ಗುರುವಾರ, ಜುಲೈ 14, 2011

ಶರಣ ಹರಳಯ್ಯನ ಮೂಲ ವಾಸಸ್ಥಾನ ಹಳ್ಳಿ ಗ್ರಾಮಕ್ಕೆ ಬಸವನಹಳ್ಳಿ ಎಂದು ಕರೆಯಬೇಕುಃ ಸಾಹಿತಿ ರಂಜಾನ ದಗಾ೯ ಹೇಳಿಕೆ, ಸಮಂಜಸವಲ್ಲಃ ಹರಳಯ್ಯನ ಹಳ್ಳಿ ಎಂದು ಕರೆಯುವಂತಾಗಬೇಕು ಎಂಬುದು ಚಿಂತಕರ ಅನಿಸಿಕೆಯಾಗಿದೆ. ಸಕಾ೯ರ ಯಾರ ಪರವಾಗಿರುತ್ತದೆ ಎಂಬುದು ಕಾದು ನೋಡಬೇಕು.

 ಹರಳಯ್ಯ ಮತ್ತು ಕಲ್ಯಾಣಮ್ಮ ವಾಸವಾಗಿರುವ ಕುರಿತು ಬಸವಕಲ್ಯಾಣ ತಾಲೂಕಿನ ಹಳ್ಳಿ ಎಂಬ ಗ್ರಾಮಕ್ಕೆ ಹತ್ತಿಕೊಂಡಿರುವ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಹರಳಯ್ಯನ ದೇವಸ್ಥಾನ ಮೇಲ್ವಗ೯ದವರಿಂದ ನಿಲ೯ಕ್ಷಕೊಳಗಾಗಿರುವುದು. ಕೆಳವಗ೯ದ ಜನರಿಗೆ ಇದರ ಪರಿಪೂಣ೯ ಮಾಹಿತಿಯಿಲ್ಲದ್ದೇ ಮೂಲ ಸಮಸ್ಯೆಯಾಗಿದೆ.
   ವಿಶ್ವಗುರು ಬಸವಣ್ಣನವರ ಮೂತಿ೯ ಅನಾವರಣ ಕಾಯ೯ಕ್ರಮ ಉದ್ಘಾಟಿಸಿರುವ ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷ ಭೀಮಣ್ಣ ಖಂಡ್ರೆ, ಈ ಸಂದಭ೯ದಲ್ಲಿ ಸಾಹಿತಿ ರಂಜಾನ್ ದಗಾ೯, ತಡೋಳಾ ಶ್ರೀಗಳು ಇದ್ದರು.    
ಕಾಯ೯ಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಸಾಹಿತಿ, ಪತ್ರಕತ೯ ರಂಜಾನ ದಗಾ೯ ಮಾತನಾಡಿ, ಈ ಹಳ್ಳಿ ಎಂಬ ಗ್ರಾಮಕ್ಕೆ ಇನ್ನೂ ಮುಂದೆ ಬಸವನ ಹಳ್ಳಿ ಎಂದು ಪ್ರತಿಯೊಬ್ಬರೂ ಕರೆಯುವಂತಾಗಬೇಕು. ಯಾಕೆಂದರೆ ಬಸವಣ್ಣ ಕ್ರಾಂತಿಭೂಮಿಯಾಗಿ ಬಸವಣ್ಣನವರು ಆಳಿದ ನೆಲದಲ್ಲಿ ಇರುವ ಪುಟ್ಟ ಗ್ರಾಮ ಹಳ್ಳಿ ಗ್ರಾಮಕ್ಕೆ ಗ್ರಾಮಸ್ಥರು ಬಸವನ ಹಳ್ಳಿ ಎಂಬ ಕರೆಯುವದನ್ನು ರೂಢಿಸಿಕೊಳ್ಳಬೇಕು. ಎಂದಿದ್ದಾರೆ ಆದರೆ ಅದೇ ಹಳ್ಳಿ ಗ್ರಾಮದಲ್ಲಿ ಹರಳಯ್ಯನ ಹೊಂಡ ಮತ್ತು 12ನೇ ಶತಮಾನದ ಶರಣರಾದ ಹರಳಯ್ಯ ಮತ್ತು ಕಲ್ಯಾಣಮ್ಮ ವಾಸವಾಗಿರುವ ಕುರಿತು ಅನೇಕ ಕುರುಹುಗಳು ಇರುವುದರಿಂದ ಗ್ರಾಮಕ್ಕೆ ಹರಳಯ್ಯನ ಹಳ್ಳಿ ಎಂದು ಕರೆಯುವುದು ಸೂಕ್ತವೆನಿಸುತ್ತದೆ ಎಂಬುದು ಬುದ್ಧಿಜೀವಿಗಳ ಅಭಿಪ್ರಾಯ ಸಕಾ೯ರ ಗಂಭೀರ ಚಿಂತನೆ ನಡೆಸಿ ಹಳ್ಳಿ ಗ್ರಾಮಕ್ಕೆ ಹರಳಯ್ಯನ ಹಳ್ಳಿ ಎಂದು ಮರುನಾಮಕರಣ ಮಾಡುವಲ್ಲಿ ಆಸಕ್ತಿ ವಹಿಸುವುದೇ ಎಂದು ಕಾದು ನೋಡಬೇಕಾಗಿದೆ.
 ವೇದಿಕೆಯಲ್ಲಿ ಸಾಹಿತಿ ಚಿಂತಕ ರಂಜಾನ ದಗಾ೯, ತಡೋಳಾ ಶ್ರೀಗಳು ಸೇರಿದಂತೆ ಮತ್ತಿತರೆ ಗಣ್ಯರಿದ್ದರು   

ವೀರಣ್ಣ ಮಂಠಾಳಕರ್ 
ಬಸವಕಲ್ಯಾಣಃ ಸಾವ೯ದನಿಕ ವಲಯದಲ್ಲಿ ವ್ಯಕ್ತಿ ಉತ್ತಮವಾದ ಕಾಯ೯ ಮಾಡುವುದನ್ನು ರೂಢಿಸಿಕೊಳ್ಳಬೇಕು. ನಮ್ಮಲ್ಲಿ ಸಂಸ್ಕಾರ ಇಲ್ಲದ ಕಾರಣ ದೇಶದಲ್ಲಿ ಭಯೋತ್ಪಾದನೆಯಂಥ ಚಟುವಟಿಕೆಗಳಿಗೆ ಪ್ರಶ್ನಿಸುವಂಥ ಸಾಮಥ್ಯ೯ ಬೆಳೆದಿಲ್ಲ. ದೇಶದ ಕೆಲಸ, ಸಮಾಜ ಕಾಯ೯ ಮಾಜಬೇಕಾದರೆ ಅದಕ್ಕಾಗಿ ನಮ್ಮ ಪ್ರಾಣವನ್ನೆ ಮುಡುಪಾಗಿಡಬೇಕೆಂದು ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷ ಭೀಮಣ್ಣ ಖಂಡ್ರೆ ಅಭಿಪ್ರಾಯಪಟ್ಟರು.

ಅವರು ಬಸವಕಲ್ಯಾಣ ತಾಲೂಕಿನ ಹಳ್ಲಿ ಗ್ರಾಮದಲ್ಲಿ ಮಹಾಮಾನವತಾವಾದಿ ವಿಶ್ವಗುರು ಬಸವಣ್ಣನವರ ಮೂತಿ೯ ಅನಾವರಣ ಮಾಡಿ, ನಂತರ ಹಮ್ಮಿಕೊಂಡ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತ, ಒಂಬತ್ತುನೂರು ವ,೯ಗಲ ಹಿಂದೆ ಕೆಟ್ಟು ಹೋಗಿದ್ದ ಸಮಾಜದ ಪರಿಸ್ಥಿತಿಯನ್ನು ಸುಧಾರಣೆ ಮಾಡಲು ಪಣತೊಟ್ಟಿದ್ದ ಮಹಾನ ಸಾಧಕ, ಜಾತಿ ರಹಿತ ಪರಿಸರವನ್ನು ನಿಮಾ೯ಣ ಮಾಡುವ ಸಂಕಲ್ಪವನ್ನು ತೊಟ್ಟ ವಿಶ್ವಗುರು ಬಸವಣ್ಣನವರ ಮೂತಿ೯ ಅನಾವರಣಗೊಂಡಂತೆ ಅವರ ಮಾಗ೯ದಲ್ಲಿ ನಡೆಯುವಂತೆ ಜೀವನ ಪರಿವತಿ೯ಸಿಕೊಳ್ಳಬೇಕು.

ಜಾತಿಯತೆ ಮತ್ತು ಮತಭೇದವನ್ನು ಹೋಗಲಾಡಿಸಲು ನಾವೆಲ್ಲ ಇದು ಸಿದ್ಧರಾಹಬೇಕಾಗಿದೆ. ಯಾವ ಜಾತಿಗಾಗಿ ನಾಡು ದೇಶ ಹಾಥಾಗೋಯ್ತೋ ಮರುಜೀವ ಕೊಟ್ಟು ನಾವೇ ವ್ಯವಸ್ಥೆ ಹಾಳು ಮಾಡುತಿದ್ದೇವೆ. ಇಂತಹ  ಒಂದು ಮನೋಭಾವ ಬದಲಾಗಬೇಕಾಗಿದೆ. ಜಾತಿ ನಿಮೂ೯ಲನೆಗೆ ದೊಡ್ಡ ಸಂಘಟನೆ, ಯುವಶಕ್ತಿ ಒಂದುಗೂಡಿ ಜಾತಿಯತೆ ವಿರುದ್ಧ ಹೋರಾಜಬೇಕಾಗಿದೆ ಎಂದು ಸಲಹೆ ನೀಡಿದರು.

ಕಾಯ೯ಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಸಾಹಿತಿ, ಪತ್ರಕತ೯ ರಂಜಾನ ದಗಾ೯ ಮಾತನಾಡಿ, ಈ ಹಳ್ಳಿ ಎಂಬ ಗ್ರಾಮಕ್ಕೆ ಇನ್ನೂ ಮುಂದೆ ಬಸವನ ಹಳ್ಳಿ ಎಂದು ಪ್ರತಿಯೊಬ್ಬರೂ ಕರೆಯುವಂತಾಗಬೇಕು. ಯಾಕೆಂದರೆ ಬಸವಣ್ಣ ಕ್ರಾಂತಿಭೂಮಿಯಾಗಿ ಬಸವಣ್ಣನವರು ಆಳಿದ ನೆಲದಲ್ಲಿ ಇರುವ ಪುಟ್ಟ ಗ್ರಾಮ ಹಳ್ಳಿ ಗ್ರಾಮಕ್ಕೆ ಗ್ರಾಮಸ್ಥರು ಬಸವನ ಹಳ್ಳಿ ಎಂಬ ಕರೆಯುವದನ್ನು ರೂಢಿಸಿಕೊಳ್ಳಬೇಕು.

ನಾನು ಸಕಾ೯ರಕ್ಕೆ ಮನವಿಯನ್ನು ಸಲ್ಲಿಸಿ ಒಂದೇ ವಷ೯ದಲ್ಲಿ ಬಸವನ ಹಳ್ಳಿ ಮರನಾಮಕರಣಕ್ಕೆ ಹಸಿರು ನಿಶಾನೆ ಕೊಡಿಸುವಂತೆ ಎಲ್ಲಾ ಕಡತಗಳಲ್ಲಿ ಬರುವಂತೆ ಪ್ರಯತ್ಲಿಸುತ್ತೇನೆ ಎಂದು ಆಶ್ವಾಸನೆ ನೀಡಿದರು. ಮುಂದೊರೆದು ಮಾತನಾಡಿದ ಅವರು, ಬಸವಣ್ಣನವರ ಸುಂದರವಾದ ಮೂತಿ೯ ಸ್ಥಾಪಿಸಿದ ಕಲಾವಿದ ಮಾರುತಿ ಮಂಠಾಳ ಅವರ ಕಾಯ೯ ಶ್ಲಾಘನೀಯವಾಗಿದೆ. ಮೂತಿ೯ಯಲ್ಲಿ ಬಸವಣ್ಣನವರು  ಆಶಿವ೯ದಿಸುವಂತಿರುವ ಕೈ ಸನ್ನೆ ಅದು ಸಮಾಜ ರಕ್ಷಣೆಯ ಸಂಕೇತದಂತೆ ಸುದರವಾದ ಮೂತಿ೯ ರೂಪಿಸಿದ್ದಾರೆ ಎಂದು ಬಣ್ಣಿಸಿದರು.

ದಗಾ೯ ಅವರ ಭಾಷಣದ ನಂತರ ಪ್ರತಿಸ್ಪಂಧಿಸಿದ ಪತ್ರಕತ೯ರ ಸಂಘದ ಅಧ್ಯಕ್ಷ ಗುರುನಾಥ ಗಡ್ಡೆ ಹಳ್ಳಿ ಗ್ರಾಮದಲ್ಲಿ 800 ವಷ೯ಗಳ ಹಿಂದೆ ಬಸವಣ್ಣನವರ ಅನುಯಾಯಿ ಶರಣ ಹರಳಯ್ಯ ಹಾಗೂ ಕಲ್ಯಾಣಮ್ಮ ವಾಸವಾಗಿರುವ ಊರಾಗಿರುವುದರಿಂದ ಇದಕ್ಕೆ ಹ, ಎಂಬ ಅಕ್ಷರವನ್ನಷ್ಟೇ ಉಳಿದುಕೊಂಡು ಹಳ್ಳಿಯಾಗಿದೆ ಅದಕ್ಕಾಗಿ ಗ್ರಾಮಕ್ಕೆ ಹರಳಯ್ಯನ ಹಳ್ಳಿ ಎಂದು ಕರೆಯಲು ಸೂಕ್ತವೆನಿಸುತ್ತದೆ.

ಇದಕ್ಕೆ ಸಂಬಂಧಿಸಿದಂತೆ ಹಲವು ಕುರುಹುಗಳನ್ನು ಇದೇ ಗ್ರಾಮದಲ್ಲಿ ಹರಳಯ್ಯನವರು ವಾದವಾಗಿರುವ ಕುರಿತು ದಾಖಲೆಗಳು ಸಿಗುತ್ತವೆ. ಅವು ಈಗ ಅಳಿವಿನಂಚಿನಲ್ಲಿ ಇವೆ. ಇತಿಹಾಸಕಾರರು ಇಲ್ಲಿನ ಮೂಲವನ್ನು ಕೆದಕುವದರೊಂದಿಗೆ ಗ್ರಾಮದ ಮಹತ್ವನನ್ನು ಅರಿಯುವ ಪ್ರಯತ್ನ ಮಾಡಬೇಕಾಗಿದೆ. ಆ ನಿಚ್ಚಿನಲ್ಲಿ ಗ್ರಾಮಕ್ಕೆ ಹರಳಯ್ಯನ ಹಳ್ಳಿ ಎಂದೇ ಕರೆಯುವಂತಾಗಲು ರಂಜಾನ ದಗಾ೯ ಅವರೊಂದಿಗ ಸಮಾಲೋಚಿಸಿದರು. ಯಾವುದಕ್ಕೂ ವಿಷಯ ಚಚೆ೯ಗೊಳಪಡುವಂತಾಗಲಿ ಎಂದು ರಾಜೇಶ್ವರ ಶಿವಾಚಾಯ೯ರಲ್ಲಿ ಹಾಗೂ ದಗಾ೯ ಅವರಲ್ಲಿ ಗಡ್ಡೆ ಮನವಿ ಮಾಡಿದರು.

ಕಾಯ೯ಕ್ರಮದಲ್ಲಿ ಶ್ರೀಪತರಾವ ಪಾಟೀಲ, ಶಿವಶರಣಪ್ಪ ಪಾಟೀಲ ಹುಗ್ಗೆ, ದಯಾನಂದ ಖಳಾಳೆ, ಪಿಎಸ್ಐ ಗುಂಡೇರಾವ, ತಾ.ಪಂ ಅಧ್ಯಕ್ಷ ಗುರುಲಿಂಗಪ್ಪಾ ಸೈದಾಪುರೆ, ಸುಧಾಕರ ಮದನೆ, ಮುಂತಾದ ಗಣ್ಯರು ಇದ್ದರು. ನವಲಿಂಗ ಪಾಯೀಲ ನಿರೂಪಿಸಿದರೆ ನಾಗಶೆಟ್ಟಿ ಸ್ವಾಗತಿಸಿದರು.

ಕಾಮೆಂಟ್‌ಗಳಿಲ್ಲ: