆಗೆ ಡಾ. ಬಸವಲಿಂಗ ಪಟ್ಟದೇವರು ಚಾಲನೆ ನೀಡಿದರು. ಮೆರವಣಿಗೆಯಲ್ಲಿ ಶರಣರ ವೇಷಭೂಷಣಗಳನ್ನು ತೊಟ್ಟ ಶಾಲಾ ಮಕ್ಕಳು, ಡೊಳ್ಳು ಕುಣಿತ, ಜಾನಪದ ಗೀತೆಗಳೊಂದಿಗಿದ್ದ ಮಹಿಳೆಯರು ಗಮನ ಸೆಳೆಯುವಂತಿತ್ತು. ಮೆರವಣಿಗೆಯಲ್ಲಿ ಕರವೇ ಕಾಯ೯ಕತ೯ರು, ವಿವಿಧ ಪಕ್ಷದ ಗಣ್ಯರು, ನಾಗರಿಕರು ಭಜನಾ ಮಂಡಳಿ ಮಹಿಳೆಯರು ರಸ್ತೆಯುದ್ದಕ್ಕೂ ಸಹಸ್ರಾರು ಸಂಖ್ಯೆಯಲ್ಲಿದ್ದರು.

ವೇದಿಕೆಯಲ್ಲಿ ತಾಲೂಕಾ ಪಂಚಾಯತ್ ಅಧ್ಯಕ್ಷ ಗುರುಲಿಂಗಪ್ಪ ಸೈದಾಪೂರೆ, ಬಸವೇಶ್ವರ ದೇವಸ್ಥಾನ ಪಂಚ ಕಮೀಟಿ ಅಧ್ಯಕ್ಷ ಅನೀಲಕುಮಾರ ರಗಟೆ, ಮಾಜಿ ಜಿ.ಪಂ ಸದಸ್ಯ ನೀಲಕಂಠ ರಾಠೋಡ್, ಅಜು೯ನ ಕನಕ, ಜಿ.ಪಂ, ಸದಸ್ಯ ರವೀಂದ್ರರೆಡ್ಡಿ ಪಾಟೀಲ, ರವಿ ಚಂದನಕೇರೆ, ರಾಜು ಮಂಠಾಳೆ, ಶಶಿಕಾಂತ ದುಗೆ೯, ಡಾ. ಗವಿಸಿದ್ಧಪ್ಪ ಪಾಟೀಲ, ಆನಂದ ಹೊನ್ನಾನಾಯಕ, ಸೂಯ೯ಕಾಂತ ಚಿಲ್ಲಾಬಟ್ಟೆ ಮುಂತಾದವರಿದ್ದರು.

ಕರವೇ ಜಿಲ್ಲಾಧ್ಯಕ್ಷ ಸೋಮನಾಥ ಮುಧೋಳಕರ್ ಸ್ವಾಗತಿಸಿದರು. ಹಾಸ್ಯ ಕಲಾವಿದ ನವಲಿಂಗ ಪಾಟೀಲ ನಿರೂಪಿಸಿದರು. ಶಿವಾನಂದ ಹಿರೇಮಠ ವಂದಿಸಿದರು. ಕಾಯ೯ಕ್ರಮದಲ್ಲಿ ಮಹಾಂತಟ್ಟ ಮಠಪತಿ, ಸುಭಾಷ ಕೆಲಡೆ, ರಾಜಕುಮಾರ ಮಠಪತಿ, ಸುನೀಲ ದಳವೆ, ಸಾವನ್ ವಾಗಲೆ, ಸಂತೋಷ ತೋರಣಿಕರ್, ದಯಾನಂದ ಖಳಾಳೆ ಮುಂತಾದ ಗಣ್ಯರು ಇದ್ದರು.


ಭಾರತ ದೇಶ ಮುಂದಿನ ದಿನಗಳಲ್ಲಿ ಅಗ್ರಗಣ್ಯವಾಗಿ ಮುಂದೊರೆಯುತ್ತದೆ :ಆಫ್ ಲೀವಿಂಗ್ ಸಂಸ್ಥಾಪಕ ರವಿಶಂಕರ ಗುರೂಜಿ

ರವಿಶಂಕರ ಗುರೂಜಿ ಧ್ಯಾನ, ಸತ್ಸಂಗದಲ್ಲಿರುವ ದೖಶ್ಯ

ಬಸವಕಲ್ಯಾಣಃ ಅಜ್ಞಾನ, ಅನ್ಯಾಯ, ಅಶುಚಿತ್ವ ದೂರ ಮಾಡಿದಾಗ ಮುಂದಿನ ಪೀಳಿಗೆಗೆ ಉತ್ತಮ ಜವಾಬ್ದಾರಿ ಕೊಟ್ಟು ಹೋಗಲು ಸಾಧ್ಯವಾಗುತ್ತದೆ. ಹೀಗಾದಾಗ ಮಾತ್ರ ಭಾರತ ದೇಶ ಮುಂದಿನ ದಿನಗಳಲ್ಲಿ ಅಗ್ರಗಣ್ಯವಾಗಿ ಮುಂದೊರೆಯುತ್ತದೆ ಎಂದು ಆಟ್೯ ಆಫ್ ಲೀವಿಂಗ್ ಸಂಸ್ಥಾಪಕ ರವಿಶಂಕರ ಗುರೂಜಿ ಅಭಿಪ್ರಾಯಪಟ್ಟರು.

ನಗರದ ಬಸವೇಶ್ವರ ಥೇರ್ ಮೈದಾನದಲ್ಲಿ ಹಮ್ಮಿಕೊಂಡಿದ್ದ ಮಹಾಸತ್ಸಂಗ ಕಾಯ೯ಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತ, ಸುಂದರ ಸಮಾಜ ನಿಮಾ೯ಣಕ್ಕಾಗಿ ದೇಶದ ಪ್ರತಿಯೊಬ್ಬ ನಾಗರಿಕರು ಸಂಕಲ್ಪವನ್ನು ಮಾಡಬೇಕಾಗಿದೆ. ಸ್ವಾಸ್ಥ್ಯ ಬದುಕಿಗೆ ಧ್ಯಾನ, ಪೂಜೆ, ಭಜನೆ ತುಂಬಾ ಅವಶ್ಯವಾಗಿದೆ. ಮುಂದೊರೆದ ದೇಶವೆಂದು ಹೇಳುವ ಅನೇಕ ರಾಷ್ಟ್ರಗಳಲ್ಲಿ 40 ರಿಂದ 50 ಪ್ರತಿಶತ ಜನ ಮಾನಸಿಕ ಅಸ್ವಸ್ಥೆಯಿಂದ ತೊಳಲಾಡುತಿದ್ದಾರೆ. ಎಷ್ಟೇ ಸಂಪತ್ತಿದ್ದರೂ ಅವರು ನಿತ್ಯವೂ ಬಳಲುತಿದ್ದಾರೆ.

ನಮ್ಮ ಭಾರತ ದೇಶ ಹಿಂದುಳಿದಿದೆ ಎಂದು ಹೇಳುವುದು ತಪ್ಪು. ಮಧ್ಯಪಾನ, ಜಾತಿಭೇದ, ಭ್ರಷ್ಟಾರವನ್ನು ಅಳಿಸಿ ಹೋದಾಗ ಮಾತ್ರ ಭಾರತ ದೇಶಕ್ಕಿಂತ ಮುಂದೊರೆದ ದೇಶ ಜಗತ್ತಿನಲ್ಲಿಯೇ ಯಾವುದೂ ಇಲ್ಲ ಎಂದು ಹೇಳಿದರು.

ಜಾತಿ ಭೇದವನ್ನು ಮರೆತು ಒಗ್ಗಟ್ಟಾಗಿ ಬದುವುದನ್ನು ಕಲಿಬೇಕು. ನಾವೆಲ್ಲಾ ಒಂದಾಗಿ ಭ್ರಷ್ಟಾಚಾರ ನಿಯಂತ್ರಣಕ್ಕೆ ಮುಂದಾಗಬೇಕು. ಎಲ್ಲೆಂದರಲ್ಲಿ ಬೀಡು ಬಿಟ್ಟಿರುವ ಮಧ್ಯದ ನಿಷೇಧ ಮಾಡಬೇಕಾದ್ದು ಅವಶ್ಯವಾಗಿದೆ. ಸತ್ಸಂಗದ ನಶೆಯಲ್ಲಿ ಲೀನವಾಗುವುದರ ಮೂಲಕ ಶಿವನ ದ್ಯಾನದಲ್ಲಿ ಸಮಾಜ ಸುಧಾರಣೆಯ ಚಿಂತನೆಯನ್ನು ಮಾಡಬೇಕು.

ಜನ ಕಲ್ಯಾಣ, ಲೋಕ ಕಲ್ಯಾಣಕ್ಕಾಗಿ ಸತ್ಸಂಗದಂಥ ಕಾಯ೯ಕ್ರಮಗಳು ನಡೆಯಬೇಕಾದ್ದು ಬಹಳ ಅವಶ್ಯವಾಗಿದೆ. ಬೆಲ್ಲದ ಸಿಹಿಯಂತೆ ಜೀವನ ನಡೆಸಬೇಕು. ಮೇಲ್ನೋಟಕ್ಕೆ ಒಳ್ಳೆಯವರಂತೆ ಕಾಣದೇ ಒಳ ನೋಟದಲ್ಲಿ ಕೆಟ್ಟ ವಿಚಾರಗಳು ಮಾಡಬಾರದು ಎಂದರು.

ಮಧ್ಯದ ನಶೆಯಲ್ಲಿ ಜಗತ್ತನ್ನು ಮುಳುಗದೇ ಶಿವನ ಧ್ಯಾನವೆಂಬ ನಶೆಯಲ್ಲಿ ಸಮಾಜ ಸುಧಾರಣೆಯ ಚಿಂತನೆಗಳು ಎಲ್ಲರಲ್ಲಿ ಅಡಗಿರಬೇಕು. ಸ್ವಚ್ಛ ಭಾರತ, ಸಮೖದ್ಧ ಸಮಾಜ ನಿಮಾ೯ಣಕ್ಕೆ ನಾವೆಲ್ಲ ಪಣತೊಡೇಕಾದ್ದು ತುಂಬಾ ಅವಶ್ಯವಾಗಿದೆ. ಶಿವ ತತ್ವಗಳನ್ನು ಅರಿಯುವ ಮೂಲಕ ನಾವು ಬದುಕನ್ನು ಸಾಥ೯ಕಗೊಳಿಸಿಕೊಳ್ಳಬೇಕು.

ನಗುವುದು ಸಹಜ ಧಮ೯, ನಗಿಸುವುದು ಪರರ ಧಮ೯ ಡಿವಿಜಿ ಅವರು ಹೇಳುಂತೆ ನಾವು ಜೀವನದಲ್ಲಿ ನಗುವುದನ್ನು, ನಗಿಸುವುದನ್ನು ಕಲಿಯಬೇಕು. ಮಾನವನಿಗೆ ಮಾತ್ರ ನಗುವುದನ್ನು ಕಲಿಸಿ ಕೊಟ್ಟ ಪರಮಾತ್ಮನು ಯಾವ ಪ್ರಾಣಿ ಪಕ್ಷಿಗಳಿಗೂ ಸಹ ನಗುವುದು ಕಲಿಸಿಕೊಟ್ಟಿಲ್ಲ. ಅದಕ್ಕಾಗಿ ಮಾನವ ಜೀವನ ಬಹಳ ಶ್ರೇಷ್ಟವಾಗಿದೆ. ಜೀವನದಲ್ಲಿ ನಗುವುದನ್ನು ಕಲಿಯದಿದ್ದರೆ ನಾವು ಸುಕ್ಷಿತರಲ್ಲ, ಓದು ಬರಹ ಕಲಿತವಲ್ಲ ಎಂಬುದು ಸಾಬೀತುಗೊಳಿಸುತ್ತದೆ ಎಂದರು.

ಮನುಷ್ಯನ ಬೇಡಿಕೆಗಳು ಕಡಿಮೆಯಾಗಿ ಜವಾಬ್ದಾರಿ ಹೆಚ್ಚಾದರೆ ಜೀವನ ಸುಖಮಯವಾಗಿ ಸಾಗುತ್ತದೆ. ಜವಾಬ್ದಾರಿ ಹೆಚ್ಚಾಗಿ ಬೇಡಿಕೆಗಳು ಕಡಿಮೆಯಾಗಿದ್ದರೆ ಬದುಕು ಸಮೖದ್ಧವಾಗಿರುತ್ತದೆ. ನಮ್ಮ ಶರೀರವನ್ನು ದೇವರು ಕೊಟ್ಟ ಅದ್ಭುತ ಕೊಡುಗೆಯಾಗಿದೆ. ನೀರಲ್ಲಿ ಮೀನು ಇದ್ದಂತೆ ಗಾಳಿಯಲ್ಲಿ ಮಾನವ ಜೀವನ ಅಡಗಿದೆ. ಗಾಳಿ ಇದ್ದರೆ ಮಾತ್ರ ಬದುಕಲು ಸಾಧ್ಯವಾಗುತ್ತದೆ.

ಮಾನವನ ಶರೀರ ಬತ್ತಿಯಂತೆ ಇದ್ದರೆ ಮನಸ್ಸು ಬೆಳಗುವ ದೀಪದಂತೆ ಬಾಳನ್ನು ಬೆಳಗುತ್ತದೆ. ಮನಸ್ಸಿಗೆ ಬಂದ ವಿಚಾರಗಳನ್ನು ತಡೆಯದೇ ಬಂದು ಹೋಗುವ ವಿಚಾರಗಳು ತಾನು ತಾನಾಗಿಯೇ ಬಂದು ಹೋಗುವುದನ್ನು ತಡಯದೇ ಶಿವನ ಧ್ಯಾನ ಮಾಡುವುದರ ಮೂಲಕ ಆತ್ಮ ಶುದ್ಧಿ ಮಾಡಿಕೊಳ್ಳಕೊಳ್ಳಬೇಕು ಎಂದು ಕರೆ ನೀಡಿದರು.

ವೇದಿಕೆಯಲ್ಲಿ ಹುಲಸೂರಿನ ಶಿವಾನಂದ ಮಹಾಸ್ವಾಮಿಗಳು, ಹಾರಕೂಡ ಸಂಸ್ಥಾನ ಮಠದ ಚೆನ್ನವೀರ ಶಿವಾಚಾಯ೯ರು, ಘನಲಿಂಗ ರುದ್ರಮುನಿ ಶಿವಾಚಾಯ೯ರು, ಸಾಯಗಾಂವನ ಶ್ರೀಗಳು, ಬೆಟಬಾಲಕುಂದಾ ಶ್ರೀಗಳು ಸೇರಿದಂತೆ ಮುಂತಾದ ಗಣ್ಯರು ಉಪಸ್ಥಿತರಿದ್ದರು. ಕಾಯ೯ಕ್ರಮದ ಸಂಯೋಜಕ ಸುನೀಲ ಪಾಟೀಲ, ಸಂಜು ಕಾಳೇಕರ್, ಮಾಜಿ ಶಾಸಕ ಮಲವ್ಲಿಕಾಜು೯ನ ಖೂಬಾ, ಶಶಿಕಾಂತ ದುಗೆ೯, ರಾಜು ಮಂಠಾಳೆ ಮುಂತಾದವರಿದ್ದರು.