ಬುಧವಾರ, ಏಪ್ರಿಲ್ 17, 2013

ಸಮಾನತೆ ತರಲು ಪ್ರಯತ್ನಿಸಿದ ಏಕೈಕ ನಾಡು ಕಲ್ಯಾಣವಾಗಿದೆ:ಬಿ.ನಾರಾಯಣ

           ಕಾಂಗ್ರೆಸ್್ ಪಕ್ಷದ ಅಭ್ಯಥಿ೯ ಹಾಗೂ ಹಿರಿಯ
                   ಮುಖಂಡ ಬಿ.ನಾರಾಯಣ ಅ


ಸಾಮಾಜಿಕ ನ್ಯಾಯಕ್ಕಾಗಿ 12ನೇ ಶತಮಾನದಲ್ಲಿ ನಡೆದ ಶರಣರ ಕ್ರಾಂತಿ ಭೂಮಿ ಬಸವಕಲ್ಯಾಣ
ಕ್ಷೇತ್ರದಿಂದ ವಿಧಾನಸಭೆ ಚುನಾವಣೆಗೆ ಸ್ಪಧಿ೯ಸಲು ಸಿಕ್ಕಿರುವ ಅವಕಾಶ ಅದು ನನ್ನ
ಸೌಭಾಗ್ಯವಾಗಿದೆ. ಜನರ ಸೇವೆಗಾಗಿ ನಾನು ಸದಾ ಕಂಕಣಬದ್ಧನಾಗಿದ್ದೇನೆ ಎಂದು
ಕಾಂಗ್ರೆಸ್್ ಅಭ್ಯಥಿ೯ ಬಿ.ನಾರಾಯಣ ಅಭಿಪ್ರಾಯಪಟ್ಟಿದ್ದಾರೆ.

ಬುಧುವಾರ ಅವರು ಕಾಂಗ್ರೆಸ್್ ಪಕ್ಷದಿಂದ ನಾಮ ಪತ್ರ ಸಲ್ಲಿಸಿದ ಬಳಿಕ
ಮಾತನಾಡಿ, ವಿಶ್ವಗುರು ಬಸವಣ್ಣನವರು ಸವ೯ಧಮ೯ ಸಮಾನತೆಗಾಗಿ
ಹೋರಾಡಿದ ಚಿತ್ರಣ ನನ್ನ ಕಣ್ಣೆದುರಿಗಿದೆ. ಬಡವ, ದಲಿತರ, ಶೋಷಿತರ, ಹಿಂದುಳಿದವರ
ಏಳ್ಗೆ ನನ್ನ ಗುರಿಯಾಗಿದೆ ಎಂದರು.

ಕೇಂದ್ರ ಸಕಾ೯ರದ ಸಾಧನೆ ಜನಸಾಮಾನ್ಯರು ಅರಿತುಕೊಂಡಿದ್ದಾರೆ. ಆ ನಿಟ್ಟಿನಲ್ಲಿ ಜನರ
ಆಶೋತ್ತರಗಳಿಗೆ ಸ್ಪಂಧಿಸುವ ಮನೋಭಾವ ಹೊಂದಿರುವ ನನಗೆ ಮತದಾರರು ಒಲಿದರೆ ಬಸವಕಲ್ಯಾಣ
ತಾಲೂಕಿನ ಸಮಗ್ರ ಅಭಿವೖದ್ಧಿ ಮತ್ತು ಸವ೯ಧಮ೯ದವರನ್ನು ಸಮಾನತೆಯಿಂದ ಕಾಣುವುದೇ ನನ್ನ
ಧ್ಯೇಯವಾಗಿದೆ ಎಂದು ಸ್ಪಷ್ಟಪಡಿಸಿದರು.

ಬಸವಣ್ಣನವರು ಅಂತಜಾ೯ತಿ ವಿವಾಹ, ಸಮಾನತೆ ತರಲು ಪ್ರಯತ್ನಿಸಿದ ಏಕೈಕ ನಾಡು
ಕಲ್ಯಾಣವಾಗಿದೆ. ಅಂತಹ ನಾಡಿನಿಂದ ಸ್ಪಧಿ೯ಸುವುದು ಪುಣ್ಯವೆಂದು ಭಾವಿಸಿದ್ದೇನೆ.
ಸಮಾಜದಲ್ಲಿ ತುಳಿತಕ್ಕೆ ಒಳಗಾದ ಜನರ ಬದುಕು ಸ್ವಾಭಿಮಾನದಿಂದ ಬದುಕುವಂಥ ವಾತಾವರಣ
ನಿಮಾ೯ಣಗೊಳ್ಳಬೇಕಾದ್ದು ಅವಶ್ಯವಾಗಿದೆ ಎಂದು ಅಭಿಮತಪಟ್ಟರು.

ಸವ೯ರಿಗೂ ಸಮಪಾಲು ಸಮಬಾಳು ನೀಡುವಂಥ ಸಿದ್ಧಾಂತ ಬಸವಣ್ಣನವರ ನಾಡಿನಿಂದ ಆಗಬೇಕು. ಅಂತಹ
ಯೋಚನೆಗಳು ಜಾರಿಗೆ ತರುವಂಥ ಉದ್ದೇಶ ಎಲ್ಲರದ್ದಾಗಬೇಕು. ಸ್ವಾತಂತ್ರ್ಯ ಸಿಕ್ಕು 65
ವಷ೯ ಕಳೆದರೂ ಯಾರೂ ಕೂಡ ಶೋಷಿತರ ಪರವಾಗಿ ಹೋರಾಟ ಮಾಡಲು ಮುಂದಾಗುತ್ತಿಲ್ಲ ಎಂದು
ವಿಷಾದಿಸಿದರು.

ಹಿಂದುಳಿದ ಜನರ ಶ್ರೇಯೋಭಿವೖದ್ಧಿ ನನ್ನ ಗುರಿಯಾಗಿದೆ. ಸಮಾಜದಲ್ಲಿ ಸಾಮರಸ್ಯದಿಂದ
ಬಾಳಿ, ರಾಜಕೀಯದಲ್ಲಿ ಸಾಮಾಜಿಕ ಚಿಂತನೆ ನಡೆಸುತ್ತಾ ಪ್ರಾಮಾಣಿಕವಾಗಿ ಜನರ ನೋವು,
ಸಮಸ್ಯೆಗಳಿಗೆ ಸ್ಪಂಧಿಸುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕಾಮೆಂಟ್‌ಗಳಿಲ್ಲ: