ಬುಧವಾರ, ಜುಲೈ 13, 2011

ಪತ್ರಿಕಾ ದಿನಾಚರಣೆ ಅಂಗವಾಗಿ

 ಪತ್ರಕತ೯ರಾದ ದೇವು ಪತ್ತಾರ್ ಅವರು ಶಂಕರ ಪ್ರಸಾದ ದುಬೆ ಪ್ರಶಸ್ತಿ ಸ್ವೀಕರಿಸಿ ಮಾತನಾಡುತಿರುವುದು.
 ಮುಚಳಂಬ ಪ್ರಣವಾನಂದ ಶ್ರೀಗಳು ಪತ್ರಿಕಾ ದಿನಾಚರಣೆ ಅಂಗವಾಗಿ ಮಾತನಾಡುತಿರುವುದು.
 ಪ್ರಶಸ್ತಿ ಪುರಸ್ಕ್ರತರು ಮತ್ತು ಅತಿಥಿಗಳು

ಕಾಯ೯ಕ್ರಮದಲ್ಲಿ ಶಾಸಕ ಬಸವರಾಜ ಪಾಟೀಲ ಅಟ್ಟೂರ್, ಈ ಸಂದಭ೯ದಲ್ಲಿ ಮುಚಳಂಬದ ಪ್ರಣವಾನಂದ ಸ್ವಾಮಿಗಳು, ಕ.ಕಾ.ಪ.ಸಂಘದ ಜಿಲ್ಲಾಧ್ಯಕ್ಷ ಮಾಥಪ್ಪ ಅಡಸಾರೆ, ನಗರ ಸಭೆ ಅಧ್ಯಕ್ಷೆ ಮಂಗಲಾಬಾಯಿ ಉದರೆ, ಆನಂದ ದೇವಪ್ಪ, ಸಿದ್ರಾಮಯ್ಯ ಸ್ವಾಮಿ, ದೇವು ಪತ್ತಾರ, ಮಾಳಪ್ಪ ಅಡಸಾರೆ, ಡಾ.ಗವಿಸಿದ್ಧಪ್ಪ ಪಾಟೀಲ, ಮಂಗಲಬಾಯಿ ಉದರೆ ಮುಂತಾದವರಿದ್ದರು.
----------------------------------------------------------------------------------------------------------------------------

ಬಸವಕಲ್ಯಾಣಃ ಜು.06ಃ ಪತ್ರಿಕಾ ರಂಗ ಎಂಬುದು ಪವಿತ್ರವಾದಂಥ ಕಾಯ೯ ಆಗಿರುವುದರಿಂದ ಪತ್ರಿಕೆಗಳ ಪಾವಿತ್ರ್ಯತೆ ಕಾಪಾಡಿಕೊಂಡು ಹೋಗುವಂಥ ಜವಾಬ್ದಾರಿ ಪತ್ರಕತ೯ರ ಮೇಲಿರುತ್ತದೆ. ಯಾವುದೇ ರಾಜಕೀಯ ವ್ಯಕ್ತಿಗಳ ಕಣ್ಣನ್ನು ತೆರೆಸುವ ಪತ್ರಿಕೆಗಳು ತಪ್ಪನ್ನು ಮಾಡಿದವರನ್ನು ಬಡಿದೆಚ್ಚರಿಸುವ ಕೆಲಸ ಮಾಡುತಿವೆ. ಇನ್ನಷ್ಟು ಪರಿಣಾಮಕಾರಿಯಾದ ವರದಿಗಳಿಂದ ಜನಸಾಮಾನ್ಯರ ಮನಸನ್ನು ಗೆಲ್ಲವಂತಾಗಬೇಕು ಎಂದು ಶಾಸಕ ಬಸವರಾಜ ಪಾಟೀಲ ಅಟ್ಟೂರ್ ಅವರು ಅಭಿಪ್ರಾಯಪಟ್ಟರು.

ನಗರದಲ್ಲಿ ತಾಲೂಕಾ ಕನಾ೯ಟಕ ಕಾಯ೯ನಿರತ ಪತ್ರಕತ೯ರ ಸಂಘ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಉಪನ್ಯಾಸ ಮತ್ತು ಪ್ರಶಸ್ತಿ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತ, ಪತ್ರಕತ೯ರು ತಮ್ಮ ಜೀವಭಯವನ್ನು ಬಿಟ್ಟು ವರದಿಗಳನ್ನು ಮಾಡುವಾಗ ಅನೇಕ ಎಡರುತೊಡರುಗಳನ್ನು ಎದುರಿಸಬೇಕಾಗುತ್ತದೆ. ತಪ್ಪು ಮಾಡಿದವರ ಕುರಿತು ಬರೆದ ವರದಿಯನ್ನು ತಿದ್ದಿಕೊಳ್ಳುವ ಪ್ರಯತ್ನ ತಪ್ಪಿತಸ್ಥರು ಮಾಡಬೇಕೆ ಹೊರತು ವರದಿ ಅಥವಾ ವರದಿಗಾರ ತಪ್ಪೆಂದು ಭಾವಿಸಲಾಗದು ಎಂದರು.

ಪತ್ರಕತ೯ರಿಗಾಗಯೆ ಸಕಾ೯ರ ಅನೇಕ ಸೌಲಭ್ಯಗಳನ್ನು ಒದಗಿಸಿಕೊಡಲು ಮುಂದಾಗಿದೆ. ಅವುಗಳನ್ನು ಪಡೆಯಲು ಅಹ೯ರಾದ ತಾಲೂಕಾ ಪತ್ರಕತ೯ರು ಪಿಂಚಣಿ ಯೋಜನೆ ಸೇರಿದಂತೆ ಮುಂತಾದ ಸೌಲಭ್ಯಗಳನ್ನು ಪಡೆಯಬೇಕು. ಅದಕ್ಕೆ ಬೇಕಾದ ಸಹಕಾರ ಒದಗಿಸುತ್ತೇನೆಂದರು.

ಶಂಕರ ಪ್ರಸಾದ ದುಬೆ ಪ್ರಶಸ್ತಿ ಸ್ವೀಕರಿಸಿ ಪತ್ರಕತ೯ ದೇವು ಪತ್ತಾರ ಮಾತನಾಡಿ, ಪತ್ರಕತ೯ರ ಶ್ರಮಕ್ಕೆ ಮನ್ನಣೆ ಸಿಕ್ಕಾಗ ಇನ್ನಷ್ಟು ಉತ್ತೇಜನ ಸಿಗುತ್ತದೆ. ಆದರೆ ಹಿರಿಯರೊಂದಿಗೆ ಕಿರಿಯ ಪತ್ರಕತ೯ರನ್ನು ಗುರುತಿಸಿ ಸನ್ಮಾನಿಸುವುದೆಂದರೆ ಇನ್ನಷ್ಟು ಉತ್ತಮವಾದ ಕಾಯ೯ ಪತ್ರಿಕಾರಂಗದಲ್ಲಿ ಮಾಡಲಿ ಎಂದಾಗಿರುತ್ತದೆ ಎಂಬುದು ಭಾವಿಸಿದ್ದೇನೆ. ಪತ್ರಿಕೋದ್ಯಮದಲ್ಲಿ ಇರುವವರೆಲ್ಲ ಸೋಮಾರಿಗಳು ಆಗಿರುತ್ತಾರೆ ಎಂಬ ಕಲ್ಪನೆ ಇತ್ತು. ಇದೀಗ ಬೀದರಗೆ ಬಂದಾಗ ನಿಜಕ್ಕೂ ಪತ್ರಕತ೯ನ ಜವಾಬ್ದಾರಿ ಮತ್ತು ಒತ್ತಡಗಳು ಎಷ್ಟಿರುತ್ತವೆಂಬುದು ಅರಿತುಕೊಂಡಿದ್ದೇನೆ. ನನ್ನನ್ನು ಗುರುತಿಸಿ ಸನ್ಮಾನಿಸಿರುವುದು ನನ್ನ ಕತ೯ವ್ಯದಲ್ಲಿರುವ ಜವಾಬ್ದಾರಿಗಳು ಇನ್ನಷ್ಟು ಹೆಚ್ಚಾಗಿವೆ ಎಂದರು.

ಜಿಲ್ಲಾ ಮಟ್ಟದ ಸಂಪಾದಕರಿಗೆ ನೀಡುವ ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡಿದ ತಿಪ್ಪಣ್ಣಾ ಭೋಸಲೆ ತಾಲೂಕಾ ಮಟ್ಟದಲ್ಲಿ ಅಚ್ಚುಕಟ್ಟಾದ ಸಮಾರಂಭವವನ್ನು ಮಾಡಿ ಸೇವೆ ಸಲ್ಲಿಸಿದವರನ್ನು ಗುರುತಿಸಿ ಪ್ರಶಸ್ತಿ ನೀಡುತಿರುವುದು ಇಂದಿನ ಅನೇಕ ಲಾಬಿಗಳ ನಡುವೆ ಪಡೆದುಕೊಳ್ಳುವ ಪ್ರಶಸ್ತಿಗಳಿಗಿಂತ ಪಾರದಶ೯ಕತೆ ಹೊಂದಿದೆ. ಪತ್ರಿಕೆ ನಡೆಸುವುದು ಸರಳವಾದುದ್ದಲ್ಲ. ಪತ್ರಕತ೯ನ ಜೀವನ ಬಹಳ ಕಷ್ಟಕರವಾಗಿದೆ.

ಪತ್ರಕತ೯ರು ತಮ್ಮ ಹೊಣೆಗಾರಿಕೆಯನ್ನು ಅಥೈ೯ಸಿಕೊಂಡು ಸಮಾಜದ ನಾನ ಬಗೆಯ ಜನರೊಂದಿಗೆ ಸ್ಪಂಧಿಸುವ ನಿಟ್ಟಿನಲ್ಲಿ ಉತ್ತಮ ವರದಿಗಳನ್ನು ನೀಡುವುದರ ಜೊತೆಗೆ ಸಮಾಜದ ಓರೆಕೋರೆಗಳನ್ನು ತಿದ್ದುವ ಕೆಲಸ ಮಾಡುತ್ತಾನೆ. ಕೇಳಿ ಪಡೆಯುವಂಥ ಪ್ರಶಸ್ತಿ ಸ್ವೀಕರಿಸದೇ ಗುರುತಿಸಿ ಕೊಡುವಂಥ ಪ್ರಶಸ್ತಿಗಳಿಗೆ ಮಾನ್ಯತೆ ಕೊಡಬೇಕು ಎಂದರು.

ಮುಖ್ಯ ಅತಿಥಿಗಳಾಗಿಕನಾ೯ಟಕ ಕಾಯ೯ನಿರತ ಪತ್ರಕತ೯ರ ಸಂಘ ಕೇಂದ್ರ ಸಮಿತಿ ಸದಸ್ಯ ಆನಂದ ದೇವಪ್ಪ ಮಾತನಾಡಿ, ರಾಜಕೀಯ ಪ್ರತಿನಿಧಿಗಳ ಕಾಯ೯ಕ್ರಮಗಳ ಉತ್ತಮವಾದ ವರದಿಗಳನ್ನು ಪತ್ರಕತ೯ರು ಮಾಡಿದಾಗ ಖುಷಿ ಪಡುವಂತೆ ಕೆಟ್ಟ ಕೆಲಸಗಳನ್ನು ಮಾಡಿರುವ ಬಗ್ಗೆ ಪತ್ರಕತ೯ರು ರಾಜಕೀಯ ವ್ಯಕ್ತಿಗಳ ಮತ್ತು ಅಧಿಕಾರಿಗಳ ವರದಿ ಮಾಡಿದಾಗ ಕೋಪ ಮಾಡಿಕೊಳ್ಳದೇ ಮಾಡಿರುವ ತಪ್ಪುಗಳನ್ನು ತಿದ್ದಿಕೊಳ್ಳಬೇಕು ಎಂದರು.

ಜಿಲ್ಲಾ ಮಟ್ಟದ ಕನ್ನಡೇತರ ಪತ್ರಕತ೯ ಪ್ರಶಸ್ತಿ ಕೈಸರ್ ರೆಹಮಾನ, ಜಿಲ್ಲಾ ಮಟ್ಟದ ಉತ್ತಮ ವರದಿಗಾರ ಪ್ರಶಸ್ತಿ ಸೋಮನಾಥ ಬಿರಾದಾರ, ತಾಲೂಕಾ ಮಟ್ಟದ ಉತ್ತಮ ವರದಿಗಾ ಪ್ರಶಸ್ತಿ ಮಾಥ೯ಂಡ ಜೋಶಿ ಅವರುಗಳು ಪ್ರಶಸ್ತಿ ಸ್ವೀಕರಿಸಿ ತಮ್ಮ ಅನುಭವಗಳನ್ನು ಹಂಚಿಕೊಂಡರು.

ಕಾಯ೯ಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾಳಪ್ಪ ಅಡಸಾರೆ ಮಾತನಾಡಿ, ಬೀದರ ಜಿಲ್ಲೆಯಲ್ಲಿ ಒಂದು ಕೋಟಿ ರು. ವೆಚ್ಚದಲ್ಲಿ ಪತ್ರಕತ೯ರ ಭವನ ನಿಮಿ೯ಸಲು ಈಗಾಗಲೆ ಮುಖ್ಯಮಂತ್ರಿ ಯಡಿಯೂರಪ್ಪನವರು ಅಡಿಗಲ್ಲು ಸಮಾರಂಭ ನೆರವೇರಿಸಿದ್ದಾರೆ. ಅದೇ ರೀತಿ ಬಸವಕಲ್ಯಾಣದಲ್ಲಿ ಶೀಘ್ರವೇ ಪತ್ರಕತ೯ರ ಭವನಕ್ಕೆ ಹಸಿರು ನಿಶಾನೆ ದೊರೆತಿದೆ. ಕಾ೯ರದಿಂದ ಪತ್ರಕತ೯ರಿಗಾಗಿ ಪ್ರತ್ಯೇಕ ನಿವೇಶನಗಳು ಇಲ್ಲಿಯ ಸ್ಥಳೀಯ ಶಾಸಕರು ಮಾಡಿಸಿ ಕೊಡಬೇಕು ಎಂದರು.

ಮುಚಳಂಬ ಪ್ರಣವಾನಂದ ಸ್ವಾಮಿಗಳು ಅಶಿವ೯ಚನ ನೀಡಿ, ಸಮಾಜದ ಕಣ್ಣನ್ನು ತೆರೆಸುವ ಶಕ್ತಿ ಪತ್ರಿಕೆಗಳಿಗಿದೆ. ಅದರ ಹಿಂದಿನ ಶಕ್ತಿಯಾಗಿ ಪತ್ರಕತ೯ರು ನಿವ೯ಹಿಸುತಿದ್ದಾರೆ. ಅವರಿಗೆ ಯ3ವುದೇ ರೀತಿಯ ಆದಾಯವಲ್ಲದಿದ್ದರೂ ಸಮಾಜದ ಪರಿವತ೯ನೆಗೆ ಪಣತೊಟ್ಟು ತ್ಯಾಗ ಮನೋಭಾವನೆಯಿಂದ ನಿಸ್ವಾಥ೯ ಸೇವೆ ಮಾಡುವವರಾಗಿರುತ್ತಾರೆ. ಅವರ ಕಷ್ಟಗಳಿಗೆ ಸಮಾಜದವರೆಲ್ಲ ಸಹಕರಿಸುತ್ತ ಉತ್ತಮ ಸಮಾಜ ನಿಮಾ೯ಣಕ್ಕೆ ಕೈಜೋಡಿಸಬೇಕು ಎಂದು ನುಡಿದರು.

ಇದೇ ಸಂದಭ೯ದಲ್ಲಿ ಹಿರಿಯ ಪತ್ರಕತ೯ ಧನರಾಜ ಫುಲಾರೆ ಅವರನ್ನು ಗೌರವ ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಡಾ. ಗವಿಸಿದ್ಧಪ್ಪ ಪಾಟೀಲ, ಮಾಥ೯ಂಡ ಜೋಶಿ ಇದ್ದರು. ಗುರುನಾಥ ಗಡ್ಡೆ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಚನ್ನಬಸವ ಬಿರಾದಾರ ನಿರೂಪಿಸಿದರೆ ಭೀಮಾಶಕಂರ ಬಿರಾದಾರ ಸಂದಿಸಿದರು. ಕಾಯ೯ನಿರತ ಪತ್ರಕತ೯ರ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಕಾಮೆಂಟ್‌ಗಳಿಲ್ಲ: