ಸೋಮವಾರ, ಫೆಬ್ರವರಿ 13, 2012

ವಿದ್ಯಾಥಿ೯ಗಳನ್ನು ಶೈಕ್ಷಣಿಕವಾಗಿ ಮೇಲೆತ್ತುವುದು.


ಪಾಶ್ಛಾತ್ಯ ಸಂಸ್ಕೖತಿಯಿಂದ ಸಮಾಜದಲ್ಲಿ ಆಗುತ್ತಿರುವ ದುಷ್ಪರಿಣಾಮಗಳನ್ನು ಹೋಗಲಾಡಿಸಲು ಕರೆ
ಬಸವಕಲ್ಯಾಣ, ಫೆ. 5


ಜಾತಿ ಭೇದವೆನ್ನದೇ ವಿದ್ಯಾಥಿ೯ಗಳನ್ನು ಶೈಕ್ಷಣಿಕವಾಗಿ ಮೇಲೆತ್ತುವುದು, ಅವರಲ್ಲಿ ನೈತಿಕತೆಯನ್ನು ಮೂಡಿಸುವುದರೊಂದಿಗೆ ಸಮಾಜದಲ್ಲಿ ಆಗುತ್ತಿರುವ ಅನ್ಯಾಯದ ವಿರುದ್ಧ ಹೋರಾಟಕ್ಕೆ ಸಜ್ಜಾಗುವಂತೆ ಸ್ಫೂತಿ೯ ನೀಡುವುದೇ ಸ್ಟುಡೆಂಟ್ ಇಸ್ಲಾಮಿಕ್ ಆಗ೯ನೈಜೇಶನ್ ಆಫ್ ಇಂಡಿಯಾ ಸಂಘಟನೆಯದ್ದಾಗಿದೆ ಎಂದು ಎಸ್ಐಓ ರಾಜ್ಯಾಧ್ಯಕ್ಷ ಅಸ್ಫಾಕ ಅಹ್ಮದ್ ಶರೀಫ್ ಹೇಳಿದರು.

ನಗರದಲ್ಲಿ ಫೆ. 4ರಂದು ಭಾನುವಾರ ಕರೆದಿದ್ದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಪಾಶ್ಛಾತ್ಯ ಸಂಸ್ಕೖತಿಯಿಂದ ಸಮಾಜದಲ್ಲಿ ಆಗುತ್ತಿರುವ ದುಷ್ಪರಿಣಾಮಗಳನ್ನು ಹೋಗಲಾಡಿಸುವ ಉದ್ದೇಶದಿಂದ ಇದೇ ಫೆ. 17 ರಿಂದ 26 ರವರೆಗೆ ಹತ್ತು ದಿನಗಳವರೆಗೆ ಪ್ರಸಿದ್ಧ ಸಂಸ್ಕೖತಿಯ ಆಧಾರದ ಮೇಲೆ ವಿದ್ಯಾಥಿ೯ಗಳೇ ಎತ್ತ ಸಾಗುತಿದ್ದಿರಿ.? ಎಂಬ ಅಭಿಯಾನ ಚಳುವಳಿ ಬಸವಕಲ್ಯಾಣದಿಂದಲೇ ಹಮ್ಮಿಕೊಂಡು ರಾಜ್ಯಾದ್ಯಂತ ನಡೆಸಲಾಗುತ್ತಿದೆ ಎಂದರು.

ರಾಷ್ಟ್ರೀಯ ಮಟ್ಟದ ಚಳುವಳಿ ಇದಾಗಿದ್ದು 30 ವಷ೯ಗಳಿಂದ ನಿರಂತರ ಹೋರಾಟ ನಡೆಸುವುರ ಜೊತೆಗೆ ಉತ್ತಮ ಸಮಾಜ ನಿಮಾ೯ಣಕ್ಕೆ ಜನಜಾಗೖತಿ ಮೂಡಿಸುವ ನಿಟ್ಟಿನಲ್ಲಿ ವಿದ್ಯಾಥಿ೯ಗಳನ್ನು ಒಂದುಗೂಡಿಸುವ ಪ್ರಯತ್ನ ಸಂಘಟನೆ ಮಾಡುತ್ತಿದೆ. ಕೆಡುಕುಗಳಿಂದ ಕೂಡಿದ ಸಮಾಜ ಪರಿವತ೯ನೆಗೆ ಶ್ರಮಿಸಲಾಗುತ್ತಿದ್ದು, ಜೀವನವೆಂಬುದು ಬರೀ ಮೋಜಿಗಾಗಿ ಅಲ್ಲ. ಜೀವನವನ್ನು ರೂಪಿಸಿಕೊಳ್ಳುವ ನೈಜ ಸಂದೇಶ ವಿದ್ಯಾಥಿ೯ಗಳಿಗೆ ಈ ಸಂದಭ೯ಗಳಲ್ಲಿ ಹೇಳಿಕೊಡಲಾಗುತ್ತಿದೆ ಎಂದು ವಿವರಿಸಿದರು.

ಇವತ್ತಿನ ವಿದ್ಯಾಥಿ೯ಗಳು ಬರೀ ಮೋಜು ಮಾಡುವುದು ಜೀವನವೆಂದುಕೊಂಡಿರುವುದರಿಂದ ಬಡಿದೆಚ್ಚರಿಸುವ ಕತ೯ವ್ಯ ಸಂಘಟನೆಗಳದ್ದಾಗಿದೆ. ಸಮಾಜವನ್ನು ಹಾಳಾಗಿ ಕುಟುಂಬಗಳು ಒಡೆದು ಹೋಗುತ್ತಿರುವ ಈ ಸಂದಭ೯ಗಳಲ್ಲಿ ಮಾದಕ ವಸ್ತುಗಳಿಂದ ನೆಮ್ಮದಿಯನ್ನು ಕಳೆದುಕೊಳ್ಳುತ್ತಿದ್ದಾರೆ. ಕೆಟ್ಟ ಚಟಗಳಿಂದ ದೂರವುಳಿದು ಸುಂದರವಾದ ಜೀವನ ರೂಪಿಸಿಕೊಳ್ಳಲು ಜನಜಾಗೖತಿ ಅಭಿಯಾನದ ಕರೆ ಇದಾಗಿದೆ ಎಂದರು.

ಕೇವಲ ಅಭಿಯಾನಗಳನ್ನು ನಡೆಸದೇ ಮಾಧ್ಯಮಗಳ ಮೂಲಕ ಯುವಜನಾಂಗ ಹೇಗೆ ಬದುಕಬೇಕೆಂಬ ದೖಷ್ಠಿಕೋನ ಇಟ್ಟುಕೊಂಡು ರಾಜ್ಯದ ವಿವಿಧೆಡೆ ಇಂತಹ ಪತ್ರಿಕಾಗೋಷ್ಠಿಗಳನ್ನು ನಡೆಸಲಾಗುತ್ತಿದೆ. ವಿದ್ಯಾಥಿ೯ಗಳನ್ನು ಹುರಿದುಂಬಿಸಲು ಮಾಧ್ಯಮಗಳು ಪ್ರಮುಖ ಪಾತ್ರ ವಹಿಸುತ್ತವೆ. ಆದ್ದರಿಂದ ಸಾಮಾಜಿಕ ಬದ್ಧತೆ, ಜೀವನ ಕೌಶಲ್ಯತೆ ಹಾಗೂ ಬದುಕಿನ ಶಾಂತಿ, ನೆಮ್ಮದಿಗಾಗಿ ಪ್ರತಿಯೊಬ್ಬ ವಿದ್ಯಾಥಿ೯ಗಳು ಮುಂದಾಗಬೇಕಾಗಿದೆ.

ವಿದ್ಯಾಥಿ೯ಗಳಿಂದ ಮಾತ್ರ ಸಾಮಾಜಿಕ ಬದಲಾವಣೆ, ಸದೖಢ ಸಮಾಜ ನಿಮಾ೯ಣ ಮಾಡಲು ಸಾಧ್ಯವಿದ್ದು, ಚಳುವಳಿಯಲ್ಲಿ ವಿದ್ಯಾಥಿ೯ಗಳ ಮೇಲಿರುವ ಋಣಾತ್ಮಕ ಪ್ರಭಾವ ತೊಡೆದು ಹಾಕಿ ಪ್ರಸಿದ್ಧ ಸಂಸ್ಕೖತಿಯ ತತ್ವಶಾಸ್ತ್ರ ಪರಿಣಾಮದ ಬಗ್ಗೆ ತಿಳಿಸುವುದು ಮತ್ತು ಅಶ್ಲೀಲ ಚಿತ್ರಗಳು, ಫ್ಯಾಶನ್ ಜಾಹಿರಾತು ಅನುಕರಣೆಗಳ ಕೆಟ್ಟ ದುಷ್ಪರಿಣಾಮ ಹೋಗಲಾಡಿಸಿ, ಸಾಂಸ್ಕೖತಿಕ ಕಾಯ೯ಕ್ರಮಗಳ ಮೂಲಕ ಜಾಗೖತಿಯನ್ನು ಮೂಡಿಸಲಾಗುತ್ತಿದೆ ಎಂದರು..

ಸ್ಟುಡೆಂಟ್ ಇಸ್ಲಾಮಿಕ್ ಆಗ೯ನೈಜೇಶನ್ ಆಫ್ ಇಂಡಿಯಾ ಸಂಘಟನೆಯು ಕೇವಲ ಒಂದು ಧಮ೯ಕ್ಕೆ ಸೀಮಿತವಲ್ಲ. ಎಲ್ಲಾ ಧಮ೯ದ, ಸಾಮಾಜಿಕ ಚಿಂತನೆ ಹೊಂದಿರುವ ಪ್ರತಿಯೊಬ್ಬರೂ ಭೇದಭಾವವನ್ನು ಮಾಡದೇ ಪಾಲ್ಗೊಳ್ಳಬೇಕು ಎಂದು ಕರೆ ನೀಡಿದರು. ಪತ್ರಿಕಾಗೋಷ್ಠಿಯಲ್ಲಿ ಸಂಘಟನಾ ಕಾಯ೯ದಶಿ೯ ಯಾಶೀನ್ ಅಮೀನ್, ಅಬ್ದುಲ್ ಮಾಜೀದ್, ಅಹ್ಮದ್ ಸಾದ, ಅಬುಲಲ್ಲಾ ಅವೇಸ್ ಉಪಸ್ಥಿತರಿದ್ದರು.

ಕಾಮೆಂಟ್‌ಗಳಿಲ್ಲ: