ಗುರುವಾರ, ಜುಲೈ 14, 2011

ಬಸವಕಲ್ಯಾಣ ಪತ್ರಕತ೯ರ ಸಂಘದಿಂದ ಪತ್ರಿಕಾ ದಿನಾಚರಣೆ

 ಬಸವಕಲ್ಯಾಣ ತಾಲೂಕಾ ಕಾಯ೯ನಿರತ ಪತ್ರಕತ೯ರ ಸಂಘದ ಅಧ್ಯಕ್ಷ ಗುರುನಾಥ ಗಡ್ಡೆ ಅವರು ಕಾಯ೯ಕ್ರಮವನ್ನುದ್ದೇಶಿಸಿ ಮಾತನಾಡುತಿರುವುದು.

 ಪತ್ರಕತ೯ ದೇವು ಪತ್ತಾರ್
ಜುಲೈ, 6,2011 ರಂದು ಜರುಗಿದ ಪತ್ರಿಕಾ ದಿನಾಚರಣೆ ಸಮಾರಂಭದಲ್ಲಿ ಪ್ರಶಸ್ತಿ ಪುರಸ್ಕ್ರತರಾದ ದೇವು ಪತ್ತಾರ್ ಮಾತನಾಡುತಿರುವುದು.

ವೀರಣ್ಣ ಮಂಠಾಳಕರ್
-------------------
(ಕಾಯ೯ಕ್ರಮದ ಮುನ್ನದಲ್ಲಿ ಪ್ರಕಟವಾದ ವರದಿ.)
ಬಸವಕಲ್ಯಾಣಃ ಜೂ,01ಃ ಪ್ರತಿ ವಷ೯ದಂತೆ ಈ ವಷ೯ವೂ ತಾಲೂಕಿನ ಕನಾ೯ಟಕ ಕಾಯ೯ನಿರತ ಪತ್ರಕತ೯ರ ಸಂಘ ವತಿಯಿಂದ ಪತ್ರಿಕಾ ದಿನಾಚರಣೆ ನಡೆಯಲಿದ್ದು ಇದರ ಅಂಗವಾಗಿ ಪತ್ರಕತ೯ರಿಗೆ ನೀಡುವ ವಿವಿಧ ಪ್ರಕಾರದ ಪ್ರಶಸ್ತಿಗಳು ಹಾಗೂ ವಿಶೇಷ ಉಪನ್ಯಾಸ ಜುಲೈ 6 ರಂದು ನಗರದ ಆಯ೯ ಸಮಾಜ ಭವನದಲ್ಲಿ ಜರುಗಲಿದೆ ಎಂದು ಕಾಯ೯ನಿರತ ಪತ್ರಕತ೯ರ ಸಂಘದ ಅಧ್ಯಕ್ಷ ಗುರುನಾಥ ಗಡ್ಡೆ ಪ್ರಕಟಣೆಲ್ಲಿ ತಿಳಿಸಿದ್ದಾರೆ.

ಈ ಬಾರಿಯ ಶಂಕರ ಪ್ರಸಾದ ದುಬೆ ಪ್ರಶಸ್ತಿ ಬೀದರ ಜಿಲ್ಲಾ ಪ್ರಜಾವಾಣಿ ವರದಿಗಾರರಾದ ದೇವು ಪತ್ತಾರ ಅವರನ್ನು ನೀಡಲಾಗುತಿದ್ದು ನಗದು ಪುರಸ್ಕಾರ ಐದು ಸಾವಿರ ರು. ಮತ್ತು ಪ್ರಶಸ್ತಿ ಪತ್ರ ಒಳಗೊಂಡಿದ್ದು, ದುಬೆ ಪರಿವಾರದ ಪ್ರಾಯೋಜಕತ್ವದಲ್ಲಿ ಪ್ರಶಸ್ತಿ ನೀಡಲಾಗುತಿದೆ.

ಬೀದರ ಜಿಲ್ಲಾ ಉತ್ತಮ ಸಂಪಾದಕ ಪ್ರಶಸ್ತಿ ಕಾರಂಜಾ ಎಕ್ಸಪ್ರೆಸ್ ಸಂಪಾದಕ ತಿಪ್ಪಣ್ಣ ಭೋಸ್ಲೆ, ಬೀದರ ಸ್ಥಳೀಯ ಪತ್ರಿಕಾ ವರದಿಗಾರ ಪ್ರಶಸ್ತಿ ಅಶೋಕ ಕೋಟೆ ವರದಿಗಾರ ಸೋಮನಾಥ ಬಿರಾದಾರ, ಕನ್ನಡೇತರ ಪತ್ರಿಕೆ ಉತ್ತಮ ಪತ್ರಿಕಾ ಪ್ರಶಸ್ತಿ ಶಿಯಾಸತ್ ಪತ್ರಿಕೆಯ ವರದಿಗಾರ ಖೇಸರ್ ರೆಹಮಾನ, ಬಸವಕಲ್ಯಾಣ ತಾಲೂಕಿನ ಉತ್ತಮ ವರದಿಗಾರ ಪ್ರಶಸ್ತಿ ವಿಜಯಕನಾ೯ಟಕ ವರದಿಗಾರ ಮಾಥ೯ಂಡ ಜೋಶಿ, ಇವರುಗಳಿಗೆ ನಗದು ಪುರಸ್ಕಾರ ಹಾಗೂ ಪ್ರಶಸ್ತಿ ಪತ್ರ ಒಳಗೊಂಡ ಸ್ಮರಣಿಗೆಗಳೊಂದಿಗೆ ಗೌರವಿಸಲಾಗುತಿದೆ ಎಂದು ತಿಳಿಸಿದ್ದಾರೆ.

ಮೇಲ್ಕಂಡ ಎಲ್ಲಾ ಐದು ಪ್ರಶಸ್ತಿಗಳನ್ನು ತಾಲೂಕಾ ಸಂಘದ ಸವ೯ ಸದಸ್ಯರ ಸವಾ೯ನುಮತದಿಂದ ಆಯ್ಕೆ ಮಾಡಲಾಗಿದ್ದು, ಜುಲೈ 6 ರಂದು ನಡೆಲಿರುವ ಪತ್ರಿಕಾ ದಿನಾಚರಣೆ ಮತ್ತು ಪತ್ರಕತ೯ರ ಕಾಯಾ೯ಗಾರ ವಿಶೇಷ ಉಪನ್ಯಾಸ ಸಂದಭ೯ದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಗುತ್ತದೆ ಎಂದು ಗುರುನಾಥ ಗಡ್ಡೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಭೆಯಲ್ಲಿ ಮಾಣಿಕ ಭುರೆ, ಮುಕುಂದ ನಿಂಬಾಳಕರ್, ರಾಜೇಂದ್ರ ಗೋಖಲೆ, ಮಲ್ಲಿಕಾಜು೯ನ ಬಂಡೆ, ಉದಯಕುಮಾರ ಮುಳೆ, ಪ್ರಭುಲಿಂಗಯ್ಯಾ ಟಂಕಸಾಲಿಮಠ, ಶಿವಕುಮಾರ ಮಠಪತಿ, ನೈಮೋದ್ದಿನ, ಕಲ್ಯಾಣರಾವ ಮದರಗಾಂವಕರ್, ಪ್ರಲ್ಹಾದ ಡಿ.ಕೆ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.


ಜುಲೈ, 6,2011 ರಂದು ಜರುಗಿದ ಪತ್ರಿಕಾ ದಿನಾಚರಣೆ ಸಮಾರಂಭದಲ್ಲಿ ಪ್ರಶಸ್ತಿ ಪುರಸ್ಕ್ರತರಾದ ದೇವು ಪತ್ತಾರ್ ಮಾತನಾಡುತಿರುವುದು. ಪತ್ರಕತ೯ ದೇವು ಪತ್ತಾರ್  ಬಸವಕಲ್ಯಾಣ ತಾಲೂಕಾ ಕಾಯ೯ನಿರತ ಪತ್ರಕತ೯ರ ಸಂಘದ ಅಧ್ಯಕ್ಷ ಗುರುನಾಥ ಗಡ್ಡೆ ಅವರು ಕಾಯ೯ಕ್ರಮವನ್ನುದ್ದೇಶಿಸಿ ಮಾತನಾಡುತಿರುವುದು. 


ಕಾಮೆಂಟ್‌ಗಳಿಲ್ಲ: