ಮೇ 10, 2011 ರಂದು ಬಸವಕಲ್ಯಾಣ ಐತಿಹಾಸಿಕ ಕೋಟೆಗೆ ಕನ್ನಡ ಚಲನಚಿತ್ರ ತಂಡವು ಜರಾಸಂಧ ಎಂಬ ಸಿನಿಮಾದ ಒಂದು ಹಾಡಿನ ಚಿತ್ರೀಕರಣಕ್ಕಾಗಿ ಆಗಮಿಸಿದ್ದ ಸಂದಭ೯ದಲ್ಲಿ ಬಸವಕಲ್ಯಾಣ ತಾಲೂಕಿನ ಮಂಠಾಳ ಗ್ರಾಮದ ಸ್ಥಳೀಯ ಕವಿ ವೀರಣ್ಣ ಮಂಠಾಳಕರ್ ಅವರ ಇತ್ತೀಚಿನ ಗಾಂಧಿ ಆಗ್ಬೇಕಂದುಕೊಂಡಾಗ ಕವನ ಸಂಕಲನ ಓದುವ ಮಗ್ನದಲ್ಲಿ ಚಿತ್ರ ನಟ ದುನಿಯಾ ಖ್ಯಾತಿ ವಿಜಯ ಅವರು ಮಂಠಾಳಕರ್ ಕವನ ಸಂಕಲನ ಗಂಭೀರವಾಗಿ ಓದುತಿದ್ದಾರೆ. ಇದೇ ಸಂದಭ೯ದಲ್ಲಿ ಮಾತುಕತೆ ನಡೆಸಿದ ವಿಜಯ ಅವರು ನೀವು ಯಾರನ್ನಾದ್ರೂ ಪ್ರೀತಿಸಿದ್ದಿರಾ? ಎಂದು ಕೇಳಿದರು. ಯಾಕೆಂದರೆ ಪ್ರೀತಿಸದೇ ಏನನ್ನೂ ಬರೆಯಲು ಸಾಧ್ಯವಿಲ್ಲ. ಪ್ರೀತಿಸಿದವರು ಮಾತ್ರ ಇಂತಹ ಪ್ರೇಮ ಕವಿತೆಗಳು ಬರೆಯಲು ಸಾಧ್ಯವೆಂದು ಹೇಳಿದಾಗ ಕವಿ ಮಂಠಾಳಕರ್ ಪ್ರೀತಿಯ ಪ್ರತೀಕವೇ ಕವನಗಳು ಬರೆಯಲು ಪ್ರೇರಣೆ ಸಿಕ್ಕಿರುವುದಾಗಿ ಹೇಳಿದರು. ಪ್ರೀತಿ ಇಲ್ಲದೇ ಕವಿಯಾಗಲಾರ ಎಂಬ ಮಾತು ಇಲ್ಲಿ ಚಚೆ೯ಗೆ ಬಂದಿತು.
ರಾಜ್ಯದ ವಿವಿಧ ಕವಿ-ಕಲಾವಿದರ ಕುರಿತು ಪರಿಚಯಿಸುವ ವೇದಿಕೆ.(ಕವಿ ಕಲಾವಿದರು) ಆಗಿದೆ. ಪ್ರಪಥಮವಾಗಿ ಕವಿಗಳ ಪರಿಚಯದೊಂದಿಗೆ, ಅವರು ಬರೆದ ಕವನ-ಹನಿಗವನಗಳನ್ನು ಮತ್ತು ಅವರ ಸಂಕ್ಷಿಪ್ತ ಪರಿಚಯ ಇಲ್ಲಿ ಮಾಡಲಾಗುತ್ತಿದೆ. ಬಸವಕಲ್ಯಾಣ ತಾಲೂಕಿನ ವಿವಿಧ ಕಾಯ೯ಕ್ರಮಗಳು, ನೆನಗುದಿಗೆ ಬಿದ್ದ ಅಭಿವ್ರದ್ಧಿ ಕಾಮಗಾರಿಗಳು, ಪ್ರತಿಭಾವಂತರ ಕುರಿತ ಒಂದಿಷ್ಟು ನೆನಪುಗಳು, ಅಳಿವಿನಂಚಿಗೆ ತಳ್ಳುತಿರುವ ಸಾಮಾಜಿಕ ವ್ಯವಸ್ಥೆಯಲ್ಲಿ ಕಣ್ಮುಚ್ಚಿ ಕುಳಿತ ರಾಜಕೀಯ ಪ್ರತಿನಿಧಿಗಳು ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡುತಿರುವವರ ಕುರಿತು ಕೂಡ ಇಲ್ಲಿ ಮಂಠಾಳಕರ್-ವೀರಸಂಕಲ್ಪದಲ್ಲಿ ಪರಿಚಯಿಸಲಾಗುತಿದೆ. -ವೀರಣ್ಣ ಮಂಠಾಳಕರ್
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ