ಶುಕ್ರವಾರ, ಜನವರಿ 4, 2013

ನೈತಿಕತೆ ಇಲ್ಲದ ರಾಜಕಾರಣಃ ಖೂಬಾ ಆರೋಪ

ಮಾಜಿ ಶಾಸಕ ಹಾಗೂ ಜೆಡಿಎಸ್ ರಾಜ್ಯ ಯುವ ಕಾಯಾ೯ಧ್ಯಕ್ಷ ಮಲ್ಲಿಕಾಜು೯ನ ಖೂಬಾ
ನೈತಿಕತೆ ಇಲ್ಲದ ರಾಜಕಾರಣಃ ಜ. 17ರಿಂದ ಜೆಡಿಎಸ್್ ಪಕ್ಷದಲ್ಲಿ ಸೇಪ೯ಡೆಃ ಪದಾಧಿಕಾರಿಗಳ ನೇಮಕಃ ಖೂಬಾ ಸ್ಪಷ್ಟನೆ
------------------------------------------
ಬಸವಕಲ್ಯಾಣ, ಜ.3,2013

ತಾಲೂಕಿನ ಸಾವಿರಾರು ಮತದಾರರ ಅಭಿಪ್ರಾಯವಾಗಲಿ, ಪ್ರಾಮಾಣಿಕ ಬಿಜೆಪಿ ಕಾಯ೯ಕತ೯ರ ವಿರುದ್ಧ ರಾಜಿನಾಮೆ ನೀಡಿ ಕೆ
ಜೆಪಿ ಸೇಪ೯ಡೆಗೂಂಡಿರುವ ಶಾಸಕ ಬಸವರಾಜ ಪಾಟೀಲ ಅಟ್ಟೂರ್್ ಅವರು ನೈತಿಕತೆ ಇಲ್ಲದ ರಾಜಕಾರಣ ಮಾಡುತಿದ್ದಾರೆ ಎಂದು ಮಾಜಿ ಶಾಸಕ ಹಾಗೂ ಜೆಡಿಎಸ್್ ರಾಜ್ಯ ಯುವ ಕಾಯಾ೯ಧ್ಯಕ್ಷ ಮಲ್ಲಿಕಾಜು೯ನ ಖೂಬಾ ಆರೋಪಿಸಿದ್ದಾರೆ.

ಈ ಕುರಿತು ಪ್ರಕಟಣೆ ಹೊರಡಿಸಿರುವ ಅವರು, ಕಳೆದ 2008ರಲ್ಲಿನ ವಿಧಾನಸಭಾ ಚುನಾವಣೆಯಲ್ಲಿ ಸಾವಿರಾರು ಮತಗಳ ಅಂತರದಲ್ಲಿ ಬಿಜೆಪಿಯಿಂದ ಗೆಲುವು ಸಾಧಿಸಿ, ಇನ್ನೂ ಸೇವಾವಧಿ ಇರುವ ಮುನ್ನವೇ ದುಡ್ಡಿನಾಸೆ ಮತ್ತು ಅಧಿಕಾರಕ್ಕಾಗಿ ಮತದಾರರ ಭಾವನೆಗಳಿಗೆ ಕೆಣಕಿದ್ದಾರೆ ಎಂದು ಖೂಬಾ ಟೀಕಿಸಿದ್ದಾರೆ.

ಮತದಾರರು ಅವರ ಮೇಲಿಟ್ಟಿರುವ ವಿಶ್ವಾಸಕ್ಕೆ ದ್ರೋಹ ಬಗೆದು, ಅಟ್ಟೂರ್್ ಅವರು ಇತ್ತೀಚಿಗೆ ಬಂಗ್ಲಾದ ಮಹಾದ್ವಾರದಲ್ಲಿನ ವಿಶ್ವಗುರು ಬಸವಣ್ಣನವರ ಮೂತಿ೯ ಅನಾವರಣ ಯಾರಿಗೂ ಗೊತ್ತಿಲ್ಲದಂತೆ, ಆಹ್ವಾನ ಪತ್ರಿಕೆಯೂ ಕಳುಹಿಸದೇ, ಕ್ಷೇತ್ರದ ಪ್ರತಿನಿಧಿಗಳಿಗೂ ಜಿಲ್ಲಾ ಸಂಸದ ಹಾಗೂ ಎಲ್ಲಾ ಶರಣರ ಭಕ್ತರಿಗೆ ಮಾಹಿತಿಯಿಲ್ಲದೇ ಉದ್ಘಾಟಿಸಿರುವುದಕ್ಕೆ ಬೇಸರಿಸಿದ್ದಾರೆ.

ಶಾಸಕ ಸ್ಥಾನಕ್ಕೆ ಅಟ್ಟೂರ್್ ರಾಜಿನಾಮೆ ನೀಡಿದ್ದಕ್ಕೆ ಸ್ವಾಗತಿಸಿದ ಖೂಬಾರವರು, ಬಿಜೆಪಿ ಸಕಾ೯ರದಲ್ಲಿದ್ದಾಗ ಬಸವಕಲ್ಯಾಣ ಅಭಿವೖದ್ಧಿಗೆ ಬಿ.ಎಸ್್.ಯಡಿಯೂರಪ್ಪನವರು ನೀಡಿದ 100 ಕೋಟಿ ರುಪಾಯಿ ಭರವಸೆ ಎಲ್ಲಿ ಹೋಯಿತು. ಮಾತಿನಂತೆ ನಡೆದುಕೊಳ್ಳದೇ ಕೇವಲ 16 ಕೋಟಿ ನೀಡಿದ್ದು ಸರಿಯೇ ಎಂದು ಪ್ರಶ್ನಿಸಿದ್ದಾರೆ.

ಅಧಿಕಾರದಲ್ಲಿದ್ದಾಗ ಬಸವಣ್ಣನವರು ನೆನಪಾಗುವುದಿಲ್ಲ. ಅಧಿಕಾರ ಕಳಚಿಕೊಂಡಾದ ಮೇಲೆ ವಿಶ್ವಗುರು ಬಸವಣ್ಣನವರು ನೆನಪಾಗುವುದಲ್ಲದೇ, ಇಲ್ಲಿಂದಲೇ ಪಾದಯಾತ್ರೆ, ಪ್ರಚಾರ ಸಭೆ ಹಮ್ಮಿಕೊಳ್ಳುವುದು ಬಿಎಸ್್ಆರ್್, ಕೆಜೆಪಿ ಸೇರಿದಂತೆ ಕಾಂಗ್ರೇಸ್್ನವರು ಕೂಡ ಇಲ್ಲಿಂದಲೇ ಪ್ರಚಾರ ಕೈಗೊಳ್ಳಲು ನಿಧ೯ರಿಸಿರುವುದು ಹಾಸ್ಯಾಸ್ಪದವಾಗಿದೆ ಎಂದು ತಿಳಿಸಿದ್ದಾರೆ.

ಕ್ಷೇತ್ರದ 41 ಹಳ್ಳಿಗಳಿಗೆ ಭೇಟಿ ನೀಡದೇ ಜನರ ಸಮಸ್ಯೆಗಳಿಗೆ ಸ್ಪಂಧಿಸದೇ ಕಾಲಹರಣದ ರಾಜಕಾರಣ ಮಾಡುತಿದ್ದಾರೆ. ಅಪೂಣ೯ವಾಗುಳಿದ ತಾಲೂಕಿನ ಅಭಿವೖದ್ಧಿಯ ಹಲವು ಕಾಮಗಾರಿಗಳ ಕಡೆ ಗಮನ ಹರಿಸದೇ ಚುನಾವಣೆಯ ಕನಸು ಕಾಣುತ್ತಿರುವವರಿಗೆ ಜನರೇ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಎಚ್ಚರಿಸಿದ್ದಾರೆ.

ಬಿಜೆಪಿ ಸಕಾ೯ರವಿದ್ದಾಗ ಮಾಜಿ ಶಾಸಕ ಎಂ.ಜಿ.ಮುಳೆ ಅದೇ ಪಕ್ಷದಲ್ಲಿದ್ದಾಗ ಮುಸ್ಲಿಂರ ಬಗ್ಗೆ ಕಿಂಚಿತ್ತೂ ಕಾಳಜಿ ಹೊಂದಿರಲಿಲ್ಲ. ಬಿಎಸ್್ಆರ್್ ಸೇರಿದ ಕೂಡಲೇ ಮುಸ್ಲಿಂರ ಬಗ್ಗೆ ತೋರುತ್ತಿರುವ ಆಸಕ್ತಿ ಮತ್ತು ಆಟೋ ನಗರದಲ್ಲಿ ಶ್ರೀರಾಮುಲು ಕೊಟ್ಟಿರುವ ಹಣದಲ್ಲಿ ರಸ್ತೆ ನಿಮಾ೯ಣ ಕೈಗೊಂಡಿರುವುದು ಜನರ ಕಣ್ಣೀರೊರೆಸುವ ತಂತ್ರವಾಗಿದೆ ಎಂದು ದೂರಿದ್ದಾರೆ.

ತಾಲೂಕಿನ ಮುಂತಾದ ಹಳ್ಳಿಗಳಲ್ಲಿನ ರಸ್ತೆ, ಚಂರಂಡಿಗಳ ದುರಸ್ಥಿ ಮಾಡಿಕೊಳ್ಳಲಿಚ್ಛಿಸುವರು ಮುಳೆಯವರ ಬಳಿ ಹೋಗಲಿ, ಆಗ ಸಕಾ೯ರದಿಂದ ಹಣ ತಂದು ಕೆಲಸ ಮಾಡಲು ಸಮಯ ಇರಲಿಲ್ಲ. ಇದೀಗ ಚುನಾವಣೆ ಹತ್ತಿರವಾಗುತಿದ್ದಂತೆ ಬಿಎಸ್್ಆರ್್ ಹಣದಲ್ಲಿ ಕಾಮಗಾರಿ ನಡೆಸುತ್ತಿದ್ದಾರೆ. ಗ್ರಾಮಸ್ಥರು ಇದರ ಸದುಪಯೋಗ ಮಾಡಿಕೊಳ್ಳಲಿ ಎಂದು ಸೂಚಿಸಿದ್ದಾರೆ.

ತಾಲೂಕಾ ಮತದಾರರು ಅಭಿವೖದ್ಧಿ ಚಿಂತನೆಯುಳ್ಳ ಜನನಾಯಕರ ಹುಡುಕಾಟದಲ್ಲಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಸೂಕ್ತ ಅಭ್ಯಥಿ೯ಯನ್ನೇ ಆಯ್ಕೆ ಮಾಡಲಿದ್ದು, ಅದರ ಬಗ್ಗೆ ಮಾಜಿಗಳು ತಲೆ ಕೆಡಿಸಿಕೊಳ್ಳಬೇಕಿಲ್ಲ. 7 ತಿಂಗಳಿನಿಂದ ಮಾತ್ರ ಬಸವಕಲ್ಯಾಣ ಕ್ಷೇತ್ರ ಇದೆ ಎಂಬುದನ್ನು ಕಾಂಗ್ರೆಸ್್, ಕೆಜೆಪಿ, ಬಿಎಸ್್ಆರ್್ನವರಿಗೆ ಅರಿವಾಗುತ್ತಿದೆಯೆ ಎಂದು ವ್ಯಂಗ್ಯವಾಡಿದ್ದಾರೆ.

ಜೆಡಿಎಸ್್ ಪಕ್ಷದಿಂದ ತಾಲೂಕಿನಲ್ಲಿ ಈಗಾಗಲೇ 28 ಸಾವಿರ ಸದಸ್ಯತ್ವ ಮಾಡಿದ್ದೇವೆ. ಇದೇ ಜ.17ರಿಂದ ಜೆಡಿಎಸ್್ ಪಕ್ಷಕ್ಕೆ ಸೇಪ೯ಡೆ ಕಾಯ೯ಕ್ರಮ ಮತ್ತು ಪದಾಧಿಕಾರಿಗಳ ನೇಮಕ ನಡೆಸಲಾಗುತ್ತಿದೆ. ಜೆಡಿಎಸ್್, ಬಿಎಸ್್ಆರ್್, ಕೆಜೆಪಿ ಪ್ರಾದೇಶಿಕ ಪಕ್ಷವಾದರೂ ನಾವು ಈಗಾಗಲೇ 4 ಬಾರಿ ಚುನಾವಣೆ ಎದುರಿಸಿದ್ದೇವೆ ಎಂದು ತಿಳಿಸಿದ ಅವರು, ನಮ್ಮ ಸತ್ವ ಪರೀಕ್ಷೆ ಕಾಲ ಮುಗಿದಿದೆ. ಮತದಾರರು ನೀಡುವ ನಿಣ೯ಯದಂತೆ ಚುನಾವಣೆಯೆಂಬ ಸತ್ವ ಪರೀಕ್ಷೆಯಲ್ಲಿ ಉಳಿದ ಪ್ರಾದೇಶಿಕ ಪಕ್ಷದವರು ಗೆದ್ದು ಬರಲಿ ನೋಡೋಣ ಎಂದು ಸವಾಲೆಸೆದಿದ್ದಾರೆ.

ಕಾಮೆಂಟ್‌ಗಳಿಲ್ಲ: