ಮಂಗಳವಾರ, ಜುಲೈ 26, 2011

ಸಕಾ೯ರದ ಮಹತ್ವದ ಯೋಜನೆಗಳಲ್ಲಿ ಸೈಕಲ್ ವಿತರಣೆ ಮಾಡಿರುವುದ ಸೂಕ್ತ, ಆದರೆ ನಿಲ್ಲಿಸಲು ಸ್ಥವಿಲ್ಲದೇ ಶಾಲೆಯ ಮುಂಭಾಗ ಮುಖ್ಯರಸ್ತೆಯ ಮುಂದೆ ನಿಲ್ಲಿಸಿರುವುದರಿಂದ ಪ್ರಯಾಣಿಕರಗಾಗುತಿರುವ ತೊಂದರೆ.


ಶಾಲೆಗಳಲ್ಲಿ ಸೈಕಲ್ ನಿಲ್ಲಿಸಲು ಜಾಗವಿಲ್ಲದೇ ಮುಖ್ಯರಸ್ತೆಗಳಲ್ಲಿ ನಿಲ್ಲಿಸುವ ಅವಾಂತರಃ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹರಿಸಲಿ ಇತ್ತ-ಚಿತ್ತ!
ವೀರಣ್ಣ ಮಂಠಾಳಕರ್, ಬಸವಕಲ್ಯಾಣ

ಬಸವಕಲ್ಯಾಣಃ ಜು,25 ಸಕಾ೯ರ ಪ್ರೌಢ ಶಾಲಾ ವಿದ್ಯಾಥಿ೯-ವಿದ್ಯಾಥಿ೯ನಿಯರಿಗೆ ನೀಡುತಿರುವ ಸೈಕಲ್ ವಿತರಣೆ ಉತ್ತಮವಾದ ಬೋಜನೆಗಳಲ್ಲಿ ಒಂದಾಗಿದೆ ಎಂಬ ಖುಷಿಯ ವಿಚಾರ ಸಂಗತಿ ಒಂದೆಡೆಯಾದರೆ ಕೆಲವೊಂದು ಶಾಲೆಗಳಲ್ಲಿ ಸೈಕಲ್ ನಿಲ್ಲಿಸಲು ಜಾಗವಿಲ್ಲದೇ ಸಾವ೯ಜನಿಕ ಮುಖ್ಯ ರಸ್ತೆಗಳಲ್ಲಿ ನಿಲ್ಲಿಸುವಂಥ ಪರಿಸ್ಥಿತಿ. ಇದರಿಂದ ವಾಹನಗಳ ಸವಾರರಿಗೂ ಅಡಚಣೆ, ಪಾದಚಾರಿಗಳಿಗೂ ಕಿರಿಕಿರಿಯಾಗಿ ನಿತ್ಯವೂ ಕಿಕ್ಕಿರಿದು ನಿಲ್ಲುವ ಸೈಕಲ್ ಗಳ ಮಧ್ಯೆಯಿಂದ ದಾಟಿ ಹೋಗುವುದೇ ಹರಸಾಹಸದ ಕೆಲಸವಾಗಿದೆ.

ಇಂತಹ ಅವಾಂತರಕ್ಕೆ ಎದುರಾಗಿದ್ದು ಬೇರೆಲ್ಲೂ ಅಲ್ಲ ಬಸವಕಲ್ಯಾಣ ನಗರದ ಪ್ರಮುಖವಾದ ಅಂಬೇಡ್ಕರ್ ವ್ರತ್ತದಲ್ಲಿ. ಇಲ್ಲಿಂದಲೇ ಮುಖ್ಯ ಬಸ್ ನಿಲ್ದಾಣಕ್ಕೆ ಹೋಗುವ ಮೇನೆ ರೋಡ್ಗೆ ಅಂಟಿಕೂಂಡಿರುವ ಸಕಾ೯ರಿ ನೀಲಾಂಬಿಕಾ ಬಾಲಕಿಯರ ಪದವಿಪೂವ೯ ಕಾಲೇಜ್ ಮತ್ತು ಪ್ರೌಢಶಾಲೆಯ ಎದುರಿಗೆ ಕಂಡು ಬರುತದೆ. ಸೈಕಲ್...ಸೈಕಲ್....ಬೈಸಿಕಲ್ ಗಳು ಇದೇನು ಸೈಕಲ್ ಮಾರಾಟದ ಅಂಗಡಿಯೋ ಎಂಬಂತೆ ಒಂದು ಕ್ಷಣ ಹೊಸಬರಿಗನಿಸದೇ ಇರಲಾರದು.

ಇಲ್ಲಿಂದ ಪ್ರಯಾಣಿಸುವ ವಾಹನಗಳಿಗೂ ಪಾದಚಾರಿಗಳಿಗೂ ಮುಖ್ಯ ರಸ್ತೆಗೆ ಅಂಟಿಕೊಂಡು ಸಾಲಾಗಿ ನಿಂತಿರುವ ವಿದ್ಯಾಥಿ೯ನಿಯರ ಸೈಕಲ್ ಗಳಿಗೆ ಪ್ರತ್ಯೇಕವಾದ ಸ್ಟ್ಯಾಂಡ್ ಇಲ್ಲದೇ ಪರಿತಪಿಸುವಂತಾಗಿದೆ. ಅದಕ್ಕಾಗಿ ಸಾವ೯ಜನಿಕ ಸ್ಥಳದಲ್ಲಿ ನಿಲ್ಲಿಸುವಂಥ ಅನಿವಾಯ೯ ಆಗಿರುವುದರಿಂದ ಅವಾಂತರವನ್ನು ಸ್ರಷ್ಟಿಸಿ ಅಪಘಾತಗಳಿಗೆ ಎಡೆಮಾಡಿಕೊಡುವಂತಿದೆ. ಇಷ್ಟಕ್ಕೂ ಸಂಬಂಧಪಟ್ಟ ಶಿಕ್ಷಕ ವ್ರಂದವಾಗಲಿ, ಶಿಕ್ಷಣ ಇಲಾಖೆಯ ಕ್ಷೇತ್ರ ಶಿಕ್ಷಣಾಧಿಕಾರಿಗಳು ಇತ್ತ ಗಮನ ಹರಿಸದೇ ಇರುವುದು ಎಂಥ ದುರಂತವಾಗಿದೆ ಎಂದು ನಿತ್ಯವೂ ಓಡಾಡುವವರ ಗೋಳಾಗಿದೆ.

ಇಂಥದೇ ಸಮಸ್ಯೆಗಳು ಹಲವು ಶಾಲೆಗಳಲ್ಲಿದ್ದರೂ ಬಸವಕಲ್ಯಾಣ ನಗರದ ಮುಖ್ಯ ರಸ್ತೆಯಲ್ಲೇ ಸೈಕಲ್ ಗಳಿಗೊಂದು ತಾಣವನ್ನಾಗಿಸುವ ಸಂದಿಗ್ಧತೆ ಎದುರಾಗಿದೆ. ಇಲ್ಲಿಂದ ನಿತ್ಯವೂ ಓಡಾಡುವ ಜನರಿಗೆ ತೀರಾ ಕಿರಿಕಿರಿ ಉಂಟು ಮಾಡುತಿದೆ. ಅಷ್ಟೇ ಅಲ್ಲದೇ ಇದೇ ಶಾಲೆಯ ಮುಂಭಾಗದಲ್ಲಿ ಬಸ್ ಗಳಿಗಾಗಿ ಕಾದು ನಿಲ್ಲುವ ಪ್ರಯಾಣಿಕರಿಗೆ ಅಡ್ಡಡ್ಡವಾಗಿ ನಿಂತ ಸೈಕಲ್ ಗಳು ಅವಸರದ ಕಾಲುಗಳಿಗೆ ಎಡತಾಕುತವೆ.

ಶಾಲೆಗೆ ಕಂಪೌಂಡ್ ಗೋಡೆ ಮತ್ತು ಗೇಟ್ ಇರುವುದರಿಂದ ಒಳಗೆ ನುಗ್ಗಿಸಲು ಆಗದೇ ಹೊರಗಡೆಯೇ ನಿಲ್ಲಿಸುವಂಥ ಪರಿಸ್ಥಿತಿ. ಎಲ್ಲರನ್ನು ಮುಜುಗರಗೊಳಪಡಿಸು ಸ್ಥಿತಿಯಲ್ಲಿರುವ ಜನರು ಶಾಲೆಯ ಮುಖ್ಯೋಪಾದ್ಯಯರಲ್ಲಿ ದೂರಿದಿದೆ. ಅದಕ್ಕೆ ಅವರು ನೀಡು ಉತ್ತರ, ಏನ್ ಮಾಡೇದ್ರಿ ಶಾಲೆ ಒಳಗಡೆ ಜಾಗವಿಲ್ಲ. ಇಕ್ಕಟ್ಟಿನ ಪರಿಸ್ಥಿತಿಯಲ್ಲಿ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗುತದೆಂದು ಹೊರಗಡೆ ನಿಲ್ಲಿಸಬೇಕಾಗುತದೆ. ಅದಕ್ಕೆ ಪಯಾ೯ಯ ವ್ಯವಸ್ಥೆ ಮಾಡುವವರಿಗೆ ಚಿಂತೆವಿಲ್ಲ ನಾವೇನು ಮಾಡೋದು ಎಂದು ಜಾರಿಕೊಳ್ಳುತ್ತಾರೆ.

ಯಾವುದಕ್ಕೂ ಮುಖ್ಯ ರಸ್ತೆಯಲ್ಲಿ ವಾಹನಗಳಿಗೂ, ಪಾದಚಾರಿಗಳಿಗೂ, ನಿತಯವೂ ಪ್ರಯಾಣಿಸುವ ಪ್ರಯಾಣಿಕರಿಗೂ ತೀರಾ ಅಡ್ಡಿಯುಂಟು ಮಾಡುತಿರುವ ಶಾಲೆ ಮುಂಭಾಗದಲ್ಲಿ ನಿಲ್ಲಿಸಿರುವ ಸೈಕಲ್ ಗಳಿಗೆ ಪಯಾ೯ಯ ವ್ಯವಸ್ಥೆಯನ್ನು ಮಾಡಿದರೆ ಉತ್ತಮವಾಗುತ್ತದೆ. ಇಲ್ಲವಾದರೆ ಕಿಕ್ಕಿರಿದು ಓಡಾಡುವ ವಾಹನಗಳಿಂದ ಸಾವ೯ಜನಿಕರಿಗೂ ತೊಂದರೆ, ಶಾಲಾ ಮಕ್ಕಳಿಗೂ ತೊಂದರೆಯುಂಟಾಗಿ ಪರಿಸ್ಥಿತಿ ವಿಕೋಪಕ್ಕೆ ತಿರುಗುವಂಥ ವಾತಾವರಣ ಇಲ್ಲಿ ನಿಮಾ೯ವಾಗಿದೆ.

ಸಂಬಂಧಪಟ್ಟ ಶಿಕ್ಷಣ ಇಲಾಖೆಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಸಕಾ೯ರಿ ನೀಲಾಂಬಿಕಾ ಬಾಲಕೀಯರ ಪ್ರೌಢ ಶಾಲೆಯಿಂದ ಕೆಲವೇ ಅಂತರದಲ್ಲಿದ್ದರೂ ನಿಲ೯ಕ್ಷಿಸಲಾಗುತಿದೆ. ಜನಪ್ರತಿನಿಧಿಗಳ ನಿಲ೯ಕ್ಷತನವೂ ಇಂತಹ ಸಮಸ್ಯೆಗಳಿಗೆ ಕಾರಣವಾಗುತಿದೆ ಎನ್ನಲಾಗುತಿದೆ. ಒಟ್ಟಿನಲ್ಲಿ ವಿದ್ಯಾಥಿ೯ನಿಯರ ಸೈಕಲ್್ ಗಳಿಗೆ ನಿಲ್ಲಲು ಪಯಾ೯ಯ ವ್ಯವಸ್ಥೆ ಮತ್ತು ಸಾವ೯ಜನಿಕರಿಗೂ ಮತ್ತು ವಾಹನಗಳಿಗೂ ಆಗುತಿರುವ ತೊಂದರೆ ನೀಗಿಸಲು ಇಲಾಖೆ ಮುಂದಾಗಬಹುದೇ ಎಂದು ಕಾದು ನೋಡಬೇಕಷ್ಟೆ

ಕಾಮೆಂಟ್‌ಗಳಿಲ್ಲ: